Asianet Suvarna News Asianet Suvarna News

ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ಸುತ್ತೂರು ಶ್ರೀಗಳಿಂದ ಚಾಲನೆ.!: ಸಿಎಂ ಸಿದ್ದರಾಮಯ್ಯ ಮಾಹಿತಿ

ವಿಶ್ವವಿಖ್ಯಾತ ದಸರಾ ಉತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಸ್ಥಬ್ದ ಚಿತ್ರಗಳ ಮೆರವಣಿಗೆಯೂ ನಡೆಯಲಿದ್ದು, ಉದ್ಘಾಟಕರನ್ನಾಗಿ ಸುತ್ತೂರು ಶ್ರೀಗಳನ್ನು ಆಯ್ಕೆ ಮಾಡಲಾಗುತ್ತದೆ.

Sutturu mutt Swamiji selected as Inaugural of Mysuru dasara 2023 CM Siddaramaiah information sat
Author
First Published Jul 31, 2023, 6:22 PM IST

ಬೆಂಗಳೂರು (ಜು.31): ರಾಜ್ಯದ ವಿಶ್ವವಿಖ್ಯಾತ ದಸರಾ ಉತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಜಂಬೂ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸ್ಥಬ್ದ ಚಿತ್ರಗಳ ಮೆರವಣಿಗೆಯೂ ನಡೆಯಲಿದೆ. ಈ ಬಾರಿ ಸುತ್ತೂರು ಸ್ವಾಮಿಗಳ ಹೆಸರು ಸದ್ಯಕ್ಕೆ ಪ್ರಸ್ತಾಪ ಆಗಿದೆ. ಇನ್ನೂ ಚರ್ಚೆ ಹಂತದಲ್ಲಿ ಇದೆ ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಸಲ ಗ್ಯಾರಂಟಿ ಗಳ ಕುರಿತಾದ ಸ್ಥಬ್ದ ಚಿತ್ರಗಳು ಇರಲಿವೆ. ಈ ಸಲ ದಸರಾ ಮಹೋತ್ಸವ ಅದ್ದೂರಿಯಾಗಿ ಆಚರಣೆ ಮಾಡಬೇಕು ಅಂತ ಅಭಿಪ್ರಾಯ ವ್ಯಕ್ತವಾಗಿದೆ. ದಸರಾ ಒಂದು ಪಾರಂಪರಿಕ ಉತ್ಸವ ಆಗಿದೆ. ದಸರಾ ಮಹೋತ್ಸವ ಜನರ ಉತ್ಸವ ಆಗಬೇಕು. ದೀಪಾಲಂಕಾರ, ಮೆರವಣಿಗೆ, ಜಂಬೂಸವಾರಿ, ಸ್ಥಬ್ಧ ಚಿತ್ರಗಳ ಮೆರವಣಿಗೆ ಜನರನ್ನು ಬಹಳ ಆಕರ್ಷಿಸುವ ವಿಚಾರಗಳು ನಡೆಯುತ್ತವೆ. ರಾಜ್ಯದ ಪರಂಪರೆ , ಜಿಲ್ಲೆಗಳ ವಿಶೇಷತೆಗಳು, ಹಾಗೂ ನಮ್ಮ 5 ಗ್ಯಾರಂಟಿ ಗಳ ಕುರಿತಾದ ಸ್ಥಬ್ದ ಚಿತ್ರಗಳು ಇರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

ನಾಳೆಯಿಂದ ಬೆಂಗಳೂರು- ಮೈಸೂರು ದಶಪಥದಲ್ಲಿ ಬೈಕ್‌, ಆಟೋ ನಿಷೇಧ: ನಿಯಮ ಉಲ್ಲಂಘಿಸಿದರೆ 500 ರೂ. ದಂಡ

ಅಕ್ಟೋಬರ್‌ 15ರಂದು ದಸರಾ ಉದ್ಘಾಟನೆ ಆಗಲಿದೆ. ಬೆಳಗ್ಗೆ 10.15ರಿಂದ 10.30ರ ಅವಧಿಯಲ್ಲಿ ದಸರಾವನ್ನು ಉದ್ಘಾಟನೆ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ ಅವರ ಜೊತೆ ಕನ್ನಡ ಸಂಸ್ಕೃತ ಸಚಿವರೂ ಹಾಗೂ ಪ್ರವಾಸೋದ್ಯಮ ಸಚಿವರೂ ಜೊತೆಗೆ ಇರ್ತಾರೆ. ಈ ಬಾರಿಯ ದಸರಾ ಉತ್ಸವಕ್ಕೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುವುದು ಎಂದರು.

ದಸರಾ ಉದ್ಘಾಟನೆ ಯಾರು ಮಾಡಬೇಕು ಎಂಬ ಆಯ್ಕೆ ನನಗೆ ಜವಾಬ್ದಾರಿ ನೀಡಲಾಗಿದೆ. ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ. ಈ ಬಾರಿ ಸುತ್ತೂರು ಸ್ವಾಮಿಗಳ ಹೆಸರು ಸದ್ಯಕ್ಕೆ ಪ್ರಸ್ತಾಪ ಆಗಿದೆ. ಇನ್ನೂ ಚರ್ಚೆ ಹಂತದಲ್ಲಿ ಇದೆ ನೋಡೋಣ. ದಸರಾ ಅದ್ದೂರಿಯಾಗೂ ಇರಬೇಕು. ಅನವಶ್ಯಕ ಖರ್ಚು ಇರಬಾರದು. ಪ್ರವಾಸಿಗರನ್ನು ಹೆಚ್ಚು ಆಕರ್ಷಣೆ ಮಾಡುವ ರೀತಿಯಲ್ಲಿ ಕೂಡಾ ಇರಬೇಕು. ಇದೇ ರೀತಿ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸುತ್ತೂರು ಶ್ರೀಗಳ ಆಯ್ಕೆಯೇ ಅಂತಿಮವೆಂಬ ಸುಳಿವು:  ಇನ್ನು ಈ ಬಾರಿಯ ದಸರಾ ಉತ್ಸವಕ್ಕೆ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಸುಳಿವು ನೀಡಿರುವ ಮುಖ್ಯುಮಂತ್ರಿ ಸಿದ್ದರಾಮಯ್ಯ ಅವರು ಸುತ್ತೂರು ಮಠದ  ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರನ್ನೇ ಉದ್ಘಾಟಕರಾಗಿ ಆಯ್ಕೆ ಮಾಡಲಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಆದರೆ, ದಸರಾ ಮಹೋತ್ಸವಕ್ಕೆ ಇನ್ನೂ ಎರಡೂವರೆ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಕೊನೇ ಕ್ಷಣದ ಬದಲಾವಣೆಯನ್ನೂ ಕೂಡ ನಿರೀಕ್ಷೆ ಮಾಡಬಹುದಾಗಿದೆ.

ತಿರುಪತಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ: ಕಾರಣ ಬಿಚ್ಚಿಟ್ಟ ಕೆಎಂಎಫ್‌

ದಸರಾ ಕುರಿತ ಚರ್ಚೆಯಲ್ಲಿ ಹಲವರ ಭಾಗಿ:  ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಕುರಿತು  ಉನ್ನತ ಮಟ್ಟದ ಮಹತ್ವದ ಸಭೆಯನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ  ನಡೆಸಲಾಯಿತು. ಈ ವೇಳೆ ಮೈಸೂರು ದಸರಾ ಯಾರು ಉದ್ಘಾಟನೆ ಮಾಡುವ ಅತಿಥಿ,ಹಾಗೂ ಆಚರಣೆ ಕುರಿತು ಚರ್ಚೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ ಮೈಸೂರು ದಸರಾ ಮಹೋತ್ಸವದ  ಸಮಿತಿ ಸದಸ್ಯರು ಭಾಗಿಯಾಗಿದ್ದರು. ಈ ವೇಳೆ ಮೈಸೂರು ದಸರಾ ಮಹೋತ್ಸವದ ಕಾರ್ಯಕ್ರಮಗಳ ರೂಪರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದರು.

Follow Us:
Download App:
  • android
  • ios