09:55 PM (IST) Apr 03

Karnataka News Live 3rd April: ಪ್ರಧಾನಿ ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿನವರಿಗೆ ನೈತಿಕತೆ ಇಲ್ಲ - ಶಾಸಕ ಯತ್ನಾಳ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿಗರಿಗೆ ಯಾವುದೇ ನೈತಿಕ ಹಕ್ಕಿಲ್ಲ. ರಾಹುಲ್ ಗಾಂಧಿ ಆದಿಯಾಗಿ ಕಾಂಗ್ರೆಸ್ಸಿಗರೆಲ್ಲರೂ ಮೋದಿ ಕಾಲಿನ ಧೂಳು ಆಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

Read Full Story
09:35 PM (IST) Apr 03

Karnataka News Live 3rd April: ಬಿಜೆಪಿಗರಿಗೆ ಧೈರ್ಯ ಇದ್ದರೆ ಹಿಂದಿ ಜಾರಿ ಮಾಡ್ತೇವೆ ಎನ್ನಲಿ - ಸಚಿವ ಮಧು ಬಂಗಾರಪ್ಪ ಸವಾಲು

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರಿಗೆ ಧೈರ್ಯವಿದ್ದರೆ, ಶಿಕ್ಷಣದಲ್ಲಿ ಮತ್ತೆ ಹಿಂದಿಗೆ ಮಹತ್ವ ನೀಡುತ್ತೇವೆ ಎಂದು ಘೋಷಿಸಲಿ ಎಂದು ಸಚಿವ ಮಧು ಬಂಗಾರಪ್ಪ ಸವಾಲು ಹಾಕಿದ್ದಾರೆ.

Read Full Story
08:49 PM (IST) Apr 03

Karnataka News Live 3rd April: ಸಚಿವ ವಿ. ಸೋಮಣ್ಣ ಭಾಷಣಕ್ಕೆ ಬಾಗಲಕೋಟೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ; ಉಪ ಚುನಾವಣೆಯಲ್ಲಿ ವಾಗ್ವಾದ!

ಬಾಗಲಕೋಟೆಯ ಐಹೊಳೆ ಗ್ರಾಮದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಭಾಷಣ ಮಾಡುವಾಗ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದರು. ಬೈಕ್ ರೇಸ್ ಮತ್ತು ಕೇಕೆ ಹಾಕಿ ಗದ್ದಲ ಸೃಷ್ಟಿಸಿದ್ದರಿಂದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

Read Full Story
08:34 PM (IST) Apr 03

Karnataka News Live 3rd April: ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಗೆಲ್ಲುತ್ತೆ ಎಂಬ ಭಯ ಶುರು - ಬಿ.ವೈ.ವಿಜಯೇಂದ್ರ

ನಮ್ಮ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿದೆ. ದಾವಣಗೆರೆ ದಕ್ಷಿಣ ಕ್ಷೇತ್ರವೂ ಬಿಜೆಪಿಯ ಐತಿಹಾಸಿಕ ಗೆಲುವು ಸಾಕ್ಷಿಯಾಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

Read Full Story
08:08 PM (IST) Apr 03

Karnataka News Live 3rd April: Heatstroke - ಬೇಸಿಗೆಯ ಯಮ 'ಹೀಟ್‌ಸ್ಟ್ರೋಕ್'! ಇದರಿಂದ ಪಾರಾಗುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಬೇಸಿಗೆಯಲ್ಲಿ ತೆಳುವಾದ, ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ. ಕಡು ಬಣ್ಣದ ಬಟ್ಟೆಗಳನ್ನು ಬಿಟ್ಟು, ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಆಹಾರದಲ್ಲಿ, ಸುಲಭವಾಗಿ ಜೀರ್ಣವಾಗುವ ಮತ್ತು ಹೆಚ್ಚು ನೀರಿನಂಶವಿರುವ ಆಹಾರಗಳನ್ನು ಸೇರಿಸಿಕೊಳ್ಳಬೇಕು.

