Asianet Suvarna News Asianet Suvarna News

ಲಕ್ಷ್ಮೀ ಬಾರಮ್ಮ: ಇದೇನಪ್ಪಾ ಲಕ್ಷ್ಮೀ ವೈಷ್ಣವ್ ಬೆಡ್‌ರೂಮ್‌ಗೂ ಕೀರ್ತಿ ಬರ್ತಿದ್ದಾಳೆ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ಜನಪ್ರಿಯ ಸೀರಿಯಲ್ ಲಕ್ಷ್ಮೀ ಬಾರಮ್ಮದಲ್ಲಿ ವೈಷ್ಣವ್ ಬೆಡ್‌ರೂಮಿಗೇ ಕೀರ್ತಿ ಬರ್ತಿದ್ದಾಳೆ. ಇದೇನು ಕರ್ಮ ಅಂತಿದ್ದಾರೆ ವೀಕ್ಷಕರು.

In Lakshmi baramma serial keerthi entered Vaishnav bedroom bni
Author
First Published Aug 17, 2023, 3:50 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀರಿಯಲ್ ಲಕ್ಷ್ಮೀ ಬಾರಮ್ಮ. ಫೇಮಸ್ ಸಿಂಗರ್ ವೈಷ್ಣವ್ ಮತ್ತು ಮಿಡಲ್ ಕ್ಲಾಸ್ ಹುಡುಗಿ ಲಕ್ಷ್ಮೀ ನಡುವಿನ ಸಂಬಂಧದ ಕಥೆ ಈ ಸೀರಿಯಲ್‌ನದ್ದು. ಹಾಗೆ ನೋಡಿದರೆ ಇದು ಟ್ರೈ ಆಂಗಲ್ ಲವ್‌ಸ್ಟೋರಿ. ಜೊತೆಗೆ ಮಗನ ವ್ಯಾಮೋಹದ ತಾಯಿ ಕಥೆ. ಈ ತಾಯಿ ಮೇಲ್ನೋಟಕ್ಕೆ ಸ್ವಾರ್ಥಿ ಥರ ಕಂಡರೂ ಆಕೆಗೆ ಮಗನ ಮೇಲಿರುವ ಅತಿಯಾದ ವ್ಯಾಮೋಹವೇ ಅವಳನ್ನು ಕ್ರೂರಿಯಾಗಿ, ಸ್ವಾರ್ಥಿಯಾಗಿ ಬದಲಾಗೋ ಹಾಗೆ ಮಾಡುತ್ತೆ. ಅಷ್ಟಕ್ಕೂ ಕೀರ್ತಿಯನ್ನು ವೈಷ್ಣವ್ ಮನಸಾರೆ ಇಷ್ಟಪಟ್ಟಿದ್ದ. ಅವರಿಬ್ಬರೂ ಬಹಳ ಪ್ರಾಮಾಣಿಕವಾಗಿ ಪ್ರೇಮಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೇಮಕ್ಕೆ ಅಡ್ಡಗಾಲಾಗಿದ್ದು ತಾಯಿ ಕಾವೇರಿಯ ವ್ಯಾಮೋಹ. ಅವಳಿಗೆ ಕೀರ್ತಿ ಸ್ವಭಾವ ಗೊತ್ತು. ನಾನು ಇಷ್ಟಪಟ್ಟಿದ್ದು ನನಗೆ ಸಿಗಬೇಕು ಎನ್ನುವವಳು ಕೀರ್ತಿ. ತಾನಿಷ್ಟಪಟ್ಟದ್ದು ತನಗೆ ಸಿಗಬೇಕು ಅಂದರೆ ಏನು ಮಾಡಲೂ ಸಿದ್ಧ ಅನ್ನುವವಳು. ಹಾಗಂತ ಅವಳೇನೂ ಕೆಟ್ಟವಳಲ್ಲ. ಆದರೆ ಕಾವೇರಿಗೆ ಮಾತ್ರ ಇವಳು ತನ್ನ ಮಗನನ್ನು ಮದುವೆ ಆದರೆ ಮಗ ತನ್ನಿಂದ ದೂರ ಹೋಗ್ತಾನೆ ಅನ್ನೋ ಭಯ, ಆತಂಕ.

ಹೀಗಾಗಿ ಕಾವೇರಿ ಪ್ಲಾನ್ ಮಾಡಿ ಕೀರ್ತಿಯೇ ವೈಷ್ಣವ್‌ಗೆ ಮತ್ತೊಂದು ಮದುವೆ ಮಾಡಿಸಲು ಮುಂದಾಗೋ ಹಾಗೆ ಮಾಡಿದ್ದಳು. ವೈಷ್ಣವ್‌ಗೆ ಮೃತ್ಯುಯೋಗ ಇದೆ. ಅವನ ಜಾತಕಕ್ಕೆ ಸರಿ ಹೋಗುವ ಹುಡುಗಿ ಜೊತೆ ವೈಷ್ಣವ್ ಮದುವೆ ಆದರೆ ಅವನು ಬಚಾವ್ ಆಗ್ತಾನೆ. ನಿನ್ನ ಹಾಗು ವೈಷ್ಣವ್ ಮದುವೆ ಆದರೆ ಈ ಸಮಸ್ಯೆ ಪರಿಹಾರ ಆಗೋದಿಲ್ಲ, ಇದಕ್ಕೆ ಲಕ್ಷ್ಮೀ ಜಾತಕ ಸರಿ ಹೊಂದುತ್ತದೆ. ನನ್ನ ಮಗನ ಪ್ರಾಣ ಉಳಿಯಬೇಕು. ಲಕ್ಷ್ಮೀ & ವೈಷ್ಣವ್ ಮದುವೆ ಮೊದಲು ಆಗಲಿ, ಆಗ ಈ ಸಮಸ್ಯೆ ಪರಿಹಾರ ಆಗತ್ತೆ. ಆಮೇಲೆ ನಿನ್ನ ವೈಷ್ಣವ್ ಮದುವೆ ಮಾಡ್ತೀನಿ ಅಂತ ಕೀರ್ತಿಗೆ ಕಾವೇರಿ ಹೇಳಿದ್ದಳು. ಆದರೆ ಈಗ ಅವಳಿಗೆ ಲಕ್ಷ್ಮೀ ವರ್ತನೆಯೂ ಕಗ್ಗಂಟಾಗಿದೆ. ಲಕ್ಷ್ಮೀ ಮಹಾ ಸ್ವಾಭಿಮಾನಿ. ಪರಿಸ್ಥಿತಿಯನ್ನು ಲೀಲಾಜಾಲವಾಗಿ ನಿಭಾಯಿಸುವ ಗಟ್ಟಿಗಿತ್ತಿ. ಅವಳ ಈ ಗಟ್ಟಿತನವೇ ಕಾವೇರಿಗೆ ಇನ್‌ಸೆಕ್ಯೂರಿಟಿ ಫೀಲ್ ಬರೋ ಹಾಗೆ ಮಾಡಿದೆ. ಮತ್ತೆ ಲಕ್ಷ್ಮೀಗೆ ಮಗ ಹತ್ತಿರವಾದರೆ ತನ್ನಿಂದ ದೂರ ಆಗ್ತಾನೆ ಅನಿಸಿದೆ. ಅದಕ್ಕಾಗಿ ಅವಳು ಕೀರ್ತಿಯನ್ನು ಮತ್ತೆ ಮಗನಿಗೆ ಹತ್ತಿರವಾಗಿಸಲು ಪ್ರಯತ್ನ ಮಾಡ್ತಿದ್ದಾಳೆ.

ಸೀತಾರಾಮದ ಸಿಹಿ ಪುಟ್ಟಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೊವಿಂಗ್! ನಾಯಕಿಯನ್ನೇ ಮೀರಿಸ್ತಾಳೆ!

ತನಗಾದ ಅನ್ಯಾಯವನ್ನು ಹೇಗೆ ಸರಿ ಪಡಿಸಿಕೊಳ್ಳಬೇಕು ಅಂತ ಗೊತ್ತಾಗದ ಕೀರ್ತಿ ಇದೀಗ ವೈಷ್ಣವ್ ಜೊತೆ ಮನಸೋ ಇಚ್ಛೆ ಬಿಹೇವ್ ಮಾಡಿ ಅವನಿಂದ ಏಟೂ ತಿಂದಿದ್ದಾಳೆ. ಆದರೂ ಅವಳಿಗೆ ಬುದ್ಧಿ ಬಂದಿಲ್ಲ. ಅವಳಿಗೆ ವೈಷ್ಣವ್ ಬೇಕೇ ಬೇಕು. ಆತನನ್ನು ತಾನು ಮದುವೆ ಆಗಲೇ ಬೇಕು ಅಂತಿದೆ. ಲಕ್ಷ್ಮೀಯಿಂದ ಅವನನ್ನು ದೂರ ಮಾಡಲು ಹೆಣಗುತ್ತಿದ್ದಾಳೆ. ಈಗಾಗಲೇ ವೈಷ್ಣವ್ ಲಕ್ಷ್ಮೀಗೆ ಕಟ್ಟಬೇಕೆಂದಿದ್ದ ತಾಳಿ ಸರವನ್ನು ಕಾಣೆ ಮಾಡಿದ್ದಾಳೆ. ಇನ್ನೊಂದೆಡೆ ಇದೀಗ ಲಕ್ಷ್ಮೀ ಮತ್ತು ವೈಷ್ಣವ್ ಬೆಡ್‌ರೂಮ್ ಒಳಗೂ ಎಂಟ್ರಿಕೊಟ್ಟಿದ್ದಾಳೆ. ವೈಷ್ಣವ್ ಶರ್ಟ್‌ನ ಗುಂಡಿ ಕಳಚದೇ ಶರ್ಟ್ ತೆಗೀಲಿಕ್ಕೆ ಹೋಗಿ ಸಿಕ್ಕಾಕಿಸಿಕೊಂಡು ಒದ್ದಾಡುತ್ತಿದ್ದಾಗ ಲಕ್ಷ್ಮೀ ಬಂದಿದ್ದಾಳೆ. ಯಾವುದೋ ಒಂದು ಹಂತದಲ್ಲಿ ಅವಳು ಅರಿವಿಲ್ಲದೇ ಮೈಮರೆತು ಇಬ್ಬರೂ ಹಾಸಿಗೆ ಮೇಲೆ ಬಿದ್ದಿದ್ದಾರೆ. ವೈಷ್ಣವ್ ಶರ್ಟ್‌ ಪ್ರಹಸನದಲ್ಲಿ ಒದ್ದಾಡುತ್ತಿದ್ದರೆ ಲಕ್ಷ್ಮೀ ಅವನಲ್ಲಿ ಕಳೆದುಹೋಗಿದ್ದಾಳೆ. ಇದನ್ನೆಲ್ಲ ಕೀರ್ತಿ ಕದ್ದು ನೋಡ್ತಿದ್ದಾಳೆ. ಇವಳ್ಯಾಕೆ ಇವರಿಬ್ಬರ ಬೆಡ್‌ ರೂಮ್ ತನಕ ಬಂದಳು? ಆ ಲೆವೆಲ್‌ನ ಸ್ವಾತಂತ್ರ್ಯ ಅವಳಿಗ್ಯಾರು ಕೊಟ್ಟಿರೋದು ಅಂತ ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ.

ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ, ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್, ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ, ಕೀರ್ತಿ ಪಾತ್ರದಲ್ಲಿ ತನ್ವಿ ರಾವ್, ಸುಪ್ರೀತಾ ಪಾತ್ರದಲ್ಲಿ ರಜನಿ ಪ್ರವೀಣ್ ನಟಿಸುತ್ತಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗೀತಾ; ಫೋಟೋ ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್‌ ಫುಲ್ ಶಾಕ್!

Follow Us:
Download App:
  • android
  • ios