Asianet Suvarna News Asianet Suvarna News

ವರ್ಷಾಂತ್ಯಕ್ಕೆ ಕೇರಳಕ್ಕೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ

ಕ್ರಿಸ್‌ಮಸ್‌ ಹಾಗೂ ಶಬರಿಮಲೆ ಪೂಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಡಿ.28ರಂದು ನಗರದ ಮೆಜೆಸ್ಟಿಕ್‌ (ಕೆಎಸ್‌ಆರ್‌) ರೈಲು ನಿಲ್ದಾಣದಿಂದ ಕೇರಳದ ಎರ್ನಾಕುಲಂಗೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ ಮಾಡಲಿದೆ.

Special Train Will Run To ernakulam on December 28
Author
Bengaluru, First Published Dec 25, 2019, 9:23 AM IST

ಬೆಂಗಳೂರು [ಡಿ.25]: ನೈಋುತ್ಯ ರೈಲ್ವೆಯು ಕ್ರಿಸ್‌ಮಸ್‌ ಹಾಗೂ ಶಬರಿಮಲೆ ಪೂಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಡಿ.28ರಂದು ನಗರದ ಮೆಜೆಸ್ಟಿಕ್‌ (ಕೆಎಸ್‌ಆರ್‌) ರೈಲು ನಿಲ್ದಾಣದಿಂದ ಕೇರಳದ ಎರ್ನಾಕುಲಂಗೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರದ ವ್ಯವಸ್ಥೆ ಮಾಡಿದೆ.

ಬೆಂಗಳೂರು ಕೆಎಸ್‌ಆರ್‌-ಎರ್ನಾಕುಲಂ ವಿಶೇಷ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ 06547) ಡಿ.8ರಂದು ಸಂಜೆ 6.45ಕ್ಕೆ ಹೊರಟು ಮರುದಿನ ಬೆಳಗ್ಗೆ 6 ಗಂಟೆಗೆ ಎರ್ನಾಕುಲಂ ತಲುಪಲಿದೆ. 

ಇನ್ಮುಂದೆ ಹುಬ್ಬಳ್ಳಿ-ಬೆಂಗಳೂರು ರೈಲು ಪ್ರಯಾಣಕ್ಕೆ ಐದೇ ತಾಸು?...

ಎರ್ನಾಕುಲಂನಿಂದ ಡಿ.9ರಂದು ಸಂಜೆ 5 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6.50ಕ್ಕೆ ಕೆ.ಆರ್‌.ಪುರಂ ತಲುಪಲಿದೆ. ಈ ವಿಶೇಷ ರೈಲು ಹೋಗುವ ಮತ್ತು ಬರುವ ಮಾರ್ಗದಲ್ಲಿ ವೈಟ್‌ಫೀಲ್ಡ್‌, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್‌, ತಿರುಪ್ಪೂರ್‌, ಕೊಯಂಬತ್ತೂರು, ಪಾಲಕ್ಕಾಡ್‌, ತ್ರಿಶೂರು ಮತ್ತು ಅಲುವಾದಲ್ಲಿ ನಿಲುಗಡೆ ನೀಡಲಿದೆ. ಈ ರೈಲು ಪ್ರಯಾಣಕ್ಕೆ ವಿಶೇಷ ದರ ನಿಗದಿಗೊಳಿಸಲಾಗಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.

Follow Us:
Download App:
  • android
  • ios