Asianet Suvarna News Asianet Suvarna News

ಮಹಾನಟಿ ಆಡಿಷನ್​ ಹೇಗಿತ್ತು? ನಟ ರಮೇಶ್​ರ​ ನಟನೆಯ ಪಾಠ, ಭುವನ್ ಗೌಡ ಕ್ಯಾಮೆರಾ ನೋಟ ಹೀಗಿತ್ತು...

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಮಹಾನಟಿ ಆಡಿಷನ್​ ಹೇಗಿತ್ತು? ನಟ ರಮೇಶ್​ರ​  ನಟನೆಯ  ಪಾಠ, ಭುವನ್ ಗೌಡ ಕ್ಯಾಮೆರಾ ನೋಟ ಹೀಗಿತ್ತು...
 

Actor Ramesh Aravinds acting lesson Bhuvan Gowdas camera in Mahanati audition suc
Author
First Published Apr 4, 2024, 3:39 PM IST

ನಟಿಯರಾಗಬೇಕು ಎಂದು ಕನಸು ಕಂಡುಕೊಳ್ಳುವ ಬಹುದೊಡ್ಡ ವರ್ಗವೇ ಇದೆ. ನಟನೆಯಲ್ಲಿ ಆಸಕ್ತಿ ಇರುವವರು ಒಂದು ವರ್ಗವಾದರೆ, ನಟನೆಯಲ್ಲಿ ಎಲ್ಲರನ್ನೂ ಮೀರಿಸುವವರೂ ಹಲವಾರು ಮಂದಿ ಇದ್ದಾರೆ. ಇವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆ ಇದ್ದರೂ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂದು ಗೊತ್ತಿರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಹೇಗೆ ಗುರುತಿಸಿಕೊಳ್ಳಬೇಕು, ಸುಲಭದ ಮಾರ್ಗ ಯಾವುದು ಎನ್ನುವುದು ತಿಳಿದಿರುವುದಿಲ್ಲ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಂಬಲ ಇರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಅವಕಾಶವನ್ನು ನೀಡಿತ್ತು. ಸ್ಯಾಂಡಲ್​ವುಡ್​ನಲ್ಲಿ ನಟಿಸುವ ಅವಕಾಶ ಇದಾಗಿದ್ದು, ಹಲವು ಕಡೆಗಳಲ್ಲಿ ಆಡಿಷನ್​ ನಡೆದಿತ್ತು.  ಈ ಆಡಿಷನ್​ನಲ್ಲಿ ಭಾಗವಹಿಸಿ ಹಲವಾರು ಯುವತಿಯರು  ಅದೃಷ್ಟ ಕಂಡುಕೊಳ್ಳುತ್ತಿದ್ದಾರೆ.  

ಇದರ ಕುರಿತು ಇದಾಗಲೇ ಸಾಕಷ್ಟು ಪ್ರೊಮೋಗಳನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದೆ. ಈ ಆಡಿಷನ್​ನಲ್ಲಿ ಭಾಗವಹಿಸಿ ಹಲವಾರು ಮಂದಿ ಅದೃಷ್ಟ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ.  ಇದರಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ವಿಜೇತರಾಗಿ  ಬಣ್ಣದ ಲೋಕಕ್ಕೆ ಎಂಟ್ರಿಯಾಗುವ ಅದೃಷ್ಟವಂತರು ಯಾರು ಎನ್ನುವುದು ಇನ್ನಷ್ಟೇ ಇರುವ ಕೌತುಕ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.  ಕರ್ನಾಟಕದ 16 ಜಿಲ್ಲೆಗಳಲ್ಲಿ  ಆಡಿಷನ್​ ನಡೆದಿದ್ದು, ಇಲ್ಲಿ ಸೆಲೆಕ್ಟ್​ ಆದವರಿಗೆ ರಿಯಾಲಿಟಿ ಷೋನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಅಲ್ಲಿ ಕೆಲವೊಂದು ಸ್ಪರ್ಧೆಗಳನ್ನು ಎದುರಿಸಿ, ಜಯಶೀಲರಾದರೆ  ಸ್ಯಾಂಡಲ್​ವುಡ್​ ತಾರೆಯಾಗಲಿದ್ದೀರಿ ಎಂದು ಈ ಹಿಂದೆ ವಾಹಿನಿ ಹೇಳಿತ್ತು.  18ರಿಂದ 28 ವರ್ಷದ ಸಹಸ್ರಾರು ಯುವತಿಯರು ಇದರಲ್ಲಿ ಭಾಗವಹಿಸಿದ್ದರು.

ಮದವೇರಿಸೋ ಮದನಾರಿಯ ನೋಡಿ ಮಿಡಿದವರೆಷ್ಟು... ಎಂದೋರು ಇವ್ರೇ ನೋಡಿ: ಮಹಾನಟಿಯಲ್ಲಿ ಡಬ್ಬಿಂಗ್​ ಆರ್ಟಿಸ್ಟ್​

ಇದೀಗ ಇದರ ಆಡಿಷನ್​ ಹೇಗೆ ನಡೆದಿತ್ತು? ಮಹಾನಟಿ ರಿಯಾಲಿಟಿ ಷೋನ ತೀರ್ಪುಗಾರರಾಗಿರುವ ನಟ ರಮೇಶ್​ ಅರವಿಂದ್​ ಅವರು, ನಟನಾಸಕ್ತರಿಗೆ ನಟನೆಯ ಕುರಿತು ಹೇಗೆಲ್ಲಾ ತಿಳಿವಳಿಕೆ ನೀಡಿದ್ದಾರೆ, ಏನೆಲ್ಲಾ ಪಾಠ ಮಾಡಿದ್ದಾರೆ ಎನ್ನುವ ಬಗ್ಗೆ ಪ್ರೊಮೋ ರಿಲೀಸ್​ ಮಾಡಿದೆ. ಇದೇ ವೇಳೆ ನಟಿಯರ ವಿಭಿನ್ನ ಆ್ಯಂಗಲ್​, ಅವರ ನಟನಾ ಕೌಶಲದ ಕುರಿತು ಪರೀಕ್ಷೆಯನ್ನೂ ಮಾಡಲಾಗಿದೆ. ಕ್ಯಾಮೆರಾಮೆನ್​ ಭುವನ್ ಗೌಡ ಅವರ ಕೈಚಳಕ ಹೇಗಿದೆ ಎನ್ನುವುದನ್ನು ಈ ಪ್ರೊಮೋದಲ್ಲಿ ತೋರಿಸಲಾಗಿದೆ.

'ಮಹಾನಟಿ' ರಿಯಾಲಿಟಿ ಶೋಗೆ ಈ ಬಾರಿ ಮೂರು ಹೊಸ ತೀರ್ಪುಗಾರರು ವೇದಿಕೆಯನ್ನ ಅಲಂಕರಿಸಲ್ಲಿದ್ದಾರೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ, ನಟ ರಮೇಶ್‌ ಅರವಿಂದ್‌, ಖ್ಯಾತ ನಾಯಕ ನಟಿ ಪ್ರೇಮಾ, 'ಕಾಟೇರ'ದಂತಹ ಯಶಸ್ವಿ ಚಿತ್ರಕೊಟ್ಟ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಯುವ ನಾಯಕ ನಟಿ ನಿಶ್ವಿಕಾ ನಾಯ್ಡು ಈ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ನಾಲ್ವರು ತೀರ್ಪುಗಾರರ ಪೈಕಿ ಒಬ್ಬರು ಹೊಸದಾಗಿ ಬರುವ ನಟಿಯರಿಗೆ ಅಭಿನಯದ ಮಜಲುಗಳನ್ನ ಕಲಿಸುವ ಮೆಂಟರ್‌ ಆಗಿ ಕಾರ್ಯನಿರ್ವಹಿಸಲ್ಲಿದ್ದಾರೆ ಎನ್ನಲಾಇದ್ದು, ಅದು ರಮೇಶ್​ ಅರವಿಂದ್​ ಎಂದು ತಿಳಿದುಬಂದಿದೆ. ಮಾರ್ಚ್‌ 30ನೇ ತಾರೀಖಿನಿಂದ ಈ ರಿಯಾಲಿಟಿ ಷೋ ಆರಂಭವಾಗಿದೆ. 
ಯಶ್​, ರಣಬೀರ್​-ಸಾಯಿ ಪಲ್ಲವಿ ನಟನೆಯ ರಾಮಾಯಣ ಶೂಟಿಂಗ್​ ಸೆಟ್​ ಹೀಗಿದೆ ನೋಡಿ: ವಿಡಿಯೋ ವೈರಲ್​

Follow Us:
Download App:
  • android
  • ios