Asianet Suvarna News Asianet Suvarna News

ಗಟ್ಟಿಮೇಳ: ಮನೆಯಲ್ಲೇ ಇರುವ ಅಮ್ಮನನ್ನು ಊರೆಲ್ಲ ಹುಡುಕುತ್ತಿರುವ ಮಕ್ಕಳು

ಗಟ್ಟಿಮೇಳ ಸೀರಿಯಲ್‌ನಲ್ಲಿ ಹೊಸ ಟ್ವಿಸ್ಟ್ ಶುರುವಾಗಿದೆ. ಅಮ್ಮ ಕಣ್ಮುಂದೆಯೇ ಇದ್ದರೂ ಮಕ್ಕಳು ಅಮ್ಮನಿಗಾಗಿ ಊರೆಲ್ಲ ಹುಡುಕಾಡುತ್ತಿದ್ದಾರೆ. ಮೂವರು ಮಕ್ಕಳ ಅಮ್ಮನಂತೆ ನಟಿಸುತ್ತಿರುವ ಸುಹಾಸಿನಿಯ ಕಪಟ ಪ್ರೀತಿಗೆ ಬ್ರೇಕ್ ಬೀಳಲಿದೆ.

In Gattimela serial Search for mother vaidhehi started
Author
First Published Aug 27, 2022, 3:19 PM IST

ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗುತ್ತಿರುವ ಸೀರಿಯಲ್ 'ಗಟ್ಟಿಮೇಳ'. ಒಂದು ಕಡೆ ವೇದಾಂತ್ ಅಮೂಲ್ಯ ರೊಮ್ಯಾನ್ಸ್, ಇನ್ನೊಂದೆಡೆ ವೇದಾಂತ್ ಫ್ಯಾಮಿಲಿ ಸ್ಟೋರಿ ಇರುವ ಈ ಸೀರಿಯಲ್‌ನಲ್ಲಿ ಹೊಸದೊಂದು ಡ್ರಾಮಾ ಶುರುವಾಗಿದೆ. ವೇದಾಂತ್ ಹಾಗೂ ಉಳಿದ ಮಕ್ಕಳ ತಾಯಿ ಈಗಿರುವ ಸುಹಾಸಿನಿ ಅಲ್ಲ, ಬೇರೆ ಯಾರೋ ಇದ್ದಾರೆ ಅನ್ನೋ ಸತ್ಯ ವೇದಾಂತ್ ತಮ್ಮ ವಿಕ್ರಾಂತ್ ಹಾಗೂ ತಂಗಿ ಆದ್ಯಾಗೆ ಗೊತ್ತಾಗಿದೆ. ಈಗಿರುವ ಅಮ್ಮ ತನ್ನ ಅಮ್ಮ ಅಲ್ಲ ಅಂತ ಗೊತ್ತಾದಾಗ ಆದ್ಯಾಗೆ ಆಘಾತವಾಗಿದೆ. ಸಿಕ್ಕಾಪಟ್ಟೆ ಮುದ್ದಿಲ್ಲಿ ಬೆಳೆದಿರುವ ಮಗುವಿನಂಥಾ ಮನಸ್ಸಿನ ಆದ್ಯಾ ಇದೀಗ ಅಮ್ಮ ಬೇಕು ಅಂತ ಹಠ ಶುರು ಮಾಡಿದ್ದಾಳೆ. ಅಮ್ಮನಿಗಾಗಿ ಹುಡುಕಾಟ ಶುರು ಮಾಡಲು ಮನಸ್ಸು ಮಾಡಿದ್ದಾಳೆ. ಆದರೆ ಈ ವಿಚಾರ ವೇದಾಂತ್ ಗಮನಕ್ಕೆ ಬಂದು ಆತ ಆದ್ಯಾಳಾ ಹಠ ನೋಡಿ ಪ್ರೀತಿಯ ತಂಗಿಯ ಮೇಲೆ ಕೋಪದಲ್ಲಿ ಕೈ ಎತ್ತಲು ಹೋಗಿದ್ದಾನೆ. ಏಕೆಂದರೆ ಆತನಿಗೆ ಅಮ್ಮ ಇಲ್ಲ ಅನ್ನೋ ಸತ್ಯ ಗೊತ್ತಿದೆ. ಈಗ ಈ ಸತ್ಯ ಬಯಲಾದರೆ ಈಗ ಸಿಗುತ್ತಿರುವ ಸುಹಾಸಿನಿ ಪ್ರೀತಿ ಎಲ್ಲಿ ತಪ್ಪಿಹೋಗುವುದೋ ಅನ್ನುವ ಆತಂಕ ಆತನಲ್ಲಿ ಮನೆಮಾಡಿ.

