Asianet Suvarna News Asianet Suvarna News

ಈ ಬಸ್​ ತುಂಬಾ ಪುಟಾಣಿ ಪ್ರತಿಭೆಗಳು... ಕಂಡಕ್ಟರ್​ ಮಾಸ್ಟರ್​ ಆನಂದ್​, ಡ್ರೈವರ್​ ರಚಿತಾ ರಾಮ್​...

ಡ್ರಾಮಾ ಜ್ಯೂನಿಯರ್ಸ್​ ಸೀಸನ್​ 5 ಶುರುವಾಗಲಿದ್ದು, ಮಕ್ಕಳನ್ನು ಹೊತ್ತ ಬಸ್​ ಹೊರಟಿದ್ದು, ಅದರ ಪ್ರೊಮೋ ರಿಲೀಸ್​ ಆಗಿದೆ.
 

Drama Juniors Season 5 is about to start its promo has been released suc
Author
First Published Nov 6, 2023, 11:01 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಡ್ರಾಮಾ ಜ್ಯೂನಿಯರ್ಸ್​ ಜನಮನ್ನಣೆ ಗಳಿಸಿದೆ. ಇದಾಗಲೇ ನಾಲ್ಕು ಸೀಸನ್​ಗಳು ಮುಗಿದಿದ್ದು, 5ನೇ ಸೀಸನ್​ತ್ತ ದಾಪುಗಾಲು ಇಟ್ಟಿದೆ. ಇದಾಗಲೇ ಹಲವಾರು ಪ್ರತಿಭೆಗಳು ತಮ್ಮ ಅದ್ಭುತ ಪ್ರತಿಭೆಗಳ ಮೂಲಕ ಜನಮನ ಗೆದ್ದಿದ್ದಾರೆ. ಪುಟಾಣಿ ಪ್ರತಿಭೆಗಳಿಗೆ ಜನರು ಫಿದಾ ಆಗಿದ್ದಾರೆ. ಇದೀಗ ಐದನೇ ಸೀಸನ್​ ಶುರುವಾಗಲಿದ್ದು, ಅದರ ಪ್ರೊಮೋ ಒಂದು ಬಿಡುಗಡೆಯಾಗಿದೆ. ಹೊರಟಿದೆ ಪುಟಾಣಿ ಪ್ರತಿಭೆಗಳು ತುಂಬಿರೋ ಬಸ್ಸು ಡ್ರಾಮಾ ಜೂನಿಯರ್ಸೆ ಇವರ ಕೇರ್ ಆಫ್ ಅಡ್ರೆಸ್ಸು ಹೆಸರಿನಲ್ಲಿ ವಾಹಿನಿ ಪ್ರೋಮೋ ರಿಲೀಸ್​ ಮಾಡಿದೆ. ಇದೇ 18ರಿಂದ ಡ್ರಾಮಾ ಜ್ಯೂನಿಯರ್ಸ್​ ಸೀಸನ್​-5 ಶುರುವಾಗಲಿದೆ. 
 
ಈಗ ರಿಲೀಸ್​ ಆಗಿರುವ ಪ್ರೊಮೋದಲ್ಲಿ ಒಂದು ಬಸ್ಸಿನ ತುಂಬೆಲ್ಲಾ ಬೇರೆ ಬೇರೆ ವೇಷ ತೊಟ್ಟ ಪುಟಾಣಿ ಮಕ್ಕಳನ್ನು ಕಾಣಬಹುದು. ಅದರಲ್ಲಿ ಕಂಡಕ್ಟರ್​ ಮಾಸ್ಟರ್​ ಆನಂದ್​ ಆಗಿದ್ದು, ಡ್ರೈವರ್​ ರಚಿತಾ ರಾಮ್​  ಆಗಿದ್ದಾರೆ. ಈ ವಿಡಿಯೋದ ಕೊನೆಯಲ್ಲಿ ಚಿತ್ರನಟಿ ಲಕ್ಷ್ಮಿ ಹಾಗೂ ನಟ ರವಿಚಂದ್ರನ್​ ಅವರ ಎಂಟ್ರಿ ಕೂಡ ಆಗಲಿದ್ದು, ಪ್ರೋಮೋ ಸಕತ್​ ವೈರಲ್​ ಆಗುತ್ತಿದೆ. ಈ ಪ್ರೊಮೋ ಮಾಡಿದವರ ತಲೆಗೆ ಫ್ಯಾನ್ಸ್​ ಭೇಷ್​ ಭೇಷ್​ ಎನ್ನುತ್ತಿದ್ದು, ಮಕ್ಕಳ ಪ್ರತಿಭೆಯನ್ನು ನೋಡಲು ತಾವು ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ. 

