ಇಸ್ರೋ ಭರ್ಜರಿ ಕೊಡುಗೆ ನೀಡುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಕುರಿತು ಇಸ್ರೋ ಇದೀಗ ಉಚಿತ ಆನ್ಲೈನ್ ಕೋರ್ಸ್ ಆರಂಭಿಸುತ್ತಿದೆ.
Karnataka News Live: ಇಸ್ರೋದಿಂದ ಭರ್ಜರಿ ಕೊಡುಗೆ, ಸ್ಪೇಸ್ ಟೆಕ್ ಕುರಿತು ಉಚಿತ ಆನ್ಲೈನ್ ಕೋರ್ಸ್

ಕನ್ನಡಪ್ರಭ ವಾರ್ತೆ ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ನೀಡುವ ಸಂಬಂಧ ಮೇ 5ರಿಂದ ನಡೆಯುತ್ತಿರುವ ಮನೆ ಮನೆ ಸಮೀಕ್ಷೆ ಭಾನುವಾರ ಮುಕ್ತಾಯವಾಗಿದ್ದು, ಅಂದಾಜು 1.04 ಕೋಟಿಗಿಂತ ಹೆಚ್ಚು ಮಂದಿ ಸಮೀಕ್ಷೆಯಲ್ಲಿ ಭಾಗಿಯಾಗುವ ಮೂಲಕ ಶೇ.90ಕ್ಕಿಂತ ಹೆಚ್ಚು ಗಣತಿಯಾಗಿದೆ. 2011ರ ಜನಗಣತಿ ಆಧರಿಸಿ ಪ್ರಸ್ತುತ ರಾಜ್ಯದಲ್ಲಿ 1.16 ಕೋಟಿ ಪರಿಶಿಷ್ಟ ಜಾತಿ ಸಮುದಾಯದವರು ಇರಬಹುದೆಂದು ಆಯೋಗ ಅಂದಾಜಿಸಿ ಸಮೀಕ್ಷೆ ಆರಂಭಿಸಿದೆ. ಈವರೆಗೆ ಬಹುತೇಕ ಜಿಲ್ಲೆಗಳಲ್ಲಿ ಸಮೀಕ್ಷೆ ಉತ್ತಮವಾಗಿ ನಡೆದಿದೆ. ಆದರೆ ಬಿಬಿಎಂಪಿಯಲ್ಲಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಜನ ಭಾಗಿಯಾಗಿಲ್ಲ. ಮನೆ ಮನೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಆಗದವರಿಗಾಗಿ ಆನ್ ಲೈನ್ ಮೂಲಕ ಕುಟುಂಬದ ವಿವರಗಳನ್ನು ಸಲ್ಲಿಸಲು ಅವಕಾಶವಿದ್ದು, ಈವರೆಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸ್ವಯಂ ಘೋಷಣೆ ಮಾಡಿಕೊಂಡಿವೆ. ಈ ನಡುವೆ ವಿಶೇಷ ಶಿಬಿರಗಳ ಮೂಲಕ ಗಣತಿ ನಡೆಯು ತ್ತಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚು ಮತಗಟ್ಟೆ ಇರುವ ಕಡೆ ಇಬ್ಬರನ್ನು ನಿಯೋಜಿಸಿ ಗಣತಿ ಕಾರ್ಯ ನಡೆಸಲಾಗುತ್ತಿದೆ.
