ಚಿತ್ರ ನಿರ್ಮಾಪಕರನ್ನು ಹೊಗಳುತ್ತಾ ರಾಮ-ಲಕ್ಷ್ಮಣರನ್ನು ಕಾಲ್ಪನಿಕರೆಂದು ಕರೆದ ನಿರೂಪಕಿ ಶ್ರೀಮುಖಿ, ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾದರು. ತಪ್ಪಿನ ಅರಿವಾಗಿ ಕ್ಷಮೆ ಯಾಚಿಸಿದ ಅವರು, ತಾವು ಹಿಂದೂ ಮತ್ತು ರಾಮಭಕ್ತೆ ಎಂದೂ ಸ್ಪಷ್ಟಪಡಿಸಿದರು. ನಿಜಾಮಾಬಾದ್‌ನ ಚಿತ್ರ ಬಿಡುಗಡೆ ಸಮಾರಂಭದಲ್ಲಿ ನಡೆದ ಈ ಘಟನೆ, ಅವರ ಮಾತಿನ ಭರದಿಂದಾದ ತಪ್ಪು ಎಂದು ವಿವರಿಸಿದರು.

ಕಾರ್ಯಕ್ರಮವೊಂದರಲ್ಲಿ ಅತಿಥಿಗಳಾಗಿ ಆಗಮಿಸಿದ ಚಿತ್ರ ನಿರ್ಮಾಪಕರನ್ನು ಹೊಗಳುವ ನಿರೂಪಕಿ ಒಬ್ಬರು, ರಾಮ-ಲಕ್ಷ್ಮಣರು ಕಾಲ್ಪನಿಕ ಎಂದು ಹೇಳುವ ಮೂಲಕ ಪೇಚಿಗೆ ಸಿಲುಕಿದ್ದಾರೆ. ಆ್ಯಂಕರ್​ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಕಿಡಿ ಹೊತ್ತಿಕೊಂಡ ಬೆನ್ನಲ್ಲೇ ಕೊನೆಗೆ ಸೋಷಿಯಲ್​ ಮೀಡಿಯಾದಲ್ಲಿಯೇ ವಿಡಿಯೋ ಮಾಡಿ ಕ್ಷಮೆ ಕೋರಿದ್ದಾರೆ ಆ್ಯಂಕರ್​. ತೆಲುಗಿನ ಖ್ಯಾತ ಆ್ಯಂಕರ್​ ಶ್ರೀಮುಖಿ ಅವರು ಇದೀಗ ವಿಡಿಯೋ ಒಂದನ್ನು ಶೇರ್​ ಮಾಡಿದ್ದು, “ಮಾತನಾಡುವ ಭರದಲ್ಲಿ ರಾಮಲಕ್ಷ್ಮಣರನ್ನು ಕಾಲ್ಪನಿಕ ಎಂದು ಹೇಳಿಬಿಟ್ಟೆ. ನನ್ನಿಂದ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿಬಿಡಿ. ನಾನು ಕೂಡ ಹಿಂದೂ. ರಾಮನನ್ನು ಆರಾಧಿಸುತ್ತೇನೆ. ನನ್ನ ಈ ತಪ್ಪಿನಿಂದ ಅನೇಕರ ಭಾವನೆಗಳಿಗೆ ಧಕ್ಕೆಯಾಗಿದೆ' ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಇದೇ 6 ರಂದು ನಿಜಾಮಾಬಾದ್‌ನಲ್ಲಿ "ಸಂಕ್ರಾಂತಿಕಿ ವಸ್ತುನ್ನಂ" ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತು. ಆ ಕಾರ್ಯಕ್ರಮವನ್ನು ಆ್ಯಂಕರ್ ಶ್ರೀಮುಖಿ ನಡೆಸಿಕೊಡುತ್ತಿದ್ದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಚಿತ್ರದ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಶ್ ಬಂದಿದ್ದರು. ಅವರನ್ನು ಶ್ರೀಮುಖಿ ಸಹಜವಾಗಿ ಹೊಗಳಬೇಕಿತ್ತು. ಅವರಿಬ್ಬರೂ ಅಣ್ಣ-ತಮ್ಮಂದಿರ ರೀತಿಯಲ್ಲಿ ಇದ್ದಾರೆ ಎಂದು ಹೋಲಿಕೆ ಮಾಡಬೇಕಿತ್ತು. ಅದಕ್ಕೆ ಅವರು ಆರಿಸಿಕೊಂಡದ್ದು ಶ್ರೀರಾಮ ಮತ್ತ ಲಕ್ಷ್ಮಣರನ್ನು. ಶ್ರೀರಾಮ ಮತ್ತು ಲಕ್ಷ್ಮಣರ ಸಹೋದರತ್ವವನ್ನು ಸಾಮಾನ್ಯವಾಗಿ ಹೋಲಿಕೆ ಮಾಡಲಾಗುತ್ತದೆ. ಅದೇ ರೀತಿ ಆ್ಯಂಕರ್​ ಕೂಡ ಮಾಡಿದ್ದಾರೆ. ಅದರಲ್ಲೇನೂ ತಪ್ಪಿರಲಿಲ್ಲ. ಆದರೆ ಹಾಗೆ ಹೇಳುವಾಗ ಅವರು, "ರಾಮ ಲಕ್ಷ್ಮಣರು ಕಾಲ್ಪನಿಕ, ಆದರೆ ನಿಜ ಜೀವನದಲ್ಲಿ ಅವರಂತೆ ಬದುಕುತ್ತಿರುವ ದಿಲ್ ರಾಜು ಮತ್ತು ಶಿರೀಷ್" ಎಂದುಬಿಟ್ಟಿದ್ದಾರೆ.

ಕ್ಯಾನ್ಸರ್​ ಚಿಕಿತ್ಸೆಗೆ ಹಣವಿಲ್ಲದೇ ಬಳಲ್ತಿರೋ 'ಗಟ್ಟಿಮೇಳ'ದ ನಟಿ: ನೋವಿನ ಕಥೆ ಬಿಚ್ಚಿಟ್ಟ ಕಮಲಶ್ರೀ

ಇದು ರಾಮ ಭಕ್ತರನ್ನು ಕೆರಳಿಸಿದೆ. ಸೋಷಿಯಲ್​ ಮೀಡಿಯಾದಲ್ಲಿ ಆ್ಯಂಕರ್​ ಸಕತ್​ ಟ್ರೋಲ್​ಗೆ ಒಳಗಾದರು. ಓರ್ವ ಹಿಂದೂ ಆಗಿ ನೀವು ಹೀಗೆ ಹೇಳುವುದು ಎಂದರೆ ಏನು? ರಾಮಲಕ್ಷ್ಮಣರನ್ನು ಕಾಲ್ಪನಿಕ ಎಂದು ಹೇಳಲು ನೀವು ಯಾರು? ಅದನ್ನು ಹೇಗೆ ಹೇಳುತ್ತೀರಿ? ಮಾತಿನ ಮೇಲೆ ನಿಗಾ ಇಲ್ಲವೆ ಎಂದೆಲ್ಲಾ ಕೆಟ್ಟ ಕೆಟ್ಟದ್ದಾಗಿ ಆ್ಯಂಕರ್​ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ವೈರಲ್​ ಆಗುತ್ತಿದ್ದಂತೆಯೇ ತಾವು ತಪ್ಪು ಆಡಿದ್ದು ಅವರಿಗೆ ತಿಳಿದು ಕ್ಷಮೆ ಕೋರಿದ್ದಾರೆ.

ನನ್ನ ಉದ್ದೇಶ ಆ ರೀತಿ ಇರಲಿಲ್ಲ. ಹಾಗೆ ಮಾತನಾಡುವಾಗ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿ, ನಿಮ್ಮ ಮನಸ್ಸಿಗೆ ನೋವಾಗಿದೆ ಎನ್ನುವುದು ನನಗೆ ಗೊತ್ತು. ನಾನು ಕೂಡ ರಾಮನ ಆರಾಧಕಳೇ ಎಂದೆಲ್ಲಾ ಆ್ಯಂಕರ್​ ಹೇಳಿದ್ದಾರೆ. ಇದು ವೈರಲ್​ ಆಗುತ್ತಿದ್ದಂತೆಯೇ ಕೇವಲ ತೆಲಗು ಜನಕ್ಕೆ ಗೊತ್ತಿದ್ದ ಆ್ಯಂಕರ್​ ಎಲ್ಲೆಡೆ ಫೇಮಸ್​ ಆಗುತ್ತಿದ್ದಾರೆ. 

Scroll to load tweet…