ಅವಳ ಡ್ರೆಸ್​ಗೆ ರಕ್ತದ ಕಲೆ, ಮುಂದೆ?... 'ಅಂತರಪಟ' ಕೊಟ್ಟ ಒಳ್ಳೆಯ ಮೆಸೇಜ್​ಗೆ ಮೆಚ್ಚುಗೆಗಳ ಮಹಾಪೂರ

ಅಂದಹಾಗೆ ಕಳೆದ ಬಾರಿ ನಡೆದ ಡ್ರಾಮಾ ಜ್ಯೂನಿಯರ್ಸ್​ ಸೀಸನ್​ 4, 23 ವಾರಗಳ ಕಾಲ ನಡೆದಿತ್ತು.  ‘ಡ್ರಾಮಾ ಜ್ಯೂನಿಯರ್ಸ್​ ಸೀಸನ್​ 4’ ವಿನ್ನರ್​ (Drama Juniors Season 4 winners) ಆಗಿ ಸಮೃದ್ಧಿ ಎಸ್. ಮೊಗವೀರ್ ಹೊರಹೊಮ್ಮಿದ್ದಳು. ಮೂಲತಃ ಕುಂದಾಪುರದ ಸಮೃದ್ಧಿ  ಆಕರ್ಷಕ ಟ್ರೋಫಿ ಜೊತೆಗೆ 5 ಲಕ್ಷ ರೂಪಾಯಿ ನಗದು ಬಹುಮಾನ ಪಡೆದಳು.  ಚಾಮರಾಜನಗರದ ಗೌತಮ್ ರಾಜ್ ಮತ್ತು ಉಡುಪಿಯ ಸಾನಿಧ್ಯ ಆಚಾರ್ ಸಮಬಲ ಸಾಧಿಸಿಕೊಂಡು ಎರಡನೇ ಸ್ಥಾನ ಪಡೆದರು. ಮನಸೆಳೆಯುವ ಅಭಿನಯದ ಮೂಲಕ ಹೈಲೈಟ್​ ಆಗಿದ್ದ 15 ಮಕ್ಕಳು ಫೈನಲ್​ಗೆ ಆಯ್ಕೆಯಾಗಿದ್ದರು. ಅವರಲ್ಲಿ ನಾಲ್ಕು ಮಕ್ಕಳು ಪ್ರಶಸ್ತಿ ಗೆಲ್ಲುವ ಹಂತಕ್ಕೆ ತಲುಪಿದ್ದರು. ಉತ್ತಮರಲ್ಲಿ ಅತ್ಯುತ್ತಮರನ್ನು ವಿಜೇತರನ್ನಾಗಿ ಘೋಷಿಸಲಾಯಿತು. ಅಲ್ಲದೇ, ಪ್ರತಿಯೊಬ್ಬ ಮಗುವಿಗೂ ಪದಕ ನೀಡುವ ಮೂಲಕ ಉಳಿದ 11 ಪ್ರತಿಭೆಗಳನ್ನು ಜೀ ಕನ್ನಡ ವಾಹಿನಿ ಕಡೆಯಿಂದ ಗೌರವಿಸಲಾಯಿತು.

ಇದೀಗ ಡ್ರಾಮಾ ಜ್ಯೂನಿಯರ್​ ಸೀಸನ್​ 5ಗೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಪ್ರೋಮೋದಲ್ಲಿನ ಪುಟಾಣಿ ಮಕ್ಕಳನ್ನು ನೋಡಿದರೆ ಒಬ್ಬರಿಗಿಂತ ಒಬ್ಬರು ಬೆಸ್ಟ್​ ಆ್ಯಕ್ಟರ್ಸ್​ ಎಂದು ಗುರುತಿಸಬಹುದು. ಕಾಂಪಿಟೇಷನ್​ ಬಹಳ ಟಫ್​ ಇರಲಿದೆ. ಚಿತ್ರತಾರೆಯರಾದ ರವಿಚಂದ್ರನ್, ಜೂಲಿ ಲಕ್ಷ್ಮೀ, ರಚಿತಾ ರಾಮ್ ಈ ಷೋನ ತೀರ್ಪುಗಾರರಾಗಿದ್ದು, ಮಾಸ್ಟರ್ ಆನಂದ್ ಈ ಷೋನ ನಿರೂಪಕರಾಗಿದ್ದಾರೆ. ಈ ಬಾರಿಯೂ ಅವರೇ ಮುಂದುವರೆಯಲಿದ್ದಾರೆ ಎಂದು ಪ್ರೊಮೋ ನೋಡಿದರೆ ತಿಳಿಯಬಹುದು. 

ಚಿರು ಪುತ್ರನ ಡ್ಯಾನ್ಸ್‌ಗೆ ಮನಸೋತ ನೆಟ್ಟಿಗರು: ಭವಿಷ್ಯದ ಸ್ಟಾರ್‌ ನಟ ಫಿಕ್ಸ್‌ ಎಂದ ಫ್ಯಾನ್ಸ್‌

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios