ಚೈತ್ರಾ ಕುಂದಾಪುರ ಬಿಗ್‌ಬಾಸ್‌ನಿಂದ ಹೊರಬಂದಿದ್ದಾರೆ. ಹನುಮಂತಗೆ ಫೈನಲ್‌ಗೆ ನೇರ ಪ್ರವೇಶ ಸಿಕ್ಕಿದೆ. ವಿಕಿಪೀಡಿಯಾದಲ್ಲಿ ಹನುಮಂತ ವಿಜೇತ ಎಂದು ತಪ್ಪಾಗಿ ಪ್ರಕಟವಾಗಿ, ನಂತರ ಸರಿಪಡಿಸಲಾಗಿದೆ. ಹನುಮಂತನ ಮುಗ್ಧತೆ ಮತ್ತು ಕಾರ್ಯದಕ್ಷತೆ ಜನಪ್ರಿಯತೆಗೆ ಕಾರಣ. ಅಭಿಮಾನಿಗಳು ವಿಜಯದ ನಿರೀಕ್ಷೆಯಲ್ಲಿದ್ದಾರೆ.

ಬಿಗ್​ಬಾಸ್​ ವಿನ್ನರ್​ ಘೋಷಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಫಿನಾಲೆಗೆ ಹೋಗಬಹುದು ಎಂದು ಲೆಕ್ಕಾಚಾರ ಹಾಕಿ ಕುಳಿತಿದ್ದ, ಫೈರ್ ಬ್ರಾಂಡ್' ಎಂದೇ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಹೊರಕ್ಕೆ ಬಂದಿದ್ದಾರೆ. ಇದರ ನಡುವೆಯೇ, ವಿನ್ನರ್​ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಹನುಮಂತುಗೆ ಫಿನಾಲೆಗೆ ನೇರವಾಗಿ ಟಿಕೆಟ್​ ಸಿಕ್ಕಿದೆ. ವೈಲ್ಡ್ ಕಾರ್ಡ್​ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ಹನುಮಂತ ಅಂತಮವಾಗಿ ಫಿನಾಲೆ ಘಟ್ಟಕ್ಕೆ ಬಂದಿದ್ದಾರೆ. ರಜತ್​, ತ್ರಿವಿಕ್ರಮ್, ಭವ್ಯಾ ಗೌಡ ಅವರಿಗೆ ಶಾಕ್​ ಆಗಿದ್ದು, ಫಿನಾಲೆ ಟಿಕೆಟ್ ಮಿಸ್ ಆಗಿದೆ. ಅಷ್ಟಕ್ಕೂ ಹನುಮಂತ ಅವರ ಮೇಲೆ ಎಲ್ಲರಿಗೂ ಪ್ರೀತಿ ತುಸು ಹೆಚ್ಚೇ ಎಂದು ಹೇಳಬಹುದು. ಇವರು ಮುಗ್ಧತೆಯ ಮುಖವಾಡ ಹಾಕಿಕೊಂಡಿದ್ದಾರೆ ಎಂದು ಸೋಷಿಯಲ್​ ಮೀಡಿಯಾಗಳಲ್ಲಿ ಇವರ ವಿರುದ್ಧ ಸಿಕ್ಕಾಪಟ್ಟೆ ಮೀಮ್ಸ್​ಗಳು ಹರಿದಾಡುತ್ತಿದ್ದರೂ, ಬಡವ ಎಂದುಕೊಂಡು ವಿದೇಶಗಳಿಗೆ ಸುತ್ತಾಡಿದ್ದಾರೆ ಎಂಬೆಲ್ಲಾ ಆಪಾದನೆ ಹೊತ್ತಿಕೊಂಡಿದ್ದರೂ, ಇವರನ್ನು ಪ್ರೀತಿಸುವ ದೊಡ್ಡ ವರ್ಗವೇ ಇದೆ. 

ಇದು ಹೊರಗಿನವರ ಮಾತಾದರೆ, ಬಿಗ್​ಬಾಸ್​ ಮನೆಯಲ್ಲಿಯೂ ಎಲ್ಲರಿಗೂ ಇವರು ಎಂದರೆ ಅಚ್ಚು ಮೆಚ್ಚು. ಉಳಿದ ಸ್ಪರ್ಧಿಗಳ ಜೊತೆ ಪ್ರೀತಿ-ವಿಶ್ವಾಸದಿಂದಲೇ ಇದ್ದಾರೆ. ಇದು ಮಾತ್ರವಲ್ಲದೇ, ಇವರು ಬಹುತೇಕ ಟಾಸ್ಕ್​ಗಳನ್ನು ಬೇಗ ಬೇಗ ಮುಗಿಸಿದವರು. ಕೊನೆಯಲ್ಲಿ ಕೇವಲ 2 ನಿಮಿಷ 27 ಸೆಕೆಂಡ್​ಗಳಲ್ಲಿ ವಿನ್​ ಆಗಿದ್ದಾರೆ. ಇವರ ಈ ವಿಜಯೋತ್ಸಾಹವನ್ನು ಸಿನಿ ತಾರೆಯರಾದ ಶರಣ್ ಮತ್ತು ಅದಿತಿ ಪ್ರಭುದೇವ ಆಚರಿಸಿದ್ದು, ಫಿನಾಲೆಯ ಟಿಕೆಟ್​ ನೀಡಿದರು.

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಚೈತ್ರಾ ಕುಂದಾಪುರಗೆ ವಂಚನೆ ಪ್ರಕರಣದಲ್ಲಿ ಮತ್ತೆ ಸಂಕಷ್ಟ!

ಆದರೆ ಇವೆಲ್ಲದರ ನಡುವೆಯೇ, ವಿಕಿಪಿಡಿಯಾದಲ್ಲಿ ಬಿಗ್​ಬಾಸ್​-11ರ ವಿಜೇತರ ಹೆಸರು ಪ್ರಕಟವಾಗಿದ್ದು, ಅದರಲ್ಲಿ ಹನುಮಂತ ಎಂದೇ ಘೋಷಿಸಲಾಗಿಬಿಟ್ಟಿದೆ. ಏನೇ ವಿಷಯ ಇರಲಿ, ಯಾವುದೇ ಡೌಟ್​ ಇರಲಿ, ಸಾಮಾನ್ಯವಾಗಿ ಎಲ್ಲರೂ ಮೊದಲು ಗೂಗಲ್​, ವಿಕಿಪಿಡಿಯಾ ಚೆಕ್​ ಮಾಡುತ್ತಾರೆ. ಆದರೆ, ಬಿಗ್​ಬಾಸ್​ ನೋಡದೇ ಇರುವವರು, ಸುಮ್ಮನೇ ಕುತೂಹಲದಿಂದ ಇದನ್ನು ನೋಡಿದಾಗ ಹನುಮಂತನೇ ವಿಜೇತ ಎಂದುಕೊಂಡುಬಿಟ್ಟಿದ್ದಾರೆ. ಇನ್ನು ಬಿಗ್​ಬಾಸ್​ ಪ್ರಿಯರಂತೂ ಮೊದಲೇ ಅನೌನ್ಸ್​ ಆಗಿರುವುದನ್ನು ನೋಡಿ ಶಾಕ್​ಗೆ ಒಳಗಾಗಿದ್ದಾರೆ. ಹನುಮಂತು ಅಭಿಮಾನಿಗಳಿಗೆ ಕೇಳುವುದೇ ಬೇಡ, ಖುಷಿಯೋ ಖುಷಿ. ಹನುಮಂತನೇ ವಿನ್ನರ್​ ಎಂದು ಬಹುತೇಕ ಮಂದಿ ಅಂದುಕೊಂಡಿರುವ ನಡುವೆಯೇ ಇದು ಅನೌನ್ಸ್​ ಆಗಿದೆ.

ಆದರೆ, ಈ ಸುದ್ದಿ ವೈರಲ್​ ಆಗುತ್ತಲೇ, ವಿಕಿಪಿಡಿಯಾ ಎಚ್ಚೆತ್ತುಕೊಂಡಿದೆ. ಇದೀಗ, TBA ಅಂದ್ರೆ "to be announced" ಅಂದರೆ ಇನ್ನೂ ಘೋಷಣೆಯಾಗಬೇಕಿದೆಯಷ್ಟೇ ಎಂದು ಕರೆಕ್ಷನ್​ ಮಾಡಿಕೊಂಡಿದೆ. ಆದರೆ ಹಳೆಯ ಸ್ಕ್ರೀನ್​ಷಾಟ್​ ವೈರಲ್​ ಆಗುತ್ತಿದ್ದು, ಇದೇ ನಿಜವಾಗಲಿ ಎಂದು ಹನುಮಂತನ ಅಭಿಮಾನಿಗಳು ಹಾರೈಸುತ್ತಿದ್ದಾರೆ. 
ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್; ಕೊನೆಯ ಮಾತುಗಳು ಏನಾಗಿತ್ತು ನೋಡಿ!