ಸೀತಾ-ರಾಮ ವಿವಾಹದ ಟೈಮ್ನಲ್ಲೇ ಎಂಟ್ರಿ ಕೊಟ್ಟಳು ಇನ್ನೋರ್ವ ಮಾಜಿ ಪ್ರೇಯಸಿ! ಮುರಿದು ಬೀಳುತ್ತಾ ಮದ್ವೆ?
ಸೀತಾ-ರಾಮ ಮದ್ವೆ ಟೈಮ್ನಲ್ಲೇ ಎಂಟ್ರಿ ಕೊಟ್ಟಿದ್ದಾಳೆ ಇನ್ನೋರ್ವ ಮಾಜಿ ಪ್ರೇಯಸಿ! ಮದುವೆಗೆ ವಿಘ್ನ ಆಯ್ತಾ? ಸೀರಿಯಲ್ನಲ್ಲಿ ಇದೇನಿದು ಟ್ವಿಸ್ಟ್?
![Another ex lover of Ram has entered during Seeta Ramas marriage time suc Another ex lover of Ram has entered during Seeta Ramas marriage time suc](https://static-ai.asianetnews.com/images/01j1hv4g4p0xhxc6ytm5svat12/seeta-rama-dhanyashree_363x203xt.jpg)
ಸೀತಾರಾಮರ ಮದುವೆ ನಡೆಯುತ್ತಿದೆ. ಇದಾಗಲೇ ಎಲ್ಲಾ ಶಾಸ್ತ್ರಗಳೂ ಮುಗಿದು ಹಸೆಮಣೆಯ ಮೇಲೆ ಕುಳಿತಿದ್ದಾರೆ ವಧು-ವರರು. ಹಲವು ಅಡೆತಡೆಗಳನ್ನು ಮೀರಿ ಮದುವೆ ಮಂಟಪದವರೆಗೂ ಸೀತಾ-ರಾಮ ಜೋಡಿ ಬಂದು ನಿಂತಿದೆ. ಮದುವೆ ಕಾರ್ಯಗಳೂ ಆರಂಭವಾಗಿದೆ. ಅದ್ಧೂರಿ ನಿಶ್ಚಿತಾರ್ಥದ ಬಳಿಕ, ಈಗ ಮದುವೆಯ ಶಾಸ್ತ್ರಗಳು ಶುರುವಾಗಿವೆ. ಸೀರಿಯಲ್ ಮದ್ವೆ ಎಂದರೆ ಅದರಲ್ಲಿಯೂ ಆಗರ್ಭ ಶ್ರೀಮಂತರ ಮದುವೆ ಎಂದರೆ ರಿಯಲ್ ಲೈಫ್ ಮದುವೆಯ ಹಾಗೆಯೇ ಭರ್ಜರಿಯಾಗಿ ನಡೆಯುತ್ತದೆ. ಅದರಂತೆಯೇ ಸೀತಾ ರಾಮರ ಮದುವೆ ಕಾರ್ಯವನ್ನು ಇದಾಗಲೇ ಹಲವು ಎಪಿಸೋಡ್ಗಳಲ್ಲಿ ವೀಕ್ಷಕರು ನೋಡಿದ್ದು, ಈಗ ರಾಮ ಸೀತಾಳ ಕುತ್ತಿಗೆಗೆ ಮಂಗಳಸೂತ್ರ ಕಟ್ಟುವುದೊಂದೇ ಬಾಕಿಯಾಗಿದೆ. ಅದಾಗಲೇ ಮಾಜಿ ಪ್ರೇಯಸಿಯೊಬ್ಬಳ ಎಂಟ್ರಿಯಾಗಿದೆ. ರಾಮ್ ಕೊಟ್ಟಿರೋ ಗಿಫ್ಟ್ ಅನ್ನು ಅವನಿಗೆ ವಾಪಸ್ ಕೊಟ್ಟು ಒಂದೇ ಸಲ ಅಪ್ಪಿಕೋ ಎಂದು ಹೇಳುತ್ತಿದ್ದಾಳೆ. ರಾಮ್ ಅದಕ್ಕೆ ಒಪ್ಪಿ ತಬ್ಬಿಕೊಂಡಿದ್ದಾನೆ, ಮುಂದೇನು?
