ಕಂಪ್ಲಿಯ ಮಂಗಳಮುಖಿ ರಾಜಮ್ಮ ಭಿಕ್ಷೆಯಿಂದ ಉಳಿಸಿದ ಹಣದಿಂದ ಎರಡು ಸರ್ಕಾರಿ ಶಾಲೆಗಳ 150 ಮಕ್ಕಳಿಗೆ ಬಟ್ಟೆ ದಾನ ಮಾಡಿದ್ದಾರೆ. ₹60,000 ಮೌಲ್ಯದ ಬಟ್ಟೆಗಳನ್ನು ವಿತರಿಸಿ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ. .
ಬಳ್ಳಾರಿ (ಜೂ.30): ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ರಾಜಮ್ಮ ಎಂಬ ಮಂಗಳಮುಖಿಯೊಬ್ಬರು ತಮ್ಮ ಭಿ ಕ್ಷೆಯಿಂದ ಉಳಿಸಿದ ಹಣದಿಂದ ಎರಡು ಸರ್ಕಾರಿ ಶಾಲೆಗಳ 150 ಮಕ್ಕಳಿಗೆ ಬಟ್ಟೆಗಳನ್ನು ಕೊಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಾಜಮ್ಮ ಅವರು ಸುಗ್ಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಾರದಾನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ₹60,000 ಮೌಲ್ಯದ ಟೀ ಶರ್ಟ್, ಪ್ಯಾಂಟ್ ಮತ್ತು ಇತರ ವಸ್ತ್ರಗಳನ್ನು ವಿತರಿಸಿದ್ದಾರೆ. ಈ ಉದಾರ ಕಾರ್ಯದಿಂದ ಬಡ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿದೆ.
ಈ ಕುರಿತು ಮಾತನಾಡಿದ ರಾಜಮ್ಮ, "ಭಿಕ್ಷೆ ಬೇಡಿದ ಹಣದಲ್ಲಿ ಸ್ವಲ್ಪ ಉಳಿತಾಯ ಮಾಡಿದೆ. ಬಡ ಮಕ್ಕಳಿಗೆ ಸಹಾಯ ಮಾಡುವ ಇಚ್ಛೆಯಿಂದ ಈ ಕೆಲಸ ಮಾಡಿದೆ. ಮಕ್ಕಳ ಸಂತೋಷವೇ ನನಗೆ ದೊಡ್ಡ ಆನಂದ" ಎಂದು ತಮ್ಮ ಭಾವನೆ ಹಂಚಿಕೊಂಡರು.
ಈ ಕಾರ್ಯಕ್ಕೆ ಶಾಲಾ ಶಿಕ್ಷಕರು, ಸ್ಥಳೀಯರು ಮತ್ತು ಮಕ್ಕಳು ರಾಜಮ್ಮ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ರಾಜಮ್ಮ ಅವರ ಈ ಮಾನವೀಯ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.
