ಸತ್ಯ ಹೇಳಿದರೆ ಕೆಲವರು ಸಹಿಸುವುದಿಲ್ಲ. ಹೀಗಾಗಿ ನಾನು ಮಾತನಾಡದಿರುವುದೇ ಉತ್ತಮ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು : ಸತ್ಯ ಹೇಳಿದರೆ ಕೆಲವರು ಸಹಿಸುವುದಿಲ್ಲ. ಹೀಗಾಗಿ ನಾನು ಮಾತನಾಡದಿರುವುದೇ ಉತ್ತಮ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದನದಲ್ಲಿ ಆರ್ಎಸ್ಎಸ್ ಪ್ರಾರ್ಥನೆ, ಚಾಮುಂಡೇಶ್ವರಿ ದೇವಸ್ಥಾನ ಕುರಿತ ಹೇಳಿಕೆಗಳು ಸೇರಿ ಪದೇಪದೆ ತಮ್ಮ ಹೇಳಿಕೆಗಳು ವಿವಾದಕ್ಕೀಡಾಗುತ್ತಿವೆ. ಹೀಗಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸದಿರಲು ತೀರ್ಮಾನಿಸಿರುವ ಅವರು ಇಂಥದ್ದೊಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ದಸರಾ ಉದ್ಘಾಟಕರ ಆಯ್ಕೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರತಿಕ್ರಿಯೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಶಿವಕುಮಾರ್, ನಾನು ಸದನ ಸೇರಿ ಎಲ್ಲಿಯೇ ಮಾತನಾಡಿದರೂ ಅದರಲ್ಲಿ ಕೇವಲ ತಪ್ಪು ಕಂಡು ಹಿಡಿಯುವುದೇ ಕೆಲವರ ಕೆಲಸವಾಗಿದೆ. ರಾಜಕೀಯದವರು, ಮಾಧ್ಯಮಗಳು, ರಾಜಮನೆತನದ ಪ್ರಮೋದಾದೇವಿ, ಸಂಸದ ಯದುವೀರ್ ಹೀಗೆ ಎಲ್ಲರೂ ತಪ್ಪು ಹುಡುಕುವವರೇ. ಹೀಗಾಗಿ ನಾನು ಮಾತನಾಡದಿರುವುದೇ ಲೇಸು ಎಂದೆನಿಸುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಲು ಬೇರೆ ನಾಯಕರು ಮತ್ತು ಪಕ್ಷದ ವಕ್ತಾರರಿದ್ದಾರೆ. ಅವರ ಬಳಿ ಕೇಳಿ ಎಂದು ಹೇಳಿದರು.
ಡಿಕೆಶಿ ಗುಲಾಮರ ಮಾತು ಕೇಳಿ ಕ್ಷಮೆ ಕೇಳಿದ್ದು ಅಕ್ಷಮ್ಯ ಅಪರಾಧ, ಬಿಜೆಪಿ ಶಾಸಕ ಖಂಡನೆ!
ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕ್ಷಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಡಿಕೆಶಿ ಅವರಿಗೆ ಹಣಬಲವೂ ಇದೆ, ರಾಜಕೀಯ ಬಲವೂ ಇದೆ, ತೋಳ್ಬಲ ಎಲ್ಲವೂವಿದೆ. ಆದರೆ ಅವರು ಸದಾ ಸೋನಿಯಾ ಗಾಂಧಿ ಮುಂದೆ ತಲೆಬಾಗುತ್ತಾರೆ. ಆದ್ರೆ ಸೋನಿಯಾ ಗಾಂಧಿ ಮುಂದೆ. ಸದಾ ವತ್ಸಲೆ ಅಂತೇಳಿದ್ರೆ ಭಾರತ ಮಾತೆಗೆ ನಮಸ್ಕಾರ ಮಾಡೋದು ಅಂತ ಆಯ್ತು. ಭಾರತ ಮಾತೆಗೆ ನಮಸ್ಕಾರ ಮಾಡಿದ್ರೋ ಹೊರತು, ನಮ್ಮ RSS ನಮಸ್ಕಾರ ಮಾಡಲಿಲ್ಲ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನ ಗುಲಾಮರು ಹರಿಪ್ರಸಾದ್ ಇರಬಹುದು, ಇನ್ನೊಬ್ಬರು ಇರಬಹದು. ಇಂತಹ ಗುಲಾಮರ ಮಾತು ಕೇಳಿಕೊಂಡು ಕ್ಷಮೆ ಕೇಳಿದ್ದು ಅಕ್ಷಮ್ಯ ಅಪರಾಧ. ಇದನ್ನ ನಾನು ಖಂಡಿಸ್ತಿನಿ ಎಂದಿದ್ದಾರೆ.
ಬಿ. ಸುರೇಶ್ ಗೌಡ ಅವರು ಡಿಕೆ ಶಿವಕುಮಾರ್ ಅವರನ್ನು ಬಲಿಷ್ಠ ನಾಯಕ ಎಂದು ಬಣ್ಣಿಸಿ, “ಡಿಕೆಶಿ ಒರಿಜಿನಲ್ ಡಿಕೆಶಿ ಆಗಿರಬೇಕು. ಜನರು ಅವರಲ್ಲಿ ತಾಕತ್ತು, ಧೈರ್ಯವನ್ನು ನೋಡುತ್ತಾರೆ. ಅವರು ರಾಜಕೀಯದಲ್ಲಿ ಸ್ಕ್ರಾಚ್ನಿಂದ ಬೆಳೆದವರು. ರಾಜ್ಯ ಕಟ್ಟುವಲ್ಲಿ ಅವರ ರಾಜಕೀಯ ಶಕ್ತಿ ಬಹಳ ಮುಖ್ಯ. ಇಂತಹ ಸಂದರ್ಭದಲ್ಲಿ ಕ್ಷಮೆ ಕೇಳಿರುವುದು ಅವರ ರಾಜಕೀಯ ಬದುಕಿನಲ್ಲೇ ಕಪ್ಪು ಚುಕ್ಕೆ ಎಂದು ಅಭಿಪ್ರಾಯಪಟ್ಟರು. RSS ಗೀತೆ ದೇಶ ವಿಭಜನೆಗೆ ಅಲ್ಲ, ದೇಶ ಒಗ್ಗೂಡಿಸಲು 100 ವರ್ಷಗಳಿಂದ ಪ್ರಯತ್ನಿಸುತ್ತಿದೆ. ಅದನ್ನು ಕಮಿನಲ್ ಎಂದು ಆರೋಪಿಸುವುದು ತಪ್ಪು. RSS ಗೀತೆಯನ್ನು ಹಾಡಿದ್ದಕ್ಕೆ ಕ್ಷಮೆ ಕೇಳುವುದು ಡಿಕೆಶಿಯ ದೊಡ್ಡ ತಪ್ಪಾಗಿದೆ ಎಂದು ಖಂಡಿಸಿದರು.
