* ಧಾರ್ಮಿಕ ಮುಖಂಡ, ಪತ್ರಕರ್ತರ ಚಲನವಲನಗಳತ್ತ ಸಿಐಡಿ ಕಣ್ಣು* ಪಿಎಸೈ ಅಕ್ರಮ: ಧಾರ್ಮಿಕ ಮುಖಂಡ, ಪತ್ರಕರ್ತರೂ ಶಾಮೀಲು?* ನೇಮಕಾತಿ ಜೊತೆಗೆ ಪೊಲೀಸ್‌ ವರ್ಗಾವಣೆಯಲ್ಲೂ ದಳ್ಳಾಳಿಕಾರ್ಯ

ಆನಂದ್‌ ಎಂ. ಸೌದಿ

ಯಾದಗಿರಿ(ಮೇ.07): 545 ಪಿಎಸೈ(ಸಿವಿಲ್‌) ನೇಮಕ ಅಕ್ರಮದಲ್ಲೀಗ ಕಲ್ಯಾಣ ಕರ್ನಾಟಕ ಭಾಗದ ಧಾರ್ಮಿಕ ಮುಖಂಡ ಹಾಗೂ ಇಬ್ಬರು ಪತ್ರಕರ್ತರೂ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿರುವ ಶಂಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಇವರ ಚಲನವಲನಗಳ ಬಗ್ಗೆಯೂ ಸಿಐಡಿ ಅಧಿಕಾರಿಗಳ ತಂಡ ಹದ್ದಿನ ಕಣ್ಣಿಟ್ಟಿದೆ ಎನ್ನಲಾಗಿದೆ.

‘ಕನ್ನಡಪ್ರಭಕ್ಕೆ’ ಲಭ್ಯ ಮೂಲಗಳ ಪ್ರಕಾರ, ನೇಮಕಾತಿ ಆಕಾಂಕ್ಷಿ ‘ಗಿರಾಕಿ’ಗಳನ್ನು ಹುಡುಕಿ, ಅಂಥವರನ್ನು ಈ ಅಕ್ರಮದ ಪ್ರಮುಖ ಆರೋಪಿಗಳಾದ ದಿವ್ಯಾ ಹಾಗರಗಿ ಹಾಗೂ ರುದ್ರಗೌಡಗೆ ಪರಿಚಯಿಸಿ ವ್ಯವಹಾರ ಕುದುರಿಸಿ, ಇದರಲ್ಲಿ ಕಮೀಶನ್‌ ಪಡೆಯುತ್ತಿದ್ದರು. ನೇಮಕಾತಿ ಅಷ್ಟೇ ಅಲ್ಲದೆ ಪೊಲೀಸ್‌ ಇಲಾಖೆಯಲ್ಲಿನ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿಯೂ ಮೂಗು ತೂರಿಸುತ್ತಿದ್ದ ಇವರು ದಳ್ಳಾಳಿಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಸಿಎಂ, ಗೃಹ ಸಚಿವರ ಬಂಧಿಸಿ: ಪ್ರಿಯಾಂಕ್‌

ಕಲ್ಯಾಣ ಕರ್ನಾಟಕ ಭಾಗದ ಪ್ರಬಲ ಧಾರ್ಮಿಕ ಮುಖಂಡನೊಬ್ಬನ ಮಾತಿಗೆ ಮನ್ನಣೆ ಜೊತೆಗೆ, ಮಾಧ್ಯಮದ ಹೆಸರು ಹೇಳಿಕೊಂಡು ಠೀವಿಯಿಂದ ತಿರುಗಾಡುತ್ತಿದ್ದ ಇಬ್ಬರು ಪತ್ರಕರ್ತರ ಬಗ್ಗೆ ಸಿಐಡಿ ವಿಚಾರಣೆ ವೇಳೆ ಕೆಲವರು ಬಾಯ್ಬಿಟ್ಟಿದ್ದಾರೆ. ಇದಕ್ಕೆ ಪೂರಕ ಸಾಕ್ಷ್ಯಾಧಾರಗಳ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಇವರ ವಿಚಾರಣೆ ನಡೆಸುವ ಸಾಧ್ಯತೆಗಳನ್ನೂ ಅಲ್ಲಗೆಳೆಯುವಂತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಪಿಎಸೈ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಈವರೆಗೆ ಅಭ್ಯರ್ಥಿಗಳು, ಮಧ್ಯವರ್ತಿಗಳು, ರಾಜಕೀಯ ಪ್ರಭಾವಿಗಳು ಹಾಗೂ ಖಾಕಿಪಡೆಯಲ್ಲಿನ ಕೆಲವರನ್ನು ಅರೆಸ್ಟ್‌ ಮಾಡಲಾಗಿದೆ. ದಿವ್ಯಾ ಹಾಗರಗಿ ಹಾಗೂ ರುದ್ರಗೌಡ ಬಂಧನ ನಂತರ ಮತ್ತಷ್ಟೂಮಾಹಿತಿಗಳು ಬಯಲಿಗೆ ಬರುತ್ತಿವೆ. ಈಗ ಧಾರ್ಮಿಕ ಮುಖಂಡನ ಹಾಗೂ ಪತ್ರಕರ್ತರ ಬಗ್ಗೆಯೂ ಸಿಐಡಿ ತಂಡದ ಕಣ್ಗಾವಲು ಮುಂದಿನ ದಿನಗಳಲ್ಲಿ ಮತ್ತಷ್ಟೂಅಚ್ಚರಿಗಳನ್ನು ಬಯಲಿಗೆಳೆಯಬಹುದು ಎನ್ನಲಾಗುತ್ತಿದೆ.

ಮೊದಲ ಬಾರಿ ಪೊಲೀಸ್‌ ಅಧಿಕಾರಿಗಳ ಬಂಧನ

ಮಹತ್ವದ ಬೆಳವಣಿಗೆಯೊಂದರಲ್ಲಿ ಪಿಎಸ್‌ಐ ಪರೀಕ್ಷೆ ಅಕ್ರಮ ಪ್ರಕ​ರ​ಣ​ದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್‌ ಇಲಾ​ಖೆಯ ಇಬ್ಬರು ಉನ್ನತ ಅಧಿ​ಕಾ​ರಿ​ಗ​ಳನ್ನು ಬಂಧಿ​ಸ​ಲಾ​ಗಿ​ದೆ. ಬ್ಲ್ಯಾಕ್‌ ಮೇಲ್‌ ಮಾಡಿದ ಆರೋ​ಪದ ಮೇರೆಗೆ ಡಿವೈ​ಎಸ್ಪಿ ಹಾಗೂ ಅಭ್ಯ​ರ್ಥಿ​ಗ​ಳನ್ನು ಪೂರೈ​ಸಿದ ಆರೋ​ಪದ ಮೇರೆಗೆ ಸಿಪಿಐ ಒಬ್ಬ​ರನ್ನು ಗುರು​ವಾರ ಸಿಐಡಿ ಬಂಧಿ​ಸಿದೆ.

ದಾವಣಗೆರೆ, ಧಾರವಾಡದಲ್ಲೂ ಸಿಐಡಿ ಪೊಲೀಸರಿಂದ ಬೇಟೆ?

ರಾಯಚೂರು ಜಿಲ್ಲೆಯ ಲಿಂಗಸುಗೂರು ಡಿವೈಎಸ್ಪಿ ವಿಜಯ ಕುಮಾರ್‌ ಸಾಲಿ ಹಾಗೂ ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆ ಬಂಧಿತ ಪೊಲೀಸ್‌ ಅಧಿ​ಕಾ​ರಿ​ಗ​ಳು. ಇಬ್ಬ​ರನ್ನೂ ಬುಧವಾರ ತಡರಾತ್ರಿವರೆಗೂ ತೀವ್ರ ವಿಚಾರಣೆ ನಡೆಸಿದ್ದ ಸಿಐಡಿ ತಂಡ ಗುರುವಾರ ಬಂಧಿ​ಸಿ​ದೆ. ಈ ಇಬ್ಬ​ರನ್ನೂ 8 ದಿನ​ಗಳ ಕಾಲ ಸಿಐಡಿ ಕಸ್ಟ​ಡಿಗೆ ಒಪ್ಪಿ​ಸ​ಲಾ​ಗಿ​ದೆ.

ಪ್ರಕರಣ​ಕ್ಕೆ ಸಂಬಂಧಿ​ಸಿ ಹಣ ನೀಡಿ ಪರೀಕ್ಷೆ ಬರೆ​ದಿದ್ದ ಏಳು ಮಂದಿ ಪೊಲೀಸ್‌ ಕಾನ್ಸ್‌​ಟೇ​ಬ​ಲ್‌​ಗ​ಳನ್ನು ಈಗಾ​ಗಲೇ ಬಂಧಿ​ಸ​ಲಾ​ಗಿ​ದೆ. ಆದರೆ ಅಕ್ರ​ಮದಲ್ಲಿ ಭಾಗಿ​ಯಾದ ಆರೋ​ಪದ ಮೇರೆಗೆ ಬಂಧಿ​ತ​ರಾ​ಗಿ​ರುವ ಮೊದಲಿಬ್ಬರು ಪೊಲೀ​ಸರು ವಿಜಯ ಕುಮಾರ್‌ ಹಾಗೂ ಆನಂದ್‌ ಆಗಿ​ದ್ದಾ​ರೆ. ಈ ಇಬ್ಬರ ಬಂಧನದೊಂದಿಗೆ ಪ್ರಕರಣದಲ್ಲಿ ಒಟ್ಟಾರೆ ಬಂಧಿತರ ಸಂಖ್ಯೆ ಒಟ್ಟಾರೆ 41ಕ್ಕೇರಿ​ದೆ. ಇದ​ರಲ್ಲಿ 9 ಮಂದಿ ಪೊಲೀ​ಸ​ರಾ​ಗಿ​ದ್ದಾ​ರೆ.

10 ಲಕ್ಷಕ್ಕೆ ಬ್ಲ್ಯಾಕ್‌ಮೇ​ಲ್‌:

ಡಿವೈಎಸ್ಪಿ ವಿಜಯಕುಮಾರ್‌ ಸಾಲಿಗೆ ಜ್ಞಾನ​ಜ್ಯೋತಿ ಶಾಲೆ​ಯಲ್ಲಿ ಪಿಎ​ಸ್‌ಐ ಪರೀಕ್ಷೆ ನಡೆದ ವಾರದ ಬಳಿಕ ಬ್ಲೂಟೂತ್‌ ಬಳಸಿ ಅಕ್ರಮ ಆಗಿದ್ದು ಗೊತ್ತಾ​ಗಿತ್ತು. ಈ ಸಂಬಂಧ ಡಿವೈ​ಎಸ್ಪಿ ಶಾಲೆ ಒಡತಿ ದಿವ್ಯಾ​ಹಾ​ಗ​ರಗಿ ಮತ್ತು ಪ್ರಾಂಶು​ಪಾಲ ಕಾಶೀ​ನಾ​ಥ್‌ಗೆ ಕರೆ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾ​ರೆ. ನಂತರ ದಿವ್ಯಾ​ಹಾ​ಗ​ರಗಿ ಕಡೆ​ಯಿಂದ .10 ಲಕ್ಷ ಸಂದಾ​ಯ​ವಾದ ಬಳಿ​ಕ ಸುಮ್ಮ​ನಾ​ಗಿ​ದ್ದಾ​ರೆ.

ತಮಾ​ಷೆ​ಯೆಂದರೆ ಜ್ಞಾನ​ಜ್ಯೋತಿ ಶಾಲೆ​ಯಲ್ಲಿ ಇಂಥ​ದ್ದೊಂದು ಅಕ್ರಮ ನಡೆ​ದಿದೆ ಎಂದು ಡಿವೈ​ಎ​ಸ್ಪಿಗೆ ಮಾಹಿತಿ ನೀಡಿದ್ದೇ ಅಕ್ರ​ಮದ ಕಿಂಗ್‌​ಪಿನ್‌ ಆರ್‌.​ಡಿ.​ಪಾ​ಟೀಲ. ಡಿವೈ​ಎ​ಸ್ಪಿಗೆ ಆರ್ಥಿಕ ನೆರವು ನೀಡುವ ಉದ್ದೇ​ಶ​ದಿಂದ ಆತನೇ ಈ ರೀತಿ ಮಾಡುವಂತೆ ಹೇಳಿ​ಕೊ​ಟ್ಟಿ​ದ್ದ. ಡಿವೈ​ಎಸ್ಪಿ ಬ್ಲ್ಯಾಕ್‌​ಮೇಲ್‌ ಮಾಡು​ತ್ತಿ​ರುವ ವಿಚಾರ ದಿವ್ಯಾ ಹಾಗ​ರಗಿ, ಕಾಶೀನಾಥ್‌ ತನ್ನ ಗಮ​ನಕ್ಕೆ ತಂದಾಗ ಎಲ್ಲರೂ ಸೇರಿ .20 ಲಕ್ಷ ಹೊಂದಿಸಿ ಕೊಡೋಣ ಎಂದು ಸಲಹೆಯನ್ನೂ ನೀಡಿ​ದ್ದ. ತಾನು ಯಾವುದೇ ಪಾಲು ಹಾಕದೆ ಕೇವ​ಲ ದಿವ್ಯಾ, ಕಾಶೀ​ನಾಥ್‌ ಹಾಗೂ ಬಂಧಿತ ಎಂಜಿ​ನಿ​ಯರ್‌ ಮಂಜು​ನಾಥ್‌ ಸೇರಿ ಹೊಂದಿ​ಸಿ​ಕೊ​ಟ್ಟಿದ್ದ .10 ಲಕ್ಷವನ್ನಷ್ಟೇ ಡಿವೈ​ಎ​ಸ್ಪಿಗೆ ತಲು​ಪಿ​ಸಿ​ದ್ದ. ಈ ವಿಚಾ​ರ​ವನ್ನು ಆರ್‌.​ಡಿ.​ಪಾ​ಟೀ​ಲ​ನೇ ಸಿಐಡಿ ಮುಂದೆ ಒಪ್ಪಿ​ಕೊಂಡಿ​ದ್ದಾನೆ ಎನ್ನ​ಲಾ​ಗಿ​ದೆ.