Asianet Suvarna News Asianet Suvarna News

ರಾಮನಗರ: ಎರಡ್ಮೂರು ಪಂಚಾ​ಯಿ​ತಿ​ಗೊಂದು ಮಾದ​ರಿ ಶಾಲೆ: ಡಿಕೆ​ಶಿ

ಇಡೀ ರಾಜ್ಯಕ್ಕೆ ಅನ್ವ​ಯ​ವಾ​ಗುವಂತೆ ಎರಡು - ಮೂರು ಗ್ರಾಮ ಪಂಚಾ​ಯಿ​ತಿಗೆ ಒಂದು ನವೋ​ದಯ ಅಥವಾ ಸಿಬಿ​ಎಸ್ಸಿ ಮಾದರಿಯಲ್ಲಿ ಶಾಲೆ ಪ್ರಾರಂಭಿಸುವಂತೆ ಉಪ​ಮು​ಖ್ಯಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಸಾರ್ವ​ಜ​ನಿಕ ಶಿಕ್ಷಣ ಇಲಾಖೆ ಉಪ​ನಿ​ರ್ದೇ​ಶ​ಕ​ರಿ​ಗೆ​ ಸೂಚನೆ ನೀಡಿ​ದ​ರು.

One model school for two or three panchayats says DK shivakumar dcm at ramanagar rav
Author
First Published Jun 27, 2023, 1:05 AM IST | Last Updated Jun 27, 2023, 1:06 AM IST

ರಾಮ​ನ​ಗರ (ಜೂ.27): ಇಡೀ ರಾಜ್ಯಕ್ಕೆ ಅನ್ವ​ಯ​ವಾ​ಗುವಂತೆ ಎರಡು - ಮೂರು ಗ್ರಾಮ ಪಂಚಾ​ಯಿ​ತಿಗೆ ಒಂದು ನವೋ​ದಯ ಅಥವಾ ಸಿಬಿ​ಎಸ್ಸಿ ಮಾದರಿಯಲ್ಲಿ ಶಾಲೆ ಪ್ರಾರಂಭಿಸುವಂತೆ ಉಪ​ಮು​ಖ್ಯಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಸಾರ್ವ​ಜ​ನಿಕ ಶಿಕ್ಷಣ ಇಲಾಖೆ ಉಪ​ನಿ​ರ್ದೇ​ಶ​ಕ​ರಿ​ಗೆ​ ಸೂಚನೆ ನೀಡಿ​ದ​ರು.

ನಗರದಲ್ಲಿ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತ​ನಾ​ಡಿದ ಅವರು, ರಾಜ್ಯ​ದ ಹಲ​ವೆಡೆ ಇದೇ ಮಾದ​ರಿಯ 20 ಶಾಲೆ​ಗ​ಳನ್ನು ಪ್ರಾರಂಭಿ​ಸುವ ಚಿಂತ​ನೆ​ಯಿದೆ. ಜಿಲ್ಲೆಯ ಜನ​ರಿಗೆ ಶುದ್ಧ ಕುಡಿ​ಯುವ ನೀರು ಒದ​ಗಿ​ಸುವ ಉದ್ದೇ​ಶ​ದಿಂದ ಶುದ್ಧ ಕುಡಿ​ಯುವ ನೀರಿನ ಘಟಕ ಸ್ಥಾಪಿಸಿ ಕ್ರಾಂತಿ ಮಾಡಿ​ದೆವು. ಅದೇ ರೀತಿ ಶಿಕ್ಷ​ಣದ ವಿಚಾ​ರ​ದ​ಲ್ಲಿಯೂ ಬದ​ಲಾ​ವಣೆ ತರಬೇಕಿದೆ. ಎರಡು - ಮೂರು ಪಂಚಾ​ಯಿ​ತಿಗೆ ಒಂದು ಮಾದರಿ ಶಾಲೆ ಪ್ರಾರಂಭಿ​ಸು​ವುದು ನನ್ನ ಕನ​ಸಿನ ಯೋಜ​ನೆಯಾಗಿದೆ. ಗ್ರಾಮೀಣರು ಮಕ್ಕಳ ಶಿಕ್ಷ​ಣದ ಉದ್ದೇ​ಶ​ದಿಂದ ನಗರ ಪ್ರದೇ​ಶ​ಗ​ಳಿಗೆ ವಲಸೆ ಬರು​ವು​ದನ್ನು ತಪ್ಪಿ​ಸುವುದು ಪ್ರಮುಖ ಉದ್ದೇಶ ಎಂದು ಹೇಳಿ​ದ​ರು.

