Asianet Suvarna News Asianet Suvarna News

ಬಿಗ್​ಬಾಸ್​ನಲ್ಲಿ ವಿನಯ್​ ಸದಾ ಆಕ್ರಮಣಿಕಾರಿಯಾಗಿ ಇರ್ತಿದ್ದುದು ಯಾಕೆ? ಅವರ ಬಾಯಲ್ಲೇ ಕೇಳಿ...

ವಿನಯ್​ ಸದಾ ಸಿಟ್ಟಿನಲ್ಲೇ ಇರ್ತಿದ್ದುದು ಏಕೆ? ನಮ್ರತಾ-ವಿನಯ್​ ಸಂಬಂಧ ಅಣ್ಣ-ತಂಗಿದ್ದು ಆಗಿದ್ಹೇಗೆ? ನಮ್ರತಾ ಪ್ಲಸ್​-ಮೈನಸ್​ ಗುಣ ಯಾವುದು? ಅವರ ಬಾಯಲ್ಲೇ ಕೇಳಿ...
 

Bigg boss Vinay angry behaviour and Namrutas plus and minus point suc
Author
First Published Feb 8, 2024, 4:01 PM IST

ಬಿಗ್​ಬಾಸ್​ನಲ್ಲಿ ಜಗಳದ ಮೂಲಕ ಅತಿ ಹೆಚ್ಚು ಸದ್ದು ಮಾಡಿದವರಲ್ಲಿ ವಿನಯ್​ ಗೌಡ ಒಬ್ಬರು. ವಿನಯ್​ ಮತ್ತು ಡ್ರೋನ್​ ಪ್ರತಾಪ್​ ನಡುವಿನ ಕಾಳಗ, ಜಟಾಪಟಿ ಬಿಗ್​ಬಾಸ್​ ವೀಕ್ಷಕರಿಗೆ ತಿಳಿದದ್ದೇ. ಕೆಲವರು ವಿನಯ್​ ಪರವಾಗಿ ನಿಂತಿದ್ದರೆ, ಇನ್ನು ಕೆಲವರು ಡ್ರೋನ್​ ಪ್ರತಾಪ್​ ಮಾಡುತ್ತಿರುವುದು ಸರಿಯೆನ್ನುತ್ತಿದ್ದರು. ವೀಕ್ಷಕರಲ್ಲಿ ಕೂಡ ಇವರಿಬ್ಬರ ಜಗಳದ ಕುರಿತು ಭಿನ್ನ ಅಭಿಪ್ರಾಯಗಳೇ ವ್ಯಕ್ತವಾಗುತ್ತಿದ್ದವು. ಕೆಲವರು ವಿನಯ್​ ಸುಮ್ಮನೇ ಪ್ರವೋಕ್​ ಮಾಡ್ತಿದ್ದಾರೆ ಎಂದರೆ ಇನ್ನು ಕೆಲವರು ಡ್ರೋನ್​ ಪ್ರತಾಪ್​ ಪ್ರವೋಕ್​ ಮಾಡುವುದು ಎನ್ನುತ್ತಿದ್ದರು. ಒಟ್ಟಿನಲ್ಲಿ ಇವರಿಬ್ಬರ ಜಗಳ ಹಾಟ್​ ಟಾಪಿಕ್​ ಆಗಿತ್ತು. ಡ್ರೋನ್​ ಪ್ರತಾಪ್​ ಜೊತೆ ಮಾತ್ರವಲ್ಲದೇ ವಿನಯ್​ ಎಂದರೆ ಹಲವರ ಕಣ್ಣಿನಲ್ಲಿ ಇವರೊಬ್ಬರು ಅಗ್ರೀಸಿವ್​(agressive) ಅಂದರೆ ಆಕ್ರಮಣಕಾರಿ ಎನ್ನಿಸಿದ್ದು ಉಂಟು. ಸೋಷಿಯಲ್​ ಮೀಡಿಯಾಗಳಲ್ಲಿಯೂ ಇವರು ಗೆಲ್ಲಬೇಕು ಎಂದು ಹಲವು ಅಭಿಮಾನಿಗಳು ಹೇಳುತ್ತಿದ್ದರೂ, ಇವರು ಸಿಟ್ಟಿನ ಮನುಷ್ಯ ಎಂದೇ ಹೇಳುತ್ತಿದ್ದವರು ಹಲವರು.

