* ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ* 16 IAS ಅಧಿಕಾರಿಗಳನ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ* ಓರ್ವ ಐಎಎಸ್ ಅಧಿಕಾರಿಗೆ ಮಾತ್ರ ಸ್ಥಳ ನಿಯೋಜಿಸಿ ವರ್ಗಾವಣೆ
ಬೆಂಗಳೂರು, (ಏ.18): 30%, 40% ಕಮಿಷನ್ ಆರೋಪಗಳು ಮಧ್ಯೆ ಕರ್ನಾಟಕ ಸರ್ಕಾರ ಆಡಳಿತ ಯಂತ್ರ'ಕ್ಕೆ ಮೇಜರ್ ಸರ್ಜರಿ ಮಾಡಿದೆ.
ಇಂದು(ಸೋಮವಾರ) 16 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಒಬ್ಬ ಐಎಎಸ್ ಅಧಿಕಾರಿಗೆ ಮಾತ್ರ ಸ್ಥಳ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
ಈಶ್ವರಪ್ಪ ಕುರ್ಚಿ ಕಳಚಿದ ಬೆನ್ನಲ್ಲೇ ಕ್ಯಾಬಿನೆಟ್ ಸೀಕ್ರೆಟ್ ಫೈಲ್ಸ್ ಓಪನ್!
ವರ್ಗಾವಣೆಯಾದವರು
* ವಿ.ಅನ್ಬುಕುಮಾರ್, ವ್ಯವಸ್ಥಾಪಕ ನಿರ್ದೇಶಕ, ಕೆಎಸ್ಆರ್ಟಿಸಿ
* ಡಾ.ಎನ್.ವಿ.ಪ್ರಸಾದ್- ಕಾರ್ಯದರ್ಶಿ, ಸಾರಿಗೆ ಇಲಾಖೆ
* ಸತ್ಯವತಿ.ಜಿ-ವ್ಯವಸ್ಥಾಪಕ ನಿರ್ದೇಶಕಿ, ಬಿಎಂಟಿಸಿ
* ಡಾ.ರೇಜು.M.T-ಕಾರ್ಯದರ್ಶಿ-ಮಹಿಳಾ & ಮಕ್ಕಳ ಕಲ್ಯಾಣ
* ದೀಪಾ.ಎಂ-ವ್ಯವಸ್ಥಾಪಕ ನಿರ್ದೇಶಕ ನಗರಾಭಿವೃದ್ಧಿ ಇಲಾಖೆ
* ಪಲ್ಲವಿ ಆಕುರಾತಿ-ಯೋಜನಾ ನಿರ್ದೇಶಕಿ, ಸರ್ವಶಿಕ್ಷಣ ಅಭಿಯಾನ
* ವೆಂಕಟೇಶ್ ಕುಮಾರ್-ಪ್ರಾದೇಶಿಕ ಆಯುಕ್ತ, ಕಲಬುರಗಿ ವಿಭಾಗ
* ಡಾ. ರಾಕೇಶ್ ಕುಮಾರ್-ಆಯುಕ್ತರು-ಸಮಾಜ ಕಲ್ಯಾಣ ಇಲಾಖೆ
* ರವೀಂದ್ರ.ಪಿ.ಎನ್-ವಿಶೇಷ ಆಯುಕ್ತ-ಬಿಬಿಎಂಪಿ(ಯೋಜನಾ),
* ಡಾ.ಅವಿನಾಶ್ ಮೆನನ್-ಜಿಲ್ಲಾಧಿಕಾರಿ, ರಾಮನಗರ ಜಿಲ್ಲೆ
* ಚಂದ್ರಶೇಖರ್.ಎಲ್-ಜಿಲ್ಲಾಧಿಕಾರಿ-ರಾಯಚೂರು ಜಿಲ್ಲೆ
* ವಿಜಯ್ ಮಹಾಂತೇಶ್.ಬಿ.-ಜಿಲ್ಲಾಧಿಕಾರಿ-ವಿಜಯಪುರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
