11:32 PM (IST) Aug 15

Karnataka News Live 15th August: ಶಿಕ್ಷಕರ ನೇಮಕಾತಿ - ವಯೋಮಿತಿ ಸಡಿಲಿಕೆ, ಗಣಿತ ಮತ್ತು ವಿವಿಧ ಭಾಷಾ ಅಭ್ಯರ್ಥಿಗಳಿಗೆ ಅವಕಾಶಕ್ಕೆ ಆಗ್ರಹ

ಕರ್ನಾಟಕ ಶಿಕ್ಷಕರ ನೇಮಕಾತಿ 2026ರಲ್ಲಿ ವಯೋಮಿತಿ ಸಡಿಲಿಕೆ, ಗಣಿತ ಶಿಕ್ಷಕರ ಖಾಲಿ ಹುದ್ದೆಗಳ ಸೇರ್ಪಡೆ ಹಾಗೂ ಭಾಷಾ ವೈವಿಧ್ಯತೆಯ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವಂತೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಆಗ್ರಹಿಸಿದೆ.

Read Full Story
11:28 PM (IST) Aug 15

Karnataka News Live 15th August: ಆಪ್ ಕೀ ಅದಾಲತ್‌ನಲ್ಲಿ ರಜತ್‌ಗೆ ಕೌಂಟರ್ ಕೊಟ್ಟ ಯಶ್; ಕನ್ನಡಿಗನ ಮಾತಿಗೆ ಇಡೀ ವಿಶ್ವವೇ ಪಿದಾ! ವೈರಲ್‌ ಆದ ರಾಕಿಭಾಯ್ ಆ ಒಂದು ಡೈಲಾಗ್!

'ಆಪ್ ಕೀ ಅದಾಲತ್' ಕಾರ್ಯಕ್ರಮದಲ್ಲಿ 'ಟಾಕ್ಸಿಕ್' ಸಿನಿಮಾ ಕುರಿತ ಪ್ರಶ್ನೆಗಳಿಗೆ ರಾಕಿಂಗ್ ಸ್ಟಾರ್ ಯಶ್ ಖಡಕ್ ಉತ್ತರ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ರಜತ್‌ ಅವರು ಯಶ್‌ಗೆ ‘ಟಾಕ್ಸಿಕ್’ ಸಿನಿಮಾದಲ್ಲಿನ ಒಂದು ದೃಶ್ಯದ ಕುರಿತು ನಕಾರಾತ್ಮಕ ಕಾಮೆಂಟ್‌ ಬಂದಿದೆ ಎಂದು ಹೇಳಲು ಮುಂದಾದರು. ಆಗ ಯಶ್‌ ಹೇಳಿದ ಮಾತೊಂದು ಈಗ ವೈರಲ್‌ ಆಗಿದೆ.

Read Full Story
11:08 PM (IST) Aug 15

Karnataka News Live 15th August: ಮಂಗಳೂರು KFC ಮಳಿಗೆ, ಮೈಸೂರಿನ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ದಾಳಿ! ಕೊಳೆತ ಮಾಂಸ ಪತ್ತೆ

ಮಂಗಳೂರು ಮತ್ತು ಮೈಸೂರಿನ ಕೆಎಫ್‌ಸಿ ಹಾಗೂ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು, ದೊಡ್ಡ ಪ್ರಮಾಣದ ಕೊಳೆತ ಮತ್ತು ಅವಧಿ ಮುಗಿದ ಮಾಂಸವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮಳಿಗೆಗಳ ಗೋಡೌನ್ ಸೀಜ್ ಮಾಡಲಾಗಿದ್ದು, ಆಹಾರದ ಮಾದರಿಗಳನ್ನು ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Read Full Story
10:46 PM (IST) Aug 15

Karnataka News Live 15th August: IAS - ಭ್ರಷ್ಟ ವ್ಯವಸ್ಥೆ ನಿದ್ದೆಗೆಡಿಸಿದ ಭಾರತದ ಆ ಐರನ್ ಐಎಎಸ್' ಆಫೀಸರ್ಸ್; ಈ ಲಿಸ್ಟ್‌ನಲ್ಲಿದೆ ಒಂದು ಕನ್ನಡದ ಕಲಿ!

ಭ್ರಷ್ಟಾಚಾರದಂತಹ ಸವಾಲುಗಳ ನಡುವೆಯೂ ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಡಿದ ಎಂಟು ಪ್ರಾಮಾಣಿಕ ಐಎಎಸ್ ಅಧಿಕಾರಿಗಳ ಸ್ಪೂರ್ತಿದಾಯಕ ಕಥೆಯಿದು. ಇದರಲ್ಲಿದ್ದಾರೆ ಒಬ್ಬ ಕನ್ನಡದ ಕಲಿ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ

Read Full Story
09:58 PM (IST) Aug 15

Karnataka News Live 15th August: ಚಾಮರಾಜನಗರ ಶೂಟೌಟ್‌ - ಅರಣ್ಯಾಧಿಕಾರಿ ವಿರುದ್ಧFIR.. ಪ್ರಕರಣದ ಸತ್ಯ ಬಿಚ್ಚಿಟ್ಟ ಐಜಿಪಿ ಬೋರಲಿಂಗಯ್ಯ..!

ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೃತರು ಕಳೆದುಹೋದ ಹಸುಗಳನ್ನು ಹುಡುಕಲು ಹೋಗಿದ್ದರು ಎಂದು ಕುಟುಂಬಸ್ಥರು ದೂರು ನೀಡಿದ್ದರೆ ಅವರು ಪ್ರಾಣಿ ಬೇಟೆಗೆ ಬಂದು ನಮ್ಮ ಮೇಲೆಯೇ ಮೊದಲು ದಾಳಿ ನಡೆಸಿದ್ದರೆಂದು ಅರಣ್ಯ ಸಿಬ್ಬಂದಿ ಆರೋಪಿಸಿದ್ದಾರೆ.

Read Full Story
09:32 PM (IST) Aug 15

Karnataka News Live 15th August: 700 ಅಭಿಮಾನಿಗಳಿಗೆ ಯಶ್ ಯಾಕೆ ಪ್ರತ್ಯೇಕ ಸೆಲ್ಫಿ ಕೊಟ್ಟರು? ಕಾರಣ ಕೇಳಿದ್ರೆ ಮನಸ್ಸು ಕರಗುತ್ತೆ!

Yash 700 Fans Selfie: ಸಂದರ್ಶನವೊಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಒಂದೇ ಕಾರ್ಯಕ್ರಮದಲ್ಲಿ ಸುಮಾರು 700 ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಸೆಲ್ಫಿ ನೀಡಿದ ಬಗ್ಗೆ ಪ್ರಶ್ನೆ ಕೇಳಲಾಗಿದೆ.

Read Full Story
09:11 PM (IST) Aug 15

Karnataka News Live 15th August: ಎಲ್ಲವೂ ರಾಯರ ಪವಾಡ - ಸಾವಿನ ದವಡೆಯಿಂದ ಪಾರಾದ MBBS ವಿದ್ಯಾರ್ಥಿನಿ! ವೀಲ್ ಚೇರ್‍‌ನಿಂದ ಎದ್ದು ಓಡಾಡಿದ್ದು ಹೇಗೆ?

ಅಪರೂಪದ ಕಾಯಿಲೆಯಿಂದ ವೀಲ್ ಚೇರ್ ಗೆ ಸೀಮಿತವಾಗಿದ್ದ ಹಾವೇರಿಯ ಎಂಬಿಬಿಎಸ್ ವಿದ್ಯಾರ್ಥಿನಿ ನಿವೇದಿತಾ, ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ ಪವಾಡಸದೃಶವಾಗಿ ಗುಣಮುಖರಾಗಿದ್ದಾರೆ. ವೈದ್ಯಕೀಯ ವಿಜ್ಞಾನವೇ ಕೈಚೆಲ್ಲಿದ್ದ ಈ ಕಾಯಿಲೆಯು ರಾಯರ ಮಂತ್ರಾಕ್ಷತೆಯ ಮಹಿಮೆಯಿಂದ ಕೇವಲ ಮೂರೇ ವಾರಗಳಲ್ಲಿ ವಾಸಿಯಾಗಿದ್ದು, ಯುವತಿ ಈಗ ಮೊದಲಿನಂತೆ ಓಡಾಡುತ್ತಿದ್ದಾಳೆ.

Read Full Story
08:56 PM (IST) Aug 15

Karnataka News Live 15th August: Post office Scheme - ಇಂಡಿಯನ್‌ ಪೋಸ್ಟ್‌ನಿಂದ ಗುಡ್‌ ನ್ಯೂಸ್; ಉಳಿತಾಯ ಖಾತೆದಾರರಿಗೆ ಸಿಗಲಿದೆ ಈ ಹೆಚ್ಚುವರಿ ಸೌಲಭ್ಯ!

ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಅಂಚೆ ಜೀವ ವಿಮೆ (RPLI) ಯೋಜನೆಯ ಅರ್ಹತಾ ನಿಯಮಗಳನ್ನು ಬದಲಾಯಿಸಿದೆ. ಈ ಹೊಸ ನಿಯಮದ ಪ್ರಕಾರ, ಯಾವುದೇ ಪರಿಶಿಷ್ಟ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವವರು ಸಹ ಈ ವಿಮಾ ಯೋಜನೆಯನ್ನು ಪಡೆಯಬಹುದು. ಈ ಬದಲಾವಣೆಯು ಹೆಚ್ಚು ಜನರಿಗೆ ಕೈಗೆಟುಕುವ ದರದಲ್ಲಿ ಜೀವ ವಿಮಾ ರಕ್ಷಣೆ ಒದಗಿಸುವ ಗುರಿ ಹೊಂದಿದೆ.
Read Full Story
08:12 PM (IST) Aug 15

Karnataka News Live 15th August: ನಾಯಿಗಳು ಟೈರ್, ಕಂಬ, ಗೋಡೆ ಮೇಲೆಯೇ ಮೂತ್ರ ಮಾಡೋದು ಯಾಕೆ? ಇಲ್ಲಿದೆ ಅಸಲಿ ಕಾರಣ

ಸುತ್ತಮುತ್ತ ಸಾಕಷ್ಟು ಖಾಲಿ ಜಾಗವಿದ್ದರೂ ನಾಯಿಗಳು ಬಂದು ವಾಹನದ ಟೈರ್, ವಿದ್ಯುತ್ ಕಂಬ, ಗೋಡೆ ಅಥವಾ ಮರದಂತಹ ಲಂಬವಾದ ಜಾಗಗಳ ಮೇಲೆಯೇ ಮೂತ್ರ ವಿಸರ್ಜನೆ ಮಾಡುವುದನ್ನು ಗಮನಿಸಿರಬಹುದು.

Read Full Story
08:10 PM (IST) Aug 15

Karnataka News Live 15th August: ಜ್ಯೇಷ್ಠವರ್ಧನ್ ಗ್ರಾಂಡ್ ಎಂಟ್ರಿ.. ವಿಷ್ಣುವರ್ಧನ್ ಮೊಮ್ಮಗ, ಅನಿರುದ್ದ್ ಮಗನ ಸಿನಿಮಾ ಶೀಘ್ರದಲ್ಲೇ ಶುರು!

'ಹೆಚ್ಚಿನ ಮನೆಗಳಲ್ಲಿ ನನ್ನ ವಯಸ್ಸಿನ ಹುಡುಗರಿಗೆ 'ಓದು' ಎಂದು ಹೇಳಿದರೆ, ನಮ್ಮ ಮನೆಯಲ್ಲಿ ಮಾತ್ರ 'ಸಿನಿಮಾ ನೋಡು' ಎಂದು ಪ್ರೋತ್ಸಾಹಿಸುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಮನೆಯೇ ನನ್ನ ಮೊದಲ ಪಾಠಶಾಲೆ' ಎಂದಿದ್ದಾರೆ ಜ್ಯೇಷ್ಠವರ್ಧನ್. ಸದ್ಯದಲ್ಲೇ ಸಿನಿಮಾ ಶುರುವಾಗಲಿದೆ.