ಅರಣ್ಯ ಇಲಾಖೆ ಪರಿ​ಸರ ಸಂರಕ್ಷಿಸುವ ನಿಟ್ಟಿ​ನಲ್ಲಿ ಗಿಡ​ಗ​ಳನ್ನು ನೆಟ್ಟು ಪೋಷಿ​ಸಲು ಶಾಲೆ​ಗ​ಳೊಂದಿಗೆ ಒಪ್ಪಂದ ಮಾಡಿ​ಕೊ​ಳ್ಳ​ಬೇಕು. ಮಕ್ಕಳ ಹೆಸ​ರಿ​ನ​ಲ್ಲಿಯೇ ಗಿಡ​ಗ​ಳನ್ನು ನೆಟ್ಟು ಅದರ ಪಾಲನೆ ಪೋಷಣೆ ಜವಾ​ಬ್ದಾ​ರಿ​ಯನ್ನು ವಿದ್ಯಾ​ರ್ಥಿ​ಗ​ಳಿಗೆ ನೀಡ​ಬೇಕು. ಸುಳ್ಳು ಲೆಕ್ಕ​ದಲ್ಲಿ ಗಿಡ ನೆಡ​ಬೇಡಿ, ಗಾಂಧಿ ಲೆಕ್ಕ ಬರೆ​ಯ​ಬೇಡಿ ಎಂದು ತಾಕೀತು ಮಾಡಿ​ದ​ರು.

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸ್ತವ್ಯವಿರಿ: ಡಿಸಿಎಂ ಡಿಕೆ ಶಿವಕುಮಾರ ಸೂಚನೆ

ವಾರಕ್ಕೊಮ್ಮೆ ಕಂದಾಯ ಅದಾ​ಲತ್‌:

ಶಾಸಕ ಬಾಲ​ಕೃಷ್ಣ ಮಾತ​ನಾಡಿ, ಜಿಲ್ಲಾ​ಮ​ಟ್ಟದ ಅಧಿ​ಕಾ​ರಿ​ಗಳು ಮಧ್ಯಾ​ಹ್ನ​ದೊ​ಳಗೆ ಸಭೆಗ​ಳನ್ನು ಪೂರ್ಣ​ಗೊ​ಳಿ​ಸ​ಬೇಕು. ಮಧ್ಯಾ​ಹ್ನದ ನಂತರ ತಾಲೂಕು ಅಧಿ​ಕಾ​ರಿ​ಗಳು ಕಚೇ​ರಿ​ಗ​ಳಲ್ಲಿ ಕಡ್ಡಾ​ಯ​ವಾಗಿ ಜನ ಸಾಮಾ​ನ್ಯ​ರಿಗೆ ಸಿಗು​ವಂತಾ​ಗ​ಬೇಕು. ಜಿಲ್ಲಾ​ಧಿ​ಕಾ​ರಿ​ಗಳು ತಾಲೂ​ಕು​ಗ​ಳಿಗೆ ಭೇಟಿ ನೀಡ​ಬೇಕು. ಅಪರ ಜಿಲ್ಲಾ​ಧಿ​ಕಾರಿ, ಉಪ​ವಿ​ಭಾ​ಗಾ​ಧಿ​ಕಾರಿ ಹಾಗೂ ಹೆಚ್ಚು​ವರಿ ಪೊಲೀಸ್‌ ವರಿಷ್ಠಾ​ಧಿ​ಕಾ​ರಿ​ಗಳು ಹೋಬಳಿ ಕೇಂದ್ರ​ಗ​ಳಿಗೆ ಭೇಟಿ ನೀಡಿ ಅಹ​ವಾಲು ಆಲಿ​ಸಿ ಬಗೆ​ಹ​ರಿ​ಸ​ಬೇಕು ಎಂದು ಸಲಹೆ ನೀಡಿ​ದ​ರು.

ಇದಕ್ಕೆ ಪ್ರತಿ​ಕ್ರಿ​ಯಿ​ಸಿದ ಡಿ.ಕೆ.​ಶಿ​ವ​ಕು​ಮಾರ್‌, ವಾರ​ದಲ್ಲಿ ಒಂದು ದಿನ ಹೋಬ​ಳಿ​ವಾರು ಕಂದಾಯ ಅದಾ​ಲತ್‌ ಆಯೋ​ಜಿಸಬೇಕು. ಕಂದಾಯ ಇಲಾ​ಖೆಗೆ ಸಂಬಂಧಿ​ಸಿದ ಎಲ್ಲ ಅಧಿ​ಕಾ​ರಿ​ಗಳು ಕಡ್ಡಾ​ಯ​ ಹಾಜ​ರಾ​ಗ​ಬೇಕು.ಯಾವುದೇ ಕಾಮಗಾರಿ ಪ್ರಾರಂಭಕ್ಕೂ ಮುನ್ನಾ ಹಾಗೂ ಮುಗಿದ ನಂತರ ವಿಡಿಯೋ, ಪೋಟೋ ತೆಗೆಯಬೇಕು. ಕೆಲಸ ಪ್ರಗತಿ ಪ್ರತಿ ಹಂತದ ವಿಡಿಯೋ, ಫೋಟೋ ಇರಬೇಕು. ಕಳ್ಳಬಿಲ್ಲು, ಡಬಲ… ಎಂಟ್ರಿಗೆ ಆಸ್ಪದ ಇಲ್ಲದಂತೆ ಎಚ್ಚರ ವಹಿಸಬೇ​ಕು. ಎರಡು ಇಲಾಖೆ, ಎರಡು ಬಿಲ… ಸೃಷ್ಟಿಮಾಡಿದರೆ ಕ್ರಮ ಜರು​ಗಿ​ಸು​ತ್ತೇವೆ. ರಸ್ತೆ ಮ್ಯಾಪಿಂಗ್‌ ಮಾಡಿ. ಯಾವ ಇಲಾಖೆ ಅನುದಾನ, ಶಾಸ​ಕರು ಹಾಗೂ ಸಂಸ​ದರ ಅನು​ದಾ​ನದ ಬಗ್ಗೆ ವಿವರ ಇಡು​ವಂತೆ ಅಧಿ​ಕಾ​ರಿ​ಗ​ಳಿಗೆ ತಿಳಿ​ಸಿ​ದರು.

ಸರ್ಕಾರಿ ಆಸ್ತಿ ಒತ್ತುವರಿ ಮಾಡಿರುವ ಬಗ್ಗೆ ಪಟ್ಟಿಮಾಡಬೇಕು. ಬಂದಿರುವ ಅನುದಾನ, ಆಗಿ​ರುವ ಕೆಲಸದ ಬಗ್ಗೆ ವಿವರ ಕೊಡಬೇಕು. ಜಲ ಜೀವನ್‌ ಮಿಷನ್‌ ಸೇರಿ​ದಂತೆ ಕುಡಿಯುವ ನೀರು ಪೂರೈಕೆ ಯೋಜನೆಗಳ ಪ್ರಗತಿಯ ಸಂಪೂರ್ಣ ವಿವರ ಸಲ್ಲಿ​ಸು​ವಂತೆ ಹೇಳಿ​ದರು.

ರಸ್ತೆಯಲ್ಲಿ ಬೆಳೆಗಳ ಕಣ ಮಾಡಲು ಅವಕಾಶ ಕೊಡಬೇಡಿ. ಟ್ರಾಕ್ಟರ್‌ಗಳಿಗೆ ಡ್ರೈವಿಂಗ್‌ ಲೈಸೆ®್ಸ…, ಇನ್ಸೂರೆ®್ಸ… ಕಡ್ಡಾಯವಾಗಿ ಇರಬೇಕು. ಇದಕ್ಕೆ 100 ದಿನಗಳ ಗಡುವು ನೀಡು​ತ್ತಿದ್ದು, ಕರ​ಪತ್ರ ಹಂಚಿ ಪ್ರಚಾರ ಮಾಡಿ ಹೋಬಳಿವಾರು ಅಭಿಯಾನ ನಡೆ​ಸು​ವಂತೆ ಶಿವ​ಕು​ಮಾರ್‌ ಸಲಹೆ ನೀಡಿ​ದರು.

ಚರಂಡಿಯಲ್ಲಿ ಕುಡಿವ ನೀರಿನ ಪೈಪು ಅಳವಡಿಕೆ: ಅಧಿಕಾರಿ ಅಮಾನತಿಗೆ ಡಿಸಿಎಂ ಸೂಚನೆ

ರಾಮ​ನ​ಗ​ರ: ಕನಕಪುರದ ಗೇರಳ್ಳಿಯಲ್ಲಿ ಒಳಚರಂಡಿಯೊಳಗೆ ಕುಡಿಯುವ ಪೈಪು ಅಳವಡಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಅಧಿಕಾರಿಗಳನ್ನು ಅಮಾನತು ಮಾಡುವಂತೆ ಉಪ ಮುಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಅವರು ಜಿಪಂ ಸಿಇಒ ದಿಗ್ವಿ​ಜಯ್‌ ಬೋಡ್ಕೆ ಅವ​ರಿಗೆ ಆದೇಶಿಸಿದರು.

ಕೆಡಿಪಿ ಸಭೆಯಲ್ಲಿ ಫೋಟೋ ಪ್ರದರ್ಶಿಸಿದ ಶಿವಕುಮಾರ್‌, ಒಳಚರಂಡಿಯಲ್ಲಿ ಕುಡಿಯುವ ನೀರು ಪೈಪು ಅಳವಡಿಸಿದ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದರು. ತಕ್ಷಣವೇ ಆ ಅಧಿಕಾರಿಗಳ ಅಮಾನತು ಮಾಡು​ವಂತೆ ಆದೇಶ ನೀಡಿದರು.

ಡಿ.ಕೆ.ಶಿವಕುಮಾರ್‌ ಭೇಟಿ ಬಗ್ಗೆ ಯತ್ನಾಳ್‌, ಬೊಮ್ಮಾಯಿ ಮಧ್ಯೆ ಘರ್ಷಣೆ

ಶ್ರೀಗಳ ಹುಟ್ಟೂ​ರಿನ ಅಭಿ​ವೃದ್ಧಿ ವರದಿ ಸಲ್ಲಿ​ಸಿ:

ಲಿಂಗೈಕ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು ವೀರಾಪುರ, ಆದಿ ಚುಂಚನಗಿರಿ ಮ​ಠದ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಜನ್ಮ ಸ್ಥಳ ಬಾನಂದೂರು ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಸಮಾಧಿ ಸ್ಥಳ ಕೆಂಪಾಪುರದ ಅಭಿವೃದ್ಧಿ ಕಾಮಗಾರಿ ಪ್ರಗತಿ ವರದಿ ನೀಡುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಶಿ​ವ​ಕು​ಮಾರ್‌ ಸೂಚನೆ ನೀಡಿದರು. ಸ್ವಾಮೀಜಿಗಳ ಪ್ರತಿಮೆ ನಿರ್ಮಾಣ ಎಲ್ಲಿಗೆ ಬಂತು, ಅವರ ಹುಟ್ಟೂರುಗಳ ಅಭಿವೃದ್ಧಿ ಕೆಲಸ ಏನಾಗಿದೆ ಎಂಬ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Latest Videos
Follow Us:
Download App:
  • android
  • ios