Asianet Suvarna News Asianet Suvarna News

ಬಿಗ್​ಬಾಸ್​ ಮನೆಯಲ್ಲಿ ಹೊಸಲೋಕ ಸೃಷ್ಟಿ! ಗಂಧರ್ವರಿಗೆ ರಾಕ್ಷಸರಿಂದ ಕಿರುಕುಳ: ಯಾರಿಗೆ ಸಿಕ್ತು ಜಯ?

 ಬಿಗ್​ಬಾಸ್​ ಮನೆಯಲ್ಲಿ ಹೊಸಲೋಕ ಸೃಷ್ಟಿ! ಗಂಧರ್ವರಿಗೆ ರಾಕ್ಷಸರಿಂದ ಕಿರುಕುಳ: ಯಾರಿಗೆ ಸಿಕ್ತು ಜಯ?
 

Gandharva and Demons loka in BiggBoss who will win the task suc
Author
First Published Dec 5, 2023, 4:15 PM IST

ಬಿಗ್ ಬಾಸ್‌ ಕನ್ನಡ 10 ರಿಯಾಲಿಟಿ ಷೋ (Bigg Boss 10)  ಆರಂಭವಾಗಿ ಎಂಟು ವಾರ ಕಳೆದಿದ್ದು, ಮನೆಯಲ್ಲಿ ದಿನೇ ದಿನೇ ಸ್ಪರ್ಧೆ ಟಫ್​ ಆಗುತ್ತಾ ಸಾಗಿದೆ. ಇದಾಗಲೇ ಹಲವಾರು ಟಾಸ್ಕ್​ಗಳನ್ನು ಸ್ಪರ್ಧಿಗಳು ನಡೆಸಿಕೊಟ್ಟಿದ್ದಾರೆ. ವಿನಯ್​, ತನಿಷಾ, ತುಕಾಲಿ ಸಂತೋಷ್​, ವರ್ತೂರು ಸಂತೋಷ್​, ಡ್ರೋನ್​ ಪ್ರತಾಪ್, ಕಾರ್ತಿಕ್​ ಸೇರಿದಂತೆ ಇತರ ಸ್ಪರ್ಧಿಗಳ​ ನಡುವೆ ಸ್ಪರ್ಧೆ ಹೆಚ್ಚಾಗಿದ್ದು, ಬಿಗ್​ಬಾಸ್​ ಮನೆಯ ಹೊರಗೂ ಇವರ ಫ್ಯಾನ್ಸ್​ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ಸರ್ಕಸ್​  ಮಾಡುತ್ತಿದ್ದಾರೆ. ಇದರ ನಡುವೆ ವಾರಾಂತ್ಯದಲ್ಲಿ ಕಾಣಿಸಿಕೊಳ್ಳುವ ಕಿಚ್ಚ ಸುದೀಪ್​ ಅವರು ಹಾಸ್ಯದ ಮಾತಿನಿಂದ ಬಿಗ್​ಬಾಸ್​ ಸ್ಪರ್ಧಿಗಳಿಗೆ ನಗುವಿನ ಟಾನಿಕ್​ ನೀಡುತ್ತಿದ್ದಾರೆ. ಇದರ ನಡುವೆನೇ ತುಕಾಲಿ ಸಂತೋಷ್​ ಕೂಡ ಆಗಾಗ್ಗೆ ಜೋಕ್​ ಮಾಡುತ್ತಲೇ ಇರುತ್ತಾರೆ. ಇವೆಲ್ಲವುಗಳ ನಡುವೆ ಇದೀಗ ಬಿಗ್​ಬಾಸ್​ನಲ್ಲಿ ಹೊಸ ಲೋಕ ಸೃಷ್ಟಿಯಾಗಿದ್ದು ಅದರ ಪ್ರೊಮೋ ಬಿಡುಗಡೆಯಾಗಿದೆ.

ಬಿಗ್​ಬಾಸ್​ ಮನೆ ಈ ಕ್ಷಣದಿಂದ ಬಿಗ್​ಬಾಸ್​ ಲೋಕ ಆಗಿ ಪರಿವರ್ತನೆ ಆಗಿದೆ. ಇಲ್ಲಿ ಗಂಧರ್ವರು, ರಾಕ್ಷಸರು ಇಬ್ಬರೂ ಇದ್ದಾರೆ ಎನ್ನುವ ದನಿಯೊಂದಿಗೆ ಈ ಪ್ರೊಮೋ ಬಿಡುಗಡೆಯಾಗಿದೆ. ಇಲ್ಲಿ ಒಂದಿಷ್ಟು ಸ್ಪರ್ಧಿಗಳು ಗಂಧರ್ವರಾಗಿಯೂ, ಇನ್ನೊಂದಿಷ್ಟು ಮಂದಿ ರಾಕ್ಷಸರಾಗಿಯೂ ಪರಿವರ್ತನೆಯಾಗಿದ್ದಾರೆ. ಕಾರ್ತಿಕ್, ಸಂಗೀತಾ, ತುಕಾಲಿ ಸಂತೋಷ್​, ಡ್ರೋನ್ ಪ್ರತಾಪ್​, ತನಿಷಾ, ನೀತು ರಾಕ್ಷಸ ಗಣದ ಟೀಮ್ ಸೇರಿದ್ದಾರೆ. ವಿನಯ್, ನಮ್ರತಾ, ವರ್ತೂರು ಸಂತೋಷ್​, ಮೈಕಲ್​, ಪವಿ ಗಂಧರ್ವರ ಟೀಮ್​ನಲ್ಲಿದ್ದಾರೆ. ಇಲ್ಲಿಯೂ ಮಾಮೂಲಿನಂತೆ ನೆಟ್ಟಿಗರಿಂದ ಸಂಗೀತಾ ವಿಷಯವಾಗಿಯೇ ಬಹುದೊಡ್ಡ ಚರ್ಚೆ ಶುರುವಾಗಿದೆ. ಸಂಗೀತ ತಂಡದ ರಾಕ್ಷಸತನದ ಅಬ್ಬರಕ್ಕೆ ಬಳಲಿ ಬೆಂಡಾಗಿ ತನ್ನ ಪಾತ್ರದಿಂದ ಹೊರಬರಲು ಯೋಚನೆ ಮಾಡುತ್ತಿರುವ ವಿನಯ್ ಎಂದು ಒಬ್ಬರು ಬರೆದಿದ್ದರೆ, ವಿನಯ್​ ಸ್ಥಿತಿ ಈಗ  ಸಂಗೀತಾ ಪಳಗಿಸಿದ ನಾಯಿಯಂತಾಗಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ.  

ಅನುಕಂಪ ಗಿಟ್ಟಿಸಿಕೊಳ್ಳಲು ಸುಳ್ಳು ಹೇಳಿ ತಗ್ಲಾಕೊಂಡ್ರಾ ಪ್ರತಾಪ್​? 2 ದಿನಗಳಲ್ಲಿ ತಪ್ಪು ಒಪ್ಪಿಕೊಳ್ಳದಿದ್ರೆ ಕೇಸ್​ ದಾಖಲು!

ಮದ ಏರಿದ ಆನೆಗೆ ಮತ್ತು ಇಳಿಸಿದ ಸಂಗೀತಾ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದರೆ, ಆನೆ ಅನ್ಕೊಂಡಿರೋ ವಿನಯ್ ಆನೆನೇ ಆಗಿರ್ಲಿ... ಮಾವುತ ಅನ್ಕೊಂಡಿರೋರು ಅಲ್ಲಿ ಮಾವುತಾನೆ ಆಗಿರ್ಲಿ... ಆದ್ರೆ ಆನೆ ಮೇಲೆ ಸವಾರಿ ಮಾಡೋ ಚಾಮುಂಡಿ ಮಾತ್ರ ನಮ್ಮ ಸಂಗೀತಾನೇ  ಆಗಿರತಾಳೆ ನೆನಪಿರಲಿ ಎಂದು ನಿಶಿತಾ ಗೌಡ ಎನ್ನುವವರು ಕಮೆಂಟ್​ ಹಾಕಿದ್ದಾರೆ. ಟಾಸ್ಕ್​ ಪ್ರಕಾರ, ರಾಕ್ಷಸ ನೀಡುವ ಕಾಟವನ್ನೆಲ್ಲಾ ಗಂಧರ್ವರ ತಂಡ ಸಹಿಸಿಕೊಳ್ಳಬೇಕಿದೆ. ಟಾಸ್ಕ್ ಮುಗಿಯುವವರೆಗೂ ಗಂಧರ್ವರು ಸೈಲೆಂಟ್ ಆಗಿ ರಾಕ್ಷಸ ಟೀಮ್​ ಹೇಳಿದಂತೆ ಕೇಳ್ತಿದ್ದಾರೆ. ಗಂಧರ್ವರು ಟೀಮ್​ ಸದಸ್ಯರ ಬಟ್ಟೆಗಳನ್ನೆಲ್ಲಾ ರಾಕ್ಷಸ ತಂಡದವರು ಚೆಲ್ಲಾ ಪಿಲ್ಲಿ ಮಾಡಿದ್ದಾರೆ. ಏನೂ ಮಾಡಲಾಗದೆ ವಿನಯ್, ನಮ್ರತಾ ಸೈಲೆಂಟ್ ಆಗಿದ್ದಾರೆ.

ಒಟ್ಟಿನಲ್ಲಿ ಈ ಆಟದಲ್ಲಿ ಜಯ ಯಾರ ಪಾಲಾಗುತ್ತದೆ ಎಂದು ಬಿಗ್​ಬಾಸ್​ ಸಂಪೂರ್ಣ ಸಂಚಿಕೆ ನೋಡಿದರೆ ತಿಳಿದುಬರಲಿದೆ. ಇದೇ ವೇಳೆ, ಕೋವಿಡ್​ ಸಂದರ್ಭದಲ್ಲಿ  ತಮಗೆ ಅಧಿಕಾರಿಗಳು ಹಿಂಸೆ ಕೊಟ್ಟಿರುವುದಾಗಿ ಹೇಳಿ ತಗ್ಲಾಕ್ಕೊಂಡಿರೋ ಡ್ರೋನ್​ ಪ್ರತಾಪ್​ ವಿಷಯ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.  ಇದು ಭಾರಿ ವೈರಲ್​  ಆಗುತ್ತಲೇ, ಇದೀಗ ಅವರ ವಿರುದ್ಧ ಕೇಸ್​ ದಾಖಲಿಸುವುದಾಗಿ ಹೇಳಿದ್ದಾರೆ ಬಿಬಿಎಂಪಿ ನೋಡಲ್ ಅಧಿಕಾರಿ ಡಾ. ಪ್ರಯಾಗ್. ಇದರ ಬಗ್ಗೆ ಏನಾಯ್ತು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 
 

ಡ್ರೋನ್​ ಪ್ರತಾಪ್​ಗೆ ತುಕಾಲಿ ಸಂತೋಷ್​ ಕೇಳೋ ಈ ಪ್ರಶ್ನೆಗೆ ಉತ್ರ ಕೊಟ್ರೆ ನೀವೇ ಗ್ರೇಟ್​!

Latest Videos
Follow Us:
Download App:
  • android
  • ios