ಬಿಗ್​ಬಾಸ್​ ಮನೆಯಲ್ಲಿ ಹರಾಜು ಪ್ರಕ್ರಿಯೆ ಬಲು ಜೋರಾಗಿ ನಡೆಯುತ್ತಿದೆ. ಇದೀಗ ಕಾರ್ತಿಕ್​ ಅವರನ್ನು ಖರೀದಿ ಮಾಡಲು ಯಾರೂ ಉತ್ಸುಕತೆ ತೋರದ ಪ್ರೊಮೋ ರಿಲೀಸ್​ ಆಗಿದೆ.  

ಐಪಿಎಲ್​ನ ಆಟಗಾರರ ಹರಾಜು ನಡೆಯುತ್ತಿದ್ದಂತೆಯೇ, ಇತ್ತ ಬಿಗ್​ಬಾಸ್​ ಮನೆಯಲ್ಲಿಯು ಸ್ಪರ್ಧಿಗಳ ಹರಾಜು ಕೂಡ ನಡೆದಿದೆ. ಇದಾಗಲೇ ಹಲವು ದಿನಗಳಿಂದ ವಿಭಿನ್ನ ರೀತಿಯ ಟಾಸ್ಕ್​ಗಳು ನಡೆಯುತ್ತಿದ್ದು, ಜಗಳಗಳ ಭರಾಟೆಯೂ ಜೋರಾಗಿ ಇದೆ. ಕಾದಾಟ, ಕಿತ್ತಾಟ, ಡ್ಯಾಮೇಜಿಂಗ್​ ಎಲ್ಲವೂ ಹೇರಳವಾಗಿ ಬಿಗ್​ಬಾಸ್​ ಮನೆಯಲ್ಲಿ ಇದಾಗಲೇ ನಡೆಯುತ್ತಿದೆ. ಇದೀಗ ಆಟಗಾರರ ಖರೀದಿ ಬಲು ಜೋರಾಗಿ ನಡೆಯುತ್ತಿದೆ. ಐಪಿಎಲ್​ ಹರಾಜು ಪ್ರಕ್ರಿಯೆಯಂತೆ, ಇವರಿಬ್ಬರೂ ಕೂಡ ಪ್ರತ್ಯೇಕವಾಗಿ ತಮ್ಮ ತಮ್ಮ ತಂಡಕ್ಕೆ ಆಟಗಾರರನ್ನು ಖರೀದಿಸಬೇಕು ಎಂದು ಬಿಗ್​ಬಾಸ್​ ಸೂಚಿಸಿದ್ದು, ಇದಕ್ಕಾಗಿ ಸಂಗೀತಾ ಮತ್ತು ತನಿಷಾ ಇಬ್ಬರಿಗೂ ಟಿಕೆಟ್​ ನೀಡಲಾಗಿತ್ತು. ಈ ಟಾಸ್ಕ್​ಗೆ ಸಂಗೀತಾ ಮತ್ತು ತನಿಷಾ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಬಿಗ್​ಬಾಸ್​ ಅಣತಿಯಂತೆ ಇವರಿಬ್ಬರೂ ಪ್ರತ್ಯೇಕವಾಗಿ ತಮ್ಮ ತಮ್ಮ ತಂಡಕ್ಕೆ ಆಟಗಾರರನ್ನು ಖರೀದಿಸುವುದು ಟಾಸ್ಕ್​ ಆಗಿದೆ.

ಇದೀಗ ಬಿಡ್ಡಿಂಗ್ ಭರ್ಜರಿಯಾಗಿ ನಡೆಯುತ್ತಿತ್ತು. ಒಂದು ದಿನದ ಟಾಸ್ಕ್ ಮುಗಿದ ನಂತರ ತನಿಷಾ ಮತ್ತು ಸಂಗೀತಾ ಅವರು ಬಿಗ್​ಬಾಸ್ ಅಣತಿಯಂತೆ ಮತ್ತೊಂದು ಬಿಡ್ಡಿಂಗ್ ಪ್ರಕ್ರಿಯೆ ಶುರು ಮಾಡಿದ್ದಾರೆ. ವಿನಯ್ ಮತ್ತು ನಮ್ರತಾ ಅವರನ್ನು ಹೊರತುಪಡಿಸಿ ಎಲ್ಲ ಆಟಗಾರರ ಪೈಕಿ ತಲಾ ಮೂವರು ಆಟಗಾರರನ್ನು ಖರೀದಿಸಬೇಕು ಎಂದು ಬಿಗ್‌ಬಾಸ್ ಹೇಳಿದ್ದಾರೆ. ಈ ಹಿಂದೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಂಗೀತಾ ಮೊದಲಿಗೆ ನಮ್ರತಾ ಅವರನ್ನು ಖರೀದಿ ಮಾಡಿದ್ದರೆ ತನಿಷಾ ವಿನಯ್​ ಅವರನ್ನು ಖರೀದಿಸಿದ್ದರು. ತನಿಷಾ ಮತ್ತು ಸಂಗೀತಾ ಇಬ್ಬರೂ ತಮ್ಮ ತಂಡಕ್ಕೆ ಬರುವಂತೆ ಕಾರ್ತಿಕ್​ನನ್ನು ಮನವೊಲಿಸಿದ್ದರು. ನಂತರ ಭಾರಿ ಚರ್ಚೆ ನಡೆದಿತ್ತು. ಕೊನೆಗೆ ಕಾರ್ತಿಕ್​ ಸಂಗೀತಾ ತಂಡಕ್ಕೆ ಹೋಗುವ ಮನಸ್ಸು ಮಾಡಿದ್ದರು. ಹೀಗೆ ಸಂಗೀತಾ ಅವರ ತಂಡಕ್ಕೆ ಕಾರ್ತಿಕ್​ ಹೋಗುವ ಮೊದಲು ಇಬ್ಬರ ಮಧ್ಯೆ ಸಾಕಷ್ಟು ಚರ್ಚೆಗಳು ನಡೆದಿದ್ದವು. 

ಬಿಗ್​ಬಾಸ್ ಗೆದ್ದು ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ರೈತನ ಮಗ ಜೈಲಿಗೆ! 9 ಕೇಸ್​ ದಾಖಲು: ಅಷ್ಟಕ್ಕೂ ಆಗಿದ್ದೇನು?

ಇದೀಗ ಎರಡನೆಯ ಹಂತದಲ್ಲಿ ಎಲ್ಲಾ ಉಲ್ಟಾ ಪಲ್ಟಾ ಆಗಿದೆ. ಕಾರ್ತಿಕ್‌ ಅವರನ್ನು ಕೊಂಡುಕೊಳ್ಳುವ ಸರದಿ ಬಂದಾಗ ತನಿಷಾ ಮತ್ತು ಸಂಗೀತಾ ಇಬ್ಬರೂ ಬಿಡ್ ಮಾಡಲೇ ಇಲ್ಲ! ಆರಂಭದಲ್ಲಿ ಕಾರ್ತಿಕ್​ಗಾಗಿ ಅಷ್ಟೆಲ್ಲಾ ಚರ್ಚೆ ನಡೆಸಿದವರು ಇದೀಗ ಹೀಗೆ ಏಕೆ ಮಾಡಿದರು ಎಂದು ಫ್ಯಾನ್ಸ್​ ಆತಂಕದಿಂದ ಪ್ರಶ್ನಿಸುವಂತಾಗಿದೆ. ಈ ಸಂದರ್ಭದಲ್ಲಿ ತನಿಷಾ, ‘ನನ್ನ ಕಳಪೆ ಖರೀದಿ ಕಾರ್ತಿಕ್‌ ಅವರು’ ಎನ್ನುವ ಮೂಲಕ ಮಾತಿನ ಚಾಟಿ ಬೀಸಿದ್ದಾರೆ. ಈ ಮಾತನ್ನು ಕೇಳುತ್ತಿದ್ದಂತೆಯೇ ತುಕಾಲಿ ಸಂತೋಷ್‌, ಅವನಿಗೋಸ್ಕರ ಗುದ್ದಾಡಿದ ಅದೇ ಫ್ರೆಂಡ್ಸು ಅವನನ್ನೇ ಹತ್ ರೂಪಾಯಿಗೂ ಕೇಳಿಲ್ವಲ್ಲ ಎಂದಿದ್ದಾರೆ. ಆತನ ಕೈಲಿ ಓಡಲು ಆಗ್ತಿಲ್ಲ ಎಂದ ತಕ್ಷಣ ಬಿಟ್​ಬಿಟ್ರಲ್ಲಾ ಎಂದರು. ಇದಕ್ಕೆ ಕಾರಣ ಮೊದಲ ಸಲ ಕಾರ್ತಿಕ್​ಗೆ ಡಿಮ್ಯಾಂಡ್​ ಜಾಸ್ತಿ ಇದ್ದು, ಇಬ್ಬರೂ ಅವರನ್ನೇ ಕೇಳುತ್ತಿದ್ದರು. ಆದರೆ ಇದೀಗ ಅವರೇ ಬೇಡ ಎನ್ನುವಂತಾಗಿದೆ!


ಹೀಗೆ ಆಗಲು ಒಂದು ಕಾರಣವೂ ಇದೆ. ಅದೇನೆಂದರೆ, ಈ ಮೊದಲದು ಕಾರ್ತಿಕ್​ ಹಣಕ್ಕಾಗಿ ಪಕ್ಷ ಬದಲಿಸಿದ್ದರು ಎನ್ನುವ ಸಿಟ್ಟು. ಕಾರ್ತಿಕ್​ ಮೊದಲು ಸಂಗೀತಾರಿಂದ ಹಣ ತೆಗೆದುಕೊಂಡು ನಂತರ ತನಿಷಾ ಹೆಚ್ಚು ಹಣ ಕೊಡುತ್ತಾರೆಂದು ಅವರ ತಂಡ ಸೇರ್ಪಡೆಗೊಂಡಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಈಗ ಇದೇ ಕಾರಣಕ್ಕೆ ಯಾರೂ ಅವರಿಗೆ ಬೇಡವಾಗಿದೆ. ಹಾಗಾದರೆ ಸಂಗೀತಾ ಮತ್ತು ತನಿಷಾ ಖರೀದಿ ಮಾಡಿದ್ದು ಯಾರನ್ನು? ಮುಂದೆ ಏನಾದ್ರೂ ಟ್ವಿಸ್ಟ್​ ಇದೆಯಾ ಎನ್ನುವುದನ್ನು ಪ್ರೊಮೋ ಬಿಟ್ಟುಕೊಟ್ಟಿಲ್ಲ. ಅದನ್ನು ಟಿವಿಯಲ್ಲಿಯೇ ನೋಡಬೇಕಿದೆ ಬಿಗ್​ಬಾಸ್ ಪ್ರೇಮಿಗಳು! 

ಐಶ್​- ಅಭಿ ಮದ್ವೆ ದಿನ ನಡೆದಿತ್ತು ಹೈಡ್ರಾಮಾ: ಮಣಿಕಟ್ಟು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಜಾಹ್ನವಿ ಕಪೂರ್​!

View post on Instagram