Asianet Suvarna News Asianet Suvarna News

ಮರೆಯಾಯ್ತು ಚಂದ್ರಯಾನ: ಇಸ್ರೋ ಮುಂದಿನ ಯೋಜನೆ ಗಗನಯಾನ!

ವಿಕ್ರಮ್ ಲ್ಯಾಂಡರ್ ಮರು ಸಂಪರ್ಕ ಸಾಧ್ಯತೆ ಕ್ಷೀಣ| ಮರು ಸಂಪರ್ಕಕ್ಕೆ ನಿಗದಿಯಾಗಿದ್ದ ಕಾಲಮೀತಿ ಮೀರಿದ ಪರಿಣಾಮ| ಗಗನಯಾನ್ ಯೋಜನೆಯತ್ತ ಚಿತ್ತ ಹರಿಸಲಿರುವ ಇಸ್ರೋ ವಿಜ್ಞಾನಿಗಳು| ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯ ಯೋಜನೆ ಗಗನಯಾನ್| 

K Sivan Says ISRO Next Priority Is Gaganyaan
Author
Bengaluru, First Published Sep 21, 2019, 4:37 PM IST

ನವದೆಹಲಿ(ಸೆ.21): ವಿಕ್ರಮ್ ಲ್ಯಾಂಡರ್ ಮತ್ತೆ ಸಂಪರ್ಕಕ್ಕೆ  ಸಿಗುವ ಸಾಧ್ಯತೆ ಕ್ಷೀಣಿಸಿರುವುದರಿಂದ ಚಂದ್ರಯಾನ-2 ಯೋಜನೆಯ ನಿರೀಕ್ಷಿತ ಗುರಿ ಸಾಧನೆ ಸಾಧ್ಯವಾಗಿಲ್ಲ.

ವಿಕ್ರಮ್ ಲ್ಯಾಂಡರ್ ಮರು ಸಂಪರ್ಕಕ್ಕೆ ನಿಗದಿಯಾಗಿದ್ದ ಕಾಲಮೀತಿ ಮೀರಿದ್ದು, ಲ್ಯಾಂಡರ್ ಜೊತೆ ಸಂಪರ್ಕದ ಸಾಧ್ಯತೆ ಕ್ಷೀಣವಾಗಿದೆ. ಈ ಕುರಿತು ಖುದ್ದು ಇಸ್ರೋ ಅಧ್ಯಕ್ಷ ಕೆ. ಶಿವನ್ ಮಾಹಿತಿ ನೀಡಿದ್ದಾರೆ.

#Chandrayaan2 Orbiter continues to perform scheduled science experiments to complete satisfaction. More details on https://t.co/Tr9Gx4RUHQ
Meanwhile, the National committee of academicians and ISRO experts is analysing the cause of communication loss with #VikramLander

— ISRO (@isro) September 19, 2019

ಇನ್ನು ಇಸ್ರೋದ ಭವಿಷ್ಯದ ಯೋಜನೆಯಾದ ಗಗನಯಾನ್’ನತ್ತ ವಿಜ್ಞಾನಿಗಳು ಚಿತ್ತ ಹರಿಸಲಿದ್ದಾರೆ ಎಂದು ಶಿವನ್ ಸ್ಪಷ್ಟಪಡಿಸಿದ್ದಾರೆ. 

ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯ ಯೋಜನೆಯಾಗಿರುವ ಗಗನಯಾನ್ ಕುರಿತು ಇಸ್ರೋ ಚಿತ್ತ ಹರಿಸಲಿದ್ದು, ಯೋಜನೆಯ ಯಶಸ್ವಿಗಾಗಿ ಸಂಸ್ಥೆ ಹಗಲಿರುಳು ದುಡಿಯಲಿದೆ ಎಂದು ಶಿವನ್ ಭರವಸೆ ನೀಡಿದ್ದಾರೆ.

Follow Us:
Download App:
  • android
  • ios