ಅಷ್ಟಕ್ಕೂ ರಾಮ್ ಬಾಳಲ್ಲಿ ಚಾಂದನಿ ಎನ್ನುವ ಪ್ರೇಯಸಿ ಇದ್ದಳು. ಅವಳಿಗಾಗಿ ಜೀವವನ್ನೇ ಕೊಡುತ್ತಿದ್ದ ರಾಮ್. ಆದರೆ ಅವಳು ಮೋಸ ಮಾಡಿ ರಾಮ್ನಿಗೆ ಶಾಕ್ ಕೊಟ್ಟಿದ್ದಳು. ಸೀತಾ ಮತ್ತು ರಾಮ್ ಪ್ರೀತಿಸುತ್ತಿರುವ ವಿಷಯ ಗೊತ್ತಾಗಿ ಚಿಕ್ಕಿ ಭಾರ್ಗವಿ ನೆರವಿನಿಂದ ಅವರಿಬ್ಬರನ್ನೂ ಬೇರೆ ಮಾಡಿ ತಾನು ಮತ್ತೆ ಎಂಟ್ರಿ ಪಡೆಯಲು ಸಾಕಷ್ಟು ಸರ್ಕಸ್ ಮಾಡಿದ್ದಳು. ಕೊನೆಗೆ ಸೋತು ವಾಪಸಾಗಿದ್ದಳು. ಆದರೆ ಇದೀಗ ಚಾಂದನಿ ಬದಲು ಧನ್ಯಶ್ರೀ ಎಂಟ್ರಿಯಾಗಿದೆ. ಏನಿದು ಟ್ವಿಸ್ಟ್? ರಾಮ್ಗೆ ಮತ್ತೋರ್ವ ಪ್ರೇಯಸಿ ಇದ್ದಳಾ? ಅವಳನ್ನು ನೋಡಿದಾಗ ರಾಮ್ ಕರಗಿದ್ದೇಕೆ? ಇದಕ್ಕೆ ಇಲ್ಲಿದೆ ಉತ್ತರ.
ನಿಮಗಿಷ್ಟದ 'ಸಿಹಿ' ತಿಂಡಿಯ ಮೂಲಕ ಜೋಡಿಯ ವರ್ಣಿಸಿ: ಸೀತಾರಾಮ ತಂಡದಿಂದ ಹೀಗೊಂದು ಆಫರ್
ಅಷ್ಟಕ್ಕೂ ಇದು ಸೀತಾರಾಮ ಸೀರಿಯಲ್ ಕಥೆಯಲ್ಲ. ಬದಲಿಗೆ ಜೀ ಕನ್ನಡದಲ್ಲಿ ನಡೆಯುತ್ತಿರುವ ಮಹಾನಟಿ ರಿಯಾಲಿಟಿ ಷೋ. ಇದರಲ್ಲಿ ವಿವಿಧ ಸೀರಿಯಲ್ ಕಥಾನಾಯಕರ ಜೊತೆ, ಸ್ಪರ್ಧಿಗಳು ಆ್ಯಕ್ಟಿಂಗ್ ಮಾಡಬೇಕಿದೆ. ಅದಕ್ಕಾಗಿ ಬೇರೆ ಬೇರೆ ರೀತಿಯ ಕಥೆಗಳನ್ನು ಹೆಣೆಯಲಾಗುತ್ತಿದೆ. ನಾಯಕರು ಯಾವ ಸೀರಿಯಲ್ನಲ್ಲಿ ಆ್ಯಕ್ಟ್ ಮಾಡುತ್ತಿದ್ದಾರೋ ಅದೇ ಸೀರಿಯಲ್ನ ಹೆಸರು ಇಟ್ಟುಕೊಂಡು ತಾವು ಅದರ ನಾಯಕಿ ಎಂದು ಕಲ್ಪಿಸಿಕೊಂಡು ಈ ಮಹಾನಟಿ ಸ್ಪರ್ಧಿಗಳು ಆ್ಯಕ್ಟ್ ಮಾಡಬೇಕಿದೆ. ಇಲ್ಲೂ ಅಷ್ಟೇ. ಧನ್ಯಶ್ರೀ ಅವರು ರಾಮ್ ಬಳಿ ಬಂದು ಹಿಂದಿನ ಪ್ರೀತಿಯನ್ನು ನಿವೇದಿಸಿಕೊಂಡಿದ್ದಾರೆ. ಇದಕ್ಕಾಗಿ ಇಡೀ ಸೀತಾರಾಮ ತಂಡದ ವಿವಿಧ ಕಲಾವಿದರನ್ನೂ ವೇದಿಕೆ ಮೇಲೆ ನೋಡಬಹುದು. ಆರಂಭದಲ್ಲಿ ಸಿಹಿಯನ್ನು ಭೇಟಿ ಮಾಡುವ ಧನ್ಯಶ್ರೀ ಅವರು ಕೊನೆಗೆ ರಾಮ್ ಬಳಿ ಬಂದು ಅಪ್ಪಿಕೊಳ್ಳುವಂತೆ ಹೇಳಿರುವ ಸನ್ನಿವೇಶ ಸೃಷ್ಟಿ ಮಾಡಲಾಗಿದೆ.
ಅಷ್ಟಕ್ಕೂ ರಾಮ ಸೀತಾಳ ಕುತ್ತಿಗೆಗೆ ಮಂಗಳಸೂತ್ರ ಕಟ್ಟಿ ಸಿಂಧೂರ ಹಚ್ಚುವವರೆಗೂ ಸೀರಿಯಲ್ ಫ್ಯಾನ್ಸ್ಗೆ ಆತಂಕ ಇದ್ದೇ ಇದೆ. ಇದಕ್ಕೆ ಕಾರಣ, ಮದುವೆಗೆಂದು ಆಭರಣದ ಅಂಗಡಿಗೆ ಹೋದಾಗ ಯುವತಿಯೊಬ್ಬಳನ್ನು ಸೀತಾ ಗಾಬರಿಯಾಗಿದ್ದಳು. ಇವಳು ಯಾರು ಎನ್ನುವುದು ಈಗಿರುವ ಪ್ರಶ್ನೆ. ಅನಂತ ಲಕ್ಷ್ಮಿಯವರ ಕುರಿತು ರಾಮ್ ಹತ್ರ ಹೇಳಬೇಕಾ ಎಂದು ಯುವತಿಯೊಬ್ಬಳು ತನ್ನಷ್ಟಕ್ಕೇ ತಾನು ಮಾತನಾಡಿಕೊಂಡಿದ್ದಾಳೆ. ಅವಳನ್ನು ನೋಡಿದ ಸೀತಾಳಿಗೆ ಶಾಕ್ ಆಗಿತ್ತು. ಇವೆಲ್ಲಾ ಪ್ರಶ್ನೆಗಳು ಸದ್ಯ ಸೀರಿಯಲ್ನಲ್ಲಿ ಬಾಕಿ ಇವೆ. ಈ ಮಧ್ಯೆ, ಗೋಡೆ ಬರಹ ನೋಡಿ ಫ್ಯಾನ್ಸ್ ಸೀತಾರಾಮ ಕಲ್ಯಾಣ ಆಗುವುದು ಡೌಟ್ ಎನ್ನುತ್ತಿದ್ದಾರೆ. ಅಷ್ಟಕ್ಕೂ ಸೀತಾ ತನ್ನ ಇತಿಹಾಸ ಹೇಗಾದರೂ ಮಾಡಿ ಹೇಳಬೇಕಿತ್ತು, ಇಲ್ಲದಿದ್ದರೆ ಮದ್ವೆಯಾದ್ಮೇಲೆ ಸುಮ್ಮನೇ ತೊಂದರೆ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ ಕೂಡ.
ಕೆಲಸ ಸಿಕ್ಕ ಖುಷಿಯಲ್ಲಿ ಅಮ್ಮನ ಜೊತೆ ಭಾಗ್ಯ ಮಕ್ಕಳ ಭರ್ಜರಿ ಡಾನ್ಸ್: ಮಧ್ಯೆ ಭಯ ಹುಟ್ಟಿಸಿದ ಅಜ್ಜಿ!