Karnataka News Liveಇಸ್ರೋದಿಂದ ಭರ್ಜರಿ ಕೊಡುಗೆ, ಸ್ಪೇಸ್ ಟೆಕ್ ಕುರಿತು ಉಚಿತ ಆನ್ಲೈನ್ ಕೋರ್ಸ್
Karnataka News Liveಉಗ್ರರ ಬುಲೆಟ್ಗೆ ಬೈಕ್ ಪ್ರಿಯರ್ ಬುಲೆಟ್ ರ್ಯಾಲಿ ಉತ್ತರ, ಕೇರಳದಿಂದ ಕಾಶ್ಮೀರಕ್ಕೆ ಚಲೋ LoC ರೈಡ್
ಪೆಹಲ್ಗಾಂನಲ್ಲಿ ಉಗ್ರರ ದಾಳಿಗೆ 26 ಅಮಾಯಕರು ಮೃತಪಟ್ಟ ಘಟನೆ ನೋವು ಮಾಸುತ್ತಿಲ್ಲ. ಇದರ ನಡುವೆ ಉಗ್ರರ ಈ ದಾಳಿಯಿಂದ ಭಾರತೀಯರನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಇದೀಗ ಬೃಹತ್ ಬುಲೆಟ್ ಬೈಕ್ ರ್ಯಾಲಿ ಸಾಗುತ್ತಿದೆ. ಇದು ಕೇರಳದಿಂದ ಕೇರಳದ ಕಾಲಡಿಯಿಂದ ಕಾಶ್ಮೀರದ ವರೆಗೆ ಚಲೋ ಎಲ್ಒಸಿ ಬುಲೆಟ್ ಬೈಕ್ ರ್ಯಾಲಿ.
Karnataka News Liveಭಾರತದಲ್ಲಿ 4 ಸಾವಿರ ಗಡಿ ಸನಿಹಕ್ಕೆ ಕೋವಿಡ್ ಕೇಸ್, 22ರ ಯುವತಿ ಸೇರಿ ಇಂದು ನಾಲ್ಕು ಸಾವು
ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ದಿಢೀರ್ ಏರಿಕೆಯಾಗುತ್ತಿದೆ. ಇದರ ನಡುವೆ ಸಾವು ವರದಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಇಂದು ಒಂದೇ ದಿನ 22 ವರ್ಷದ ಯುವತಿ, 25 ವರ್ಷದ ಯುವಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
Karnataka News Liveಆರ್ಸಿಬಿ ಚಾಂಪಿಯನ್ ಆದರೆ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಹೋಳಿಗೆ ಊಟ
ಆರ್ಸಿಬಿ ಟ್ರೋಫಿ ಗೆಲ್ಲಲು ಅಭಿಮಾನಿಗಳ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದರ ನಡುವೆ ಮಹತ್ವದ ಘೋಷಣೆ ಹೊರಬಿದ್ದಿದೆ. ಆರ್ಸಿಬಿ ಪ್ರಶಸ್ತಿ ಗೆದ್ದರೆ ಜಿಲ್ಲೆಯ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಹೋಳಿಗೆ ಊಟ ವಿತರಿಸಲಾಗುತ್ತದೆ.
Karnataka News Liveಮಲೆನಾಡು ಜನರಿಗೆ ಹೊಸ ಅರಣ್ಯ ಕಾಯ್ದೆ ಭೀತಿ; ಸರ್ಕಾರದ ವಿರುದ್ಧ ತೊಡೆ ತಟ್ಟಲು ಸಜ್ಜಾದ ಜನತೆ!
Karnataka News Liveಸಾರಾ ಆಲಿ ಖಾನ್ ಜೊತೆ ನಟಿಸೋ ನಟರಿಗೆ ಶಾದಿ ಭಾಗ್ಯ ಗ್ಯಾರಂಟಿ
ನಿಮಗೆ ಗೊತ್ತಾ ನಟಿ ಸಾರಾ ಆಲಿ ಖಾನ್ ಯಾವ ನಟರ ಜೊತೆಗೆ ನಟಿಸಿದ್ದಾರೋ ಅ ನಟರಿಗೆ ಶೀಘ್ರದಲ್ಲೇ ಮದ್ವೇ ಆಗುತ್ತೆ ಅಂತೆ, ಹಾಗಂತ ಸ್ವತಃ ಸಾರಾ ಆಲಿ ಖಾನ್ ಹೇಳಿದ್ದಾರೆ.
Karnataka News Liveಭಾರತದ ಮೈಲಿಗಲ್ಲು, ಶೇ.15ರಷ್ಟು ಮಹಿಳಾ ಪೈಲೆಟ್ ಹೊಂದಿದೆ ಏಕೈಕ ದೇಶ
ಭಾರತ ಅತೀ ಹೆಚ್ಚು ಮಹಿಳಾ ಪೈಲೆಟ್ ಹೊಂದಿದ ದೇಶವಾಗಿದೆ. ಪೈಲೆಟ್ ಪೈಕಿ ಶೇಕಡಾ 15ರಷ್ಟು ಮಹಿಳಾ ಪೈಲೆಟ್ ಭಾರತದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುರಿತು ವಿಮಾನಯಾನ ಸಚಿವ ಮಾತನಾಡಿದ್ದಾರೆ.
Karnataka News Liveಕಬ್ಬನ್ ಪಾರ್ಕ್ ಮಾದರಿಯಲ್ಲಿಯೇ ಬೆಂಗಳೂರಲ್ಲಿ 154 ಎಕರೆ ವಿಸ್ತೀರ್ಣದಲ್ಲಿ ಮತ್ತೊಂದು ಉದ್ಯಾನವನ ನಿರ್ಮಾಣ!
ಕಬ್ಬನ್ ಪಾರ್ಕ್ ಮಾದರಿಯಲ್ಲಿ ಬೆಂಗಳೂರಿನ 153 ಎಕರೆ ವಿಸ್ತೀರ್ಣದಲ್ಲಿ ಮತ್ತೊಂದು ಬೃಹತ್ ಉದ್ಯಾನವನ ನಿರ್ಮಾಣವಾಗಲಿದೆ. ಈ ಉದ್ಯಾನವನದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ವಿವಿಧ ಸ್ಥಳೀಯ ಪ್ರಭೇದದ ಸಸ್ಯಗಳನ್ನು ಬೆಳೆಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
Karnataka News Liveಆರ್ಸಿಬಿ ಟ್ರೋಫಿ ಗೆದ್ರೆ ಐಪಿಎಲ್ಗೂ ನಿವೃತ್ತಿ ಹೇಳ್ತಾರಾ ಕೊಹ್ಲಿ? IPL ಚೇರ್ಮನ್ ಮನವಿ ಮಾಡಿದ್ದೇಕೆ?
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಹೇಳಿ ಶಾಕ್ ಕೊಟ್ಟಿದ್ದಾರೆ. ಇದೀಗ ಐಪಿಎಲ್ ಟೂರ್ನಿಗೂ ನಿವೃತ್ತಿ ಹೇಳುತ್ತಾರಾ? ಐಪಿಎಲ್ ಚೇರ್ಮನ್ ವಿರಾಟ್ ಕೊಹ್ಲಿಗೆ ಮಾಡಿದ ವಿಶೇಷ ಮನವಿ ಈ ಆತಂಕ ಹೆಚ್ಚಿಸಿದೆ. ಈ ಮನವಿ, ಕೊಹ್ಲಿ ನಿವೃತ್ತಿ ಸುಳಿವು ನೀಡುತ್ತಿದೆಯಾ?
Karnataka News Liveನೀವು ಆದಾಯ ತೆರಿಗೆ ಪಾವತಿಸುತ್ತೀರಾ? ಜೂನ್ ತಿಂಗಳ ಈ ದಿನಾಂಕ ಮಿಸ್ ಮಾಡಿದ್ರೆ ಭಾರೀ ದಂಡ ಖಚಿತ!
Karnataka News LiveSBI ಲಾಕರ್ನಲ್ಲಿದ್ದ 12 ಲಕ್ಷದ ಚಿನ್ನಾಭರಣ ಗಾಯಬ್? ಬ್ಯಾಂಕ್ ಉಡಾಫೆ ಉತ್ತರ- ಪೊಲೀಸರಿಗೆ ದೂರು!
ಬೆಂಗಳೂರಿನ ಎಸ್ಬಿಐ ಲಾಕರ್ ಒಂದರಲ್ಲಿ ಇಟ್ಟಿದ್ದ 12 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿರುವುದಾಗಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಆಗಿದ್ದೇನು?
Karnataka News Liveಕೆಎಸ್ಡಿಎಲ್ ವತಿಯಿಂದ 10 ಸಾವಿರ ಅರಣ್ಯ ರಕ್ಷಕರಿಗೆ ಸುರಕ್ಷಾ ಕಿಟ್ ವಿತರಣೆ!
ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ (ಕೆಎಸ್ ಡಿಎಲ್) ವತಿಯಿಂದ ರಾಜ್ಯದ 10 ಸಾವಿರ ಅರಣ್ಯ ರಕ್ಷಕರು/ವೀಕ್ಷಕರು, ಕಾವಾಡಿಗಳು, ಮಾವುತರು ಮತ್ತು ಚಾಲಕರಿಗೆ ಸುರಕ್ಷಾ ಕಿಟ್ ವಿತರಿಸಲಾಗುವುದು.
Karnataka News Liveಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ, ಮ್ಯಾಚ್ ರದ್ದಾದರೆ ಚಾಂಪಿಯನ್ ಕಿರೀಟ ಯಾರಿಗೆ?
ಆರ್ಸಿಬಿ-ಪಂಜಾಬ್ ನಡುವಿನ ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಈಗಾಗಲೇ ಅಹಮ್ಮದಾಬಾದ್ನಲ್ಲಿ ಉತ್ತಮ ಮಳೆಯಾಗುತ್ತಿದೆ. ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಚಾಂಪಿಯನ್ ಕಿರೀಟ ಯಾರಿಗೆ?
Karnataka News Liveತಮಿಳುನಾಡು ಚುನಾವಣೆ ಹೊಸ್ತಿಲಲ್ಲೇ ಎಐಎಡಿಎಂಕೆ ಮೈತ್ರಿಕೂಟಕ್ಕೆ ಡಿಎಂಡಿಕೆ ವಿದಾಯ,ಡಿಎಂಕೆ ಮೌನ!
ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೇವಲ 10 ತಿಂಗಳು ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಮೈತ್ರಿ ಲೆಕ್ಕಾಚಾರ ಆರಂಭಿಸಿವೆ. ಡಿಎಂಕೆ ಮೈತ್ರಿಕೂಟದಲ್ಲಿ ಹಲವು ಪಕ್ಷಗಳಿದ್ದರೆ, ಎಐಎಡಿಎಂಕೆ ಮಹಾಮೈತ್ರಿ ರಚಿಸಲು ಯತ್ನಿಸುತ್ತಿದೆ. ಡಿಎಂಡಿಕೆ ತನ್ನ ಮೈತ್ರಿ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.
Karnataka News Liveವಿಳಾಸ, ಮಿಸ್ಟೇಕ್ ಸೇರಿದಂತೆ ಯಾವುದೇ ಆಧಾರ್ ಅಪ್ಡೇಟ್ ಜೂ.14ರ ಬಳಿಕ ಶುಲ್ಕ
ವಿಳಾಸ ಬದಲಾವಣೆ, ತಪ್ಪಾಗಿರುವ ಸ್ಪೆಲ್ಲಿಂಗ್ ಸರಿಪಡಿಸುವುದು ಸೇರಿದಂತೆ ಯಾವುದೇ ಆಧಾರ್ ಅಪ್ಡೇಟ್ ಇನ್ನು ಫ್ರೀಯಾಗಿ ಸಿಗಲ್ಲ. ಜೂನ್ 14ರ ಬಳಿಕ ಪ್ರತಿ ಆಧಾರ್ ಅಪ್ಡೇಟ್ಗೆ ಶುಲ್ಕ ವಿಧಿಸಲಾಗುತ್ತದೆ. ಎಷ್ಟು ಪಾವತಿ ಮಾಡಬೇಕು. ಜೂನ್ 14ರ ಮೊದಲು ಉಚಿತವಾಗಿ ಮಾಡಬಹುದಾ?
Karnataka News Liveಶಿವಕಾರ್ತಿಕೇಯನ್ ಮಗ ಪವನ್ ಮೊಟ್ಟಮೊದಲ ಹುಟ್ಟುಹಬ್ಬ ಆಚರಣೆ
ನಟ ಶಿವಕಾರ್ತಿಕೇಯನ್ ತಮ್ಮ ಕಿರಿಯ ಮಗ ಪವನ್ನ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Karnataka News Liveಹೆಪ್ಪುಗಟ್ಟಿದ ಸಮುದ್ರದೊಳಗೆ 164 ವರ್ಷ ಹಳೆಯ ಬಂಗಾರದ ಪಾಕೆಟ್ ಗಡಿಯಾರ ಪತ್ತೆ!
ಲೇಡಿ ಎಲ್ಜಿನ್ ಹಡಗು ಮುಳುಗಿದ 164 ವರ್ಷಗಳ ನಂತರ, ಹಡಗಿನಲ್ಲಿದ್ದ ಬ್ರಿಟಿಷ್ ಪತ್ರಕರ್ತ ಹರ್ಬರ್ಟ್ ಇಂಗ್ರಾಮ್ ಅವರ ಚಿನ್ನದ ಪಾಕೆಟ್ ಗಡಿಯಾರ ಅವರ ಊರಿಗೆ ವಾಪಸ್ ಬಂದಿದೆ. 1860 ರಲ್ಲಿ ಮಿಚಿಗನ್ ಸರೋವರದಲ್ಲಿ ಸಂಭವಿಸಿದ ದುರಂತದಲ್ಲಿ ಹಡಗು ಮುಳುಗಿತ್ತು, ಸ್ಕೂಬಾ ಡೈವರ್ಗಳು ಗಡಿಯಾರ ಕಂಡುಹಿಡಿದರು.
Karnataka News Liveಜೂನ್ನಲ್ಲಿ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ, ಇಲ್ಲಿದೆ 12 ರಜೆಯ ಪೂರ್ಣ ಪಟ್ಟಿ
2025ರ ಜೂನ್ನಲ್ಲಿ ಒಟ್ಟು 12 ಬ್ಯಾಂಕ್ ರಜಾದಿನಗಳಿವೆ. ರಜಾದಿನಗಳ ಪಟ್ಟಿ ತಿಳಿದುಕೊಳ್ಳುವುದು ಬಹಳ ಮುಖ್ಯ. ಹಣಕಾಸು ವ್ಯವಹಾರಗಳಿಗೆ ಮೊದಲು ರಜಾ ಪಟ್ಟಿ ಪರಿಶೀಲಿಸಿ
Karnataka News Liveಸೌದಿಯಲ್ಲಿ ಒಂದೇ ವಾರದಲ್ಲಿ 12,129 ಮಂದಿ ಬಂಧನ, ಕಾರಣ ಇದು
ಸೌದಿ ಅರೇಬಿಯಾದಲ್ಲಿ ದೇಶದ ವಾಸ್ತವ್ಯ ಮತ್ತು ಉದ್ಯೋಗ ಕಾನೂನುಗಳನ್ನು ಉಲ್ಲಂಘಿಸಿದವರನ್ನು ಮತ್ತು ಗಡಿ ಭದ್ರತಾ ನಿಯಮಗಳನ್ನು ಮುರಿದವರನ್ನು ಬಂಧಿಸಲಾಗಿದೆ.
Karnataka News Liveಬರುತ್ತಿದೆ ಕೇವಲ 1 ಲಕ್ಷ ರೂ.ಗೆ ಲಿಜಿಯರ್ ಮಿನಿ ಎಲೆಕ್ಟ್ರಿಕ್ ಕಾರು, 192 ಕಿ.ಮಿ ಮೈಲೇಜ್
ಭಾರತದಲ್ಲಿ ಲಿಡಿಯರ್ ಮಿನಿ ಎಲೆಕ್ಟ್ರಿಕ್ ಕಾರು ರೋಡ್ ಟೆಸ್ಟಿಂಗ್ ಪೂರ್ಣಗೊಳಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ. ಇದರ ಬೆಲೆ ಕೇವಲ 1 ಲಕ್ಷ ರೂಪಾಯಿ. ಬಿಡುಗಡೆ ವೇಳೆ 30 ರಿಂದ 40 ಸಾವಿರ ರೂ ಹೆಚ್ಚಾಗಬಹುದು. ಆದರೆ 192 ಕಿಲೋಮೀಟರ್ ಮೈಲೇಜ್ ನೀಡಲಿದೆ.