Read Full Story
07:43 PM (IST) Apr 03

Karnataka News Live 3rd April: ಚುನಾಯಿತ ಪ್ರತಿನಿಧಿಗಳು ಪ್ರಜೆಗಳ ಗುಲಾಮರಾಗಿರಬೇಕು - ಡಾ.ಮುಖ್ಯಮಂತ್ರಿ ಚಂದ್ರು

ಗೆಲುವಿಗೆ ಚಲಾಯಿತ ಮತಗಳ ಪೈಕಿ ಶೇ.50ರಷ್ಟನ್ನು ನಿಗದಿಪಡಿಸಬೇಕು. ಮತದಾರರಿಗೆ ಚುನಾಯಿತ ಪ್ರತಿನಿಧಿಗಳನ್ನು ವಾಪಸ್‌ ಕರೆಸಿಕೊಳ್ಳುವ ಅಧಿಕಾರ ಇರಬೇಕು ಎಂದು ಖ್ಯಾತ ಚಲನಚಿತ್ರ ನಟ ಡಾ.ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.

Read Full Story
07:29 PM (IST) Apr 03

Karnataka News Live 3rd April: ನನ್ನಂಥ ಗಂಡ ಬೇಕೆಂದ್ರೆ ಹೀಗೆ ಮಾಡಿ - ಫ್ಯಾನ್ಸ್​ಗೆ Amrthadhaare ಸಿಂಪಲ್​ ಸುನಿ ಬಿಗ್​ ಆಫರ್​

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿ ಮದುವೆ ನಡೆದಿದೆ. ಈ ನಡುವೆ ಸುನಿ ಪಾತ್ರಧಾರಿ ಯಶ್ವಂತ್, ತಮ್ಮ ಮತ್ತು ಮಲ್ಲಿ ಪಾತ್ರಧಾರಿ ಅನ್ವಿತಾ ನಡುವಿನ ವಯಸ್ಸಿನ ಅಂತರದ ಬಗ್ಗೆ ಹಾಗೂ ತಮಗೆ ಬಂದ ನೆಗೆಟಿವ್ ಕಮೆಂಟ್‌ಗಳ ಬಗ್ಗೆ ಮಾತನಾಡಿದ್ದಾರೆ. 

Read Full Story
07:27 PM (IST) Apr 03

Karnataka News Live 3rd April: ಬಾಗಲಕೋಟೆಯಲ್ಲೇ ಚರ್ಚೆಗೆ ಬನ್ನಿ - ಸಂಸದ ಕಾರಜೋಳರಿಂದ ಸಚಿವ ಎಂ.ಬಿ.ಪಾಟೀಲ್‌ಗೆ ಪ್ರತಿ ಸವಾಲು

ಸಿಎಂ, ಡಿಸಿಎಂ ಮಾತು ಕೇಳಿದರೆ ದೇಶಕ್ಕೆ ಗಂಡಾಂತರ ಬಂದಂತಾಗಿದೆ. ಬಾಗಲಕೋಟೆ ಉಪಚುನಾವಣೆಯಲ್ಲಿ ಸಿಎಂ, ಡಿಸಿಎಂ ಅವರ ಮಾತು ಕೇಳಿದರೆ ದೇಶಕ್ಕೆ ಗಂಡಾಂತರ ಬಂದಂತಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

Read Full Story
07:14 PM (IST) Apr 03

Karnataka News Live 3rd April: ಹಾವುಗಳಿಗೆ ಮೃತ್ಯು ಸಮಾನ ಈ ಗಿಡದ ವಾಸನೆ! ಮನೆ ಮುಂದೆ ಈ ಗಿಡ ಇದ್ರೆ ಯಾವ ಹಾವು ಅಪ್ಪಿ-ತಪ್ಪಿಯೂ ಬರೋದಿಲ್ಲ;

Natural Snake Repellent Plant: ಮನೆಯ ಸುತ್ತಮುತ್ತ ಹಾವುಗಳು ಓಡಾಡುತ್ತಿದ್ದರೆ ಅಥವಾ ಮನೆಗೆ ನುಗ್ಗಿದರೆ, ಆ ಭಯದಲ್ಲೇ ಮನೆಯಲ್ಲಿ ಇರಲು ಹೆದರಿಕೆಯಾಗುತ್ತದೆ. ಬೇಸಿಗೆ ಕಾಲದಲ್ಲಿ ಈ ಹಾವಳಿ ಇನ್ನಷ್ಟು ಹೆಚ್ಚಾಗಿರುತ್ತದೆ. ಹಾಗಾದರೆ ಏನು ಮಾಡಬಹುದು? ಇಲ್ಲಿದೆ ಟಿಪ್ಸ್. 

Read Full Story
06:48 PM (IST) Apr 03

Karnataka News Live 3rd April: ಅಜ್ಜಿಯ ಕೊನೇ ರೀಲ್ಸ್‌ ಹಂಚಿಕೊಂಡ ಡ್ರಾಮಾ ಜ್ಯೂನಿಯರ್ಸ್‌ ಸೂರಜ್;‌ ಲಕ್ಷ್ಮೀ ನಾಯ್ಕ್‌ಗೆ ವಿಡಿಯೋ ಮಾಡೋ ಆಸೆಯಿತ್ತಂತೆ

ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ವೀಕ್ಷಕರ ಗಮನ ಸೆಳೆದಿದ್ದ ಲಕ್ಷ್ಮೀ ಅಜ್ಜಿ ಅವರು ನಿಧನರಾಗಿದ್ದಾರೆ. ಇವರು ಯಲ್ಲಾಪುರದ ಮಂಚಿಕೇರಿಯವರು. ಡ್ರಾಮಾ ಜೂನಿಯರ್ ಶೋನಲ್ಲಿ ಭಾಗವಹಿಸಿದ್ದ ಸೂರಜ್ ಜೊತೆ ಲಕ್ಷ್ಮೀ ನಾಯ್ಕ್ ರೀಲ್ಸ್ ಮಾಡುತ್ತಿದ್ದರು. ಈಗ ಸೂರಜ್‌ ಅವರು ಅಜ್ಜಿಯ ಕೊನೇ ವಿಡಿಯೋ ಹಂಚಿಕೊಂಡಿದ್ದಾರೆ.

Read Full Story
05:45 PM (IST) Apr 03

Karnataka News Live 3rd April: ಮಗನಿಗೋಸ್ಕರ ಎಂಬ್ರಾಯಡರಿ ಫ್ಯಾಕ್ಟರಿ ಮಾಡಿ, 6 ಕೋಟಿ ರೂ. ನಷ್ಟ ಕಂಡ ನಟ ರಮೇಶ್‌ ಭಟ್! ಅಂಥದ್ದೇನಾಯ್ತು?

Actor Ramesh Bhat: ಯಜಮಾನ ಧಾರಾವಾಹಿ ಮೂಲಕ ಇತ್ತೀಚೆಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ, ಖ್ಯಾತ ಸಿನಿಮಾ ನಟ ರಮೇಶ್‌ ಭಟ್‌ ಅವರು ಆಂಬ್ರಾಯಡರಿ ಫ್ಯಾಕ್ಟರಿ ಕಟ್ಟಿದ್ದು, ಆರು ಕೋಟಿ ರೂಪಾಯಿ ಕಳೆದುಕೊಂಡ ಕಥೆಯನ್ನು Beyond Limits ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

Read Full Story
05:40 PM (IST) Apr 03

Karnataka News Live 3rd April: ಏನಿಲ್ಲ, ಏನಿಲ್ಲ ಎನ್ನುತ್ತಲೇ ವೇದಿಕೆ ಮೇಲೆ ತಗ್ಲಾಕ್ಕೊಂಡ Bigg Boss ಸೂರಜ್​- ರಾಶಿಕಾ ಶೆಟ್ಟಿ - ಆಗಿದ್ದೇನು

ಬಿಗ್​ಬಾಸ್​ 12ರ ಕ್ಯೂಟ್ ಜೋಡಿ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ತಮ್ಮಿಬ್ಬರ ನಡುವೆ ಸ್ನೇಹವಷ್ಟೇ ಇದೆ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ, 'ಗಿಚ್ಚಿ ಗಿಲಿಗಿಲಿ ಜ್ಯೂನಿಯರ್' ಶೋನಲ್ಲಿ ನಿರೂಪಕಿ ಅನುಪಮಾ ಗೌಡ ಕೇಳಿದ ಪ್ರಶ್ನೆಯೊಂದಕ್ಕೆ ಇಬ್ಬರೂ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾರೆ. 

Read Full Story
05:13 PM (IST) Apr 03

Karnataka News Live 3rd April: ಮಡಿಕೇರಿಯ ಭಾಗಮಂಡಲದಲ್ಲಿ ನಡೆಯುವ ರೋಚಕ ಕತೆ ಪೀಟರ್ - ನಿರ್ದೇಶಕ ಸುಕೇಶ್ ಶೆಟ್ಟಿ

ಮಡಿಕೇರಿಯ ಭಾಗಮಂಡಲದಲ್ಲಿ ನಡೆಯೋ ರೋಚಕ ಕಥೆಯನ್ನು ನೋಡಿ ತಲ್ಲೀನರಾಗಬೇಕು. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಹೈದ್ರಾಬಾದ್‌ನಲ್ಲಿಯೂ ಪೀಟರ್‌ ಚಿತ್ರದ ಪ್ರಚಾರ ಕೆಲಸ ನಡೆಯುತ್ತಿದೆ.

Read Full Story
05:08 PM (IST) Apr 03

Karnataka News Live 3rd April: ಹನಿಮೂನ್​ ಮೂಡ್​ನಲ್ಲಿ Amrathadhaare ಮಲ್ಲಿ - ಆದ್ರೆ ರಿಯಲ್​ ಲೈಫ್​ನಲ್ಲಿ ಬಿರುಗಾಳಿ- ಆಗಿದ್ದೇನು

ಅಮೃತಧಾರೆ ಧಾರಾವಾಹಿಯ ಮಲ್ಲಿ ಪಾತ್ರಧಾರಿ ಅನ್ವಿತಾ ಸಾಗರ್ ಅವರ ತೆರೆಯ ಮೇಲಿನ ಮತ್ತು ನಿಜ ಜೀವನದ ನಡುವಿನ ವ್ಯತ್ಯಾಸವನ್ನು ಈ ಲೇಖನ ವಿವರಿಸುತ್ತದೆ. ಧಾರಾವಾಹಿಯಲ್ಲಿ ಮಧುಚಂದ್ರದ ಸಂಭ್ರಮದಲ್ಲಿದ್ದರೆ, ನಿಜ ಜೀವನದಲ್ಲಿ ಅವರು ತಮ್ಮ ಪ್ರೀತಿಯಲ್ಲಿನ ನೋವು ಮತ್ತು ಬ್ರೇಕಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ

Read Full Story
04:53 PM (IST) Apr 03

Karnataka News Live 3rd April: ಕಾಂಟ್ರವರ್ಸಿ ಮಾಡೋರ ವಿರುದ್ಧ ನಾನು ಯುದ್ಧಕ್ಕೆ ನಿಂತ್ರೆ ಆಗೋದೇ ಬೇರೆ- ಗುಡುಗಿದ ನಟಿ ಸಪ್ತಮಿ ಗೌಡ

ನಟಿ ಸಪ್ತಮಿ ಗೌಡ ಅವರು, ನಟಿಯರ ಫೋಟೊ ಮತ್ತು ವಿಡಿಯೋಗಳನ್ನು ಅಸಭ್ಯವಾಗಿ ಚಿತ್ರೀಕರಿಸುವವರ ವಿರುದ್ಧ ಗರಂ ಆಗಿದ್ದಾರೆ. ಕಾಂಟ್ರವರ್ಸಿ ಮಾಡುವವರ ವಿರುದ್ಧ ಯುದ್ಧಕ್ಕೆ ನಿಂತರೆ ಅವರಿಗೆ ನರಕ ತೋರಿಸುವುದಾಗಿ ಸಂದರ್ಶನವೊಂದರಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Read Full Story
04:40 PM (IST) Apr 03

Karnataka News Live 3rd April: ಸ್ಟಾರ್‌ ಗಿರಿಯ ಧರ್ಮ ಸಂಕಟಗಳು - ಫ್ಯಾನ್ ಫಾಲೋಯಿಂಗ್‌ vs ಬಾಕ್ಸ್ ಆಫೀಸ್‌ - ನಿಜವಾದ ಸ್ಟಾರ್‌ ಯಾರು?

ಒಂದು ಚಿತ್ರರಂಗ ಉ‍ಳಿಯುವುದು ಕತೆಯಿಂದ, ಬೆಳೆಯುವುದು ಸ್ಟಾರ್‌ಗಳಿಂದ. ಆದರೆ ಸದ್ಯ ಕತೆಗಾರರಿಗೂ ಮರ್ಯಾದೆ ಇಲ್ಲ, ಸ್ಟಾರ್‌ಗಳಿಗೆ ಅಂಥಾ ದೊಡ್ಡ ಹುಮ್ಮಸ್ಸು ಇದ್ದಂತೆ ಕಾಣಿಸುತ್ತಿಲ್ಲ. ಅದಕ್ಕೆ ಯಾರು ಕಾರಣ, ಏನು ಕಾರಣ, ಪರಿಹಾರ ಏನು?

Read Full Story
04:25 PM (IST) Apr 03

Karnataka News Live 3rd April: ಕೇರಳ ಚುನಾವಣೆ ಹಿನ್ನೆಲೆ ಹೆಚ್ಚಿದ ಅಕ್ರಮ, ಮಂಗಳಾ ಎಕ್ಸ್‌ಪ್ರೆಸ್‌ ನಲ್ಲಿದ್ದ ಬ್ಯಾಗ್ ತೆರೆದ ಕರ್ನಾಟಕ ಅಧಿಕಾರಿಗಳೇ ಶಾಕ್!

