Asianet Suvarna News Asianet Suvarna News

ಎಲ್ಲಾ ಐದು ಗ್ಯಾರೆಂಟಿ ಜಾರಿಗೊಳಿಸಿದ ಸರ್ಕಾರ, ಕೆಲವೇ ಕೆಲವು ಕಂಡೀಷನ್ ಅಪ್ಲೈ; ಸಿಎಂ ಸಿದ್ದರಾಮಯ್ಯ!

ಸರ್ಕಾರ ರಚನೆಯಾದ ದಿನದಿಂದ ತೀವ್ರ ತಲೆನೋವಾಗಿದ್ದ ಐದು ಉಚಿತ ಗ್ಯಾರೆಂಟಿಗೆ ಕೊನೆಗೂ ಕಾಂಗ್ರೆಸ್ ಪರಿಹಾರ ಕಂಡುಕೊಂಡಿದೆ. ಇಂದು ಸಚಿವ ಸಂಪಟು ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಉಚಿತ ಗ್ಯಾರೆಂಟಿ ಯೋಜನೆ ಜಾರಿ ಘೋಷಣೆ ಮಾಡಿದ್ದಾರೆ. 

Cabinet Meeting CM Siddaramaiah announces free guarantee will implement within in a year ckm
Author
First Published Jun 2, 2023, 3:00 PM IST

ಬೆಂಗಳೂರು(ಜೂನ್ 02): ಐದು ಉಚಿತ ಗ್ಯಾರೆಂಟಿ ಘೋಷಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಇದೀಗ ಕೊನೆಗೂ ಯೋಜನೆ ಜಾರಿಗೊಳಿಸಿದೆ.  ಆದರೆ ಕಾಂಗ್ರೆಸ್ 5 ಉಚಿತ ಗ್ಯಾರೆಂಟಿಯನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ನಡೆದ ಮಹತ್ವದ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು, ಕೊನೆಗೂ ಉಚಿತ ಗ್ಯಾರೆಂಟಿ ಯೋಜನೆ ಜಾರಿಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ 5 ಉಚಿತ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ. 

ನಾವು 5 ಘೋಷಣೆ ಮಾಡಿ ಚುನಾವಣೆ ಎದುರಿಸಿದ್ದೇವೆ. ಈ ಗ್ಯಾರೆಂಟಿ ಯೋಜನೆ ಕಾರ್ಡ್‌ಗೆ ಸಹಿ ಹಾಕಿ ಜನರಿಗೆ ಆಶ್ವಾಸನೆ ಕೊಟ್ಟಿದ್ದೆವು. ಇದರ ನಡುವೆ ವಿರೋಧ ಪಕ್ಷದವರು ಇದನ್ನು ಪ್ರಶ್ನೆ ಮಾಡಿದ್ದಾರೆ. ಸರ್ಕಾರ ರಚನೆಯಾದ ಬಳಿಕ ಸಂಪುಟ ಸಭೆ ನಡೆಸಿದ 5 ಗ್ಯಾರೆಂಟಿ ಯೋಜನೆ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದ್ದೆವು. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಐದು ಗ್ಯಾರೆಂಟಿ ಜಾರಿಗಾಗಿ ಚರ್ಚೆ ನಡೆಸಿದ್ದೇವೆ. 5 ಗ್ಯಾರೆಂಟಿಯನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೊಳಿಸಬೇಕು ಅನ್ನೋ ತೀರ್ಮಾನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಯಾವುದೇ ಜಾತಿ, ಭಾಷೆ, ಧರ್ಮ ಮಿತಿಗಳಿಲ್ಲದೆ ಈ ಗ್ಯಾರೆಂಟಿ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್‌ ವಿರುದ್ಧ ಗ್ಯಾರಂಟಿ ಹೋರಾಟಕ್ಕೆ ಜೆಡಿಎಸ್‌ ಸಜ್ಜು: ಲೋಕಸಭೆ ಗೆಲ್ಲಲು ದಳಪತಿಗಳ ಹೊಸ ಅಸ್ತ್ರ

ಗ್ಯಾರೆಂಟಿ ನಂಬರ್ 1, ಗೃಹ ಜ್ಯೋತಿ
ಎಲ್ಲರಿಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗ್ಯಾರೆಂಟಿಯನ್ನು ಜಾರಿಗೆ ತರುತ್ತಿದ್ದೇವೆ. ಒಬ್ಬ ಕುಟುಂಬ 12 ತಿಂಗಳಲ್ಲಿ ಎಷ್ಟು ವಿದ್ಯುತ್ ಬಳಿಸಿದ್ದಾರೆ. ಇದರ ಸರಾಸರಿ ತೆಗೆದು ಅದರ ಮೇಲೆ 10 ಪರ್ಸೆಂಟ್ ಹೆಚ್ಚಿಗೆ ಮಾಡಿ ಲೆಕ್ಕ ತೆಗೆದುಕೊಳ್ಳುತ್ತೇವೆ. ಒಬ್ಬ ಒಂದು ತಿಂಗಳು 190 ಯುನಿಟ್ ಖರ್ಚು ಮಾಡಿರಬಹುದು. ಇನ್ನೊಂದು ತಿಂಗಳು 180 ಯುನಿಟ್ ವಿದ್ಯುತ್ ಬಳಸಿರಬಹುದು. ಆದರೆ 12 ತಿಂಗಳಲ್ಲಿ ಆತನ ಸರಾಸರಿ ಯುನಿಟ್ ಬಳಕೆಯ ಮೇಲೆ ಸರ್ಕಾರ 10 ಪರ್ಸೆಂಟ್ ಹೆಚ್ಚು ಸೇರಿಸಲಾಗುತ್ತದೆ. ಈ ವೇಳೆ ಸರಾಸರಿ 200 ಯುನಿಟ್ ಒಳಗಿದ್ದರೆ ವಿದ್ಯುತ್ ಉಚಿತವಾಗಲಿದೆ. 

ಗ್ಯಾರೆಂಟಿ ನಂಬರ್ 2, ಗೃಹ ಲಕ್ಷ್ಮಿ
ಆಗಸ್ಟ್ 15 ರಿಂದ ಗೃಹ ಲಕ್ಷ್ಮಿ ಯೋಜನೆ ಜಾರಿಯಾಗಲಿದೆ. ಆಗಸ್ಟ್ 15 ರಂದು ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ಜಮಾ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕಾಗಿ ಮನೆಯ ಯಜಮಾನಿ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಸೇರಿದಂತೆ ಇತರ ದಾಖಲೆ ನೀಡಬೇಕು. ಇದಕ್ಕಾಗಿ ಮನೆಯ ಯಜಮಾನಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುದಾರರಿಗೆ ಹಣ ಜಮಾವಣೆಯಾಗಲಿದೆ. ಒಂದು ಕುಟುಂಬ ಹೇಳುವ ಯಜಮಾನಿಗೆ 2,000 ರೂಪಾಯಿ ಹಣ ಜಮಾವಣೆ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಕೆಲ ತಾಂತ್ರಿಕ ಸಮಸ್ಯೆಗಳಿರುವ ಕಾರಣ ಈ ಯೋಜನೆಗೆ ಅರ್ಜಿ ಆಹ್ವಾನಿಸಿ, ಮನೆಯ ಯಜಮಾನಿಯ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಜೂನ್ 15 ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಯಾವುದೇ ಕಂಡೀಷನ್ ಇಲ್ಲದೆ ಗೃಹ ಲಕ್ಷ್ಮಿ ಯೋಜನೆ ಜಾರಿಗೊಳಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಾಮಾಜಿಕ ಭದ್ರತಾ ಪಿಂಚಣಿ, ಹಿರಿಯರ ಪಿಂಚಣಿ ಜೊತೆಗೂ ಈ ಸರ್ಕಾರದ 2,000 ರೂಪಾಯಿ ಗೃಹ ಲಕ್ಷ್ಮಿ ಯೋಜನೆ ಲಾಭ ಸಿಗಲಿದೆ. 

ಗ್ಯಾರಂಟಿ ನಂಬರ್ 3, ಅನ್ನ ಭಾಗ್ಯ
ಕೇಂದ್ರ ಸರ್ಕಾರ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದಾರೆ. ನಮ್ಮ ಗ್ಯಾರೆಂಟಿ ಪ್ರಕಾರ 10 ಕೆಜಿ ಆಹಾರ ಧಾನ್ಯ ನೀಡುವುದಾಗಿ ಹೇಳಿದ್ದೇವೆ. ಈ ತಿಂಗಳು ಈಗಾಗಲೇ ಆಹಾರ ವಿತರಣೆಯಾಗಿದೆ. ಜೊತೆಗೆ ರಾಜ್ಯದಲ್ಲಿ ಆಹಾರ ಸಂಗ್ರಹ ಇಲ್ಲದಿರುವ ಕಾರಣ ಜುಲೈ 1 ರಿಂದ ಎಲ್ಲಾ ಬಿಪಿಎಲ್  ಹಾಗೂ ಅಂತ್ಯೋದಯ ಕಾರ್ಡುದಾರರಿಗೆ 10 ಕೆಜಿ ಆಹಾರ ಧಾನ್ಯ ವಿತರಣೆಯಾಗಲಿದೆ. 

ಡಿಕೆಶಿ ಮೇಕೆದಾಟು ಹೇಳಿಕೆ: ಕಾಂಗ್ರೆಸ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಎಐಎಡಿಎಂಕೆ

ಗ್ಯಾರಂಟಿ ನಂಬರ್ 4, ಶಕ್ತಿ ಯೋಜನೆ
ರಾಜ್ಯದ ಎಲ್ಲಾ ಮಹಿಳೆಯರಿಗೆ, ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಈ ತಿಂಗಳ 11 ರಿಂದ ಉಚಿತ ಬಸ್ ಪ್ರಯಾಣದ ಲಾಭ ಪಡೆಯಬಹುದು. ಈ ಯೋಜನೆ ಕರ್ನಾಟಕದ ರಾಜ್ಯದೊಳಗೆ ಅನ್ವಯವಾಗುತ್ತದೆ. ಎಸಿ, ಸ್ಲೀಪರ್ ಹಾಗೂ ಐಷಾರಾಮಿ ಬಸ್ ಹೊರತುಪಡಿಸಿ ಉಳಿದ ಎಲ್ಲಾ ಬಸ್‌ಗಳಲ್ಲಿ ಮಹಿಳೆಯರು ಪ್ರಯಾಣ ಉಚಿತವಾಗಿದೆ. ರಾಜ್ಯದಿಂದ ತಿರುಪತಿ ಹೋಗುವ ಅಥವಾ ರಾಜ್ಯದಿಂದ ಹೊರ ರಾಜ್ಯಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನ್ವಯವಾಗುವುದಿಲ್ಲ. ಮಹಿಳೆಯರು, ವಿದ್ಯಾರ್ಥನಿಯರು ಜೂನ್ 11 ರಿಂದ ಯಾವುದೇ ಹಣ ಪಾವತಿಸದೇ ಪ್ರಯಾಣ ಮಾಡಬಹುದು. ಬಿಎಂಟಿಸಿ ಬಸ್‌ನಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಸಿದ್ದರಾಯ್ಯ ಘೋಷಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಶೇಕಡಾ 50 ರಷ್ಟು ರಿಸರ್ವ್ ಮಾಡಲಾಗುತ್ತದೆ. 

ಗ್ಯಾರಂಟಿ ನಂಬರ್ 5, ಯುವನಿಧಿ
ಪ್ರಸಕ್ತ ವರ್ಷ ತೇರ್ಗಡೆಯಾದ ಎಲ್ಲಾ ಪದವಿದರರು, ವೃತ್ತಿಪರ ಕೋರ್ಸ್‌ ಮಾಡಿದವರಿಗೂ ಯುವನಿಧಿ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಬಹುದು. 24 ತಿಂಗಳವರೆಗೆ ಪ್ರತಿ ತಿಂಗಳಿಗೆ 3,000 ರೂಪಾಯಿ ಪದವೀಧರರಿಗೆ, ಡಿಪ್ಲೋಮಾ ಕೋರ್ಸ್ ಮಾಡಿದವರಿಗೆ 2,000 ರೂಪಾಯಿ ನೀಡಲಾಗುತ್ತದೆ. ಇದರೊಳಗೆ ಕೆಲಸಕ್ಕೆ ಸೇರಿದವರಿಗೆ ಈ ಯೋಜನೆ ಮುಂದುವರಿಯುವುದಿಲ್ಲ. ಇದು ನಿರುದ್ಯೋಗಿ ಯುವಕರಿಗೆ ನೀಡುವ ಯೋಜನೆಯಾಗಲಿದೆ. ಈ ವರ್ಷ ಪಾಸ್ ಆದ ನಿರುದ್ಯೋಗ ಯುವ ಸಮೂಹಕ್ಕೆ ಹಣ ಜಮಾ ಮಾಡಲಾಗುತ್ತದೆ. ಗಂಡು, ಹೆಣ್ಣು ಹಾಗೂ ಮಂಗಳಮುಖಿಯರಿಗೂ ಈ ಯೋಜನೆ ಸಿಗಲಿದೆ. 

ಕಾಲೇಜು, ವೃತ್ತಿಪರ ಕೋರ್ಸ್ ಮುಗಿಸಿ ಕೆಲಸ ಸಿಗದ ಯುವ ಸಮೂಹಕ್ಕೆ ಈ ಯೋಜನೆ ಲಾಭ ಸಿಗಲಿದೆ. ಓರ್ವ ನಿರುದ್ಯೋಗಿಗೆ 2 ವರ್ಷ ಸರ್ಕಾರ ಹಣ ಜಮಾ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.  ನಾವು ನುಡಿದಂತೆ ನಡೆಯುವ ಸರ್ಕಾರ. ಬಿಜೆಪಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇಲ್ಲ. ಪ್ರಧಾನಿ ಮೋದಿ 15 ಲಕ್ಷ ರೂಪಾಯಿ ಕೊಡುತ್ತೇವೆ ಅಂದ್ರು, ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು, ಪೆಟ್ರೋಲ್-ಡೀಸೆಲ್ ಬೆಲೆ ಕಡಿತಗೊಳಿಸುವುದಾಗಿ ಹೇಳಿದ್ದಾರೆ. ಯಾವುದಾದರೂ ಮಾಡಿದ್ರಾ ಎಂದು ಸಿದ್ದರಾಮಯ್ಯ ಬಿಜೆಪಿಯನ್ನೇ ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios