ಜನರ ಆರೋಗ್ಯ, ಸಾಮಾಜಿಕ ಕಳಕಳಿಯಿಂದ ಕಠಿಣ ಕ್ರಮ ಜಾರಿ| ರೈತರಿಗೆ ಎಂದಿಗೂ ಸಮಸ್ಯೆಯಾಗಲು ಬಿಡುವುದಿಲ್ಲ| ಕೋವಿಡ್‌ ಸಮಯದಲ್ಲಿಯೂ ರೈತರ ಎಲ್ಲಾ ಚಟುವಟಿಕೆಗಳಿಗೂ ಆರಂಭದಿಂದಲೂ ಅನುಮತಿ ನೀಡಲಾಗಿದೆ: ಕೆ ಸುಧಾಕರ್| 

ಬೆಂಗಳೂರು(ಡಿ.24): ನೈಟ್‌ ಕರ್ಫ್ಯೂನಿಂದಾಗಿ ವರ್ತಕರಿಗೆ ನಷ್ಟವಾದರೂ ಜನರ ಆರೋಗ್ಯ ದೃಷ್ಟಿಯಿಂದ ಸಹಕಾರ ನೀಡಬೇಕು ಮತ್ತು ಅವರು ಸಹ ಸಾಮಾಜಿಕ ಕಳಕಳಿ, ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. 

Add Asianetnews Kannada as a Preferred SourcegooglePreferred

"

ಅವರು, ಅನಿವಾರ್ಯ ಇರುವ ಕಾರಣ ನೈಟ್‌ ಕರ್ಫ್ಯೂ ತೀರ್ಮಾನ ಕೈಗೊಳ್ಳಲಾಗಿದೆ. ಜನರ ಸುಕರ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಕೆಲವರಿಗೆ ತೊಂದರೆಯಾಗಲಿದೆ ಎಂಬುದನ್ನು ತಕ್ಕಮಟ್ಟಿಗೆ ಒಪ್ಪಿಕೊಳ್ಳುತ್ತೇವೆ. ಆದರೆ, ಅವಶ್ಯಕತೆ ಇರುವ ಕಾರಣ ಕ್ರಮ ಜರುಗಿಸಲಾಗಿದೆ. ಸಂಜೆ 7 ಗಂಟೆಯಿಂದ ಕರ್ಫ್ಯೂ ಜಾರಿ ಮಾಡಿಲ್ಲ, ರಾತ್ರಿ 11 ಗಂಟೆಯಿಂದ ಮಾಡಲಾಗಿದೆ. ಎಲ್ಲರೂ ಅಷ್ಟರಲ್ಲಿ ಮನೆ ಸೇರಿಕೊಳ್ಳಬಹುದು. ವರ್ತಕರಿಗೆ ನಷ್ಟವಾಗಬಹುದು. ಆದರೆ ಅವರಿಗೂ ಸಾಮಾಜಿಕ ಜವಾಬ್ದಾರಿ ಇರಬೇಕು ಎಂದು ಹೇಳಿದರು.

ರಾಜ್ಯದಲ್ಲಿ ನೈಟ್ ಕರ್ಫ್ಯೂ, ಯಾವುದಕ್ಕೆಲ್ಲ ಅವಕಾಶ? ಇಲ್ಲಿದೆ ವಿವರ

ಕೇವಲ ಸಂಪಾದನೆ, ಆರ್ಥಿಕ ಚಟುವಟಿಕೆಯನ್ನು ಮಾತ್ರ ನೋಡುವುದು ಸರಿಯಲ್ಲ. ಜನರ ಸುರಕ್ಷತೆ, ಆರೋಗ್ಯವನ್ನು ಸಹ ನೋಡಬೇಕಾಗಿರುವುದು ಬಹಳ ಮುಖ್ಯವಾಗಿರುತ್ತದೆ. ಕೇವಲ ಒಂಭತ್ತು ದಿನ ಮಾತ್ರ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ಒಂಭತ್ತು ದಿನದಲ್ಲಿ ನಾವು ರೂಪಾಂತರ ವೈರಾಣು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎನ್ನುವುದನ್ನು ಅಧ್ಯಯನ ಮಾಡಲು ಸಹಾಯವಾಗಲಿದೆ. ಇದಕ್ಕೆ ಸಹಕಾರ ನೀಡಬೇಕು. ಅಗತ್ಯ ಸೇವೆಗಳಿಗೆ ಯಾವುದೇ ನಿರ್ಬಂಧ ಇಲ್ಲ, ಈ ಬಗ್ಗೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ ಎಂದರು.

ರೈತರಿಗೆ ಎಂದಿಗೂ ಸಮಸ್ಯೆಯಾಗಲು ಬಿಡುವುದಿಲ್ಲ. ಕೋವಿಡ್‌ ಸಮಯದಲ್ಲಿಯೂ ರೈತರ ಎಲ್ಲಾ ಚಟುವಟಿಕೆಗಳಿಗೂ ಆರಂಭದಿಂದಲೂ ಅನುಮತಿ ನೀಡಲಾಗಿದೆ. ಈಗಲೂ ಯಾವುದೇ ಸಮಸ್ಯೆಯಾಗುವುದಿಲ್ಲ. ಬಸ್‌ ಸಂಚಾರಕ್ಕೂ ತೊಂದರೆಯಾಗುವುದಿಲ್ಲ. ಈ ಕುರಿತು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದರು.