ಧರ್ತಿಪುತ್ರ ನಂದಿನಿ ಧಾರಾವಾಹಿಯಲ್ಲಿ ನಟಿಸಿದ್ದ 22 ವರ್ಷದ ನಟ ಅಮನ್ ಜೈಸ್ವಾಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜೋಗೇಶ್ವರಿ ಹೆದ್ದಾರಿಯಲ್ಲಿ ಅವರ ಬೈಕಿಗೆ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಧಾರಾವಾಹಿ ಬರಹಗಾರ ಧೀರಜ್ ಮಿಶ್ರಾ ಖಚಿತಪಡಿಸಿದ್ದಾರೆ.

ನವದೆಹಲಿ (ಜ.17): ಧರ್ತಿಪುತ್ರ ನಂದಿನಿ ಟಿವಿ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟಿವಿ ನಟ ಅಮನ್ ಜೈಸ್ವಾಲ್ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರಿಗೆ 22 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಧರ್ತಿಪುತ್ರ ನಂದಿನಿ ಸೀರಿಯಲ್‌ನ ಬರಹಗಾರ ಧೀರಜ್ ಮಿಶ್ರಾ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. "ಅಮನ್ ಆಡಿಷನ್‌ಗೆ ಹೋಗುತ್ತಿದ್ದರು. ಜೋಗೇಶ್ವರಿ ಹೆದ್ದಾರಿಯಲ್ಲಿ ಹೋಗುವಾಗ ಅವರ ಬೈಕಿಗೆ ಟ್ರಕ್ ಡಿಕ್ಕಿ ಹೊಡೆದಿದೆ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಸೋಶಿಯಲ್‌ ಮೀಡಿಯಾದಲ್ಲಿ ಅಮನ್‌ ಜೈಸ್ವಾಲ್‌ ಸಾವಿಗೆ ಸಂತಾಪ ಸೂಚಿಸಿರುವ ಧೀರಜ್‌ ಮಿಶ್ರಾ, 'ತುಮ್ ಜೀವಿತ್ ರಹೋಗೆ ಹಮಾರಿ ಯಾದೋಂ ಮೇ...ಈಶ್ವರ್ ಕಭಿ ಕಭಿ ಕಿತ್ನಾ ಕ್ರೂರ್ ಹೋ ಸಕ್ತಾ ಹೈ ಆಜ್ ತುಮ್ಹಾರಿ ಮೃತ್ಯು ನೆ ಎಹಸಾಸ್ ಕರ ದಿಯಾ...ಅಲ್ವಿದಾ (ನೀವು ನಮ್ಮ ನೆನಪುಗಳಲ್ಲಿ ಬದುಕುತ್ತೀರಿ. ... ದೇವರು ಕೆಲವೊಮ್ಮೆ ಎಷ್ಟು ಕ್ರೂರವಾಗಿರಬಹುದು ಎನ್ನುವುದನ್ನು ಇಂದು ನಿಮ್ಮ ಸಾವು ನನಗೆ ತಿಳಿಸಿದೆ ... ವಿದಾಯ)' ಎಂದು ಬರೆದಿದ್ದಾರೆ.

ಸೈಫ್ ಮೇಲಿನ ದಾಳಿಗೆ ಕವಿ ಕುಮಾರ್ ವಿಶ್ವಾಸ್ ಬಂಧಿಸಿ ಎಂಬ ಕೂಗು ಎದ್ದಿರುವುದೇಕೆ?

ಅಮನ್ ಜೈಸ್ವಾಲ್ ಉತ್ತರ ಪ್ರದೇಶದ ಬಲಿಯಾದವರು. ಅವರು ಧರ್ತಿಪುತ್ರ ನಂದಿನಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಸೋನಿ ಟಿವಿ ಶೋ ಪುಣ್ಯಶ್ಲೋಕ್ ಅಹಲ್ಯಾಬಾಯಿಯಲ್ಲಿ ಯಶವಂತ್ ರಾವ್ ಫಾನ್ಸೆ ಪಾತ್ರವನ್ನು ಕೂಡ ನಿರ್ವಹಿಸಿದ್ದರು. ಈ ಕಾರ್ಯಕ್ರಮವು ಜನವರಿ 2021 ರಿಂದ ಅಕ್ಟೋಬರ್ 2023 ರವರೆಗೆ ಪ್ರಸಾರವಾಯಿತು. ಅವರು ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ರವಿ ದುಬೆ ಮತ್ತು ಸರ್ಗುನ್ ಮೆಹ್ತಾ ಅವರ ಉದರಿಯಾನ್ ನ ಭಾಗವಾಗಿದ್ದರು.

ತಮಿಳು ಬಿಗ್ ಬಾಸ್ ನಲ್ಲಿ ಟ್ವಿಸ್ಟ್: ರಿಸಲ್ಟ್ ತಲೆಕೆಳಗೆ! ವಿನ್ನರ್‌ ಯಾರೆಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ!