ಕಾಮಿಡಿ ಕಿಲಾಡಿಗಳು Nayana ವಿರುದ್ಧ ದೂರು ದಾಖಲು; ಅವಾಚ್ಯ ಶಬ್ಧಗಳಿಂದ ಬೈದಿರುವ ಆಡಿಯೋ ಲೀಕ್
ಕಾಮಿಡಿ ಗ್ಯಾಂಗ್ ರಿಯಾಲಿಟಿ ಶೋ ರನ್ನರ್ ಸೋಮಶೇಖರ್ಗೆ ಜೀವ ಬೆದರಿಕೆ ಹಾಕುತ್ತಿರುವ ಹಾಸ್ಯ ನಟಿ ನಯನಾ. ವೈರಲ್ ಆಡಿಯೋದಲ್ಲಿ ಏನಿದೆ?
ಜೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿರುವ ನಯನಾ ವಿರುದ್ಧ ಸ್ಟಾರ್ ಸುವರ್ಣ ರಿಯಾಲಿಟಿ ಶೋ ಕಾಮಿಡಿ ಗ್ಯಾಂಗ್ ರನ್ನರ್ ಅಪ್ ಸೋಮಶೇಖರ್ ಬೆಂಗಳೂರಿನ ಆರ್ಆರ್ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಣದ ವಿಚಾರಕ್ಕೆ ನಯನಾ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ನೀಡಲಾಗಿತ್ತು ಇಂದು ಸಂಜೆ 5 ಗಂಟೆಗೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಏನಿದು ಘಟನೆ?
ಕಾಮಿಡಿ ಗ್ಯಾಂಗ್ಸ್ ರಿಯಾಲಿಟಿ ಶೋನಲ್ಲಿ ನಯನಾ, ಸೋಮಶೇಖರ್, ಚಿದಂಬರ್ ಮತ್ತು ಅನೀಶ್ ಭಾಗವಹಿಸಿದ್ದರು. ಈ ಶೋ ರನ್ನರ್ ಅಪ್ ಆಗಿ ಸೋಮಶೇಖರ್ ಟ್ರೋಫಿ ಮತ್ತು ಹಣ ಪಡೆದುಕೊಂಡು. ಗೆದ್ದಿರುವ ಹಣವನ್ನು ಸೋಮಶೇಖರ್ ಚಿದಂಬರ್ಗೆ ನೀಡಬೇಕು ಎಂದು ನಯನಾ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ದುಡ್ಡು ಕೊಡು ದುಡ್ಡು ಕೊಡು ಎಂದು ಪದೇ ಪದೇ ಒತ್ತಾಯ ಮಾಡುತ್ತಿರುವ ಹಾಗೂ ಬೆದರಿಕೆ ಹಾಕುತ್ತಿರುವ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ನಯನಾ ಹೆಚ್ಚಾಗಿ ಅವಾಚ್ಯ ಶಬ್ಧಗಳನ್ನು ಬಳಸಿ ಮಾತನಾಡಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.
ವಾಯ್ಸ್ ನೋಟ್ನಲ್ಲಿ ಏನಿದೆ?
ಸೋಷಿಯಲ್ ಮೀಡಿಯಾದಲ್ಲಿ ಮೂರು ವಾಯ್ಸ್ ನೋಟ್ಗಳು ವೈರಲ್ ಅಗುತ್ತಿದೆ.
ಇಂಗ್ಲಿಷ್ನಲ್ಲಿ ಪೋಸ್ಟ್ ಹಾಕಿ ವಿವಾದಕ್ಕೆ ಸಿಲುಕಿಕೊಂಡ ನಯನಾ!
ಮೊದಲ ಆಡಿಯೋ: 'ಮಿಸ್ಟರ್ ಸೋಮು ಅವರೇ ಅದೇನೋ ರೂಲ್ಸ್ ಇಲ್ಲ ನೀವು ಕೊಡೋದು ಹಾಗೆ ಹೀಗೆ ಅಂತ ಕಂಡಿಷನ್ ಮಾತನಾಡಿದ್ದೀರಾ ಅಂತಲ್ಲ ಹೋಗಿ ಅದ್ಯಾವ್ ಸ್ಟೇಷನ್ಗೆ ಹೋಗುತ್ತೀರಾ ಅದ್ಯಾವ್ ಚಾನೆಲ್ಗೆ ಹೋಗುತ್ತೀರಾ ಹೋಗಿ ಅದೇನ್ ಕಂಪ್ಲೇಂಟ್ ಮಾಡುತ್ತೀರಾ ಮಾಡಿ. ನಿನಗಿದು ಲಾಸ್ಟ್ ಕಾಲ್ ಮಗನೇ. ಇನ್ಮೇಲೆ ಬೆಂಗಳೂರಿನಲ್ಲಿ ನೀನು ಹೇಗೆ ಓಡಾಡುತ್ತೀಯಾ ನಾನು ನೋಡ್ತೀನಿ.
ಎರಡನೇ ಆಡಿಯೋ: ಸತ್ಯ...ನಾನು ಅದೇ ಯೋಚನೆ ಮಾಡುತ್ತಿರುವುದು ಆ ನನ್ನ ಮಗನ ಚಪ್ ಚಪ್ಪಲಿಯಲ್ಲಿ ಹೊಡೆಯಬೇಕು ಅಷ್ಟು ಸಿಟ್ಟು ಬರುತ್ತಿದೆ ನನಗೆ ಬೋಸುಡಿ ಮಗ.
ಮೂರನೇ ಆಡಿಯೋ: ಅಲ್ಲ ಸೋಮ ಫಸ್ಟ್ ಆಫ್ ಆಲಾ ನಾನು ಅವರಿಬ್ಬರನ್ನು ಎಷ್ಟು ವರ್ಷದಿಂದ ನೋಡುತ್ತಿರುವುದು ಎಂದು ನನಗೆ ಗೊತ್ತು ಅವರ ಮನೆಯಲ್ಲಿ ಏನ್ ಏನ್ ಸಮಸ್ಯೆಗಳಿದೆ ಏನ್ ಏನ್ ಕಮಿಟ್ಮೆಂಟ್ ಇದೆ ಒಂದು ದೊಡ್ಡ ಚಾನೆಲ್ನ ಬಿಟ್ಟು ಸುವರ್ಣ ಚಾನೆಲ್ಗೆ ಬಂದು ಯಾವುದೋ ಕಾರ್ಯಕ್ರಮದ ಮೂಲಕ ದುಡಿಯುತ್ತಿದ್ದಾರೆ ಅಂದ್ರೆ ದುಡ್ಡಿನ ಅವಶ್ಯಕತೆ ಇದೆ ಅಂತ ನನಗೆ ಚೆನ್ನಾಗಿ ಗೊತ್ತು. ಅವರ ದುಡ್ಡನ್ನು ತೆಗೆದುಕೊಂಡು ನೀನು ಅವರಿಗೆ ಕೊಡದೆ ನ್ಯಾಯಯುತವಾಗಿ ಅವರಿಗೆ ಕೊಡದೆ ನೀನು ಇಟ್ಕೊಂಡು ಆಟ ಆಡುತ್ತಿರುವುದು ಎಷ್ಟು ಸರಿ? ನೀನು ಒಳ್ಳೆ ರಕ್ತಕ್ಕೆ ಹುಟ್ಟಿದ್ಯಾ ಅಂತ ನಾನು ಅದಿಕ್ಕೆ ಪ್ರಶ್ನೆ ಮಾಡಿರುವುದು. ನೀನು ನಿಜವಾಗಲ್ಲೂ ಅಷ್ಟು ಪ್ರಾಮಾಣಿಕವಾಗಿ ಇದ್ದಿದ್ದರೆ ಮೊದಲ ಸಲ ಸ್ಟೇಜ್ ಮೇಲೆ ನಿನ್ನ ಫ್ಯಾಮಿಲಿನ ಕರೆದುಕೊಂಡು ಬಂದಾಗ...ಅವನು ನಿಜಕ್ಕೂ ಒಳ್ಳೆಯ ವ್ಯಕ್ತಿ ಅವನಿಗೆ ಲೈಫಲ್ಲಿ ತುಂಬಾ ಸಮಸ್ಯೆಗಳಿದೆ ಅದೆಲ್ಲಾ ಬಿಟ್ಟು ವೇದಿಕೆ ಮೇಲೆ ಇದ್ದಾನೆ ಅಂದ್ರೆ ಸಮಸ್ಯೆಗಳಿಗಿಂತ ಕೆಲಸ ಮುಖ್ಯ ಅಂತ ಎಲ್ಲಾ ಹುಡುಗರಿಗೂ ಹೇಳುತ್ತಿದ್ದೆ. ನೀನು ಇಂತ ಲುಚ್ಚಾ ಕೆಲಸವನ್ನು ಮಾಡಿರುವುದಕ್ಕೆ ಅವರು ನನ್ನನ್ನು ಬೈದರು. ಅವತ್ತು ಸೋಮಶೇಖರ್ ಪರ ನೀನು ನಿಂತುಕೊಂಡೆ ಆದರೆ ನೋವು ಅವನ ಬುದ್ದಿ ತೋರಿಸಿದ್ದಾನೆ ಈವಾಗ ಅಂತ ನನಗೆ ಹೇಳಿದ್ದರು. ನಿನಗೆ ಬೈಯಲು ಇಷ್ಟೊಂದು ಕೋಪ ಬಂದಿದೆ ಅಂದ್ರೆ ಅಷ್ಟು