Asianet Suvarna News Asianet Suvarna News

ಬೀದರ್‌: ಶಾಲೆಯಲ್ಲಿ ಬಿಸಿಯೂಟ ಸೇವಿಸಿ 59 ವಿದ್ಯಾರ್ಥಿಗಳು ಅಸ್ವಸ್ಥ

ಬೀದರ್‌ ಜಿಲ್ಲೆಯ ಹುಮ​ನಾ​ಬಾದ್‌ ತಾಲೂಕಿನ ನಿಂಬೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದ 59 ಮಕ್ಕಳಿಗೆ ತಲೆ ಸುತ್ತು, ವಾಂತಿ ಭೇದಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡು ಆಸ್ಪ​ತ್ರೆಗೆ ಸೇರಿದ್ದಾರೆ. 

59 Students Sick After Consuming Mid Day Meal in School at Humnabad in Bidar grg
Author
First Published Jun 25, 2023, 1:00 AM IST

ಹುಮನಾಬಾದ್‌(ಜೂ.25): ಬೀದರ್‌ ಜಿಲ್ಲೆ​ಯ ಔರಾದ್‌ ತಾಲೂ​ಕಿನ ಕರ​ಕ್ಯಾಳ ಗ್ರಾಮ​ದಲ್ಲಿ ಕಲು​ಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನ ಅಸ್ವ​ಸ್ಥ​ಗೊಂಡು ಆಸ್ಪ​ತ್ರೆಗೆ ಸೇರಿದ ಬೆನ್ನ​ಲ್ಲಿಯೇ ಹುಮ​ನಾ​ಬಾದ್‌ ತಾಲೂಕಿನ ನಿಂಬೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದ 59 ಮಕ್ಕಳಿಗೆ ತಲೆ ಸುತ್ತು, ವಾಂತಿ ಭೇದಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡು ಆಸ್ಪ​ತ್ರೆಗೆ ಸೇರಿದ ಘಟನೆ ವರ​ದಿ​ಯಾ​ಗಿದೆ.

ಶಾಲೆಯಲ್ಲಿ ಒಟ್ಟು 94 ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವನೆ ಮಾಡಿದ್ದರು. ಶುಕ್ರ​ವಾ​ರ ಸಂಜೆ 5ರ ಹೊತ್ತಿಗೆ ಕೆಲ ಮಕ್ಕಳಲ್ಲಿ ತಲೆನೋವು, ವಾಂತಿ ಭೇದಿ ಹಾಗೂ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದಂತೆ ಅಸ್ವಸ್ಥ ಮಕ್ಕಳನ್ನು ಹುಮ​ನಾ​ಬಾ​ದ್‌ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಮಕ್ಕಳ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 

ಬೀದ​ರ್‌: ಕಲು​ಷಿತ ನೀರು ಸೇವ​ನೆ, 20ಕ್ಕೂ ಹೆಚ್ಚು ಜನ ಅಸ್ವಸ್ಥ

ಶಾಸಕರ ಭೇಟಿ: 

ಶಾಸಕ ಡಾ.ಸಿದ್ದು ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ​ರಾ​ದ ಡಾ.ಚಂದ್ರಶೇಖರ ಪಾಟೀಲ್‌, ಭೀಮರಾವ್‌ ಪಾಟೀಲ್‌, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೇರಿ ಅಧಿಕಾರಿ ವರ್ಗ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ಕುರಿತು ವೈದ್ಯಾಧಿಕಾರಿಯೊಂದಿಗೆ ಚರ್ಚಿಸಿದರು.

Follow Us:
Download App:
  • android
  • ios