ಇನ್ನೊಂದೆಡೆ ವೇದಾಂತ್ ವಸಿಷ್ಠ ಕೋಪ ಎಂಥದ್ದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕಾಗಿಯೇ ಅಮ್ಮನನ್ನು ಹುಡುಕಬೇಕು ಎಂಬ ತಮ್ಮ ಮನದಾಸೆಯನ್ನು ಯಾರು ಕೂಡ ವೇದಾಂತ್ ಬಳಿ ಹೇಳಿರಲಿಲ್ಲ. ಅಮ್ಮನನ್ನು ನೋಡಬೇಕು ಎನಿಸಿದಾಗಲೂ ವೇದಾಂತ್ ಬಳಿ ಭಾವನೆ ವ್ಯಕ್ತಪಡಿಸುತ್ತಿರಲಿಲ್ಲ. ಮನದಲ್ಲಿಯೇ ನೋವು ಇಟ್ಟುಕೊಂಡು ಸಾಕಾಗಿದ್ದ ಮಕ್ಕಳೀಗ ಅಮ್ಮ ಬೇಕು ಅಂತಿದ್ದಾರೆ. ಅಮ್ಮನಿಂದ ದೂರಾದ ಮೇಲೆ ದೊಡ್ಡವನಾಗಿ ಎಲ್ಲಾ ಜವಾಬ್ದಾರಿ ತೆಗೆದುಕೊಂಡು, ಕೇಳಿದ್ದೆಲ್ಲವನ್ನೂ ಕೊಡಿಸಿದ್ದ ವೇದಾಂತ್ ತಮ್ಮ, ತಂಗಿಗಾಗಿ ದೃಢ ನಿರ್ಧಾರಕ್ಕೆ ಬಂದಿದ್ದಾನೆ. ಇಷ್ಟು ವರ್ಷದಲ್ಲಿ ಹೆತ್ತಮ್ಮ ಸುಹಾಸಿನಿ ಅಂತಾನೇ ಎಲ್ಲರೂ ನಂಬಿದ್ದರು. ವೇದಾಂತ್‌ಗೆ ಎಲ್ಲವೂ ಗೊತ್ತಿದ್ದರೂ ಗೊತ್ತಿಲ್ಲದಂತೆ ಇದ್ದ. ಸುಹಾಸಿನಿಯ ಕಪಟ ಪ್ರೀತಿಯನ್ನೇ ನಿಜವಾದ ಪ್ರೀತಿ ಎಂದು ಈಗಲೂ ನಂಬಿದ್ದಾನೆ. ಇಷ್ಟು ವರ್ಷ ಮುಚ್ಚಿಟ್ಟ ಸತ್ಯ ಎಲ್ಲರಿಗೂ ಗೊತ್ತಿದ್ದರೂ ಆದ್ಯಾಗೆ ಮಾತ್ರ ಗೊತ್ತಾಗಿರಲಿಲ್ಲ. ಆದರೆ ಆದ್ಯಾ ಇದೀಗ ನಿಜವಾದ ಅಮ್ಮ ಬೇಕು ಅಂತಿದ್ದಾಳೆ.

Kendasampige: ತನ್ನ ಭವಿಷ್ಯವಾ? ಅಪ್ಪನ ಪ್ರಾಣವಾ? ಸುಮಿ ಮುಂದೆ ಎರಡು ಆಯ್ಕೆ!

