Asianet Suvarna News Asianet Suvarna News

ಪತ್ರಕರ್ತ ರಮಾಕಾಂತ್‌ಗೆ ಪಿತೃವಿಯೋಗ!

ಪತ್ರಕರ್ತ ರಮಾಕಾಂತ್‌ಗೆ ಪಿತೃವಿಯೋಗ| ಸುವರ್ಣ ನ್ಯೂಸ್‌ ಸುದ್ದಿವಾಹಿನಿಯ ಪತ್ರಕರ್ತ ರಮಾಕಾಂತ್| ಕೆಲವು ತಿಂಗಳುಗಳಿಂದ ಅನಾರೋಗ್ಯ

Kannada TV Journalist and news anchor Ramakanth Aryan Father Dies at 72
Author
Bangalore, First Published Jun 25, 2020, 8:56 AM IST

ಬೆಂಗಳೂರು(ಜೂ.25): ಸುವರ್ಣ ನ್ಯೂಸ್‌ ಸುದ್ದಿವಾಹಿನಿಯ ಪತ್ರಕರ್ತ ರಮಾಕಾಂತ್‌ ಅವರ ತಂದೆ ಸುಂದರಾಚಾರ್ಯ (72) ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ.

ಕೆಲವು ತಿಂಗಳುಗಳಿಂದ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದ ಅವರು ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತಮ್ಮ ನಿವಾಸ ವಿಷ್ಣು ವಿಲಾಸದಲ್ಲಿ ಬೆಳಗ್ಗೆ 6 ಗಂಟೆಗೆ ಮೃತರಾಗಿದ್ದಾರೆ.

ಅಪ್ಪ ತರಕಾರಿ ವ್ಯಾಪಾರಿ, ಮಗಳು ಭಾರತ ಕ್ರಿಕೆಟ್ ತಂಡದ ವೀರ ನಾರಿ!

ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸಂಜೆ ವೇಳೆಗೆ ಅವರ ಸ್ವಗ್ರಾಮ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದ್ಯಾವಸಂದ್ರಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

Follow Us:
Download App:
  • android
  • ios