Asianet Suvarna News Asianet Suvarna News

ನನ್ನನ್ನು ಸ್ಕೂಲ್​ನಿಂದ ಓಡಿಸಿಬಿಟ್ರು! ಬಾಲ್ಯದ ಗೆಳೆಯ ರವಿಚಂದ್ರನ್​ ಜತೆ ಡಿ.ಕೆ.ಶಿವಕುಮಾರ್​ ಸವಿ ನೆನಪು

 ಜೀ ಕುಟುಂಬ ಅವಾರ್ಡ್​ ಫಂಕ್ಷನ್​ನಲ್ಲಿ  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಬಾಲ್ಯದ ಬೆಳೆಯ ರವಿಚಂದ್ರನ್​ ಜೊತೆ ಶಾಲೆ ದಿನಗಳನ್ನು ನೆನಪಿಸಿಕೊಂಡರು. 
 

Deputy Chief Minister DK Shi recalled his childhood school days with Ravichandran suc
Author
First Published Nov 12, 2023, 4:56 PM IST

ಜೀ ಕನ್ನಡ ವಾಹಿನಿ ನವೆಂಬರ್​ 10 ಮತ್ತು 11ರಂದು ನಡೆಸಿದ್ದ ಜೀ ಕುಟುಂಬ ಅವಾರ್ಡ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿತು.  ಇದರಲ್ಲಿ ಜೀ ವಾಹಿನಿಯ ಸೀರಿಯಲ್​ ನಟ-ನಟಿಯರು ಹಾಗೂ  ತಂತ್ರಜ್ಞರು ಸೇರಿದಂತೆ ಧಾರಾವಾಹಿಯ ತೆರೆ ಮರೆಯಲ್ಲಿ ಶ್ರಮಿಸಿರುವವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲು ಸಿನಿ ಕ್ಷೇತ್ರದ ದಿಗ್ಗಜರು ಸೇರಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರನ್ನೂ ಕರೆಸಲಾಗಿತ್ತು. ಅವರಿಗೆ ಕಾರ್ಯಕ್ರಮದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಎಲ್ಲದ್ದಕ್ಕೂ ಮೊದಲೇ ರೆಡಿ ಇದ್ದವರಂತೆ ಉಪ ಮುಖ್ಯಮಂತ್ರಿಗಳು ಪಟಪಟ ಎಂದು ಉತ್ತರ ಕೊಟ್ಟರು. 

ನಿಮ್ಮ ಈ ಬಿಜಿ ಷೆಡ್ಯೂಲ್​ನಲ್ಲಿ ಸಿನಿಮಾ ನೋಡಲು ಸಮಯ ಸಿಗುತ್ತದಾ? ಒಂದು ವೇಳೆ ಸಿನಿಮಾ ನೋಡಿದ್ರೆ ನಿಮ್ಮ ನೆಚ್ಚಿನ ನಾಯಕ ನಟ ಯಾರು ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು, ಒಂದು ಸಿನಿಮಾ ತುಂಬಾ ಸಂತೋಷ ಕೊಟ್ಟಿತ್ತು. ಅದನ್ನು ಒಂದು ಹತ್ತು ಸಲ ನೋಡಿದ್ದೇನೆ.  ಆ ಸಿನಿಮಾ ಸತ್ಯ ಹರಿಶ್ಚಂದ್ರ. ಮದುವೆಯಾದ ಹೊಸತರಲ್ಲಿ ಪತ್ನಿಯನ್ನು ಕರೆದುಕೊಂಡು ಹೋಗಿದ್ದೆ ಎಂದರು. ಹಾಗೆನೇ ರವಿಚಂದ್ರನ್​ ಅವರ ಪ್ರೇಮಲೋಕ ಚಿತ್ರನೂ ನೋಡಿದ್ದೇನೆ ಎಂದರು. ನಂತರ ಕ್ರೇಜಿಸ್ಟಾರ್​ ರವಿಚಂದ್ರನ್​ ಅವರ ಬಾಲ್ಯದ ಗೆಳೆತನದ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್​ ಅವರು, ನಾನು ಮತ್ತು ರವಿಚಂದ್ರನ್​ ಒಂದೇ ಸ್ಕೂಲ್​ನಲ್ಲಿ ಕಲೀತಾ ಇದ್ವಿ. ಅದಕ್ಕೇ ನೋಡೋಣ ಅಂತ ಕಪಾಲಿ ಥಿಯೇಟರ್​ನಲ್ಲಿ ನಡೀತಾ ಇದ್ದ ಪಿಚ್ಚರ್​ಗೆ ಹೋಗಿದ್ದೆ ಎಂದರು. 

