ಬಿಗ್ಬಾಸ್ ಖ್ಯಾತಿಯ ರಜತ್ ಇದೀಗ ಸಾರ್ವಜನಿಕ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟದ ವಿಡಿಯೋ ಮಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಹಾಗೂ ಪಾರಂಪರಿಕ ಕಟ್ಟಡದ ಮುಂದೆ ಫೋಟೋಶೂಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ಅವರು, ಈಗ ಹೀಗೊಂದು ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದಾರೆ.
- Home
- News
- State
- Karnataka News Live: Bigg Boss ರಜತ್ಗೆ ಹೀಗೆಲ್ಲಾ ಮಾಡಬಾರದೆಂದು ಗೊತ್ತೇ ಇರಲಿಲ್ವಂತೆ! ಕ್ಷಮೆ ಕೋರಿ ಕೊಟ್ರು ಒಂದು ಸ್ಪಷ್ಟನೆ
Karnataka News Live: Bigg Boss ರಜತ್ಗೆ ಹೀಗೆಲ್ಲಾ ಮಾಡಬಾರದೆಂದು ಗೊತ್ತೇ ಇರಲಿಲ್ವಂತೆ! ಕ್ಷಮೆ ಕೋರಿ ಕೊಟ್ರು ಒಂದು ಸ್ಪಷ್ಟನೆ

ಬೆಂಗಳೂರು: ಕೊಪ್ಪಳ, ಗದಗ, ರಾಯಚೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜಿ.ಬೆಂಚಮಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ದೇವರಾಯನಗೌಡ ಪಾಟೀಲ (50) ಎಂಬುವರು ಮೃತಪಟ್ಟಿದ್ದಾರೆ. ಈ ಮಧ್ಯೆ, ಶಿವಮೊಗ್ಗ ಜಿಲ್ಲೆಯ ಹಲವೆಡೆ ಭಾರೀ ಗಾಳಿ-ಮಳೆಗೆ ಸಾವಿರಾರು ಅಡಕೆ ಮರಗಳು ಧರೆಗುರುಳಿವೆ. ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ಆರ್.ಲೋಕೇಶ (52) ಎಂಬುವರು ತಮ್ಮ ಅಡಿಕೆ ಮನೆಗೆ ಹಾಕಿದ್ದ ಹೆಂಚುಗಳು ಹಾರಿ ಹೋಗಿದ್ದನ್ನು ನೋಡಿ, ಗಾಬರಿಗೊಂಡು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.
ಗದಗ ಜಿಲ್ಲೆ ಮುಂಡರಗಿಯಲ್ಲಿ ಗಾಳಿ-ಮಳೆಗೆ ಖಾಸಗಿ ಕಂಪನಿಯ ಮೊಬೈಲ್ ಟವರ್ ನ ಕಂಬ ಮುರಿದು ಬಿದ್ದಿದೆ. ರಾಯಚೂರು ಜಿಲ್ಲೆ ಹಳೆ ಕೆರೆ ಎಂಬಲ್ಲಿ ಸಿಡಿಲು ಬಡಿದು 8 ಕುರಿ ಮತ್ತು 3 ಕುರಿಮರಿಗಳು ಮೃತಪಟ್ಟಿವೆ.
Karnataka News Live 28 April 2026Bigg Boss ರಜತ್ಗೆ ಹೀಗೆಲ್ಲಾ ಮಾಡಬಾರದೆಂದು ಗೊತ್ತೇ ಇರಲಿಲ್ವಂತೆ! ಕ್ಷಮೆ ಕೋರಿ ಕೊಟ್ರು ಒಂದು ಸ್ಪಷ್ಟನೆ
Karnataka News Live 28 April 2026ಕೆಎಎಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ - ಸಿಎಂ ಸಿದ್ದರಾಮಯ್ಯ
ನಾವು ಅಧಿಕಾರದಲ್ಲಿ ಇರಬೇಕಾದರೆ ಪ್ರತಿ 5 ವರ್ಷಕ್ಕೊಮ್ಮೆ ರಿನೀವಲ್ (ನವೀಕರಿಸಬೇಕು) ಮಾಡಿಕೊಳ್ಳಬೇಕು. ಆದರೆ, ಸರ್ಕಾರಿ ಅಧಿಕಾರಿಗಳು ಒಮ್ಮೆ ಸೇವೆಗೆ ಸೇರ್ಪಡೆಯಾದರೆ 30ರಿಂದ 35 ವರ್ಷ ಕೆಲಸದಿಂದ ತೆಗೆಯಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Karnataka News Live 28 April 2026ಮುಂಬೈಗೆ ಹೋಗೋರ ಗಮನಕ್ಕೆ ರೈಲು ಸೇವೆಯಲ್ಲಿ 1ತಿಂಗಳು ಅನಿರೀಕ್ಷಿತ ಬದಲಾವಣೆ, ಕೊಂಕಣ-ದಕ್ಷಿಣ ರೈಲ್ವೆ ಜಂಟಿ ಪ್ರಕಟಣೆ
Karnataka News Live 28 April 2026ಪಂಜಾಬ್ ರೈಲು ಸ್ಫೋಟಕ್ಕೆ ಉಗ್ರರ ಬೃಹತ್ ಸಂಚು - ವಿಫಲವಾದ ಭಯಾನಕ ಯತ್ನ, ಓರ್ವ ಉಗ್ರ ಸಾವು
Karnataka News Live 28 April 2026ಬೈಕ್ ಟ್ಯಾಕ್ಸಿ ಫೈಟ್ ಈಗ ಸುಪ್ರೀಂ ಅಂಗಳಕ್ಕೆ! ಹೈಕೋರ್ಟ್ ತೀರ್ಪು ಪ್ರಶ್ನಿಸಿ ದೆಹಲಿ ಮೆಟ್ಟಿಲೇರಿದ ರಾಜ್ಯ ಸರ್ಕಾರ
ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಷೇಧವನ್ನು ತೆರವುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಬೈಕ್ ಟ್ಯಾಕ್ಸಿ ನಿಷೇಧವನ್ನು ಅಸಂವಿಧಾನಿಕ ಎಂದು ಹೈಕೋರ್ಟ್ ಹೇಳಿತ್ತು.
Karnataka News Live 28 April 2026ಬೆಂಗಳೂರಲ್ಲಿ ಉಮರ್ ಖಾಲಿದ್ ಕುರಿತ ಪುಸ್ತಕ ವಿಮರ್ಶೆ ವಿವಾದ, ಬಿಜೆಪಿ ಪ್ರತಿಭಟನೆ, ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮ
Karnataka News Live 28 April 2026ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ವಿವಾದ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸ್ಪಷ್ಟನೆ
Karnataka News Live 28 April 2026ಸಿದ್ದರಾಮಯ್ಯ ನಂತರ ಸಿಎಂ ರೇಸ್ನಲ್ಲಿರೋದು ಡಿಕೆಶಿ ಮಾತ್ರ - ಶಾಸಕ ಎಚ್.ಸಿ.ಬಾಲಕೃಷ್ಣ
ಸಿದ್ದರಾಮಯ್ಯ ನಂತರ ಮುಖ್ಯಮಂತ್ರಿ ರೇಸ್ನಲ್ಲಿರೋದು ಡಿ.ಕೆ.ಶಿವಕುಮಾರ್ ಮಾತ್ರ. ಬೇರೆಯವರೂ ರೇಸ್ನಲ್ಲಿ ಇರಬಹುದು. ಆದರೆ ಅದು ಕಾಲಕ್ಕೆ ತಕ್ಕಂತೆ ತೀರ್ಮಾನ ಆಗುತ್ತದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.
Karnataka News Live 28 April 2026ದೆಹಲಿ ಟ್ರಿಪ್ನಲ್ಲಿರುವ ರಾಜ್ಯ ಸರ್ಕಾರ ಬರಗಾಲ ನಿರ್ವಹಣೆಯಲ್ಲಿ ವಿಫಲ - ನಿಖಿಲ್ ಕುಮಾರಸ್ವಾಮಿ
ಖುರ್ಚಿಗಾಗಿ ದೆಹಲಿ ಪ್ರವಾಸದ ಬಿಸಿಯಲ್ಲಿರುವ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಸರಿಯಾದ ಬಿಸಿಯನ್ನು ರಾಜ್ಯದ ಜನತೆ ಮುಟ್ಟಿಸಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
Karnataka News Live 28 April 2026ಬೆಂಗಳೂರು-ತುಮಕೂರು ರೈಲು ಮಾರ್ಗ ಚತುಷ್ಪಥ, ಯಲಹಂಕದಿಂದ ಅರಸೀಕೆರೆಗೆ ಹೊಸ ಮೆಮು, ಏನಿದು ಮಹಾಯೋಜನೆ?
Karnataka News Live 28 April 2026ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆ ಆರ್ಭಟ - 22 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ
Karnataka News Live 28 April 2026ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ - ಸಚಿವ ದಿನೇಶ್ ಗುಂಡೂರಾವ್
ಸಚಿವ ಸಂಪುಟ ಪುನರ್ ರಚನೆ ಅಗತ್ಯವಿದ್ದು, ಇತರರಿಗೆ ಕೂಡ ಅವಕಾಶ ಸಿಗಬೇಕು. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
Karnataka News Live 28 April 2026ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ರೈಲು - ವೇಳಾಪಟ್ಟಿ, ನಿಲುಗಡೆ ಬಗ್ಗೆ ಸಂಪೂರ್ಣ ಮಾಹಿತಿ
Karnataka News Live 28 April 2026ಅಭಿವೃದ್ಧಿಯಲ್ಲಿ ಎಂಜಿನಿರ್ಗಳ ಕೊಡುಗೆ ಅನನ್ಯ - ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಶ್ಲಾಘನೆ
ಎಂಜಿನಿಯರ್ಗಳು ಈ ಸಮಾಜಕ್ಕೆ, ದೇಶಕ್ಕೆ ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ. ಅಭಿವೃದ್ಧಿ, ನಗರದ ಸೌಂದರ್ಯತೆಗೆ ಎಂಜಿನಿಯರ್ಗಳ ಕೊಡುಗೆ ಅನನ್ಯವಾದುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
Karnataka News Live 28 April 2026ಸಂಧಾನದ ನಂತರವೂ ಸರಿಹೋಗದ ಸಂಸಾರ - 4 ದಿನದ ಹಿಂದಷ್ಟೇ ಮನೆಗೆ ಬಂದ ಪತ್ನಿಯ ಕೊಂದು ಮಗುವಿನೊಂದಿಗೆ ಬಾವಿಗೆ ಜಿಗಿದ ಪತಿ
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೊಬ್ಬ ಪತ್ನಿಯನ್ನು ಕೊಂದು, ಮಗುವಿನೊಂದಿಗೆ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾನೆ. ಸ್ಥಳೀಯರು ಕೂಡಲೇ ಮಗುವನ್ನು ರಕ್ಷಿಸಿದರೂ, ಪತಿ ಪತ್ನಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
Karnataka News Live 28 April 2026ನಿವೃತ್ತ ಡಿಜಿ ಓಂಪ್ರಕಾಶ್ ಹತ್ಯೆ ಪ್ರಕರಣ - ಆರೋಪಿ ಪತ್ನಿ ನೋಡಲು ಬರದ ಮಕ್ಕಳು, ವಿಚಿತ್ರ ವರ್ತನೆಗೆ ಬೇಸತ್ತ ಜೈಲಾಧಿಕಾರಿಗಳು!
Karnataka News Live 28 April 2026ಜ್ಯೂಸ್ ಬಾಟಲ್ ಸಾಗಿಸುತ್ತಿದ್ದ ಲಾರಿ ಪಲ್ಟಿ - ಚಾಲಕನ ನೆರವಿಗೆ ಧಾವಿಸದೇ ಬಿಟ್ಟಿಯಾಗಿ ಸಿಕ್ಕ ಜ್ಯೂಸ್ಗೆ ಮುಗಿಬಿದ್ದ ಜನ
ತಂಪು ಪಾನೀಯ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದ್ದು ಚಾಲಕ ಸಹಾಯಕ್ಕಾಗಿ ಬೇಡಿದರೂ, ಜನ ಆತನನ್ನು ನಿರ್ಲ್ಷಕ್ಷಿಸಿ ತಮ್ಮ ವಾಹನಗಳಲ್ಲಿ ಬಂದು ರಸ್ತೆಗೆ ಬಿದ್ದ ಜ್ಯೂಸ್ ಬಾಟಲ್ಗಳನ್ನು ಹೊತ್ತೊಯ್ದಿದ್ದು ಜನರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
Karnataka News Live 28 April 2026ಬೆಂಗಳೂರಿನಲ್ಲಿ ಎನ್ವಿಡಿಯಾ ಬೃಹತ್ ಹೂಡಿಕೆ - 1,230 ಕೋಟಿ ರೂ. ಮೊತ್ತದ ಡೀಲ್; 7.6 ಲಕ್ಷ ಚದರಡಿ ಕಚೇರಿ ಬಾಡಿಗೆಗೆ!
Karnataka News Live 28 April 2026ರಾಜ್ ಸ್ಮಾರಕ ವಿವಾದ - ನಟ ಚೇತನ್ ಅಹಿಂಸಾ ವಿರುದ್ಧ ಪ್ರತಿಭಟನೆ, ಗಡಿಪಾರಿಗೆ ಆಗ್ರಹ, ಹಲವು ಗಣ್ಯರಿಂದ ಖಂಡನೆ
Karnataka News Live 28 April 2026SSLC ಲೀ ಹಳಗನ್ನಡ ನಡುಗನ್ನಡ - ಮಕ್ಕಳು ಗಡಗಡ! ಕನ್ನಡ ವಿಷಯದಲ್ಲೂ ಫೇಲ್ ಆಗಲು ಇದೇ ಕಾರಣವೇ?
ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅನುತ್ತೀರ್ಣರಾಗಲು ಪಠ್ಯಪುಸ್ತಕದಲ್ಲಿನ ಅಧಿಕ ವ್ಯಾಕರಣದ ಹೊರೆ ಮತ್ತು ಹಳಗನ್ನಡ, ನಡುಗನ್ನಡ ಪಾಠಗಳ ಕಠಿಣತೆಯೇ ಪ್ರಮುಖ ಕಾರಣವೆಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.