Asianet Suvarna News Asianet Suvarna News

Bipin Rawat Passes Away: ಮಂಗಳೂರಲ್ಲಿ ರಾವತ್‌ ಸಾವಿನ ಸಂಭ್ರಮ, 3 ಮಂದಿ ವಿರುದ್ಧ ಕೇಸ್‌

* ಜನರಲ್ ರಾವತ್‌ ಸಾವಿನ ಸಂಭ್ರಮ
* 3 ಮಂದಿಯ ವಿರುದ್ಧ ಕೇಸ್‌
* ಮಂಗಳೂರು ಠಾಣೆಯಲ್ಲಿ ಪ್ರಕರಣ ದಾಖಲು

3 cases registered in Mangaluru against who celebrated-general-bipin-rawat-death rbj
Author
Bengaluru, First Published Dec 12, 2021, 1:58 AM IST

ಮಂಗಳೂರು, (ಡಿ.12): ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (Bipin Rawat) ಹಾಗೂ ಇತರೆ 12 ಮಂದಿ ತಮಿಳುನಾಡಿನ ಕೂನೂರು ಸಮೀಪ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ (Helicopter Crash) ಮೃತಪಟ್ಟ ಘಟನೆ ದೇಶಾದ್ಯಂತ ಜನರಲ್ಲಿ ಅತೀವ ದುಃಖ ಮೂಡಿಸಿದೆ. ಆದರೆ ಅನೇಕ ಕಿಡಿಗೇಡಿಗಳು ಈ ಸಾವುಗಳನ್ನು ಸಂಭ್ರಮಿಸಿದ ವರದಿಗಳಾಗಿವೆ. ಕರ್ನಾಟಕದಲ್ಲೂ (Karnataka) ವಿಕೃತ ಮನಸ್ಸುಗಳು ಸಂಭ್ರಮಿಸಿದ್ದು, ಇದೀಗ ಅವರ ವಿರುದ್ಧ ಕೇಸ್ ಬುಕ್ ಆಗಿದೆ.

ಹೌದು.. ಹೆಲಿಕಾಪ್ಟರ್‌ ದುರಂತದಲ್ಲಿ ಅಸುನೀಗಿದ ಮೂರು ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ಅವರ ಪತ್ನಿ ಹಾಗೂ ಇತರ ಸೇನಾಧಿಕಾರಿಗಳ ಸಾವನ್ನು ಸಂಭ್ರಮಿಸುವ ವಿಕೃತ ಮನಸ್ಥಿತಿಗಳ ವಿರುದ್ಧ ರಾಜ್ಯದಲ್ಲೂ ಮೊದಲ ಬಾರಿಗೆ ಪ್ರಕರಣ ದಾಖಲಾಗಿದೆ. ಸೇನಾಧಿಕಾರಿಗಳ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ ಮೂವರ ವಿರುದ್ಧ ಮಂಗಳೂರು ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

News Hour: ಸಕಲ ಗೌರವಗಳೊಂದಿಗೆ ರಾವತ್ ಅಂತ್ಯಕ್ರಿಯೆ, ಸಾವು ಸಂಭ್ರಮಿಸುವ ಬುದ್ದಿಗೇಡಿಗಳು ಇದ್ದಾರೆ!

ಸುಶಾಂತ್‌ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಪಾಂಡೇಶ್ವರ ಠಾಣೆ ಪೊಲೀಸರು ಬೆಂಗಳೂರು, ಮಂಗಳೂರು ಮತ್ತು ಕಾರ್ಕಳ ಮೂಲದ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಾವತ್‌ ಸಾವನ್ನು ಸಂಭ್ರಮಿಸಿರುವ ಆರೋಪಿಗಳು, ‘ದೇಶ ಪಾರಾಗಿದೆ’, ರಾಷ್ಟ್ರೀಯ ಭದ್ರತಾ ಸಲಹೆಗಾರ ‘ಅಜಿತ್‌ ದೋವಲ್‌ ಸರದಿ ಯಾವಾಗ?’ ಎಂಬರ್ಥದ ಪೋಸ್ಟ್‌ಗಳು ಸೇರಿ ಹಲವು ಅವಹೇಳನಕಾರಿ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ.

ಆರೋಪಿಗಳ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 505(1), 505(1)(ಬಿ), 505(2) ಅಡಿ (ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿ ನೆಮ್ಮದಿ ಭಂಗ ತರುವುದು, ವದಂತಿ ಅಥವಾ ಸುಳ್ಳು ಸುದ್ದಿ ಪ್ರಸಾರ/ವರದಿ ಪ್ರಕಟಿಸಿ ದಂಗೆಗೆ ಪ್ರಚೋದನೆ, ರಾಷ್ಟ್ರದ್ರೋಹ ಮತ್ತು ಸಾರ್ವಜನಿಕರಲ್ಲಿ ದ್ವೇಷಭಾವ ಕೆರಳಿಸುವುದು) ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶೀಘ್ರ ವಶಕ್ಕೆ ಪಡೆಯಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೇನಾಧಿಕಾರಿಗಳ ಸಾವನ್ನು ಸಂಭ್ರಮಿಸುವ ವಿಕೃತ ಮನಸ್ಸುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಶುಕ್ರವಾರವಷ್ಟೇ ಪೊಲೀಸರಿಗೆ ಸೂಚನೆ ನೀಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ದುರಂತದ ಕುರಿತಾದ ಮಾಧ್ಯಮ ವರದಿಗಳಿಗೆ ಖುಷಿಯ ಎಮೋಜಿಗಳನ್ನು, ಕಾಮೆಂಟ್‌ಗಳನ್ನು ಹಾಕಿದ್ದಾರೆ.

ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಕೆಲವು ರಾಜ್ಯಗಳಲ್ಲಿ ಅನೇಕರನ್ನು ಬಂಧಿಸಲಾಗಿದೆ.

ಬಿಪಿನ್ ರಾವತ್ ಕುರಿತು ಅವಹೇಳನಾಕಾರಿ ಫೇಸ್‌ಬುಕ್ ಪೋಸ್ಟ್ ಮಾಡಿದ್ದ ಆರೋಪಡಿ ಗುಜರಾತ್‌ನ 44 ವರ್ಷದ ಶಿವ ಭಾಯ್ ಅಹಿರ್ ಎಂಬ ವ್ಯಕ್ತಿಯನ್ನು ಅಹ್ಮದಾಬಾದ್ ಸೈಬರ್ ಅಪರಾಧ ಘಟಕದ ಪೊಲೀಸರು ಗುರುವಾರ ಬಂಧಿಸಿದ್ದಾರೆ.

Follow Us:
Download App:
  • android
  • ios