ಕೇರಳ ಚುನಾವಣೆಯ ಹಿನ್ನೆಲೆಯಲ್ಲಿ, ಅಬಕಾರಿ ಇಲಾಖೆಯು ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲಿನಲ್ಲಿ ದಿಢೀರ್ ದಾಳಿ ನಡೆಸಿದೆ. ಈ ವೇಳೆ, ಜನರಲ್ ಬೋಗಿಯಲ್ಲಿದ್ದ ಅನುಮಾನಾಸ್ಪದ ಬ್ಯಾಗ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬಿಯರ್ ಕ್ಯಾನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯು ಅಕ್ರಮ ಮದ್ಯ ಸಾಗಾಟ ತಡೆಗಟ್ಟುವ ನಿಟ್ಟಿನಲ್ಲಿ ನಡೆದಿದೆ.
Read Full Story
03:54 PM (IST) Apr 03

Karnataka News Live 3rd April: ಬೆದರಿಕೆ ಹಾಕಿದ ಆರೋಪ - ಹೆಚ್‌ಡಿ ಕುಮಾರಸ್ವಾಮಿ-ಚಂದ್ರಶೇಖರ್ ಸಂಘರ್ಷಕ್ಕೆ ಕೋರ್ಟ್‌ನಿಂದಲೇ ಮಧ್ಯಸ್ಥಿಕೆದಾರ

ಲೋಕಾಯುಕ್ತ ಎಡಿಜಿಪಿ ಎಂ. ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಮಧ್ಯಸ್ಥಿಕೆದಾರರನ್ನು ನೇಮಿಸುವುದಾಗಿ ತಿಳಿಸಿದೆ.
Read Full Story
03:44 PM (IST) Apr 03

Karnataka News Live 3rd April: 18 ನೇ ವಯಸ್ಸಿಗೆ ಸಾಧನೆ ಮಾಡಿರೋ ಯುಟ್ಯೂಬರ್‌ ಸ್ಯಾಮ್‌ ಸಮೀರ್‌ ಹುಡುಗಿ ನೇಹಾ ಗುಪ್ತ ಅನೇಕರಿಗೆ ಮಾದರಿ!

Kannada Youtuber Sam Sameer GF Neha Gupta: ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್‌, ಈಗಾಗಲೇ ಮದುವೆ ಆಗೋಕೆ ಹುಡುಗಿ ಫಿಕ್ಸ್‌ ಮಾಡಿಕೊಂಡಿದ್ದಾರೆ. 1 ವಾರದ ಹಿಂದೆ ಇವರು ಹುಡುಗಿ ನೋಡೋ ಶಾಸ್ತ್ರ ಮಾಡಿ, ಮದುವೆ ಫಿಕ್ಸ್‌ ಮಾಡಿಕೊಂಡಿದ್ದಾರೆ. ನೇಹಾ ಗುಪ್ತ ಸಾಧನೆ ಅನೇಕರಿಗೆ ಗೊತ್ತಿಲ್ಲ.

Read Full Story
03:34 PM (IST) Apr 03

Karnataka News Live 3rd April: ಚಿತ್ರದುರ್ಗ - ಅತ್ತೆ ಮಗಳನ್ನು ಪ್ರೀತಿಸಿ ರಿಜಿಸ್ಟರ್ ಮದುವೆಯಾದ ಅಳಿಯ, ಮದುವೆ ಒಪ್ಪದ ಪೋಷಕರಿಂದ ರಕ್ತಸಿಕ್ತ ಸಂಧಾನ!

ಚಿತ್ರದುರ್ಗದ ಭರಮಸಾಗರದಲ್ಲಿ ಪ್ರೇಮ ವಿವಾಹದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ರಾಜಿ ಸಂಧಾನವು ಗುಂಪು ಘರ್ಷಣೆಗೆ ತಿರುಗಿದೆ. ಈ ಗಲಾಟೆಯಲ್ಲಿ ಎರಡೂ ಕಡೆಯವರು ಗಾಯಗೊಂಡಿದ್ದು, ಪೊಲೀಸರ ಸಮ್ಮುಖದಲ್ಲಿಯೇ ಹಲ್ಲೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ತೀವ್ರ ಸ್ವರೂಪ ಪಡೆದಿದೆ.
Read Full Story