Asianet Suvarna News Asianet Suvarna News

ನೋಡಿ ಫ್ರೆಂಡ್ಸ್​... ರಾತ್ರಿ ನಿದ್ದೆ ಮಾಡಲೂ ಬಿಡಲಿಲ್ಲ... ಸೀತಾರಾಮ ಸಿಹಿಯಿಂದ ಹೀಗೊಂದು ಕಂಪ್ಲೇಂಟ್​...

ಸೀತಾರಾಮ ಸೀರಿಯಲ್​ನಲ್ಲಿ ಮದುವೆಯ ಸಡಗರ ಜೋರಾಗಿ ನಡೆಯುತ್ತಿರುವ ನಡುವೆಯೇ ಸಿಹಿ ಸೋಷಿಯಲ್​ ಮೀಡಿಯಾಕ್ಕೆ ಬಂದು ಹೇಳಿದ್ದೇನು?
 

Sihi of Seetarama complaing that she is not able to sleep because of shooting schedule suc
Author
First Published May 23, 2024, 12:09 PM IST

ಸೀತಾ ಮತ್ತು ರಾಮ್​ ಮದುವೆ ಸಂಭ್ರಮ ಬಲು ಜೋರಾಗಿ ನಡೆದಿದೆ. ಇವರಿಬ್ಬರೂ ಮದುವೆಯಾಗಲಿ ಎಂದು ಆಶಿಸುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಆ ಕ್ಷಣ ಕಣ್ತುಂಬಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಇವರಿಬ್ಬರ ಮದುವೆಯನ್ನು ತಡೆಯಲು ವಿಲನ್​, ರಾಮ್​ ಚಿಕ್ಕಮ್ಮ ಭಾರ್ಗವಿ ಮಾಡಿರುವ ಪ್ಲ್ಯಾನ್​ ಎಲ್ಲವೂ ಠುಸ್​ ಆಗಿದೆ. ವಿವಾಹ ಪೂರ್ವ ಕಾರ್ಯಕ್ರಮಗಳು ಬಲು ಜೋರಾಗಿಯೇ ನಡೆಯುತ್ತಿದೆ. 

ಸೀರಿಯಲ್​ನಲ್ಲಿ ಮದುವೆಗಳು ಎಂದರೆ ಇಂದು ರಿಯಲ್​ ಮದ್ವೆಗಿಂತಲೂ ಭರ್ಜರಿಯಾಗಿಯೇ ನಡೆಯುತ್ತದೆ. ಅದೇ ಅದ್ಧೂರಿ ಸೆಟ್ಟಿಂಗ್​ಗಳನ್ನು ಮಾಡಲಾಗುತ್ತದೆ. ದಿನಪೂರ್ತಿ ಶೂಟಿಂಗ್​ ನಡೆಯುತ್ತದೆ.  ನಿಜವಾದ ಮದುವೆಯ ದಿನ ಸುಸ್ತಾಗುವಷ್ಟೇ ಈ ರೀಲ್​ ಮದ್ವೆಗಳಲ್ಲಿಯೂ ನಟರಿಗೆ ಸುಸ್ತಾಗುವುದು ಇದೆ. ಅದೇ ರೀತಿ ಸೀತಾರಾಮ ಸೀರಿಯಲ್​ನಲ್ಲಿ ವಿವಾಹ ಪೂರ್ವ ಶೂಟಿಂಗ್​ಗಳನ್ನು ಮುಗಿಸಿ ಸುಸ್ತಾಗಿರುವ ಸಿಹಿ ಮತ್ತು ಸೀತಾ ಶೂಟಿಂಗ್​ ಹೇಗಿತ್ತು ಎಂದು ಹೇಳಿದ್ದಾರೆ. ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಇದ್ದು, ಆಗಾಗ್ಗೆ ಸೀರಿಯಲ್​  ಶೂಟಿಂಗ್​ಗಳ ಅಪ್​ಡೇಟ್ಸ್​ ನೀಡುತ್ತಲೇ ಇರುತ್ತಾರೆ. ಇದೀಗ ಸಿಹಿ ಪಾತ್ರಧಾರಿ ರಿತು ಸಿಂಗ್​ ಕೂಡ ವೈಷ್ಣವಿ ಜೊತೆ ಕಾಣಿಸಿಕೊಂಡಿದ್ದು, ಶೂಟಿಂಗ್​ ಹೇಗಿತ್ತು ಎಂದು ಹೇಳಿದ್ದಾಳೆ.

ಭೂಮಿಕಾ ಕಿಡ್ನ್ಯಾಪ್​: ಸೀತಾಮಾತೆಯ ಐಡಿಯಾನೇ ಫಾಲೋ ಮಾಡಿದ ನಾಯಕಿಗೆ ಭೇಷ್​ ಎಂದ ಫ್ಯಾನ್ಸ್​

ಇಬ್ಬರೂ ಮೆಹಂದಿ ಹಾಕಿಕೊಂಡಿರುವುದನ್ನು ಹೇಳಿದ ಸಿಹಿ, ರಾತ್ರಿಯೆಲ್ಲಾ ನಿದ್ದೆ ಮಾಡಲು ಕೊಟ್ಟಿಲ್ಲ. ಈಗಷ್ಟೇ ಶೂಟಿಂಗ್​ ಮುಗಿಯಿತು. ಮತ್ತೆ ನಾಳೆ ಆರು ಗಂಟೆಗೆ ಏಳಬೇಕು ಎಂದು ತನ್ನ ಮುಗ್ಧ ಮಾತುಗಳಿಂದ ಹೇಳಿದ್ದಾಳೆ. ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ರಾಮ್​  ಮತ್ತು ಸೀತಾಳ ಮದುವೆಯ ನಂತರ ಇಬ್ಬರನ್ನೂ ಬೇರೆ ಮಾಡುವ ಪ್ಲ್ಯಾನ್​ ಮಾಡಿದ್ದಾಳೆ ಭಾರ್ಗವಿ,  ನಿಜಕ್ಕೂ ಸೀತಾ ಬದುಕಿನಲ್ಲಿ ಏನಾಗಿತ್ತು ಅನ್ನೋದು ಸೀತಾಗೆ ಬಿಟ್ಟು ಯಾರಿಗೂ ಗೊತ್ತಿಲ್ಲ. ಆದರೆ ಸೀತಾಳ ಗಂಡನ ವಿಷಯ ಇಟ್ಟುಕೊಂಡು ಅವಳನ್ನು ಈ ಮನೆಯಿಂದ ಹೊರಗಡೆ ಹಾಕಬೇಕು ಅಂತ ಭಾರ್ಗವಿ ಎಲ್ಲಾ ಯೋಜನೆ ರೂಪಿಸಿದ್ದಾಳೆ. 

ಅದೇ ಇನ್ನೊಂದೆಡೆ ಸಿಂಪಲ್​  ಸೀತಾಳ ಹುಟ್ಟುಹಬ್ಬವನ್ನು ಸಿಂಪಲ್​ ಆಗಿಯೇ ಆಚರಿಸಿದ್ದಾನೆ ರಾಮ್​. ಇದೇ ವೇಳೆ ಇವರಿಬ್ಬರೂ ಮದುವೆಯಾದರೆ, ತನ್ನನ್ನು ಎಲ್ಲಿ ಬೇರೆ ಮಾಡುತ್ತಾರೆಯೋ ಎನ್ನುವ ಆತಂಕವೂ ಸಿಹಿಯನ್ನು ಕಾಡುತ್ತಿದೆ. ಅದೇ ಇನ್ನೊಂದೆಡೆ ಶ್ರೀರಾಮ್ ದೇಸಾಯಿ-ಸೀತಾ ಮದುವೆಯಾದಮೇಲೆ ಆಸ್ತಿ ಹೊಡೆಯಬೇಕು ಅಂತ ಭಾರ್ಗವಿ ಯೋಚಿಸುತ್ತಿದ್ದಾಳೆ. ರಾಮ್​ನ ಅಮ್ಮ  ವಾಣಿ ಬಂಗಾರ ಎಲ್ಲವೂ ಸೀತಾಗೆ ಸೇರುತ್ತದೆ ಅಂತ ರಾಮ್ ತಾತ ಸೂರ್ಯಪ್ರಕಾಶ್ ಹೇಳಿದ್ದಾನೆ. ಹೀಗಾಗಿ ಭಾರ್ಗವಿ ಈಗ ಎಲ್ಲ ಬಂಗಾರವನ್ನು ಸೀತಾಗೆ ಕೊಟ್ಟು, ಆಮೇಲೆ ಅದನ್ನು ತಾನು ಪಡೆದುಕೊಳ್ಳಬೇಕು ಅಂತ ಪ್ಲ್ಯಾನ್ ಮಾಡಿದ್ದಾಳೆ.

\ಶಾರುಖ್​ ಖಾನ್​ ಆರೋಗ್ಯ ಸ್ಥಿತಿ ಹೇಗಿದೆ? ಆಸ್ಪತ್ರೆಯಿಂದಲೇ ಅಪ್​ಡೇಟ್​ ಕೊಟ್ಟ ನಟಿ ಜೂಹಿ ಚಾವ್ಲಾ

Latest Videos
Follow Us:
Download App:
  • android
  • ios