Asianet Suvarna News Asianet Suvarna News

ಉಚಿತ ಬಸ್‌ ಸಂಚಾರಕ್ಕೆ ಗಡಿ ಜಿಲ್ಲೆ ಬೀದರ್‌ನಲ್ಲಿ ನಿರಾಸಕ್ತಿ: ಬಸ್‌ಗಳು ಖಾಲಿ ಖಾಲಿ!

ರಾಜ್ಯ ಸರ್ಕಾ​ರದ ಶಕ್ತಿ ಯೋಜ​ನೆಯ ಪರಿ​ಣಾಮ ಕಳೆದ 15 ದಿನ​ಗ​ಳಿಂದ ಸಾರಿಗೆ ಸಂಸ್ಥೆ​ಗ​ಳ ಬಸ್‌​ಗ​ಳಲ್ಲಿ ಮಹಿಳಾ ಪ್ರಯಾ​ಣಿ​ಕರ ಸಂಖ್ಯೆ ಮೂರ್ನಾಲ್ಕು ಪಟ್ಟು ಹೆಚ್ಚಿ​ದ್ದ​ಲ್ಲದೆ ಧಾರ್ಮಿಕ ಕ್ಷೇತ್ರ​ಗಳು ಹಾಗೂ ಪ್ರವಾಸ ತಾಣ​ಗ​ಳಿಗೆ ತೆರ​ಳುವ ಪ್ರಯಾ​ಣಿ​ಕರ ಸಂಖ್ಯೆ ಭಾರಿ ಏರಿಕೆ ಕಂಡಿ​ದ್ದೀಗ ಧಿಡೀ​ರನೇ ಕುಸಿ​ತ​ಕಂಡಿದೆ. ಜಿಲ್ಲೆ​ಯ​ಲ್ಲಿನ ಬಸ್‌ ನಿಲ್ದಾ​ಣ​ಗಳು ಎಂದಿ​ನಂತೆ ಸಾಮಾನ್ಯ ಸ್ವರೂ​ಪಕ್ಕೆ ಮರ​ಳಿವೆ.

Shakti scheme Apathy in border district Bidar for free bus service rav
Author
First Published Jun 26, 2023, 4:28 AM IST

ಬೀದರ್‌ (ಜೂ.26): ರಾಜ್ಯ ಸರ್ಕಾ​ರದ ಶಕ್ತಿ ಯೋಜ​ನೆಯ ಪರಿ​ಣಾಮ ಕಳೆದ 15 ದಿನ​ಗ​ಳಿಂದ ಸಾರಿಗೆ ಸಂಸ್ಥೆ​ಗ​ಳ ಬಸ್‌​ಗ​ಳಲ್ಲಿ ಮಹಿಳಾ ಪ್ರಯಾ​ಣಿ​ಕರ ಸಂಖ್ಯೆ ಮೂರ್ನಾಲ್ಕು ಪಟ್ಟು ಹೆಚ್ಚಿ​ದ್ದ​ಲ್ಲದೆ ಧಾರ್ಮಿಕ ಕ್ಷೇತ್ರ​ಗಳು ಹಾಗೂ ಪ್ರವಾಸ ತಾಣ​ಗ​ಳಿಗೆ ತೆರ​ಳುವ ಪ್ರಯಾ​ಣಿ​ಕರ ಸಂಖ್ಯೆ ಭಾರಿ ಏರಿಕೆ ಕಂಡಿ​ದ್ದೀಗ ಧಿಡೀ​ರನೇ ಕುಸಿ​ತ​ಕಂಡಿದೆ. ಜಿಲ್ಲೆ​ಯ​ಲ್ಲಿನ ಬಸ್‌ ನಿಲ್ದಾ​ಣ​ಗಳು ಎಂದಿ​ನಂತೆ ಸಾಮಾನ್ಯ ಸ್ವರೂ​ಪಕ್ಕೆ ಮರ​ಳಿವೆ.

ಬೀದರ್‌ ಐತಿ​ಹಾಸಿ ಪ್ರವಾಸಿ ತಾಣ​ಗ​ಳನ್ನು ಹಾಗೂ ಧಾರ್ಮಿಕ ಕ್ಷೇತ್ರ​ಗ​ಳನ್ನು ಹೆಚ್ಚಾಗಿ ಹೊಂದಿದ್ದು, ಕಳೆದ ಭಾನು​ವಾರ ಒಂದು ಲಕ್ಷ ಪ್ರಯಾ​ಣಿ​ಕ​ರನ್ನು ಕರೆ​ದೊ​ಯ್ದಿದ್ದ ಈಶಾನ್ಯ ಕರ್ನಾ​ಟಕ ಸಾರಿಗೆ ಸಂಸ್ಥೆಯ ಬಸ್‌​ಗ​ಳಲ್ಲಿ ಈ ಭಾನು​ವಾರ ಅದರ ಪ್ರಮಾಣ ಗಣ​ನೀ​ಯ​ವಾಗಿ ಇಳಿ​ಕೆ ಕಂಡು​ಬಂದಿದೆ.

ಕಲಬುರಗಿ: ಪ್ರಯಾಣಿಕರನ್ನು ಬಿಟ್ಟು ಹೋದ ಸಿಕಂದರಾಬಾದ್‌ ಎಕ್ಸಪ್ರೆಸ್‌...

ಬೀದರ್‌ ಐತಿ​ಹಾ​ಸಿಕ ಕೋಟೆ, ಚೌಖಂಡಿ, ಅಷ್ಟೂರ್‌, ಗುರು​ದ್ವಾರ, ಪಾಪ​ನಾಶ ದೇವ​ಸ್ಥಾನ, ಮೈಲಾರ ್ಮಮಲ್ಲ​ಣ್ಣ, ನರ​ಸಿಂಹ ಝರ​ಣಾ ಹೀಗೆಯೇ ಅನೇಕ ದೇವ​ಸ್ಥಾ​ನ​ಗ​ಳಿಗೆ ಸಾವಿ​ರಾರು ಸಂಖ್ಯೆ​ಯಲ್ಲಿ ಆಗ​ಮಿ​ಸಿದ್ದ ಭಾರೀ ಸಂಖ್ಯೆ​ಯ ಜನಸ್ತೋಮ ಈ ಭಾನು​ವಾರ ಮಾತ್ರ ಈ ಹಿಂದಿ​ನಂತೆ ಸಾಮಾ​ನ್ಯ​ವಾ​ಗಿತ್ತು.

ಬೀದರ್‌ ಕೋಟೆ​ಯಲ್ಲಿ ನಿತ್ಯ ಎರ​ಡ್ಮೂರು ಸಾವಿರ ಜನ ಆಗ​ಮಿ​ಸಿ​ದರೆ ಭಾನು​ವಾರ ಮತ್ತು ರಜಾ ದಿನ​ಗ​ಳಲ್ಲಿ 5ಸಾವಿ​ರಕ್ಕೂ ಹೆಚ್ಚು ಪ್ರವಾ​ಸಿ​ಗರು ಆಗ​ಮಿ​ಸು​ತ್ತಾರೆ ಇತ್ತೀ​ಚೆಗೆ ಮಹಿ​ಳೆ​ಯ​ರಿಗೆ ಉಚಿತ ಬಸ್‌ ಪ್ರಯಾಣ ಆದಾ​ಗಿ​ನಿಂದ ಇದು ಹೆಚ್ಚಾ​ಗಿತ್ತು. ಆದ​ರೆ ಈ ಭಾನು​ವಾರ ಮೂರ​ರಿಂದ ನಾಲ್ಕು ಸಾವಿರ ಪ್ರವಾ​ಸಿ​ಗರ ಆಗ​ಮನವಾಗುದ್ದು, ಶಕ್ತಿ ಯೋಜ​ನೆಯ ಸತತ ಲಾಭ ಪಡೆ​ಯು​ವಲ್ಲಿ ಮಹಿ​ಳೆ​ಯರು ಹಿಂದೇಟು ಹಾಕಿ​ದ್ದಾ​ರೆಯೇ ಎಂಬ ಅನು​ಮಾನ ಮೂಡಿದೆ.

ಅದ​ರಂತೆ ಮೈಲಾರ ಮಲ್ಲಣ್ಣ ದೇವ​ಸ್ಥಾ​ನಕ್ಕೆ ಆಗ​ಮಿ​ಸು​ವ​ವರ ಭಕ್ತಾ​ದಿ​ಗಳ ಸಂಖ್ಯೆ​ಯಲ್ಲಿ ಕಡಿ​ಮೆ​ಯಾ​ಗ​ದಿ​ದ್ದರೂ ಬಸ್‌ ಸಂಚಾರ ಮಾಡು​ವ​ವರ ಸಂಖ್ಯೆ​ಯಲ್ಲಿ ಗಣ​ನೀ​ಯ​ವಾಗಿ ಕಡಿ​ಮೆ​ಯಾ​ಗಿದ್ದು, ಪ್ರಯಾ​ಣಿ​ಕರ ದಂಡನ್ನು ಕಂಡು ಬಸ್‌​ಗಳು ನಿಲ್ಲಿ​ಸದೇ ಸಾಗಿ ಹೋಗು​ತ್ತಿ​ದ್ದ​ದ್ದೀಗ ಪ್ರಯಾ​ಣಿ​ಕ​ರನ್ನು ಕರೆ​ದೊ​ಯ್ದರೂ ಬಸ್‌​ಗಳು ತುಂಬಿ ತುಳು​ಕು​ತ್ತಿ​ರ​ಲಿಲ್ಲ.

ಭಾನು​ವಾರ ಬೆಳಿ​ಗ್ಗೆ​ಯಿಂದ ಸಂಜೆ​ಯ​ವ​ರೆಗೆ ಬೀದರ್‌ ಕೇಂದ್ರ ಬಸ್‌ ನಿಲ್ದಾ​ಣ​ದಲ್ಲಿ ಬಸ್‌​ಗ​ಳಲ್ಲಿ ಪ್ರಯಾ​ಣಿ​ಸು​ವ​ ಪ್ರಯಾ​ಣಿ​ಕರ ಹೆಚ್ಚುವರಿ ದಂಡು ಕಂಡು​ಬ​ರ​ಲಿ​ಲ್ಲ. ಇದು ಕಳೆದ ಎರಡು ವಾರ​ಗ​ಳ​ಲ್ಲಿಯೇ ಕಡಿಮೆ ಪ್ರಯಾ​ಣಿ​ಕ​ರನ್ನು ಕಂಡಿ​ರುವ ದಿನ ಎಂದು ಸಂಸ್ಥೆಯ ಹೆಸರು ಹೇಳ​ಲಿ​ಚ್ಚ​ಸದ ಅಧಿ​ಕಾ​ರಿ​ಯೊ​ಬ್ಬರು ಅಭಿಪ್ರಾಯ ವ್ಯಕ್ತ​ಪ​ಡಿ​ಸಿ​ದ್ದಾರೆ.

ಬೀದರ್‌: ಶಾಲೆಯಲ್ಲಿ ಬಿಸಿಯೂಟ ಸೇವಿಸಿ 59 ವಿದ್ಯಾರ್ಥಿಗಳು ಅಸ್ವಸ್ಥ

ಒಟ್ಟಾರೆ ರಾಜ್ಯದ ಶಕ್ತಿ ಯೋಜ​ನೆ​ಯಡಿ ಮಹಿ​ಳೆ​ಯರು ಭಾರೀ ಸಂಖ್ಯೆ​ಯಲ್ಲಿ ಪ್ರಯಾ​ಣಿ​ಸುವ ಪರಿ ಇದೀಗ ಕಡಿ​ಮೆ​ಯಾ​ಗು​ತ್ತಿ​ರುವು​ದಕ್ಕೆ ನಿಲ್ದಾ​ಣ​ಗ​ಳ​ಲ್ಲಿನ ಭಾರಿ ಜನ​ಜಂಗುಳಿ, ಜಗಳ, ಕಿರಿ ಕಿರಿ ದೃಶ್ಯ​ಗಳೇ ಕಾರಣ ಎಂಬು​ವದು ಪ್ರಯಾ​ಣಿ​ಕರ ಅಂಬೋ​ಣ​ ಕೂ​ಡ.

Follow Us:
Download App:
  • android
  • ios