Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್: ಅಪಘಾತ ಪ್ರಮಾಣ ಶೇ.70ರಷ್ಟು ಇಳಿಕೆ!

ಅಪಘಾತ ಪ್ರಮಾಣ ಶೇ.70ರಷ್ಟು ಇಳಿಕೆ|  ಲಾಕ್‌ಡೌನ್‌ ಎಫೆಕ್ಟ್| ನೂರಾರು ಜನರ ಪ್ರಾಣ ರಕ್ಷಣೆ|  ಏಪ್ರಿಲ್‌ನಲ್ಲಿ ಸರಾಸರಿ 7 ಜನ ಬಲಿ

Lockdown Effect 70 Percent Decrease In Accidents rate In Karnataka
Author
Bangalore, First Published Jun 2, 2020, 7:56 AM IST

ಬೆಂಗಳೂರು(ಜೂ.02): ಲಾಕ್‌ಡೌನ್‌ ಪರಿಣಾಮ ಏಪ್ರಿಲ್‌ ತಿಂಗಳಿನಲ್ಲಿ ರಾಜ್ಯದಲ್ಲಿ ಶೇ.70 ರಷ್ಟುಪ್ರಮಾಣ ಅಪಘಾತ ಪ್ರಕರಣಗಳು ಕಡಿಮೆಯಾಗಿದ್ದು, ನೂರಾರು ಜನರ ಪ್ರಾಣ ಉಳಿದಿರುವ ಸಂಗತಿ ರಾಜ್ಯ ಅಪರಾಧ ದಾಖಲಾತಿ ಕೇಂದ್ರ (ಎಸ್‌ಸಿಆರ್‌ಬಿ) ಸೋಮವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ಉಲ್ಲೇಖವಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ರಾಜ್ಯದಲ್ಲಿ ಅಪಘಾತಗಳಲ್ಲಿ ಪ್ರತಿ ದಿನ ಸರಾಸರಿ ಏಳು ಮಂದಿ ಮೃತಪಟ್ಟು, 22 ಮಂದಿ ಗಾಯಗೊಂಡಿದ್ದಾರೆ. ಆದರೆ ಸಾಮಾನ್ಯ ದಿನಗಳಲ್ಲಿ ಸಾವು-ನೋವಿನ ಪ್ರಮಾಣ ಹೆಚ್ಚಿನದಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಯುಪಿಗೆ ಹೊರಟಿದ್ದ ಶ್ರಮಿಕ್‌ ರೈಲು ತಲುಪಿದ್ದು ಒಡಿಶಾಗೆ: ವಲಸೆ ಕಾರ್ಮಿಕರು ಕಂಗಾಲು!

ಕೊರೋನಾ ಸೋಂಕು ನಿಯಂತ್ರಣ ಸಲುವಾಗಿ ಮಾ.22 ರಿಂದ ಏ.30 ವರೆಗೆ ಕಟ್ಟು ನಿಟ್ಟಿನ ಲಾಕ್‌ಡೌನ್‌ ಜಾರಿಯಲ್ಲಿತ್ತು. ಈ ಅವಧಿಯಲ್ಲಿ ವೈದ್ಯಕೀಯ ತುರ್ತು ಸೇವೆ ಹಾಗೂ ಅಗತ್ಯ ವಸ್ತುಗಳ ಪೂರೈಸುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಏಪ್ರಿಲ್‌ನಲ್ಲಿ ಸಂಪೂರ್ಣವಾಗಿ ಜನ ಸಂಚಾರ ಸ್ಥಗಿತವಾಗಿತ್ತು.

ದಿನದ ಸರಾಸರಿ ಸಾವು:

ಹೀಗಿದ್ದರೂ ಏಪ್ರಿಲ್‌ನಲ್ಲಿ 199 ಅಪಘಾತ ಸಂಭವಿಸಿ 211 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಸಣ್ಣಪುಟ್ಟ667 ಅವಘಡಗಳಲ್ಲಿ 885 ಮಂದಿ ಗಾಯಗೊಂಡಿದ್ದಾರೆ. ಈ ಅಂಕಿ ಅಂಶಗಳ ಆಧಾರದಲ್ಲಿ ಏಪ್ರಿಲ್‌ನಲ್ಲಿ ಪ್ರತಿದಿನ ರಸ್ತೆ ಅಪಘಾತಕ್ಕೆ 7 ಮಂದಿ ಜೀವ ತೆತ್ತಿದ್ದಾರೆ. 22 ಮಂದಿ ಗಾಯಗೊಂಡಿದ್ದಾರೆ. ಸಾಮಾನ್ಯ ದಿನಗಳು ಅಂದರೆ ಲಾಕ್‌ಡೌನ್‌ಗೂ ಮುನ್ನ ಜನವರಿ, ಫೆಬ್ರವರಿ ಮತ್ತು ಮಾಚ್‌ರ್‍ನಲ್ಲಿ ಅಂದಾಜು ದಿನಕ್ಕೆ 23 ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತ ಸಹ ಜನವರಿಯಲ್ಲಿ 3780, ಫೆಬ್ರವರಿಯಲ್ಲಿ 3660 ಮತ್ತು ಮಾಚ್‌ರ್‍ನಲ್ಲಿ 3028 ಪ್ರಕರಣಗಳು ದಾಖಲಾಗಿವೆ ಎಂದು ಎಸ್‌ಸಿಆರ್‌ಬಿ ಬಿಡುಗಡೆ ಮಾಡಿರುವ ವರದಿಯಲ್ಲಿ ಬೆಳಕಿಗೆ ಬಂದಿದೆ.

ಹೆದ್ದಾರಿಗಿಂತ ಅಡ್ಡದಾರಿಯಲ್ಲಿ ಸಾವು

ಲಾಕ್‌ಡೌನ್‌ ವೇಳೆ ಪೊಲೀಸ ಕಣ್ತಪ್ಪಿಸಿ ಓಡಾಟ ನಡೆಸಿದ ಅಡ್ಡ ದಾರಿಗಳಲ್ಲೇ ಹೆಚ್ಚಿನ ಅಪಘಾತ ಸಂಭವಿಸಿರುವುದು ಸಹ ಗಮನಾರ್ಹ ಅಂಶವಾಗಿದೆ.

ಶ್ರಮಿಕ್‌ ಎಕ್ಸ್‌ಪ್ರೆಸ್‌ ರೈಲಲ್ಲಿ 20 ದಿನಗಳಲ್ಲಿ 21 ಶಿಶುಗಳ ಜನನ!

ಏಪ್ರಿಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 191 ಅಪಘಾತಗಳು ಸಂಭವಿಸಿ 48 ಮಂದಿ ಬಲಿಯಾಗಿದ್ದಾರೆ. ಅದೇ ರಾಜ್ಯ ಹೆದ್ದಾರಿಯಲ್ಲಿ 194 ಅವಘಡಗಳ ಸಂಭವಿಸಿ 67 ಜೀವಗಳು ನಂದಿವೆ. ಇತರೆ ರಸ್ತೆಗಳಲ್ಲಿ 481 ಅಪಘಾತದಲ್ಲಿ 96 ಮಂದಿ ಮೃತಪಟ್ಟಿದ್ದಾರೆ ಎಂಬುದು ಎಸ್‌ಸಿಆರ್‌ಬಿ ವರದಿಯಲ್ಲಿ ಹೇಳಲಾಗಿದೆ.

ಲಾಕ್‌ಡೌನ್‌ ಇಲ್ಲದ ದಿನ ಹೆದ್ದಾರಿ ಅಪಾಯಕಾರಿ

ಲಾಕ್‌ಡೌನ್‌ ಹೊರತುಪಡಿಸಿ ಸಾಮಾನ್ಯ ದಿನಗಳಲ್ಲಿ ಜನರ ಪಾಲಿಗೆ ರಾಷ್ಟ್ರೀಯ ಹೆದ್ದಾರಿಗಳೇ ಅಪಾಯಕಾರಿಯಾಗಿ ಪರಿಣಿಸುತ್ತದೆ ಎಂದು ಅಂಕಿ ಅಂಶಗಳು ಎಚ್ಚರಿಕೆ ನೀಡುತ್ತವೆ.

ಮಾಚ್‌ರ್‍ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 907 ಅಪಘಾತ ಸಂಭವಿಸಿ 281 ಸಾವನ್ನಪ್ಪಿದ್ದಾರೆ. ರಾಜ್ಯ ಹೆದ್ದಾರಿಗಳಲ್ಲಿ 781 ಅಪಘಾತ ಪ್ರಕರಣಗಳಲ್ಲಿ 241 ಹಾಗೂ ಇತರ ರಸ್ತೆಗಳಲ್ಲಿ 1340 ಅಪಘಾತದಲ್ಲಿ 290 ಜನರು ಜೀವ ತೆತ್ತಿದ್ದಾರೆ.

Follow Us:
Download App:
  • android
  • ios