Asianet Suvarna News Asianet Suvarna News

ಸುತ್ತೂರು ಮಠಕ್ಕೆ ಡಿಕೆಶಿ-ಅಳಿಯ ಅಮರ್ಥ್ಯ ಭೇಟಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಭಾವಿ ಅಳಿಯ ಅಮರ್ಥ್ಯ ಜೊತೆಗೆ ತೆರಳಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

KPCC President DK Shivakumar Visits Suttur Mutt snr
Author
Bengaluru, First Published Jan 25, 2021, 3:30 PM IST

ಮೈಸೂರು (ಜ.25): ಮೈಸೂರಿನ ಸುತ್ತೂರು ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದುಕೊಂಡಿದ್ದಾರೆ. 

ಸುತ್ತೂರು ಮಠಕ್ಕೆ ಭಾವಿ ಅಳಿಯ ಅಮರ್ಥ್ಯ ಸಿದ್ದಾರ್ಥ್ ಜೊತೆ ಆಗಮಿಸಿ ಶ್ರೀಗಳ ಆರ್ಶಿವಾದ ಪಡೆದುಕೊಂಡಿದ್ದಾರೆ. 

ಫೆಬ್ರವರಿಯಲ್ಲಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಕಾಫಿ ಡೇ ಮಾಲಿಕ ಸಿದ್ದಾರ್ಥ್ ಹೆಗಡೆ ಪುತ್ರ ಅಮರ್ಥ್ಯ ವಿವಾಹ ನೆರವೇರಲಿದ್ದು ಈ ನಿಟ್ಟಿನಲ್ಲಿ   ಮಗಳ ಮದುವೆ ಲಗ್ನಪತ್ರಿಕೆ ನೀಡಲು ಸುತ್ತೂರು ಮಠಕ್ಕೆ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ.  

ಸಿದ್ಧಾರ್ಥ ಸಾಮ್ರಾಜ್ಯವನ್ನು ಮುನ್ನಡೆಸುತ್ತಾಳಾ ಡಿಕೆಶಿ ಪುತ್ರಿ ಐಶ್ವರ್ಯಾ? ...

ಇದೆ ವೇಳೆ ಭಾವಿ ಅಳಿಯನನ್ನ ಶ್ರೀಗಳಿಗೆ ಪರಿಚಯಿಸಿದ ಡಿ.ಕೆ.ಶಿವಕುಮಾರ್, ಸುತ್ತೂರು ಶ್ರೀಗಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. 

ಈಗಾಗಲೇ ಡಿಕೆ ಶಿವಕುಮಾರ್ ನಿವಾಸದಲ್ಲಿ ಭರ್ಜರಿ ವಿವಾಹ ಸಿದ್ಧತೆಗಳು ನಡೆಯುತ್ತಿದೆ. 

Follow Us:
Download App:
  • android
  • ios