Asianet Suvarna News Asianet Suvarna News

ಒಂದಾದ ಲಕ್ಷ್ಮೀ ಹೆಬ್ಬಾಳ್ಕರ್ - ಜಾರಕಿಹೊಳಿ ಸಹೋದರರು

ಮಾಜಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಇದೀಗ ತಮ್ಮ ಹಳೆಯ ವೈಷಮ್ಯವನ್ನು ಮರೆತು ಒಂದಾಗಿದ್ದಾರೆ. ಇದರಿಂದ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತದ ಚುಕ್ಕಾಣಿ ಕಾಂಗ್ರೆಸ್ ಪಾಲಾಗಿದೆ. 

Problem resolved In Jarkiholi Brothers And Lakshmi hebbalkar
Author
Bengaluru, First Published Oct 16, 2018, 11:10 AM IST

ಬೆಳಗಾವಿ: ಮಾಜಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ತಮ್ಮ ವೈಯಕ್ತಿಕ ಪ್ರತಿಷ್ಠೆಯನ್ನು ಒದಿಗಿಟ್ಟು ಒಂದಾದ ಪರಿಣಾಮ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತದ ಚುಕ್ಕಾಣಿ ಕಾಂಗ್ರೆಸ್ ಪಾಲಾಗಿದೆ. 

ಇದೇವೇಳೆ ಕಳೆದ ಸಾಲಿನಲ್ಲಿ ಇವರಿಬ್ಬರ ಜಟಾಪಟಿಯ ಲಾಭ ಪಡೆದಿದ್ದ ಎಂಇಎಸ್ ಮತ್ತು ಬಿಜೆಪಿಗೆ ಈ ಬಾರಿ ಮುಖಭಂಗವಾಗಿದೆ.

ಸತೀಶ ಜಾರಕಿಹೊಳಿ ಅವರ ಬೆಂಬಲಿಗ ಕಾಕತಿಯ ಆನಂದ ಪಾಟೀಲ್ ಅಧ್ಯಕ್ಷರಾಗಿ ಮತ್ತು ಲಕ್ಷ್ಮಿ ಹೆಬ್ಬಾಳಕರ್ ಅವರ ಬೆಂಬಲಿಗ ಬಸವನ ಕುಡಚಿಯ ಸುಧೀರ ಗಡ್ಡೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

Follow Us:
Download App:
  • android
  • ios