ಸಾಮಾನ್ಯ ಆಟೋ ಡ್ರೈವರ್ ಮಗ ವಿಘ್ನೇಶ್ ಪುಥೂರ್ ಮುಂಬೈ ಇಂಡಿಯನ್ಸ್ ತಂಡ ಸೇರಲು ಕಾರಣರಾದವರು ವಿನಯ್ ಕುಮಾರ್. ಕೇರಳ T20 ಲೀಗ್’ನಲ್ಲಿ ಆಡುತ್ತಿದ್ದ ವಿಘ್ನೇಶನ ಪ್ರತಿಭೆಯನ್ನು ಗುರುತಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಕರೆತಂದರು.
ಪೂರ್ತಿ ಓದಿKarnataka News Live: ನಮ್ಮ ವಿನಯ್ ಕುಮಾರ್ ಹುಡುಕಿ ತೆಗೆದ ಮಲಪ್ಪುರಂ ಗೋಲ್ಡ್ ಕಥೆ..!

ಸಚಿವ ಸಂಪುಟ ಪುನರ್ರಚನೆ ಹಾಗೂ ಪರಿಷತ್ನ ಖಾಲಿ ಸ್ಥಾನಗಳ ನೇಮಕದ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಭಾನುವಾರ ಮಹತ್ವದ ಚರ್ಚೆ ನಡೆಸಿದ್ದು, ಅಂತಿಮ ಹಂತದ ಚರ್ಚೆಗೆ ಮುಂದಿನ ವಾರ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಇದೇ ವೇಳೆ ಸಚಿವ ಸಂಪುಟ ಪುನಾರಚನೆ ವಿಚಾರವಾಗಿಯೂ ಚರ್ಚಿಸಿದ್ದು ಏಪ್ರಿಲ್ ತಿಂಗಳಿನಲ್ಲಿ ಪುನರ್ರಚನೆ ಪ್ರಕ್ರಿಯೆ ನಡೆಸುವ ಬಗ್ಗೆ ಚರ್ಚೆಯಾಗಿದೆ. ಸಂಪುಟದಿಂದ ಐದಾರು ಮಂದಿ ಸಚಿವರನ್ನು ಆ ಜಾಗಕ್ಕೆ ಬೇರೆಯವರನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚೆಯಾಗಿದೆ.
ನಮ್ಮ ವಿನಯ್ ಕುಮಾರ್ ಹುಡುಕಿ ತೆಗೆದ ಮಲಪ್ಪುರಂ ಗೋಲ್ಡ್ ಕಥೆ..!
ತಂದೆಯಾಗಿ ಬಡ್ತಿ ಪಡೆದ ಕ್ರಿಕೆಟಿಗ ಕೆ ಎಲ್ ರಾಹುಲ್; ಅಥಿಯಾ ಶೆಟ್ಟಿಯಿಂದ ತಾತನಾದ ಸುನೀಲ್ ಶೆಟ್ಟಿ!
ಕ್ರಿಕೆಟರ್ ಕೆ ಎಲ್ ರಾಹುಲ್, ಅಥಿಯಾ ಶೆಟ್ಟಿ ಅವರು ಪಾಲಕರಾಗಿ ಬಡ್ತಿ ಪಡೆದಿದ್ದಾರೆ.
ಪೂರ್ತಿ ಓದಿಬೆಂಗಳೂರಿನ ಎಲ್ಲ ನಿವಾಸಿಗಳ ಮನೆ ಬಾಗಿಲಿಗೆ ಉಚಿತ ಆಸ್ತಿ ಪತ್ರ ವಿತರಣೆ: ಡಿ.ಕೆ. ಶಿವಕುಮಾರ್
ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ಉಚಿತ ಖಾತೆ ನೀಡುವ ವಿನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಏಪ್ರಿಲ್ ತಿಂಗಳಿನಿಂದ ಈ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ತೆರಿಗೆ ವ್ಯಾಪ್ತಿಗೆ ಬಾರದ ಮನೆಗಳನ್ನು ಗುರುತಿಸಿ ತೆರಿಗೆ ವಸೂಲಿ ಮಾಡಲಾಗುವುದು.
ಪೂರ್ತಿ ಓದಿಸಂಸದರ ವೇತನ, ದಿನಭತ್ಯೆ, ಪಿಂಚಣಿ ಏರಿಸಿದ ಕೇಂದ್ರ ಸರ್ಕಾರ, ಈಗ ವರ್ಷಕ್ಕೆ 15 ಲಕ್ಷ ಸ್ಯಾಲರಿ!
ಕೇಂದ್ರ ಸರ್ಕಾರವು ಸಂಸದರ ವೇತನ, ಭತ್ಯೆ ಮತ್ತು ಪಿಂಚಣಿಯನ್ನು ಹೆಚ್ಚಿಸಿದೆ. 2023ರ ಏಪ್ರಿಲ್ 1 ರಿಂದ ಪರಿಷ್ಕೃತ ವೇತನಗಳು ಜಾರಿಗೆ ಬರಲಿವೆ. ಕರ್ನಾಟಕ ಸರ್ಕಾರವು ಸಹ ಶಾಸಕರ ವೇತನವನ್ನು ಹೆಚ್ಚಿಸಿದೆ.
ಪೂರ್ತಿ ಓದಿಚಿನ್ನ vs ವಜ್ರ : ಹೂಡಿಕೆ ಮಾಡುವುದಕ್ಕೆ ಯಾವುದು ಉತ್ತಮ?
ಭಾರತದಲ್ಲಿ ಚಿನ್ನವು ಸಂಸ್ಕೃತಿಯ ಭಾಗವಾಗಿದೆ ಮತ್ತು ಸುಲಭವಾಗಿ ಹಣವನ್ನಾಗಿ ಪರಿವರ್ತಿಸಬಹುದಾದ ಹೂಡಿಕೆಯಾಗಿದೆ. ವಜ್ರಗಳಿಗೆ ಹೋಲಿಸಿದರೆ ಚಿನ್ನದ ಆಭರಣಗಳು ಮೌಲ್ಯವನ್ನು ಉಳಿಸಿಕೊಳ್ಳುತ್ತವೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಹೊಂದಿವೆ.
ಪೂರ್ತಿ ಓದಿಗೋಲ್ಡ್ ಲೋನ್ vs ಪರ್ಸನಲ್ ಲೋನ್: ತುರ್ತು ಕಿರುಸಾಲ ಪಡೆಯಲು ಯಾವುದು ಉತ್ತಮ?
ಆರ್ಥಿಕ ತುರ್ತು ಸಂದರ್ಭಗಳಲ್ಲಿ ಕಿರುಸಾಲ ಪಡೆಯಲು ಚಿನ್ನದ ಸಾಲ ಮತ್ತು ವೈಯಕ್ತಿಕ ಸಾಲಗಳು ಲಭ್ಯವಿವೆ. ಆದರೆ, ಯಾವ ಸಾಲ ಪಡೆದರೆ ಸೂಕ್ತ ಎಂಬ ಗೊಂದಲಗಳಿಗೆ ಇಲ್ಲಿದೆ ನೋಡಿ ಪರಿಹಾರ..
ಪೂರ್ತಿ ಓದಿಜ್ಞಾಪಕಶಕ್ತಿ ಕುಂದುತ್ತಿದೆಯೇ? ಈಗಲೇ ಈ ಅಭ್ಯಾಸಗಳನ್ನು ಬಿಟ್ಟುಬಿಡಿ!
ಇತ್ತೀಚಿನ ದಿನಗಳಲ್ಲಿ ಜ್ಞಾಪಕಶಕ್ತಿ ಕುಂದುವುದು ಸಾಮಾನ್ಯವಾಗಿದೆ. ಕೆಲವು ಅಭ್ಯಾಸಗಳು ಇದಕ್ಕೆ ಕಾರಣವಾಗಬಹುದು. ಅವುಗಳನ್ನು ಬಿಟ್ಟುಬಿಡುವುದು ಉತ್ತಮ.
ಪೂರ್ತಿ ಓದಿಬೆಂಗಳೂರು ಉದ್ಯಮಿ ಲೋಕನಾಥ್ ಸಿಂಗ್ ಉದ್ಯಮಿ ಕೇಸ್ನಲ್ಲಿ ಟ್ವಿಸ್ಟ್; ಹೆಣ್ಣು ಕೊಟ್ಟ ಅತ್ತೆಯಿಂದಲೇ ಸ್ಕೆಚ್?
ಬೆಂಗಳೂರಿನ ಉದ್ಯಮಿ ಲೋಕನಾಥ್ ಸಿಂಗ್ ಕೊಲೆ ಪ್ರಕರಣದಲ್ಲಿ ಅತ್ತೆ ಮತ್ತು ಹೆಂಡತಿಯೇ ಆರೋಪಿಗಳು ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹ ಮತ್ತು ಬೆದರಿಕೆ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂರ್ತಿ ಓದಿBCCI ಸೆಂಟ್ರಲ್ ಕಾಂಟ್ರ್ಯಾಕ್ಟ್ ಪ್ರಕಟ; ಮೊದಲ ಬಾರಿ ಕನ್ನಡತಿಗೆ ಸ್ಥಾನ!
ಭಾರತ ಮಹಿಳಾ ಕ್ರಿಕೆಟ್ ತಂಡದ ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪ್ರಕಟಗೊಂಡಿದೆ. ಹರ್ಮನ್ಪ್ರೀತ್, ಸ್ಮೃತಿ, ದೀಪ್ತಿ 'ಎ' ಗ್ರೇಡ್ನಲ್ಲಿದ್ದು, ಶ್ರೇಯಾಂಕಾ ಪಾಟೀಲ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಗ್ರೇಡ್ಗಳ ಆಧಾರದ ಮೇಲೆ ಆಟಗಾರ್ತಿಯರಿಗೆ ಸಂಭಾವನೆ ನಿಗದಿಪಡಿಸಲಾಗಿದೆ.
ಪೂರ್ತಿ ಓದಿರಜತ್, ವಿನಯ್ ಗೌಡ ಪೊಲೀಸರ ವಶಕ್ಕೆ; ಮಚ್ಚು ಹಿಡಿದು ರೀಲ್ಸ್ ಹುಚ್ಚಾಟ ಮಾಡಿದ್ದ ಬಿಗ್ ಬಾಸ್ ಸ್ಪರ್ಧಿಗಳು!
ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಟ ಮಚ್ಚು ಹಿಡಿದು ರೀಲ್ಸ್ ಮಾಡಿದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದಾರೆ. ಬಸವೇಶ್ವರ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೂರ್ತಿ ಓದಿರಾಜ್ಯದ 5 ಮಹಾನಗರ ಪಾಲಿಕೆಗಳಿಗೆ ಈ ವರ್ಷವೇ ಚುನಾವಣೆ: ಚುನಾವಣಾ ಆಯುಕ್ತ ಸಂಗ್ರೇಶಿ!
ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ನೀಡದಿದ್ದರೆ ಹೈಕೋರ್ಟ್ ಮೊರೆ ಹೋಗುವುದಾಗಿ ಚುನಾವಣಾ ಆಯೋಗದ ಆಯುಕ್ತರು ತಿಳಿಸಿದ್ದಾರೆ. ಹಳೆಯ ಮೀಸಲಾತಿ ಪಟ್ಟಿಯಂತೆ 2025ರಲ್ಲಿ ಚುನಾವಣೆ ನಡೆಸಲು ಆಯೋಗ ಸಿದ್ಧವಾಗಿದೆ.
ಪೂರ್ತಿ ಓದಿಸಿಎಸ್ಕೆಯನ್ನು ತಬ್ಬಿಬ್ಬು ಮಾಡಿದ ವಿಘ್ನೇಶ್ ಆಟೋ ಚಾಲಕನ ಮಗ! ಕೇರಳದ ಮುತ್ತು ಈಗ ಮುಂಬೈ ಸ್ವತ್ತು!
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ವಿಘ್ನೇಶ್ ಪುತೂರ್ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಮೂರು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಈ ಯುವ ಸ್ಪಿನ್ನರ್ನ ರೋಚಕ ಕಥೆ ಇಲ್ಲಿದೆ.
ಪೂರ್ತಿ ಓದಿಭಾರತದ ಟಾಪ್ 10 ಶ್ರೀಮಂತ ನಟರು ಯಾರು? ಅವರ ಆಸ್ತಿ ವಿವರ ಇಲ್ಲಿದೆ; ಇದರಲ್ಲಿ ಕನ್ನಡ ನಟರು ಯಾರಿದ್ದಾರೆ?
ಸಿನಿಮಾ ಉದ್ಯಮವು ಲಾಭದಾಯಕವಾಗಿದ್ದು, ಭಾರತದ ಶ್ರೀಮಂತ ನಟರ ಆಸ್ತಿಯ ವಿವರ ಇಲ್ಲಿದೆ. ಶಾರುಖ್ ಖಾನ್ ನಂ. 1 ಹಾಗೂ ರಜನಿಕಾಂತ್ 10ನೇ ಸ್ಥಾನದಲ್ಲಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ಕನ್ನಡ ನಟರು ಯಾರಿದ್ದಾರೆ? ನೀವೇ ನೋಡಿ..
ಪೂರ್ತಿ ಓದಿAI ತಂತ್ರಜ್ಞಾನದಿಂದ ಮಹಿಳೆಯರಿಗೆ ಅನ್ಯಾಯ: ಡಾ। ಹುಲಿಕುಂಟೆ ಮೂರ್ತಿ
AI ಮತ್ತು ಚಾಟ್ಬಾಟ್ಗಳಿಂದ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಡಾ। ಹುಲಿಕುಂಟೆ ಮೂರ್ತಿ ಕರೆ ನೀಡಿದರು. ಲೇಖಕಿಯರ ಸಮ್ಮೇಳನದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಮಹಿಳಾ ಬರಹಗಳ ಕುರಿತು ಚರ್ಚಿಸಲಾಯಿತು.
ಪೂರ್ತಿ ಓದಿಯುಗಾದಿ ಹಬ್ಬದಿಂದ 3 ದಿನ ಕಳ್ಳರ ಕಾಟ ಹೆಚ್ಚು: ಪೊಲೀಸ್ ಇಲಾಖೆಯ ಈ ಕುತೂಹಲದ ಪ್ರಕಟಣೆಯಲ್ಲಿ ಏನಿದೆ ನೋಡಿ!
ಯುಗಾದಿ ಹಬ್ಬದಿಂದ 3 ದಿನ ಕಳ್ಳರ ಕಾಟ ಹೆಚ್ಚಾಗಿರುತ್ತದೆ. ಇಂಥದ್ದೊಂದು ಪ್ರಕಟಣೆಯನ್ನು ಪೊಲೀಸ್ ಇಲಾಖೆ ಹೊರಡಿಸಿದೆ. ಏನಿದರ ವಿಶೇಷತೆ?
ಸೆಲ್ಫಿ, ಸಿಂಗಲ್ ಫೋಟೋ ಅಂದರೆ ರಾಜಕಾರಣಿಗಳು ಬೆಚ್ಚಿ ಬೀಳೋದ್ಯಾಕೆ? ತಾವೇ ವಿಶ್ ಮಾಡಿಕೊಂಡ ಆಯುಕ್ತರು!
ಬೆಂಗಳೂರು ಪೊಲೀಸ್ ಆಯುಕ್ತರ ಸ್ವ-ವಿಶ್, ರಾಜಕಾರಣಿಗಳಿಗೆ ಹನಿ ಟ್ರ್ಯಾಪ್ ಭಯ, ಮತ್ತು ತೊಗರಿ ಬೆಳೆ ನಷ್ಟದಿಂದ ಕಂಗಾಲಾದ ರೈತರ ಪರಿಹಾರದ ಬೇಡಿಕೆ ಕುರಿತ ವರದಿ ಇದು.
ಪೂರ್ತಿ ಓದಿಬೆಂಗಳೂರಿನಲ್ಲಿ ನಿಧಿ ಸಿಕ್ಕಿದೆ ಎಂದು ಮಣ್ಣಿನ ಇಟ್ಟಿಗೆಗೆ ಚಿನ್ನದ ಪಾಲಿಶ್ ಮಾಡಿ ಮಾರುತ್ತಿದ್ದ ವಂಚಕರ ಬಂಧನ!
ಬೆಂಗಳೂರಿನಲ್ಲಿ ಚಿನ್ನದ ಲೇಪಿತ ಇಟ್ಟಿಗೆಗಳನ್ನು ಮಾರಾಟ ಮಾಡುತ್ತಿದ್ದ ಮೂವರು ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ. ರಾಜರ ಆಳ್ವಿಕೆಯ ಪ್ರದೇಶದಲ್ಲಿ ನಿಧಿ ಸಿಕ್ಕಿದೆ ಎಂದು ನಂಬಿಸಿ ವಂಚಿಸುತ್ತಿದ್ದರು. ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ನಕಲಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಪೂರ್ತಿ ಓದಿಬಾಂಗ್ಲಾದೇಶ ದಿಗ್ಗಜ ಕ್ರಿಕೆಟಿಗನಿಗೆ ಹಾರ್ಟ್ ಅಟ್ಯಾಕ್! ಆಸ್ಪತ್ರೆಗೆ ದೌಡು!
ಬಾಂಗ್ಲಾದೇಶದ ಮಾಜಿ ಕ್ರಿಕೆಟ್ ನಾಯಕ ತಮೀಮ್ ಇಕ್ಬಾಲ್ಗೆ ಹೃದಯಾಘಾತವಾಗಿದ್ದು, ಅವರನ್ನು ಢಾಕಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಢಾಕಾ ಪ್ರೀಮಿಯರ್ ಡಿವಿಷನ್ ಕ್ರಿಕೆಟ್ ಲೀಗ್ನಲ್ಲಿ ಆಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದೆ.
ಪೂರ್ತಿ ಓದಿಅವಳು ದೂರವಾದ ಮೇಲೆ ದೊಡ್ಡ ಕುಡುಕನಾಗಿದ್ದೆ, ಫುಲ್ ಬಾಟಲ್ ಕುಡೀತಿದ್ದೆ: ಅಂದಿನ ದಿನ ನೆನೆದ ಆಮೀರ್ ಖಾನ್
ಹಿಂದೊಮ್ಮೆ ಕುಡಿತದ ಚಟಿ ಅಂಟಿ ದೊಡ್ಡ ಕುಡುಕನಾಗಿದ್ದ ಬಗ್ಗೆ ನಟ ಆಮೀರ್ ಖಾನ್ ಮಾತನಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ನಟ ಹೇಳಿದ್ದೇನು?
ಪ್ರೀತಿಗಿಂತ ಸ್ನೇಹವೇ ಬೆಸ್ಟ್ ಎಂದ ಮಕ್ಕಳು ಎಂದೆಂದಿಗೂ ಬೇರೆಯಾಗದಿರಲಿ; ಮನಗೆಲ್ಲುವ ವಿಡಿಯೋ ವೈರಲ್
ಕಾನ್ವೆಂಟ್ ಶಾಲೆಯ ಮಕ್ಕಳಾದ ನಿಷ್ಕಾ ಮತ್ತು ಕುನಾಲ್ ಅವರ ಮುದ್ದಾದ ಸ್ನೇಹದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಧ್ಯಮ ವರ್ಷದ ಕೌಟುಂಬಿಕ ಹಿನ್ನೆಲೆಯವರಾಗಿದ್ದು, ಸಾಮಾನ್ಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಈ ಮಕ್ಕಳು ನಮಗೆ ಪ್ರೀತಿಗಿಂತ ಸ್ನೇಹವೇ ಮುಖ್ಯ ಎಂದು ಹೇಳಿಕೊಂಡಿದ್ದಾರೆ.
ಪೂರ್ತಿ ಓದಿ