ಸಿಪಿಐ, ಮೂವರು ಪೇದೆಗಳು ಸಸ್ಪೆಂಡ್ಅಕ್ರಮಕ್ಕೆ ನೆರವಾದ, ಅಕ್ರಮವಾಗಿ ಪಾಸಾದ ಆರೋಪಕಲಬುರಗಿಯಲ್ಲಿ ಎಸ್ಐ ಬಂಧನ
ಕಲಬುರಗಿ (ಮೇ.5) ಕಲಬುರಗಿಯಲ್ಲಿ ನಡೆದ ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ (PSI REcruitment Scam) ಸಂಬಂಧಿಸಿ ಕಲಬುರಗಿಯ ಇಬ್ಬರು ಪೊಲೀಸ್ ಅಧಿಕಾರಿಗಳ (Police officers) ತಲೆದಂಡವಾಗಿದೆ. ಇಲಾಖೆಯ ಬೆರಳಚ್ಚು ವಿಭಾಗದ ಡಿವೈಎಸ್ಪಿ ಆರ್. ಆರ್. ಹೊಸ್ಮನಿ ( DySP Hosamani ) ಸೇರಿ ಐವರನ್ನು ಅಮಾನತು (Suspend) ಮಾಡಿ ಬುಧವಾರ ಆದೇಶ ಹೊರಡಿಸಲಾಗಿದೆ.
ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಮಹಿಳಾ ಪೊಲೀಸ್ ಠಾಣೆ ಸಿಪಿಐ ಆನಂದ ಸಾಗರ್ (Anand Sagar), ಗನ್ಮ್ಯಾನ್ ಅಯ್ಯಣ್ಣ ದೇಸಾಯಿ (Ayyanna Desai), ಕಾನ್ಸ್ಟೇಬಲ್ ರುದ್ರಗೌಡ (Rudra Gowda) ಮತ್ತು ಜೈಲರ್ ಚೇತನ್ ನಂದಗಾವ್ (Chetan Nandagoan) ಅಮಾನತು ಗೊಂಡ ಇತರೆ ಪೊಲೀಸ್ ಸಿಬ್ಬಂದಿ.
ಅಕ್ರಮಕ್ಕೆ ಸಾಥ್: ಕಳೆದ ಅ.3ರಂದು ನಡೆದಿದ್ದ ಪಿಎಸ್ಐ ನೇಮಕಾತಿ ಪರೀಕ್ಷೆವೇಳೆ ಜ್ಞಾನಜ್ಯೋತಿ ಶಾಲೆ ಕೇಂದ್ರದಲ್ಲಿ ನಿಯೋಜನೆಗೊಂಡಿದ್ದ ಡಿವೈಎಸ್ಪಿ ಆರ್.ಆರ್.ಹೊಸ್ಮನಿ, ಆನಂದ ಸಾಗರ್ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತು ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಹೊಸ್ಮನಿ ಹಾಗೂ ಇವರಿಗೆ ಸಹಾಯಕರಾಗಿದ್ದ ಸಿಪಿಐ ಆನಂದ ಸಾಗರ್ ಪರೀಕ್ಷೆ ಮುಗಿದ ಬಳಿಕ ಅರ್ಧ ಗಂಟೆಯಲ್ಲೇ ಕೊಠಡಿಯ ಸಿಸಿಟೀವಿಗಳನ್ನು ಮರೆಮಾಡಿದ್ದರು ಎನ್ನಲಾಗಿದೆ. ಈ ಮೂಲಕ ಕೋಣೆ ಮೇಲ್ವಿಚಾರಕರಿಗೆ ಅಭ್ಯರ್ಥಿಗಳ ಓಎಂಆರ್ಶೀಟ್ ತಿದ್ದಲು ಸಹಕರಿಸಿದ್ದರು ಎಂಬ ಶಂಕೆ ಇವರ ಮೇಲಿದೆ. ಇನ್ನು ಉಳಿದ ಮೂವರು ಕಾನ್ಸ್ಟೇಬಲ್ಗಳನ್ನು ಅಕ್ರಮ ಮಾರ್ಗದಲ್ಲಿ ಪರೀಕ್ಷೆ ಬರೆದು ಪಾಸಾದ ಆರೋಪದ ಮೇರೆಗೆ ಅಮಾನತುಮಾಡಲಾಗಿದೆ.
ಪಿಎಸ್ಐ ಅಕ್ರಮ: ಕಲಬುರಗಿಯಲ್ಲಿ ಎಸ್ಐ ಬಂಧನ
ಕಲಬುರಗಿ (ಮೇ.5): ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ಬೆಂಗಳೂರು ಮೂಲದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಬ್ ಇನ್ಸ್ಪೆಕ್ಟರ್ವೊಬ್ಬರನ್ನು ಮಂಗಳವಾರ ರಾತ್ರಿ ಸಿಐಡಿ ಬಂಧಿಸಿದೆ.
ಯಶ್ವಂತರಾಯಗೌಡ ಬಂಧಿತ ಆರೋಪಿ. ಈತನಿಗೂ ಕಲಬುರಗಿಯಲ್ಲಿ ನಡೆದ ಅಕ್ರಮಕ್ಕೂ ಸಂಬಂಧವಿಲ್ಲವಾದರೂ ಬೆಂಗಳೂರಲ್ಲಿ ನಡೆದ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ಸಿಐಡಿಗೆ ಬೇಕಾಗಿದ್ದ. ಹೀಗಾಗಿ ಈತನನ್ನು ಬೆಂಗಳೂರಿಗೆ ಕರೆದೊಯ್ಯಲಾಗುತ್ತದೆ ಎಂದು ಸಿಐಡಿ ಮೂಲಗಳು ಹೇಳಿವೆ.
PSI SCAM: ಪ್ಲಾಟೂ ಹೋಯ್ತು, ಪೋಸ್ಟೂ ಹೋಯ್ತು, ಅಪ್ಪ ಮಗ ಜೈಲು ಪಾಲಾಗಬೇಕಾಯ್ತು
2021ರಲ್ಲಿ ಕೈಗಾರಿಕಾ ಭದ್ರತಾ ಪಡೆಯ ಎಸ್ಐ ಆಗಿ ಆಯ್ಕೆಯಾಗಿದ್ದ ಯಶ್ವಂತರಾಯ, 545 ಪಿಎಸ್ಐ ಪರೀಕ್ಷೆಯನ್ನೂ ಬರೆದು ಪಾಸ್ ಆಗಿದ್ದ. ಏ.22 ರಂದು ಈತ ಬೆಂಗಳೂರಿನ ಸಿಐಡಿ ಕಚೇರಿಗೆ ತೆರಳಿ ತನ್ನೆಲ್ಲ ದಾಖಲೆಗಳನ್ನು ಪರಿಶೀಲನೆಗೊಳಪಡಿಸಿದ್ದ. ವಾರದ ಹಿಂದಷ್ಟೇ ಕಲಬುರಗಿ ನಾಗನಹಳ್ಳಿ ಪೊಲೀಸ್ ತರಬೇತಿ ಶಾಲೆಗೆ ತರಬೇತಿಗೆಂದು ಹಾಜರಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸುವ ಅಗತ್ಯವಿರುವುದರಿಂದ ಸದ್ಯ ಕಲಬುರಗಿಯಲ್ಲಿ ವಶಕ್ಕೆ ಪಡೆದು, ಬೆಂಗಳೂರು ಸಿಐಡಿ ಅಧಿಕಾರಿಗಳಿಗೆ ಒಪ್ಪಿಸಲಾಗುತ್ತಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.
ನಿನ್ನಿಂದಾಗಿ ಅಪ್ಪ ಜೈಲಿನಲ್ಲಿದ್ದಾನೆ, ಇದಕ್ಕೆಲ್ಲಾ ನೀನೆ ಕಾರಣ: ದಿವ್ಯಾಳ ನಿಂದಿಸಿದ ಮಕ್ಕಳು!
ದುಡ್ಡುಪಡೆದವರ ಹೆಸರು ಹೇಳೋ ಧೈರ್ಯ ಇದೆಯಾ?
ಯಾದಗಿರಿ: ಪಿಎಸ್ಐ ನೇಮಕ ಪರೀಕ್ಷೆ ಅಕ್ರಮದಲ್ಲಿ ವಿಧಾನಸೌಧದಲ್ಲಿರುವವರಿಗೂ ದುಡ್ಡು ಹೋಗಿದೆ ಎಂಬ ಶಾಸಕ ಪ್ರಿಯಾಂಕ್ ಖರ್ಗೆ ( Priyankh Kharge ) ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadeesh Shettar) ತೀವ್ರ ಕಿಡಿಕಾರಿದ್ದಾರೆ. ಪ್ರಿಯಾಂಕ್ ಖರ್ಗೆಗೆ ದುಡ್ಡು ಪಡೆದವರ ಹೆಸರು ಹೇಳುವ ಧೈರ್ಯ ಇದೆಯಾ? ಎಂದು ಸವಾಲು ಹಾಕಿದ್ದಾರೆ. ಪ್ರಿಯಾಂಕ್ ಖರ್ಗೆ ಅವರದ್ದು ಬೆಳಗಿನಿಂದ ಸಾಯಂಕಾಲದ ತನಕ ಇದೇ ಆಯ್ತು. ಸಿಐಡಿಗೆ ಒಂದು ಸಣ್ಣ ಸಾಕ್ಷ್ಯವನ್ನಾದರೂ ಕೊಟ್ಟಿದ್ದಾರಾ? ಮೊದಲು ಸರಿಯಾದ ಮಾಹಿತಿ ಕೊಡುವ ಕೆಲಸ ಮಾಡಲಿ, ಸುಖಾ ಸುಮ್ಮನೆ ಆರೋಪ ಮಾಡುವುದಲ್ಲ ಎಂದು ಹೇಳಿದರು.