ಡಿಕೆಶಿ ದೃಷ್ಟಿಯಲ್ಲಿ ದೇವರು ಯಾರು? 'ಭೂಮಿಗೆ ಬಂದ ಭಗವಂತ'ನ ಪ್ರಶ್ನೆಗೆ ಅವರು ಹೇಳಿದ್ದೇನು?

ನಂತರ ಡಿ.ಕೆ.ಶಿವಕುಮಾರ್​ ಅವರು ಸ್ಕೂಲ್​ಮೇಟ್​ ಎಂದು ತಿಳಿಯುತ್ತಲೇ ರವಿಚಂದ್ರನ್​ ಅವರಿಗೆ ಶಿವಕುಮಾರ್​ ಅವರ ಬಗ್ಗೆ ಮಾತನಾಡುವಂತೆ ಹೇಳಲಾಯಿತು. ಆಗ ಡಿ.ಕೆ.ಶಿವಕುಮಾರ್​ ಅವರು ರವಿಚಂದ್ರನ್​ ಹೆಗಲ ಮೇಲೆ ಕೈಹಾಕಿದರು. ಆಗ ರವಿಚಂದ್ರನ್​ ಅವರು, ಇಷ್ಟೇ ನಮ್ಮ ಫ್ರೆಂಡ್​ಷಿಪ್ಪು ಎಂದರು. ಹೀಗೆ ಸಿಕ್ಕಾಗ ಹೆಗಲಮೇಲೆ ಕೈಹಾಕಿ ಬೆನ್ನು ತಟ್ಟುತ್ತಾರೆ. ನಾವು ನಗ್ತೀವಿ, ಆಮೇಲೆ ಆ ದಿನಗಳನ್ನು ನೆನಪಿಸಿಕೊಳ್ತಾರೆ. ಅವರಿಗೆ ಯಾವಾಗ್ಲೂ ನೆನಪಾಗುವುದು ನನ್ನ ಮೊದಲ ಪಿಚ್ಚರ್​ ವಿಲನ್​ ಆಗಿ ಆ್ಯಕ್ಟ್​ ಮಾಡಿರೋದು. ಏನೋ ಕೋಯಾ ಕೋಯಾ ಅಟಾಚಿ ಅಂತ ಕರೀತಾರೆ. ಅವರ ಬೈಕ್​ನಲ್ಲಿ ನನ್ನ ಕೋಯಾ ಕೋಯಾ ಅಟಾಚಿ ಅಂತ ಬರೆದುಕೊಂಡು ಓಡಾಡಿದ್ರು ಎಂದು ಆ ದಿನಗಳನ್ನು ರವಿಚಂದ್ರನ್​ ನೆನಪಿಸಿಕೊಂಡರು. 

ನಂತರ ಸ್ಕೂಲ್​ ನೆನಪುಗಳನ್ನು ಏನಾದರೂ ಇದ್ದರೆ ಹಂಚಿಕೊಳ್ಳಿ ಎಂದು ಆ್ಯಂಕರ್​ ಅನುಶ್ರೀ ಹೇಳಿದಾಗ, ರವಿಚಂದ್ರನ್​ ಅವರು, ಸ್ಕೂಲಾ... ನಾವು ಒಳಗೆ ಹೋಗಿದ್ರೆ ತಾನೆ ಎಂದರು. ನೀನೊಳ್ಳೆ ಅವಮಾನ ಮಾಡ್ತಿಯಲ್ಲೇ ಎಂದು ಅನುಶ್ರೀ ಅವರನ್ನು ರೇಗಿಸಿದ್ರು. ಇಬ್ರೂ ಹೋಗಿಲ್ವಾ ಎಂದು ಅನುಶ್ರೀ ಕೇಳಿದಾಗ, ನನ್ನನ್ನು ಸ್ಕೂಲ್​ನಿಂದ ಓಡಿಸಿಬಿಟ್ರು ಎಂದು ಡಿ.ಕೆ.ಶಿವಕುಮಾರ್​ ಹೇಳಿದ್ರು. ಆ ಸ್ಕೂಲ್​ನಲ್ಲಿ ಬಂಕ್​ ಅಂತೇನಾದ್ರೂ ಮಾಡಿದ್ರೆ ನಾನೇ ಫಸ್ಟ್​ ಮಾಡಿರೋದು ಎಂದರು ರವಿಚಂದ್ರನ್​. ಹೀಗೆ ಈ ಬಾಲ್ಯದ ಸ್ನೇಹಿತರು ಬಾಲ್ಯದ ನೆನಪು ಮಾಡಿಕೊಂಡರು. 

ಅಂಕಲ್​ ನಿಮ್ಗೆ ಯಾವ ಪಟಾಕಿ ಇಷ್ಟ? ಸೀತಾರಾಮ ಪುಟಾಣಿ ಸಿಹಿ ಪ್ರಶ್ನೆಗೆ ಡಿಕೆಶಿ ಹೇಳಿದ್ದೇನು?

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios