Asianet Suvarna News Asianet Suvarna News

ರಾಮಮಂದಿರಕ್ಕೆ ಮೂಹೂರ್ತ ನೀಡಿದ್ದ ವಿದ್ವಾಂಸಗೆ ಬೆದರಿಕೆ!

ರಾಮಮಂದಿರಕ್ಕೆ ಮೂಹೂರ್ತ ನೀಡಿದ್ದ ವಿದ್ವಾಂಸಗೆ ಬೆದರಿಕೆ| ಹಲ​ವ​ರಿಂದ ಬೆದ​ರಿಕೆ| ವಿಜ​ಯೇಂದ್ರ ಶರ್ಮಾಗೆ ಪೊಲೀಸ್‌ ಭದ್ರತೆ

Scholar From Belagavi Who Fixed Muhurat For Ram Mandir Bhoomi Pujan Gets Threatening Calls
Author
Bangalore, First Published Aug 4, 2020, 8:00 AM IST

ಬೆಳಗಾವಿ(ಆ.04): ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಡ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಹೂರ್ತ ನೀಡಿದ್ದ ಬೆಳಗಾವಿಯ ವಿದ್ವಾಂಸ ಎನ್‌.ಆರ್‌.ವಿಜಯೇಂದ್ರ ಶರ್ಮಾ ಅವರಿಗೆ ದೇಶದ ನಾನಾ ಭಾಗಗಳಿಂದ ಅನಾಮಿಕ ಜೀವ ಬೆದರಿಕೆ ಕರೆಗಳು ಬಂದಿವೆ.

"

ರಾಮಮಂದಿರ ನಿರ್ಮಾಣಕ್ಕೆ ಮುಹೂರ್ತ ಏಕೆ ಕೊಟ್ಟಿದ್ದೀರಿ? ಎಂದು ನನಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಿಜಯೇಂದ್ರ ಶರ್ಮಾ ಟಿಳಕವಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸ್ತ್ರೀನಗರದಲ್ಲಿರುವ ವಿದ್ಯಾ ವಿಹಾರ ವಿದ್ಯಾಲಯಕ್ಕೆ ಒಬ್ಬ ಪೊಲೀಸ್‌ ಪೇದೆಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಅಯೋಧ್ಯೆ ಜಗಮಗ: ಭೂಮಿಪೂಜೆಯ ಧಾರ್ಮಿಕ ವಿಧಿವಿಧಾನ ಆರಂಭ!

ವಿದ್ಯಾವಿಹಾರ ವಿದ್ಯಾಲಯದ ಕುಲಪತಿ ಆಗಿರುವ ವಿಜಯೇಂದ್ರ ಶರ್ಮಾ ಅವರು ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಸಮಾರಂಭಕ್ಕೆ ನಾಲ್ಕು ಮೂಹೂರ್ತಗಳನ್ನು ನೀಡಿದ್ದರು. ಈ ಪೈಕಿ ಆ.5ರ ಮುಹೂರ್ತವನ್ನು ಆಯ್ಕೆ ಮಾಡಲಾಳ್ಳಲಾಗಿದೆ ಎನ್ನ​ಲಾ​ಗು​ತ್ತಿ​ದೆ.

Follow Us:
Download App:
  • android
  • ios