ಹಾಗಿದ್ದರೆ ಇವರು ಹೀಗೆ ಯಾಕೆ ಇದ್ದರು ಎನ್ನುವುದು ಹಲವರ ಪ್ರಶ್ನೆ. ಅದಕ್ಕೆ ಈಗ ಖುದ್ದು ವಿನಯ್​ ಅವರೇ ಉತ್ತರ ಕೊಟ್ಟಿದ್ದಾರೆ. ಕಲರ್ಸ್​ ಕನ್ನಡ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ವಿನಯ್​ ಈ ಬಗ್ಗೆ ಮಾತನಾಡಿದ್ದಾರೆ. ವಿನಯ್​ ಅಂದಾಕ್ಷಣ ತುಂಬಾ ಅಗ್ರಸಿವ್​ ಅಂತಾನೇ ಫೇಮಸ್​. ಯಾಕೆ ಹೀಗೆ ಎಂಬ ಪ್ರಶ್ನೆಗೆ ವಿನಯ್​ ಉತ್ತರಿಸಿದ್ದಾರೆ. ಬಿಗ್​ಬಾಸ್​ ಎನ್ನುವುದು ಆಟ. ನಾನು ಅಲ್ಲಿ ಆರ್ಟಿಫಿಷಿಯಲ್​ ಆಗಿ ಆಡಲು ಇಷ್ಟಪಡುವುದಿಲ್ಲ. ಆಟದ ವಿಷಯ ಬಂದಾಗ ಎಲ್ಲರೂ ಗೆಲ್ಲಲೇಬೇಕು ಎಂದೇ ಬಂದಿರುವವರು. ಆ ಸಮಯದಲ್ಲಿ ಆಟ ಎಂದು ಬಂದಾಗ ಈ ಸಿಟ್ಟು, ಕೋಪ ತಾಪ ಸಹಜ ಎಂದಿದ್ದಾರೆ. ಜೊತೆಗೆ ಇಲ್ಲಷ್ಟೇ ಅಲ್ಲ, ಮಗನ ಜೊತೆ ಆಟವಾಡುವಾಗಲೂ ಹೀಗೆಯೇ ಎಂದು ಉತ್ತರಿಸಿದ್ದಾರೆ.

ಪ್ರತಾಪ್​ ಹೀರೋ ಆದ್ರೆ ಫ್ರೀಯಾಗಿ ವಿಲನ್​ ಆಗುವೆ! ಡ್ರೋನ್​ ಆ್ಯಕ್ಟಿಂಗ್​ ಬಗ್ಗೆ ವಿನಯ್​ ಗೌಡ ಹೇಳಿದ್ದೇನು?

ಇದೇ ವೇಳೆ ಬಿಗ್​ಬಾಸ್​ ಎಂದರೆ ಅಲ್ಲಿ ಪ್ರೇಮದ ವಿಷಯಗಳೇ ಹೆಚ್ಚು ಚರ್ಚೆಯಾಗುತ್ತದೆ. ಹೀಗಿರುವಾಗ ನಮ್ರತಾ ಮತ್ತು ವಿನಯ್​ ಸಂಬಂಧ ಅಣ್ಣ-ತಂಗಿ ರೀತಿ ಇತ್ತು. ಅದ್ಹೇಕೆ ಬಾಂಡಿಂಗ್​ ಆಯಿತು ಎಂಬ ಬಗ್ಗೆ ಮಾತನಾಡಿದ ವಿನಯ್​. ನಮ್ಮಿಬ್ಬರ ವಿಚಾರಧಾರೆ, ಪ್ರಸೆಂಟೇಷನ್​, ಓಪಿನಿಯ್​ ಎಲ್ಲವೂ ಒಂದೇ ರೀತಿ ಇರುತ್ತಿದ್ದವು. ಅದು ನಾಮಿನೇಷನ್​ ವಿಷಯ ಬರಲಿ, ಯಾವುದೇ ಇರಲಿ ಇಬ್ಬರೂ ಈ ಬಗ್ಗೆ ಮಾತನಾಡಿಕೊಳ್ತಿರಲಿಲ್ಲ, ಇದರ ಹೊರತಾಗಿಯೂ ಒಂದೇ ರೀತಿ ಒಪೀನಿಯನ್​ ಇರುತ್ತಿದ್ದವು. ನನಗೆ ತಂಗಿ ಇದ್ದರೂ ಬಹುಶಃ ಹೀಗೆ ಇರುತ್ತಿದ್ದಳು ಎಂದಿದ್ದಾರೆ.

ಇದೇ ವೇಳೆ, ನಮ್ರತಾ ಬಗ್ಗೆ ಜನರು ಕಲಿಯಬೇಕಾದದ್ದು, ಕಲಿಯಬಾರದ್ದು ಏನು ಎಂಬ ಪ್ರಶ್ನೆಗೆ ಉತ್ತರಿಸಿದ ನಮ್ರತಾ, ನಾನು ತುಂಬಾ ಕೂಲ್​ ಆಗಿ ಇರುವವಳು. ಎಲ್ಲರ ಮಾತನ್ನು ಕೂಲ್​ ಆಗಿ ಕೇಳಿಸಿಕೊಂಡು ಪ್ರತಿಕ್ರಿಯೆ ಮಾಡುತ್ತೇನೆ. ನನ್ನಿಂದ ತಾಳ್ಮೆಯನ್ನು  ಎಲ್ಲರೂ ಕಲಿಯಬಹುದು ಎನ್ನಿಸುತ್ತದೆ. ಅದೇ ರೀತಿ ಜೋರಾಗಿ ಕಿರುಚುವ ನನ್ನ ಗುಣ ಯಾರೂ ಕಲಿಯುವುದು ಬೇಡ ಎಂದಿದ್ದಾರೆ. 

ಬಿಗ್​ಬಾಸ್​ನಲ್ಲಿ ಸಂಗೀತಾ-ಕಾರ್ತಿಕ್​ ದೂರವಾಗಿದ್ದೇಕೆ? ಹೊರಬಂದ್ಮೇಲೆ ಹೇಗಿದೆ ಸಂಬಂಧ? ವಿನ್ನರ್​ ಹೇಳಿದ್ದೇನು ಕೇಳಿ...

Follow Us:
Download App:
  • android
  • ios