ವೇದಾಂತ್ ತುಂಬಾ ತಾಳ್ಮೆಯ ಮನುಷ್ಯ. ಎಲ್ಲವನ್ನು ಅರ್ಥ ಮಾಡಿಕೊಂಡು ಮನೆಯವರಿಗೆ ಏನು ಬೇಕು ಎಲ್ಲವನ್ನು ನೀಡುತ್ತಿದ್ದಾನೆ. ಸುಹಾಸಿನಿಯ ಮೇಲೆ ಸ್ಟ್ರಾಂಗ್ ನಂಬಿಕೆಯೊಂದಿದೆ. ಆ ನಂಬಿಕೆಯಿಂದೆ ಸುಹಾಸಿನಿ ಮಾಡುತ್ತಿರುವ ಯಾವ ಕುತಂತ್ರವೂ ಆತನಿಗೆ ಕಾಣಿಸುತ್ತಿಲ್ಲ. ಸುಹಾಸಿನಿ ನಮ್ಮನ್ನೆಲ್ಲಾ ಸಾಕಿದ್ದು, ತ್ಯಾಗ ಎಂದೇ ಭಾವಿಸುವ ವೇದಾಂತ್ ಹೆತ್ತ ತಾಯಿಯನ್ನು ಹುಡುಕುವ ಸಾಹಸಕ್ಕೆ ಕೈ ಹಾಕುತ್ತಿಲ್ಲ. ಯಾಕೆಂದರೆ ಅಮ್ಮ ಬದುಕಿದ್ದಾರೆ ಎಂಬ ನಂಬಿಕೆ ವೇದಾಂತ್‌ಗೆ ಇಲ್ಲ. ಅವರನ್ನು ಹುಡುಕಲು ಹೋದರೆ ಸುಹಾಸಿನಿಗೆ ನೋವಾಗುತ್ತೆ ಎಂದೇ ಯೋಚಿಸುತ್ತಾನೆ. ಹೀಗಾಗಿಯೇ ತಂಗಿ ಆದ್ಯಾಳನ್ನು ಆ ಮಟ್ಟಿಗೆ ಪ್ರೀತಿಸುತ್ತಿದ್ದರೂ ಆಕೆ ವೈದೇಹಿ ಬಗ್ಗೆ ಕೇಳಿದಾಗ ತಂಗಿ ಎಂದು ನೋಡದೆ ವೇದಾಂತ್ ಹೊಡೆಯುವುದಕ್ಕೆ ಹೋಗಿದ್ದ. ಇದು ಮನೆಯವರಿಗೆಲ್ಲಾ ಭಯ ತಂದಿತ್ತು. ಅದನ್ನು ಅಲ್ಲಿಗೆ ಬಿಟ್ಟಿದ್ದರು. ಇದೀಗ ಕಿಶೋರ್ ಅಮ್ಮ ಬದುಕಿದ್ದಾರೆ ಅಂತ ಹೇಳುತ್ತಿದ್ದಾರೆ. ಅಲ್ಲಿಗೆ ಬಂದ ಅಮೂಲ್ಯ, ಇದೊಮ್ಮೆ ಅವಕಾಶ ನೀಡು. ಕಿಶೋರ್ ಅಷ್ಟು ಕಾನ್ಫಿಡೆಂಟ್ ಆಗಿ ಹೇಳುತ್ತಿದ್ದಾರೆ ಎಂದರೆ ಅಮ್ಮ ಸಿಕ್ಕೇ ಸಿಗುತ್ತಾರೆ ಎಂಬ ಭರವಸೆಯ ಮಾತುಗಳನ್ನು ಹೇಳುತ್ತಿದ್ದಾಳೆ. ಇದು ವೇದಾಂತ್ ಮನಸ್ಸನ್ನು ಬದಲಾಯಿಸಿದೆ. ಜೊತೆಗೆ ತಮ್ಮ ತಂಗಿಯರ ಗೋಗರೆತ ನೋಡಿ ಆತ ಅಮ್ಮನನ್ನು ಹುಡುಕಲು ಅನುಮತಿ ನೀಡಿದ್ದಾನೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಇದೀಗ ಇವರ ತಾಯಿ ವೈದೇಹಿ ಆ ಮನೆಯಲ್ಲೇ ಇದ್ದಾಳೆ. ವೈಜಯಂತಿಯಾಗಿ ಮನೆ ಕೆಲಸ ಮಾಡುವವಳಂತೆ ನಟಿಸುತ್ತಾ ಮಕ್ಕಳನ್ನು ಪೊರೆಯುತ್ತಿದ್ದಾಳೆ. ಆದರೆ ಯಾರಿಗೂ ಆ ವಿಚಾರ ತಿಳಿಯುತ್ತಿಲ್ಲ. ಅಜ್ಜಿಗೆ ಕಣ್ಣೂ ಬಂದರೆ, ಹಾಸಿಗೆ ಹಿಡಿದಿರುವ ಧ್ರುವ ಮತ್ತೆ ಮೊದಲಿನಂತಾದರೆ ಇದು ತಿಳಿಯಬಹುದು. ಮುಂದೇನಾಗಬಹುದು, ಮನೆಯಲ್ಲೇ ಇರುವ ಅಮ್ಮನ ಗುರುತು ಮಕ್ಕಳಿಗೆ ಸಿಗಬಹುದಾ ಅನ್ನೋದು ಪ್ರಶ್ನೆ.

Hitler Kalyana: ಹಾವು ಮುಂಗುಸಿಯಂತಿದ್ದ ಏಜೆ - ಲೀಲಾ ಈಗ ಬೆಸ್ಟ್ ಫ್ರೆಂಡ್ಸ್! ಅಬ್ಬಬ್ಬಾ, ಅದ್ಹೇಗೆ?

Follow Us:
Download App:
  • android
  • ios