ಮಾಡಿದ್ಯಾ ನೀನು. ನೀನು ಪ್ರಾಮಾಣಿಕವಾಗಿದ್ದರೆ ಆ ಹಣವನ್ನು ವಾಪಸ್ ಕೊಡು. ಕಷ್ಟ ಪಟ್ಟು ನೀನು ಹೇಗೆ ದುಡ್ಡು ಸಂಪಾದನೆ ಮಾಡಿದ್ಯಾ ಅವರು ಕೂಡ ಅಷ್ಟೇ ಅರ್ಹರು. ಅದಿಕ್ಕೆ ಅವರು ಏನು ಸಂಪಾದನೆ ಮಾಡಿದ್ದಾರೆ ಅವರಿಗೆ ಕೊಡು. ಅದರಿಂದ ನಿಮಗೆ ಏನು ಲಾಭ ಯಾಕೆ ಇಷ್ಟು ಕೆಟ್ಟದಾಗಿ ಮಾತನಾಡಿತ್ತಿರುವೆ ನೀನು ಯಾಕೆ ಮೆಸೇಜ್ ಮಾಡುತ್ತಿದ್ದೀರಾ ಯಾಕೆ ವಾಯ್ಸ್ ಮಾಡುತ್ತಿದ್ದೀರಾ ಅಂದ್ರೆ ನಿನಗೆ ಗೊತ್ತ ಅವರ ಮನೆಯಲ್ಲಿ ಏನೆಲ್ಲಾ ಸಮಸ್ಯೆಗಳು ಆಗಿದೆ ಎಂದು? ಚಿದು ತಂದೆಯನ್ನು ಮನೆಗೆ ಕರ್ಕೊಂಡು ಬಂದು ಇಟ್ಕೊಂಡಿದ್ದಾನೆ ಪ್ರತಿ ದಿನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಡಯಾಲಿಸಿಸ್ ಮಾಡಿಸಬೇಕು. ಅಷ್ಟೊಂದು ಸಾವಿರ ಕಷ್ಟಗಳನ್ನು ಅವರು ಅನುಭವಿಸುತ್ತಿದ್ದಾರೆ ನಿನಗೆ ಮನುಷತ್ವ ಅನ್ನೋದು ಇದ್ರೆ ನಿನ್ನ ತಂದೆ ತಾಯಿಗೆ ಗೌರವ ಕೊಡುವವನು ಆಗಿದ್ರೆ ಅವರ ದುಡ್ಡನ್ನು ಅವರಿಗೆ ವಾಪಸ್ ಕೊಡು. ನಾನು ಬೆಂಗಳೂರಿಗೆ ಬಂದ ಮೇಲೆ ನೀನು ನನ್ನನ್ನು ಡೈರೆಕ್ಟ್ ಆಗಿ ಭೇಟಿ ಮಾಡು ಇಲ್ಲ ಅಂದ್ರೆ ಕಥೆನೇ ಬೇರೆ ಅಗುತ್ತೆ ದೇವರ ಮೇಲೆ ಆಣೆ ನೀನು ಕಲ್ಪನೆ ಕೂಡ ಮಾಡಿಕೊಂಡಿರುವುದಿಲ್ಲ ನಯನಾ ಏನು ಅಂತ ನಿನಗೆ ದೇವರ ಆಣೆಗೂ ಗೊತ್ತಿಲ್ಲ ನಾನು ಏನ್ ಮಾಡಬಹುದು ಅನ್ನೋ ಅಂದಾಜು ನಿನಗಿಲ್ಲ. ಸುಮ್ಮನೆ ಜೀವನ ಹಾಳು ಮಾಡಿಕೊಳ್ಳಬೇಡ ನಿನಗಿಂತ ಅವರು ಮುಖ್ಯ ಅವರ ಗೌರವ ಮುಖ್ಯ. ನಿನಗೆ ಸಿಟ್ಟು ಬರುತ್ತೆ ಅಂದ್ರೆ ಪ್ರಾಮಾಣಿಕನಾಗಿದ್ದರೆ ಅಪ್ಪ ಅಮ್ಮ ಒಳ್ಳೆ ಸಂಸ್ಕಾರ ಹೇಳಿಕೊಟ್ಟಿದ್ದರೆ ವಿದ್ಯಾ ಬುದ್ಧಿ ಕೊಟ್ಟಿದ್ದರೆ ಅವರ ಹಣ ಅವರಿಗೆ ವಾಪಸ್ ಕೊಡು.