Published : Feb 12 2025, 07:42 AM IST| Updated : Feb 12 2025, 08:04 PM IST
Share this Liveblog
FB
TW
Linkdin
Whatsapp
Karnataka News Live: ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಗೆ ಬಿತ್ತು ಅಂಕಿತ, ದೆಹಲಿ ಸಿಎಂ ಇನ್ನೂ ಕೌತುಕ
ಸಾರಾಂಶ
ರಾಜ್ಯದಲ್ಲಿ ಬಹಳ ಆತಂಕಕ್ಕೆ ಕಾರಣವಾಗಿದ್ದ ಮೈಕ್ರೋಫೈನಾನ್ಸ್ ಹಾವಳಿಯ ವಿರುದ್ಧ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಗೆ ಶುಕ್ರವಾರ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಅದರೊಂದಿಗೆ ಕಾನೂನು ಪ್ರಕಾರ ಸಾಲ ನೀಡಿದವರಿಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸುವಂತೆ ತಿಳಿಸಿದ್ದಾರೆ. ಇನ್ನೊಂದೆಡೆ ದೆಹಲಿ ಸಿಎಂ ಯಾರಾಗುತ್ತಾರೆ ಅನ್ನೋ ಕೌತುಕವೂ ಮುಂದುವರಿದಿದೆ. ದೆಹಲಿ ಸಿಎಂ ಸ್ಥಾನಕ್ಕೆ ಐವರ ನಡುವೆ ಫೈಟ್ ಮುಂದುವರಿದಿದೆ ಎಂದು ವರದಿಯಾಗಿದೆ.
07:14 PM (IST) Feb 12
ಫ್ರಾನ್ಸ್ನಲ್ಲಿ ಮಿನಿ ಸೂರ್ಯನ ಸೃಷ್ಟಿಸುವ ITER ಸೈಟ್ನಲ್ಲಿ ಪ್ರಧಾನಿ ಮೋದಿ!
ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಭೇಟಿಯಲ್ಲಿದ್ದಾರೆ. ಫ್ರಾನ್ಸ್ ಭೇಟಿಯ ಸಂದರ್ಭದಲ್ಲಿ ಅವರು ಬುಧವಾರ ಭಾರತದ ಪಾಲು ಹೊಂದಿರುವ ಜಗತ್ತಿನ ಅತ್ಯಂತ ಅತ್ಯಾಧುನಿಕ ಫ್ಯುಶನ್ ಎನರ್ಜಿ ರಿಯಾಕ್ಟರ್ ಸೈಟ್ಗೆ ಭೇಟಿ ನೀಡಿ ಅಲ್ಲಿನ ಪ್ರಗತಿ ಪರಿಶೀಲನೆ ಮಾಡಿದರು.
ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕಾನೂನಿನ ಅಡಿಯಲ್ಲಿ ಸಾಲ ಕೊಟ್ಟವರಿಗೆ ಯಾವುದು ತೊಂದರೆ ಆಗಬಾರದು. ಮೂಲಭೂತ ಹಕ್ಕುಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಿ ಎಂಚು ಎಚ್ಚರಿಕೆ ನೀಡಿ ಸಹಿ ಹಾಕಿದ್ದಾರೆ.
06:15 PM (IST) Feb 12
ರಾಜ್ಯ ಸರ್ಕಾರ ನಮ್ಮ ಮೆಟ್ರೋ ದರ ಹೆಚ್ಚಳಕ್ಕೆ ಪತ್ರ ಬರೆದಂತೆ, ಈಗ ತಗ್ಗಿಸಲು ಪತ್ರ ಬರೆಯಲಿ
ಬೆಂಗಳೂರು ಮೆಟ್ರೋ ದರ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದ್ದು, ದರ ಪರಿಷ್ಕರಣೆ ಮಾಡುವಂತೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ. ಕೇಂದ್ರ ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ರಾಜ್ಯ ಸರ್ಕಾರ ಮತ್ತೊಂದು ಪತ್ರ ಬರೆದು ದರ ಪರಿಷ್ಕರಣೆಗೆ ಮನವಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆಯಲ್ಲಿ ಪಾಣಿಗಳ ಕೊಬ್ಬು ಮಿಶ್ರಿತ ತುಪ್ಪವನ್ನು ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ ನಾಲ್ವರನ್ನು ಬಂಧಿಸಿದೆ. ಅದರೊಂದಿಗೆ ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಇ-ಟೆಂಡರ್ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳನ್ನು ಬಯಲು ಮಾಡಿದೆ ಎಂದು ಎಎನ್ಐ ವರದಿ ಮಾಡಿದೆ.
1984ರಲ್ಲಿ ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರ ನಡೆದ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ಸಿಗ, ಮಾಜಿ ಸಂಸದ ಸಜ್ಜನ್ ಕುಮಾರ್ ದೋಷಿ ಎಂದು ದೆಹಲಿ ಕೋರ್ಟ್ ತೀರ್ಪು ನೀಡಿದೆ.
ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್! ವಿಮಾನದ ಮೇಲೆ ಭಯೋತ್ಪಾದನಾ ದಾಳಿ ಎಚ್ಚರಿಕೆ... ಆಗಿದ್ದೇನು?
ಫ್ರಾನ್ಸ್, ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸ್ಕೆಚ್ ಮಾಡಲಾಗಿರುವ ವಿಷಯ ಬೆಳಕಿಗೆ ಬಂದಿದೆ. ವಿಮಾನದ ಮೇಲೆ ಭಯೋತ್ಪಾದನಾ ದಾಳಿ ಎಚ್ಚರಿಕೆ ನೀಡಲಾಗಿದೆ. ಆಗಿದ್ದೇನು?
ಎಂದಾದರೂ 'ಅದನ್ನ' ನೋಡಿದ್ದೀಯಾ ಎಂದಿದ್ದ ಅಪೂರ್ವ ಮಖೀಜಾಗೂ ಪೊಲೀಸ್ ಕ್ಲಾಸ್!
ರಣವೀರ್ ನೀಡಿರುವ ಹೇಳಿಕೆಗಳ ನಡುವೆ ಸಮಯ್ ರೈನಾ ಅವರ ವಿವಾದಿತ ಇಂಡಿಯಾಸ್ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೊಬ್ಬ ಕಂಟೆಂಟ್ ಕ್ರಿಯೇಟರ್ ವಿರುದ್ಧವೂ ದೂರು ದಾಖಲಾಗಿದೆ. ಇದರಲ್ಲಿ ಒಬ್ಬರು ರೆಬಲ್ ಕಿಡ್ ಖ್ಯಾತಿಯ ಅಪೂರ್ವ ಮಖೀಜಾ. ಬುಧವಾರ ರೋಸ್ಟ್ ಶೋನಲ್ಲಿ ತನ್ನ ಅಸಭ್ಯ ಹೇಳಿಕೆಗಳಿಗಾಗಿ ಟೀಕೆಗೆ ಗುರಿಯಾಗಿರುವ ಅಪೂರ್ವ ಮುಖಿಜಾ ಅಕಾ ದಿ ರೆಬೆಲ್ ಕಿಡ್, ಪ್ರಕರಣದಲ್ಲಿ ಹೇಳಿಕೆ ದಾಖಲಿಸಲು ಮುಂಬೈ ಪೊಲೀಸರು ಕರೆ ಮಾಡಿದ ನಂತರ ತನ್ನ ವಕೀಲರೊಂದಿಗೆ ಖಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿದರು.
20 ನೇ ತಾರೀಕು ಸಚಿವ ಸಂಪುಟ ಸಭೆ ನಡೆಯಲಿದೆ. ಜನವರಿ 30 ರಂದು ಕೊನೆಯ ಬಾರಿಗೆ ಕ್ಯಾಬಿನೆಟ್ ಸಭೆ ನಡೆದಿತ್ತು. ಸಿಎಂ ಕಾಲಿಗೆ ಪೆಟ್ಟಾದ ಬಳಿಕ ಕ್ಯಾಬಿನೆಟ್ ಮೀಟಿಂಗ್ ನಡೆದಿರಲಿಲ್ಲ ಮುಂದಿನ ಕ್ಯಾಬಿನೆಟ್ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಬೇಕಿತ್ತು. ಆದರೆ ಕಾಲಿನ ಸಮಸ್ಯೆ ಕಾರಣಕ್ಕೆ ಮಲೆ ಮಹದೇಶ್ವರ ಬೆಟ್ಟದ ಕ್ಯಾಬಿನೆಟ್ ರದ್ದು. ಬೆಂಗಳೂರಿನಲ್ಲೇ ಫೆ.20ರಂದು ಕ್ಯಾಬಿನೆಟ್ ಸಭೆ ನಡೆಯಲಿದೆ.
03:24 PM (IST) Feb 12
KPCC ವಕ್ತಾರ ಲಕ್ಷ್ಮಣ್ ವಿರುದ್ಧ ದೂರು
02:39 PM (IST) Feb 12
ಬದಲಾವಣೆ ಜಗದ ನಿಯಮ
ಎಲ್ಲಾ ಪಕ್ಷದಲ್ಲೂ ಸಮಾಧಾನ, ಅಸಮಾಧಾನ ಇದ್ದೇ ಇರುತ್ತೆ. ರಾಜಕೀಯ ಪಕ್ಷ ಅಂದಮೇಲೆ ಇದು ಮಾಮೂಲು. ಬದಲಾವಣೆ ಜಗದ ನಿಯಮ, ಸೂಕ್ತ ಸಮಯ ಬಂದಾಗ ಆಗುತ್ತೆ. ನಾಳೆಯೇ ಆಗಬೇಕು ಅಂತ ಹೇಳಿಲ್ವಲ್ಲ ಎಂದು ಮಾಗಡಿ ತಾಲೂಕಿನ ಸುಗ್ಗನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.
02:16 PM (IST) Feb 12
ಕುಂಭಮೇಳದಲ್ಲಿ ಸತೀಶ್ ಜಾರಕಿಹೋಳಿ ಸಿಎಂ ಆಗಲಿ ಎಂದು ಹರಕೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ಕಾಂಗ್ರೆಸ್ ಮುಖಂಡರು ಸಚಿವ ಸತೀಶ್ ಜಾರಕಿಹೋಳಿ ಸಿಎಂ ಆಗುವಂತೆ ಹರಕೆ ಹೊತ್ತಿದ್ದಾರೆ. ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಆಗಲಿ ಎಂದು ಹರಕೆ ಹೊತ್ತಿದ್ದಾರೆ.
01:12 PM (IST) Feb 12
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಮುಹೂರ್ತ ಫಿಕ್ಸ್
12:49 PM (IST) Feb 12
ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು
ಮೈಸೂರು ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಹಿನ್ನೆಲೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಡಿಜಿಪಿ ಅಲೋಕ್ ಮೋಹನ್ ಅವರನ್ನು ಭೇಟಿಯಾಗಿ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವ ಕುರಿತು ಚರ್ಚೆ ನಡೆಸಿದರು. ಘಟನೆ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.
12:34 PM (IST) Feb 12
ರಾಜ್ಯ ಜಾಗತಿಕ ಕೇಂದ್ರವಾಗಿಸುವ ಗುರಿ: ಡಿ.ಕೆ. ಶಿವಕುಮಾರ್
Scroll to load tweet…
11:56 AM (IST) Feb 12
ಇದೇನಾ ಸಂವಿಧಾನದ ಪ್ರಕಾರ ನಡೆಯುವುದು?
