Asianet Suvarna News Asianet Suvarna News

ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ: 3 ಕೋಟಿಯ ಬಂಗ್ಲೆ ಕಟ್ತಿದ್ದ ಬ್ಲೂಟೂತ್‌ ಮಂಜು​..!

*  ಪಿಎ​ಸ್‌ಐ ಅಕ್ರ​ಮ​ದಲ್ಲಿ ಬಂಧಿತ ಎಂಜಿ​ನಿ​ಯರ್‌ ಈತ
*  ಮದುವೆ ದಿನ ದಾಳಿ ಬೆದರಿಕೆಗೆ ಹೆದರಿ ಶರ​ಣಾದ ಮಂಜು​ನಾ​ಥ್‌
*  ಸಿಐಡಿ ವಿಚಾರಣೆಯಲ್ಲಿ ಸತ್ಯಾಂಶ ಬಯ​ಲು
 

Bluetooth Manjunath Build 3 Crore Rs bungalow in Kalaburagi grg
Author
Bengaluru, First Published May 3, 2022, 12:34 PM IST

ಕಲಬುರಗಿ(ಮೇ.03):  ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಬ್ಲೂಟೂತ್‌ ತಜ್ಞ ಎಂದೇ ಕರೆ​ಯ​ಲ್ಪ​ಡುವ ಇಲ್ಲಿನ ಅಮರ್ಜಾ ನೀರಾವರಿ ಯೋಜನೆಯ ಕಿರಿಯ ಎಂಜಿನಿಯರ್‌(JE​) ಮಂಜುನಾಥ್‌ ಮೇಳಕುಂದಿ(Manjunath Melakundi) 3 ಕೋಟಿಗೂ ಹೆಚ್ಚು ​ವೆಚ್ಚ ಮಾಡಿ ಕಲ​ಬು​ರ​ಗಿಯ(Kalanuragi) ಜಯ​ನ​ಗ​ರ​ದಲ್ಲಿ ಐಷಾ​ರಾಮಿ ಮನೆ​ಕಟ್ಟುತ್ತಿ​ರುವ ವಿಚಾರ ಬೆಳ​ಕಿಗೆ ಬಂದಿ​ದೆ.

ಅಫಜಲ್ಪುರದ ಮೇಳಕುಂದಾ ಮೂಲದ ಮಂಜು​ನಾ​ಥ್‌​ನದ್ದು ಗೌರವಸ್ಥ ಕುಟುಂಬ, ಇವರ ತಂದೆ ವಿಶ್ವನಾಥ್‌ ನಿವೃತ್ತ ಎಎಸ್‌ಐ. ಚಿಕ್ಕ ವಯಸ್ಸಿನಲ್ಲಿಯೇ ನೀರಾವರಿ ಇಲಾಖೆಯಲ್ಲಿ ಜೆಇ ಹುದ್ದೆ ಅಲಂಕ​ರಿ​ಸಿ​ರುವ ಮಂಜು​ನಾಥ್‌ ವೈಭವದ ಬದುಕು ಕಟ್ಟಿಕೊ​ಳ್ಳಬೇಕೆಂಬ ಹಂಬಲದಿಂದ ಹಣದ ಹಿಂದೆ ಬಿದ್ದು, ಅಕ್ರಮಗಳ(Scam) ರೂವಾರಿಯಾದನೆಂಬ ವಿಚಾ​ರ ಸಿಐಡಿ(CID) ವಿಚಾರಣೆಯಲ್ಲಿ ಬಯ​ಲಾ​ಗಿ​ದೆ.

PSI Recruitment Scam ಕಲಬುರಗಿಯ ಮತ್ತೊಂದು ಸೆಂಟರ್‌ನಲ್ಲೂ ಅಕ್ರಮ!

ಮಂಜು​ನಾಥ್‌ ಅಂದು​ಕೊಂಡಂತೆ ನಡೆ​ದಿ​ದ್ದ​ರೆ ತಾನು ನಿರ್ಮಿ​ಸು​ತ್ತಿ​ರುವ ಭವ್ಯ ಮನೆಯ ಒಳಡಿಸೈನ್‌ (ಇಂಟಿರೀಯರ್‌), ಪೀಠೋ​ಪ​ಕ​ರ​ಣ​ಗ​ಳಿ​ಗಾ​ಗಿ ಹಾಂಗ್‌ಕಾಂಗ್‌(HongKong), ಚೈನಾಗೆ(China) ತೆರ​ಳು​ವ​ವ​ನಿ​ದ್ದ​ನಂತೆ. ಅಷ್ಟ​ರ​ಲ್ಲಾ​ಗಲೇ ಪಿಎ​ಸ್‌ಐ ಪರೀಕ್ಷೆ ಅಕ್ರಮ(PSI Recruitment Scam) ಬಹಿ​ರಂಗ​ಗೊಂಡು ಎಲ್ಲವೂ ಬದ​ಲಾ​ಯಿತು. 21 ದಿನ​ ಕಾಲ ತಲೆ​ಮೆ​ರೆ​ಸಿ​ಕೊಂಡಿದ್ದ ಮಂಜು​ನಾಥ್‌ ಕೊನೆಗೆ ಭಾನು​ವಾರ ಸಿಐಡಿ ಕಚೇ​ರಿಗೆ ಬಂದು ಶರ​ಣಾ​ಗ​ಬೇ​ಕಾ​ಯಿ​ತು.
ಕೆಲ ವರ್ಷ​ಗಳ ಹಿಂದೆ​ಯಷ್ಟೇ ಸೇವೆಗೆ ಸೇರಿ​ಕೊಂಡಿ​ದ್ದರೂ ಇಷ್ಟೊಂದು ಐಷಾ​ರಾಮಿ ಮನೆ ನಿರ್ಮಿ​ಸು​ತ್ತಿ​ರುವುದು ಸಿಐಡಿ ಪೊಲೀ​ಸ​ರಿಗೆ ಅಚ್ಚರಿ ಮೂಡಿ​ಸಿದೆ. ಪರೀಕ್ಷೆ ಅಕ್ರ​ಮ​ದ​ಲ್ಲಿ ಸಂಪಾ​ದಿ​ಸಿದ ಹಣ​ವನ್ನೇ ಇದ​ಕ್ಕಾಗಿ ಬಳ​ಸಿದ್ದಾನಾ ​ಎಂಬ ಕುರಿತು ಅಧಿ​ಕಾ​ರಿ​ಗ​ಳು ವಿಚಾ​ರಣೆ ನಡೆ​ಸು​ತ್ತಿ​ದ್ದಾರೆ ಎನ್ನ​ಲಾ​ಗಿ​ದೆ.

ಮದುವೆ ದಿನ ದಾಳಿ ಬೆದರಿಕೆಗೆ ಹೆದರಿ ಶರ​ಣಾದ ಮಂಜು​ನಾ​ಥ್‌!

ಪಿಎಸ್‌ಐ ಪರೀಕ್ಷೆ ಅಕ್ರ​ಮ​ ಬಹಿ​ರಂಗ​ವಾದ ಬಳಿಕ 21 ದಿನ ತಲೆ​ಮ​ರೆ​ಸಿ​ಕೊಂಡಿದ್ದ ಆರೋಪಿ ಮಂಜು​ನಾಥ್‌ ದಿಢೀರ್‌ ಶರ​ಣಾ​ಗುವ ಹಿಂದೆ ಸಿಐಡಿ ಪೊಲೀ​ಸರ ಧಮಕಿ ಕೆಲಸ ಮಾಡಿದೆ. ಮಂಜು​ನಾಥ್‌ ಶರ​ಣಾ​ಗದೇ ಹೋದರೆ ಆತನ ಕುಟುಂಬದಲ್ಲಿ ನಡೆ​ಯ​ಬೇ​ಕಿದ್ದ ಮದುವೆ ದಿನದಂದೇ ಹಲವರನ್ನು ವಿಚಾ​ರ​ಣೆಗೆ ಕರೆ​ದೊ​ಯ್ಯು​ವು​ದಾಗಿ ಸಿಐಡಿ ಪೊಲೀ​ಸ​ರು ಎಚ್ಚ​ರಿ​ಸಿದ್ದರು. ಇದ​ರಿಂದ ಹೆದರಿ ಮಂಜು​ನಾಥ್‌ ತಾನಾ​ಗಿಯೇ ಬಂದು ಶರ​ಣಾ​ಗಿ​ದ್ದಾನೆ ಎನ್ನ​ಲಾ​ಗಿ​ದೆ.

PSI ನೇಮಕಾತಿ ಹಗರಣ: ಬಂಧಿತ ಉದ್ಯಮಿ ಕಾಶಿನಾಥ್ ಕಾಟೇಗಾಂವ್‌ಗೂ ಕಾಂಗ್ರೆಸ್ ನಂಟು

ಮಂಜುನಾಥ್‌ ಮನೆಯಲ್ಲಿ ಆತ​ನ ಚಿಕ್ಕಪ್ಪನ ಮದುವೆ(Marriage) ನಿಶ್ಚಯವಾಗಿತ್ತು, ವಾರದೊಳಗೆ ಮದುವೆ ಇರೋದು ಗಮನಕ್ಕೆ ಬಂದಾಗ ಸಿಐಡಿ ತಂಡ ಮನೆಗೆ ತೆರಳಿತ್ತು. ಮಂಜುನಾಥ ತಾನಾ​ಗಿಯೇ ಬಂದು ಶರ​ಣಾ​ಗದೇ ಹೋದಲ್ಲಿ ಮದುವೆ ದಿನವೇ ಕಾರ್ಯಾಚರಣೆ ನಡೆಸಿ ಹಲವರನ್ನು ವಿಚಾರಣೆಗೆ ಕರೆದೊಯ್ಯುತ್ತೇವೆಂಬ ಎಚ್ಚ​ರಿಕೆ ನೀಡಿತ್ತು. ತಲೆ​ಮ​ರೆ​ಸಿ​ಕೊಂಡು ಓಡಾ​ಡು​ತ್ತಿದ್ದ ಮಂಜು​ನಾ​ಥ್‌ ದೂರವಾಣಿ ಮೂಲಕ ಸಂಪರ್ಕಕ್ಕೆ ಬಂದಾಗ ಈ ವಿಚಾ​ರವನ್ನು ತಂದೆ ವಿಶ್ವನಾಥ್‌ ತಿಳಿ​ಸಿ​ದ್ದಾರೆ. ಒಂದು ವೇಳೆ ನೀನು ಶರ​ಣಾ​ಗ​ದಿ​ದ್ದರೆ ನಾವು ಆತ್ಮ​ಹತ್ಯೆ ಮಾಡಿ​ಕೊ​ಳ್ಳು​ವು​ದಾಗಿ ಹೇಳಿ​ದ್ದಾ​ರೆ. ಇದ​ರಿಂದ ಮಂಜು​ನಾಥ್‌ ಪೊಲೀ​ಸ​ರಿಗೆ ಶರ​ಣಾಗಲು ನಿರ್ಧ​ರಿ​ಸಿ​ದ ಎನ್ನ​ಲಾ​ಗಿ​ದೆ.
 

Follow Us:
Download App:
  • android
  • ios