Actress Dimple Hayathi ನಟಿ ಡಿಂಪಲ್ ಹಯಾತಿ ಮತ್ತು ಅವರ ಪತಿ ಡೇವಿಡ್ ವಿರುದ್ಧ ಅವರ ಮನೆ ಕೆಲಸದಾಕೆ ಪ್ರಿಯಾಂಕಾ ಬೀಬರ್ ದೈಹಿಕ ಮತ್ತು ಮಾನಸಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ನಾಯಿ ಬೊಗಳಿದ್ದಕ್ಕೆ ವಿವಸ್ತ್ರಗೊಳಿಸಿದ ಆರೋಪ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- Home
- News
- State
- Karnataka News Live: ನಾಯಿ ಕೂಗಿದ್ದಕ್ಕೆ ಬಡಪಾಯಿ ಯುವತಿಯ ವಿವಸ್ತ್ರಗೊಳಿಸಿ ಹಲ್ಲೆ, ಖ್ಯಾತ ನಟಿಯ ವಿರುದ್ಧ ಎಫ್ಐರ್!
Karnataka News Live: ನಾಯಿ ಕೂಗಿದ್ದಕ್ಕೆ ಬಡಪಾಯಿ ಯುವತಿಯ ವಿವಸ್ತ್ರಗೊಳಿಸಿ ಹಲ್ಲೆ, ಖ್ಯಾತ ನಟಿಯ ವಿರುದ್ಧ ಎಫ್ಐರ್!

ಮಂಗಳೂರು: ಫೇಸ್ಬುಕ್ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರು ಹೂಡಿಕೆ ಬಗ್ಗೆ ಪ್ರಚಾರ ಮಾಡುವ ನಕಲಿ ವಿಡಿಯೋ ನಿಜವೆಂದು ನಂಬಿ ಮಹಿಳೆಯೊಬ್ಬರು 9.10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯು ಹೂಡಿಕೆ ಬಗ್ಗೆ ವಿಡಿಯೋ ನೋಡಿ ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ ನೋಂದಣಿ ಮಾಡಿದ್ದಾರೆ. ಮೊಬೈಲ್ಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ₹20,664 ಹೂಡಿಕೆ ಮಾಡಿದ್ದಾರೆ. ನಂತರ ₹8.90 ಲಕ್ಷ ಸೇರಿ ಒಟ್ಟು ₹9.1 ಲಕ್ಷ ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Karnataka News Live 1st October 2025ನಾಯಿ ಕೂಗಿದ್ದಕ್ಕೆ ಬಡಪಾಯಿ ಯುವತಿಯ ವಿವಸ್ತ್ರಗೊಳಿಸಿ ಹಲ್ಲೆ, ಖ್ಯಾತ ನಟಿಯ ವಿರುದ್ಧ ಎಫ್ಐರ್!
Karnataka News Live 1st October 2025ಮನೆಯವರ ಸಂಸ್ಕೃತಿ ಮಾಲ್ನಲ್ಲಿ ಅನುಕರಿಸಿದ ಪುಟ್ಟ ಪೋರಿ; ಗೊಂಬೆಗಳ ಕಾಲಿಗೆ ನಮಸ್ಕರಿಸಿದ ವಿಡಿಯೋ ವೈರಲ್!
Karnataka News Live 1st October 2025Real vs Fake Khadi - ಖಾದಿ ಅಸಲಿಯೇ ನಕಲಿಯೇ? ಮನೆಯಲ್ಲೇ ಗುರುತಿಸಲು ಈ 5 ಸರಳ ತಂತ್ರ ಬಳಸಿ!
How to Identify Real vs Fake Khadi: ಶುದ್ಧ ಖಾದಿ ಬಟ್ಟೆಯನ್ನು ಗುರುತಿಸುವುದು ಹೇಗೆ: ನೀವು ಅಸಲಿ ಖಾದಿ ಖರೀದಿಸಲು ಬಯಸಿದರೆ, ಈ ವಿಷಯಗಳನ್ನು ಗಮನದಲ್ಲಿಡಿ. ಅಸಲಿ ಖಾದಿ ನಿಮಗೆ ಸ್ಟೈಲಿಶ್ ಮತ್ತು ಆರಾಮದಾಯಕ ಲುಕ್ ನೀಡುವುದಲ್ಲದೆ, ಸ್ವದೇಶಿ ಮತ್ತು ಸುಸ್ಥಿರ ಫ್ಯಾಷನ್ಗೂ ಬೆಂಬಲ ನೀಡುತ್ತದೆ.
Karnataka News Live 1st October 2025Kantara 1 Movie Review - ಕಾಂತಾರದ ನಾಡೊಳಗೆ ಹೂದೋಟ ಇಟ್ಟ ರಿಷಬ್ ಶೆಟ್ಟಿ; ಅಷ್ಟಕ್ಕೂ ಅಸಲಿಗೆ ಹೇಗಿದೆ?
Kantara 1 Movie Review: ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ನೋಡಿ ವಾವ್ ಎಂದ ಜನರು ‘ಕಾಂತಾರ ಚಾಪ್ಟರ್ 1’ ನೋಡಲು ಕಾತುರದಿಂದ ಕಾದಿದ್ದರು. ಈಗ ಸಿನಿಮಾ ರಿಲೀಸ್ ಆಗಿದ್ದು, ಹೇಗಿದೆ?
Karnataka News Live 1st October 2025ಡೆನ್ಮಾರ್ಕ್ನ ಈ 4 ಸೌಲಭ್ಯ ಭಾರತದಲ್ಲಿಯೂ ಇರಬೇಕು - ಯುವತಿಯ ಆಸೆಗಳ ವಿಡಿಯೋ ವೈರಲ್!
ಕೋಪನ್ಹೇಗನ್ನಲ್ಲಿ ವಾಸಿಸುವ ದೆಹಲಿ ಮೂಲದ ಯುವತಿ, ಡೆನ್ಮಾರ್ಕ್ನಲ್ಲಿರುವ ನಾಲ್ಕು ಸೌಲಭ್ಯಗಳು ಭಾರತದಲ್ಲೂ ಇರಬೇಕೆಂದು ಆಶಿಸಿ ವಿಡಿಯೋ ಹಂಚಿಕೊಂಡಿದ್ದಾರೆ. ಅವರ ಆಸೆಗಳುಳ್ಳ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Karnataka News Live 1st October 2025ಪ್ರೀತಿ ಮಾಯೆ ಹುಷಾರು..! ಗೆಳತಿಯಿಂದಲೇ ರೇ ಪ್ ದೂರು, ಜೈಲಿಂದ ಬಂದ ಟೆಕ್ಕಿ ರೈಲಿಗೆ ಹಾರಿ ಸಾವು
Bilaspur Engineer Ends Life After Girlfriend Files Rpe Case: ನೋಯ್ಡಾದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ಗೆಳತಿಯ ದೂರಿನ ಮೇರೆಗೆ ಗೌರವ್ ಅತ್ಯಾ೧ಚಾರ ಪ್ರಕರಣದಲ್ಲಿ ಜೈಲು ಸೇರಿದ್ದರು. ಪ್ರೀತಿಯಲ್ಲಿ ಮೋಸವಾಗಿದೆ ಎಂದು ಬರೆದಿದ್ದ ಯುವಕನ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ.
Karnataka News Live 1st October 2025Festive season hair care tips - - ಹಬ್ಬದ ಸಂಭ್ರಮ - ನಿಮ್ಮ ಕೂದಲಿನ ರಹಸ್ಯ ಸೌಂದರ್ಯ
festive season hair care tips: ಹಬ್ಬದ ಸೀಸನ್ನಲ್ಲಿ ಹೇರ್ ಸ್ಟೈಲಿಂಗ್ ಉಪಕರಣ, ರಾಸಾಯನಿಕ ಕೂದಲಿಗೆ ಹಾನಿ.ನೈಸರ್ಗಿಕ ಶ್ಯಾಂಪೂ, ಡೀಪ್ ಕಂಡೀಷನಿಂಗ್ ಮಾಸ್ಕ್, ಎಣ್ಣೆ ಮಸಾಜ್, ಮರದ ಬಾಚಣಿಗೆ ಬಳಕೆ ಸರಳ ಸಲಹೆ ಅನುಸರಿಸುವ ಮೂಲಕ ಕೂದಲನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಇರಿಸಿಕೊಳ್ಳಬಹುದು.
Karnataka News Live 1st October 2025ಕಾಂತಾರ ಚಾಪ್ಟರ್ 1 ಪ್ರೀಮಿಯರ್ ಶೋ ರಿವೀವ್; ನಿಮ್ಮ ನಿರೀಕ್ಷೆಗೂ ಮೀರಿದ ಸಿನಿಮಾ, ಟ್ವಿಟರ್ನಲ್ಲಿ 9+ ರೇಟಿಂಗ್!
'ಕಾಂತಾರ ಚಾಪ್ಟರ್ 1' ಪ್ರಿವ್ಯೂ ಶೋಗೆ ನಿಮ್ಮ ನಿರೀಕ್ಷೆಗೂ ಮೀರಿದ ಸಿನಿಮಾವೆಂಬ ವಿಮರ್ಶೆಗಳು ವ್ಯಕ್ತವಾಗಿವೆ. ರಿಷಬ್ ಶೆಟ್ಟಿ ನಟನೆ, ಚಿತ್ರದ ದೃಶ್ಯ ವೈಭವ ಮತ್ತು ವಿಶೇಷವಾಗಿ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ ಎಂದು ಶ್ಲಾಘಿಸಿದ್ದು, ಸಿನಿಮಾ ಬ್ಲಾಕ್ಬಸ್ಟರ್ ಆಗುವ ಸೂಚನೆ ನೀಡಿದ್ದಾರೆ.
Karnataka News Live 1st October 2025Diet during fever - ಜ್ವರ ಬಂದಾಗ ಈ 5 ತಪ್ಪು ಯಾವ ಕಾರಣಕ್ಕೂ ಮಾಡಬೇಡಿ
Diet during fever: ಸೋಂಕಿನಿಂದ ಎಷ್ಟು ದೂರ ಇರಲು ಸಾಧ್ಯವೋ ಅಷ್ಟು ಜ್ವರದ ತೀವ್ರತೆ ಕಡಿಮೆಯಾಗುತ್ತದೆ. ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ಜ್ವರ ಕಡಿಮೆಯಾಗಲು ಹಲವು ದಿನಗಳು ಬೇಕಾಗಬಹುದು. ಗಮನಿಸಬೇಕಾದ ವಿಷಯಗಳು ಇಲ್ಲಿವೆ.
Karnataka News Live 1st October 2025Okinotori Shima - ಒಂದು ಕಲ್ಲಿನ ರಕ್ಷಣೆಗೆ ಜಪಾನ್ 4,500 ಕೋಟಿ ಖರ್ಚು; ಅದು ನೀರಲ್ಲಿ ಮುಳುಗಿದರೆ ಏನಾಗುತ್ತೆ?
Okinotori Shima: ಈ ಬಂಡೆಯ ಗಾತ್ರ ಕೇವಲ 60 ಚದರ ಮೀಟರ್ ನಿಮ್ಮ ಕಾರು ಪಾರ್ಕಿಂಗ್ ಜಾಗಕ್ಕಿಂತ ಸ್ವಲ್ಪ ದೊಡ್ಡದಷ್ಟೇ. ಆದರೆ ಈ ಚಿಕ್ಕ ಕಲ್ಲಿಗೆ ಜಪಾನ್ ಏಕೆ ಇಷ್ಟೊಂದು ಹಣ ಖರ್ಚು ಮಾಡಿದೆ? ಒಂದು ವೇಳೆ ಇದು ಸಮುದ್ರದಲ್ಲಿ ಮುಳುಗಿದರೆ ಏನಾಗುತ್ತದೆ? ಈ ಕುತೂಹಲಕಾರಿ ಕಥೆಯ ಹಿಂದಿನ ರಹಸ್ಯವನ್ನು ತಿಳಿಯೋಣ.
Karnataka News Live 1st October 2025ಬೆಂಗಳೂರಲ್ಲಿ 'ಕಾಂತಾರ ಚಾಪ್ಟರ್ 1' ಓಪನಿಂಗ್ ದಾಖಲೆ; ಒಂದೇ ದಿನದಲ್ಲಿ 1000ಕ್ಕೂ ಹೆಚ್ಚು ಪ್ರದರ್ಶನ!
ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಚಾಪ್ಟರ್ 1' ಚಿತ್ರವು ಬೆಂಗಳೂರಿನಲ್ಲಿ ಒಂದೇ ದಿನ 1,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಹೊಂದುವ ಮೂಲಕ ಹೊಸ ದಾಖಲೆ ಬರೆದಿದೆ. ಮುಂಗಡ ಬುಕ್ಕಿಂಗ್ನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿರುವ ಈ ಚಿತ್ರ, 'ವಿಕ್ರಾಂತ್ ರೋಣ' ನಂತರ ಈ ಸಾಧನೆ ಮಾಡಿದೆ.
Karnataka News Live 1st October 2025Davanagere - ವಿಜಯದಶಮಿ ಶೋಭಾಯಾತ್ರೆಗೆ ಬೆಣ್ಣೆನಗರಿ ಸಜ್ಜು, ಎಲ್ಲೆಲ್ಲೂ ಕೇಸರಿಮಯ, ಪೊಲೀಸ್ ಸರ್ಪಗಾವಲು
Davanagere Vijayadashami procession: ದಾವಣಗೆರೆಯಲ್ಲಿ ವಿಶ್ವ ಹಿಂದು ಪರಿಷತ್ನಿಂದ ವಿಜಯದಶಮಿ ಶೋಭಾಯಾತ್ರೆಗೆ ಬೃಹತ್ ಸಿದ್ಧತೆ ನಡೆದಿದೆ. ಸಾವಿರಾರು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ., ಶೋಭಾಯಾತ್ರೆ ಮಾರ್ಗದುದ್ದಕ್ಕೂ ಆಕರ್ಷಕ ಟ್ಯಾಬ್ಲೋಗಳು ಕೇಸರಿಮಯವಾಗಿದೆ. ಪೊಲೀಸರ ಸರ್ಪಗಾವಲು.
Karnataka News Live 1st October 2025Kantara Chapter 1 - ಆಂಧ್ರಪ್ರದೇಶದಲ್ಲಿ ಟಿಕೆಟ್ ದರ ಹೆಚ್ಚಳ ವಿವಾದ, ರಿಷಬ್ ಶೆಟ್ಟಿ ಬೆಂಬಲಕ್ಕೆ ನಿಂತ ಪವನ್ ಕಲ್ಯಾಣ್
Pawan Kalyan on Kantara movie: ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಚಾಪ್ಟರ್ 1' ಚಿತ್ರಕ್ಕೆ ಆಪ್ರ ಟಿಕೆಟ್ ದರ ಏರಿಕೆಗೆ ಅನುಮತಿ, ಈ ನಿರ್ಧಾರ ಪ್ರೇಕ್ಷರಿಂದ ಟೀಕೆಗೆ ಗುರಿಯಾಗಿ ಬಹಿಷ್ಕಾರದ ಕರೆಗೂ ಕಾರಣವಾಗಿದೆ. ಈ ಬಗ್ಗೆ ಪವನ್, ಎರಡೂ ಚಿತ್ರರಂಗ ಸಮಸ್ಯೆ ಬಗೆಹರಿಸಿಕೊಳ್ಳುವಂಟೆ ಸಲಹೆ.