Read Full Story
08:06 PM (IST) Aug 15

Karnataka News Live 15th August: Personal Loan - ಲೋನ್ ಬೇಗ ಕ್ಲೋಸ್ ಮಾಡುವ ಪ್ಲಾನ್ ಇದೆಯಾ? ಹಾಗಾದ್ರೆ ಈ ವಿಚಾರ ಮಿಸ್ ಮಾಡ್ಬೇಡಿ!

ಪರ್ಸನಲ್ ಲೋನ್‌ ಅನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ತೀರಿಸುವುದರಿಂದ ಬಡ್ಡಿ ಉಳಿತಾಯವಾಗಬಹುದು, ಆದರೆ ಇದು ಕ್ರೆಡಿಟ್ ಸ್ಕೋರ್ ಅನ್ನು ತಕ್ಷಣವೇ ಹೆಚ್ಚಿಸುವುದಿಲ್ಲ. ಸಾಲವನ್ನು ಪೂರ್ವಪಾವತಿ ಮಾಡುವ ಮುನ್ನ, ಪೂರ್ವಪಾವತಿ ಶುಲ್ಕ, ತುರ್ತು ನಿಧಿಯ ಲಭ್ಯತೆ ಮತ್ತು ನಿಮ್ಮ ಕ್ರೆಡಿಟ್ ಇತಿಹಾಸದ ಮೇಲೆ ಆಗುವ ಪರಿಣಾಮಗಳನ್ನು ಪರಿಗಣಿಸುವುದು ಅತ್ಯಗತ್ಯ.
Read Full Story
07:47 PM (IST) Aug 15

Karnataka News Live 15th August: ‘Disney Queen’ ರೀತಿ ಕಾಣ್ತಾರೆ - ‘ಟಾಕ್ಸಿಕ್’ನಲ್ಲಿ ಈ ನಟಿಯ ಸೌಂದರ್ಯಕ್ಕೆ ಯಶ್ ಫುಲ್ ಫಿದಾ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚಿತ್ರದ ತಾರಾಗಣದ ಹೇಳಿಕೆಗಳು ಅಭಿಮಾನಿಗಳ ಕುತೂಹಲ ಹೆಚ್ಚಿಸುತ್ತಿವೆ.

Read Full Story
06:50 PM (IST) Aug 15

Karnataka News Live 15th August: ‘ಟಾಕ್ಸಿಕ್’ನಲ್ಲಿ ಮೆಲ್ಲಿಸಾ ಪಾತ್ರವೇ ವಿಭಿನ್ನ - ಯಶ್ ಜೊತೆ ನಟಿಸಿದ ಅನುಭವದ ಬಗ್ಗೆ ರುಕ್ಮಿಣಿ ವಸಂತ್ ಮಾತು

ಮುಂಬೈನಲ್ಲಿ ನಡೆದ ಚಿತ್ರದ ಮ್ಯೂಸಿಕ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ರುಕ್ಮಿಣಿ ವಸಂತ್, ‘ಟಾಕ್ಸಿಕ್’ ತಮ್ಮ ವೃತ್ತಿಜೀವನದ ಅತ್ಯಂತ ವಿಭಿನ್ನ ಸಿನಿಮಾಗಳಲ್ಲಿ ಒಂದು ಎಂದು ಹೇಳಿದ್ದಾರೆ.

Read Full Story
06:44 PM (IST) Aug 15

Karnataka News Live 15th August: ಕುಮಟಾದಲ್ಲಿ ಶೂಟಿಂಗ್.. ಮತ್ತೆ ಕನ್ನಡಕ್ಕೆ ಬಂದ ʻಕೆಜಿಎಫ್‌ʼ ನಟಿ ಶ್ರೀನಿಧಿ ಶೆಟ್ಟಿ; ಹೀರೋ ಯಾರು? ಯಾವ ಸಿನಿಮಾ?

ಕೇವಲ ಕನ್ನಡ ಮಾತ್ರವಲ್ಲ, ತೆಲುಗಿನಲ್ಲೂ ಶ್ರೀನಿಧಿ ಶೆಟ್ಟಿ ಹವಾ ಜೋರಾಗಿದೆ. ತೆಲುಗಿನ ‘ವಿಕ್ಟರಿ’ ವೆಂಕಟೇಶ್ ನಟನೆಯ ‘ಆದರ್ಶ ಕುಟುಂಬಂ’ ಸಿನಿಮಾದಲ್ಲಿ ಶ್ರೀನಿಧಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 2 ರಂದು ಈ ಚಿತ್ರ ತೆರೆಗೆ ಬರಲಿದೆ. ಇದರ ನಡುವೆಯೇ ಕನ್ನಡಕ್ಕೆ ಮರಳಿದ್ದಾರೆ ಶ್ರೀನಿಧಿ ಶೆಟ್ಟಿ!

Read Full Story
06:18 PM (IST) Aug 15

Karnataka News Live 15th August: Cricket - ಮ್ಯಾಚ್ ನಡೆಯುವಾಗಲೇ ಫೋನ್‌ನಲ್ಲಿ ಗರ್ಲ್‌ಫ್ರೆಂಡ್ ಜೊತೆ ಮಾತು; 26 ವರ್ಷದ ಸ್ಟಾರ್ ಕ್ರಿಕೆಟರ್‌ಗೆ ಬಿಬಿಸಿಐ ಶಾಕ್!

ತಮಿಳುನಾಡು ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ನಿಷೇಧಿತ ಪ್ರದೇಶದಲ್ಲಿ ಮೊಬೈಲ್ ಬಳಸಿ ಗೆಳತಿಗೆ ಸಂದೇಶ ಕಳುಹಿಸಿದ್ದಕ್ಕಾಗಿ 26 ವರ್ಷದ ಆಲ್‌ರೌಂಡರ್‌ಗೆ ಬಿಸಿಸಿಐ 1 ಲಕ್ಷ ರೂ. ದಂಡ ವಿಧಿಸಿದೆ. ಭ್ರಷ್ಟಾಚಾರದ ಉದ್ದೇಶ ಇಲ್ಲದಿರುವುದರಿಂದ, ಆರಂಭದಲ್ಲಿ ಪರಿಗಣಿಸಲಾಗಿದ್ದ ನಿಷೇಧದ ಬದಲು ದಂಡದ ಶಿಕ್ಷೆ ವಿಧಿಸಿ ಎಚ್ಚರಿಕೆ ನೀಡಲಾಗಿದೆ.
Read Full Story
06:15 PM (IST) Aug 15

Karnataka News Live 15th August: ಜಮೀರ್, ನಾಗೇಂದ್ರರನ್ನು ಸಂಪುಟದಿಂದ ಕೈಬಿಡಿ - ಸರ್ಕಾರಕ್ಕೆ ಜನಾರ್ದನ ರೆಡ್ಡಿ ಎಚ್ಚರಿಕೆ ಕೊಟ್ಟಿದ್ಯಾಕೆ?

ಅಭಿವೃದ್ಧಿಗೆ ಮೀಸಲಾದ ಹಣ ದುರುಪಯೋಗ ಹಾಗೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಗೈರಾಗಿರುವ ವಿಚಾರ ಮುಂದಿಟ್ಟುಕೊಂಡು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Read Full Story
06:07 PM (IST) Aug 15

Karnataka News Live 15th August: ಧರೆಯ ದೊರೆ ಯಶ್ ಹೇಳಲಿದ್ದಾರೆ 'ಅಜ್ಜಿಯ ಕಥೆ'.. ರಾಕಿಂಗ್ ಸ್ಟಾರ್ ಆ 'ಫೇರಿ ಟೇಲ್'ನಲ್ಲಿ ಏನೆಲ್ಲಾ ಇದೆ?

'ಇರುವುದನ್ನೆಲ್ಲಾ ಅತ್ಯಂತ ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ. ಪ್ರತಿಯೊಂದು ಫ್ರೇಮ್ ಕೂಡ ಒಂದು ಕಥೆ ಹೇಳುತ್ತದೆ. ಸಿನಿಮಾದ ಒಂದು ತುಣುಕನ್ನು ನೋಡಿ ಇಡೀ ಸಿನಿಮಾವನ್ನು ಜಡ್ಜ್ ಮಾಡುವುದು ತಪ್ಪು' ಎಂದಿದ್ದಾರೆ ಯಶ್. ಟಾಕ್ಸಿಕ್‌ನಲ್ಲಿ ಹೇಳಿರುವ ಅಜ್ಜಿಯ ಕಥೆ ಏನು ಹಾಗಿದ್ರೆ..?

Read Full Story
06:03 PM (IST) Aug 15

Karnataka News Live 15th August: ಶ್ರಾವಣ ಶನಿವಾರ ಅಂಜನಾದ್ರಿಯಲ್ಲಿ ಭಕ್ತಸಾಗರ - ತ್ರಿವರ್ಣ ಹೂಗಳಿಂದ ಕಂಗೊಳಿಸಿದ ಆಂಜನೇಯ

Anjanadri: ಶ್ರಾವಣ ಮಾಸದ ಮೊದಲ ಶನಿವಾರ ಹಾಗೂ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಭಕ್ತರ ದಂಡೇ ಹರಿದುಬಂದಿದೆ. ಹನುಮಂತನ ಜನ್ಮಸ್ಥಳವೆಂದು ನಂಬಲಾಗುವ ಅಂಜನಾದ್ರಿ ಬೆಟ್ಟದ..

Read Full Story
05:54 PM (IST) Aug 15

Karnataka News Live 15th August: ಪವಿತ್ರ ಗೌಡ ಸ್ಥಳಾಂತರ, ದರ್ಶನ್‌ಗೂ ಬಿಗಿ ಹಿಡಿದ ಜೈಲು ಅಧಿಕಾರಿಗಳು.. ಇಷ್ಟಕ್ಕೆಲ್ಲ ಕಾರಣ ಪ್ರಜ್ವಲ್‌ ರೇವಣ್ಣ

ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಭದ್ರತೆಯನ್ನು ತೀವ್ರಗೊಳಿಸಿ ಹೈಪ್ರೊಫೈಲ್ ಕೈದಿಗಳ ಮೇಲೆ ಬಿಗಿ ಕಣ್ಗಾವಲು ಇಡಲಾಗಿದೆ. ಹೊಸ ನಿಯಮಗಳ ಭಾಗವಾಗಿ, ನಟ ದರ್ಶನ್ ಅವರ ಬ್ಯಾರಕ್ ಸುತ್ತ ಸಿಸಿಟಿವಿ ಕಣ್ಗಾವಲು ಹೆಚ್ಚಿಸಲಾಗಿದ್ದು, ಸಹ-ಆರೋಪಿ ಪವಿತ್ರಾಗೌಡ ಅವರನ್ನು 16 ಕೈದಿಗಳಿರುವ ದೊಡ್ಡ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ.

Read Full Story
05:50 PM (IST) Aug 15

Karnataka News Live 15th August: Viral - ಅದೃಷ್ಟಕ್ಕೆ ಕಣ್ಣಿಲ್ಲ, ಸಮಯಕ್ಕೆ ಮಿತಿಯಿಲ್ಲ; ಸತತ ಸೋಲುಗಳ ನಂತರ ಹೊಡೆಯಿತು 13 ಸಾವಿರ ಕೋಟಿ ರೂ.,ಗಳ ಜಾಕ್‌ಪಾಟ್!

ಅಮೆರಿಕದ ಇಲಿನಾಯ್ಸ್ ನಿವಾಸಿಯೊಬ್ಬರು ಸತತ 44 ಸೋಲುಗಳ ನಂತರ 13,357 ಕೋಟಿ ರೂಪಾಯಿಗಳ ಬೃಹತ್ ಲಾಟರಿ ಜಾಕ್‌ಪಾಟ್ ಗೆದ್ದಿದ್ದಾರೆ. 45ನೇ ಪ್ರಯತ್ನದಲ್ಲಿ ಈ ಅದೃಷ್ಟ ಒಲಿದಿದ್ದು, ವಿಜೇತರಿಗೆ ಹಣ ಪಡೆಯಲು ಎರಡು ಆಯ್ಕೆಗಳನ್ನು ನೀಡಲಾಗಿದೆ.
Read Full Story