ಹಿಂದುಳಿದ ವರ್ಗದ ಅಧಿಕಾರಿಗಳ ಮೇಲೆ ಕಿರುಕುಳ ನಿರಂತರವಾಗುತ್ತಿದೆ. ಮಾತು ಎತ್ತಿದರೆ ಪರಮೇಶ್ವರ್ ಸಂವಿಧಾನ ಸಂವಿಧಾನ ಎನ್ನುತ್ತಾರೆ. ಇದೇನಾ ಸಂವಿಧಾನದ ಪ್ರಕಾರ ನಡೆಯುವುದು? ಆದರೆ ಮೇಲ್ವರ್ಗದ ನಾಯಕರ ಪುತ್ರರಿಂದ ಈ ರೀತಿ ಹಿಂದುಳಿದ ವರ್ಗದ ಅಧಿಕಾರಿಯ ಮೇಲೆ ಆಗುತ್ತಿರುವ ಕಿರುಕುಳ ಸಹಿಸಲು ಅಸಾಧ್ಯ. ಶಾಸಕ ಸಂಗಮೇಶ್ ಪುತ್ರ ಬಸವೇಶ್ವರ್ ವಿರುದ್ಧ ಗೂಂಡಾ ಆಕ್ಟ್ ಜಾರಿಗೊಳಿಸಬೇಕು ಗಣಿ ಮತ್ತು ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಪರವಾಗಿ ಸಂಪೂರ್ಣ ಈಡಿಗ ಸಮುದಾಯ ನಿಂತಿದೆ ಎಂದು ಪ್ರಣವಾನಂದ ಸ್ವಾಮೀಜಿ ಎಂದು ಹೇಳಿದ್ದಾರೆ.
11:44 AM (IST) Feb 12
ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ವಿಧಿವಶ
Scroll to load tweet…
11:02 AM (IST) Feb 12
ಮೆಟ್ರೋ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ
ಮೋದಿ ಮುಖವಾಡ ಧರಿಸಿ, ಪ್ಲೇ ಕಾರ್ಡ್ ಹಿಡಿದು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರಯಾಣ ಮಾಡಿದ್ದಾರೆ. ಮೆಟ್ರೋ ದರ ಇಳಿಕೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಎಂದು ಬರೆದಿರುವ ಫಲಕಗಳನ್ನು ಹಿಡಿಯಲಾಗಿತ್ತು
10:37 AM (IST) Feb 12
ಕೆಪಿಸಿಸಿ ಅಧ್ಯಕ್ಷ ಬದಲಾವಣೆ: ದೆಹಲಿ ಭೇಟಿ ಕುರಿತು ಯಾವುದೇ ಮುಚ್ಚುಮರೆ ಇಲ್ಲ, ಸಚಿವ ರಾಜಣ್ಣ
Scroll to load tweet…
10:18 AM (IST) Feb 12
ಮೆಟ್ರೋ ಪ್ರಯಾಣ ದರ ಏರಿಕೆ; ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯ ಶಿಫಾರಸ್ಸಿನಂತೆ ಮೋದಿ ಸರ್ಕಾರ ಅವೈಜ್ಞಾನಿಕವಾಗಿ ಮೆಟ್ರೋ ದರವನ್ನು ಏರಿಕೆ ಮಾಡಿದೆ. ಈ ಸತ್ಯವನ್ನು ಮುಚ್ಚಿಟ್ಟು ರಾಜ್ಯ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮೆಟ್ರೋ ದರವನ್ನು ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಇಂದು ಮೆಟ್ರೋ ನಿಲ್ದಾಣ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ ಮಾಡಲಿದೆ.
10:00 AM (IST) Feb 12
ನಾನೇನು ಕಾಮೆಂಟ್ ಮಾಡಲಿ ಹೇಳಿ
ಸಚಿವ ರಾಜಣ್ಣ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ದೆಹಲಿಗೆ ಹೋಗುತ್ತಿದ್ದೇನೆ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಅವರು ದೊಡ್ಡವರು, ನಾನು ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ. ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಬಗ್ಗೆ ನಾನೇನು ಕಾಮೆಂಟ್ ಮಾಡಲಿ ಹೇಳಿ ಎಂದಿದ್ದಾರೆ.