Karnataka News Live 1st October 2025Mallikarjun Kharge health update - ಮೈನರಿ ಸರ್ಜರಿ ಯಶಸ್ವಿ, ಪರ್ಮನೆಂಟ್ ಫೇಸ್ ಮೇಕರ್ ಅಳವಡಿಸಿದ ವೈದ್ಯರು!
Mallikarjun Kharge health update: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ. ಹೃದಯ ಬಡಿತದ ವ್ಯತ್ಯಾಸದ ಕಾರಣ, ಜಯದೇವ ಆಸ್ಪತ್ರೆಯ ವೈದ್ಯರು ಪರ್ಮನೆಂಟ್ ಫೇಸ್ಮೇಕರ್ ಅಳವಡಿಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.
Karnataka News Live 1st October 2025RSS ಮ್ಯಾಟ್ರಿಮೊನಿ ಮಾಡಿಕೊಂಡು ಮದುವೆಯಾಗಿ 8-10 ಮಕ್ಕಳು ಮಾಡ್ಕೊಂಡು ಧರ್ಮ ರಕ್ಷಣೆ ಮಾಡಲಿ; ಪ್ರಿಯಾಂಕ ಖರ್ಗೆ!
ಸಚಿವ ಪ್ರಿಯಾಂಕ್ ಖರ್ಗೆಯವರು, ಧರ್ಮ ರಕ್ಷಣೆಗಾಗಿ ಹೆಚ್ಚು ಮಕ್ಕಳನ್ನು ಹೆರಲು ಹೇಳುವ ಆರ್ಎಸ್ಎಸ್ ನಾಯಕರು ಯಾಕೆ ಬ್ರಹ್ಮಚಾರಿಗಳಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅವರಿಗಾಗಿಯೇ 'ಆರ್ಎಸ್ಎಸ್ ಮ್ಯಾಟ್ರಿಮೊನಿ' ಆರಂಭಿಸಲು ವ್ಯಂಗ್ಯವಾಗಿ ಸಲಹೆ ನೀಡಿದ್ದಾರೆ.
Karnataka News Live 1st October 2025'ಪ್ಯಾಲೆಸ್ತೀನ್ ಬೆಂಬಲ ನೀತಿಗೆ ವಿರುದ್ಧವಾಗಿದೆ', ಟ್ರಂಪ್ ಗಾಜಾ ಯೋಜನೆಗೆ ಪಾಕ್ ಯು-ಟರ್ನ್!
Pakistan U-turn on Gaza plan: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಗೆ ಆರಂಭದಲ್ಲಿ ಬೆಂಬಲ ಸೂಚಿಸಿದ್ದ ಪಾಕಿಸ್ತಾನ, ಇದೀಗ ಸಾರ್ವಜನಿಕರ ತೀವ್ರ ವಿರೋಧದಿಂದಾಗಿ ಯು-ಟರ್ನ್ ಹೊಡೆದಿದೆ. ಪ್ರಧಾನಿ ಶಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿದೆ.
Karnataka News Live 1st October 2025ದೇವರಗುಡ್ಡ ಕಾರ್ಣಿಕ 2025 - 'ನಾಡು ಬಂಗಾರದ ಗಿಂಡಿಲೇ, ನಾಡು ಸಿರಿಯಾಗೀತಲೇ ಪರಾಕ್' ವಿಶ್ಲೇಷಣೆ ಇಲ್ಲಿದೆ!
ಹಾವೇರಿಯ ದೇವರಗುಡ್ಡದಲ್ಲಿ ನಡೆದ ಪ್ರಸಿದ್ಧ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ, ಗೊರವಯ್ಯನವರು 'ನಾಡು ಬಂಗಾರದ ಗಿಂಡಿಲೇ.. ನಾಡು ಸಿರಿಯಾಗೀತಲೇ ಪರಾಕ್!' ಎಂದು ಈ ವರ್ಷದ ಭವಿಷ್ಯ ನುಡಿದಿದ್ದಾರೆ. ಈ ದೈವವಾಣಿಯು ನಾಡಿನ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
Karnataka News Live 1st October 2025ಮಲೆನಾಡು ಬಯಲುಸೀಮೆ ಆಗುತ್ತಾ? ದಸರಾ ಸಂಭ್ರಮದ ಹೊತ್ತಲ್ಲಿ ಕೋಡಿಶ್ರೀ ಶಾಕಿಂಗ್ ಭವಿಷ್ಯ!
Kodimath Swamiji latest predictions: ಕೋಡಿಮಠದ ಶ್ರೀಗಳು ಮಲೆನಾಡು ಬಯಲುಸೀಮೆಯಾಗುವ, ಬಯಲುಸೀಮೆ ಮಲೆನಾಡಾಗುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಸಂಕ್ರಾಂತಿವರೆಗೆ ಯಾವುದೇ ತೊಂದರೆಯಿಲ್ಲ ಎಂದಿರುವ ಅವರು, ಜಾತಿ ಸಮೀಕ್ಷೆಯ ಬಗ್ಗೆ ಜನರು ತಾವೇ ನಿರ್ಧರಿಸುತ್ತಾರೆ ಎಂದಿದ್ದಾರೆ
Karnataka News Live 1st October 2025ಬಿಜೆಪಿ ಸಂಸದರಿಗೆ ಮೋದಿ ಮನ್ ಕಿ ಬಾತ್ ಪೋಸ್ಟ್ ಮಾಡಿಕೊಳ್ಳೋದೇ ಕೆಲಸ, ಅನುದಾನ ಕೇಳೋ ತಾಕತ್ತಿಲ್ಲ; ಪ್ರಿಯಾಂಕ್ ಖರ್ಗೆ!
ಕೇಂದ್ರದೊಂದಿಗೆ ಘರ್ಷಣೆ ಬೇಡವೆಂದ ಎಚ್.ಡಿ. ಕುಮಾರಸ್ವಾಮಿಗೆ ರಾಜ್ಯದ ಪಾಲಿನ ಅನುದಾನ ಕೇಳುವುದು ಭಿಕ್ಷೆಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆತಿರುಗೇಟು ಕೊಟ್ಟಿದ್ದಾರೆ. ಬಿಜೆಪಿ ಸಂಸದರು ಅನುದಾನ ಕೇಳದೇ, ಮೋದಿ ಮನ್ಕಿ ಬಾತ್ ಮಾಡೋದನ್ನ ಕನ್ನಡದಲ್ಲಿ ಪೋಸ್ಟ್ ಮಾಡಿಕೊಳ್ಳೋದೇ ಇವರ ಕೆಲಸವಾಗಿದೆ ಎಂದರು.
Karnataka News Live 1st October 2025Bigg Boss 12ಕ್ಕೆ ಡಾ.ಬ್ರೋ ಹೋಗದ ಕಾರಣ ಕೊನೆಗೂ ರಿವೀಲ್! ಗಗನ್ ಹೇಳಿದ್ದೇನು ಕೇಳಿ
ಯುಟ್ಯೂಬರ್ ಡಾ.ಬ್ರೋ ಖ್ಯಾತಿಯ ಗಗನ್ ಅವರು ಬಿಗ್ ಬಾಸ್ ಸ್ಪರ್ಧಿಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ತಾವೇಕೆ ಈ ಶೋಗೆ ಹೋಗುವುದಿಲ್ಲ ಎಂಬುದನ್ನು ಸ್ವತಃ ಗಗನ್ ಅವರೇ ಬಹಿರಂಗಪಡಿಸಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ. ಬ್ರೋ ಹೇಳಿದ್ದೇನು?