Asianet Suvarna News Asianet Suvarna News

Wrestlers Protest ಬಬಿತಾರಿಂದ ಕುಸ್ತಿ ಹೋರಾಟಕ್ಕೆ ಧಕ್ಕೆ: ಸಾಕ್ಷಿ ಮಲಿಕ್

ಸಾಕ್ಷಿ ಮಲಿಕ್‌ vs ಬಬಿತಾ ರಾಜ​ಕೀಯ ಕೆಸ​ರೆ​ರೆ​ಚಾಟ!
ಹೋರಾಟ ದುರ್ಬ​ಲಗೊಳಿ​ಸ​ಲು ಬಬಿತಾ ಯತ್ನ: ಸಾಕ್ಷಿ
ಪ್ರತಿ​ಭ​ಟನಾ ನಿರತ ರೆಸ್ಲರ್ಸ್‌ ಕಾಂಗ್ರೆಸ್‌ ಕೈಗೊಂಬೆ: ಬಬಿ​ತಾ
 

Wrestlers Protest Babita Phogat has tried to weaken our protest Says Sakshi Malik kvn
Author
First Published Jun 19, 2023, 9:09 AM IST

ನವ​ದೆ​ಹ​ಲಿ(ಜೂ.19): ಈಗಾ​ಗಲೇ ರಾಜ​ಕೀಯ ಬಣ್ಣ ಪಡೆ​ದಿದ್ದ ಭಾರ​ತೀಯ ಕುಸ್ತಿ ಫೆಡ​ರೇ​ಶನ್‌(ಡ​ಬ್ಲ್ಯು​ಎ​ಫ್‌​ಐ​) ನಿರ್ಗ​ಮಿತ ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ವಿರು​ದ್ಧದ ಕುಸ್ತಿ​ಪ​ಟು​ಗಳ ಹೋರಾಟ ಈಗ ಮತ್ತಷ್ಟು ರಾಜ​ಕೀಯ ವಾಕ್ಸ​ಮರ, ಆರೋಪ-ಪ್ರತ್ಯಾ​ರೋ​ಪಕ್ಕೆ ಸಾಕ್ಷಿ​ಯಾ​ಗಿದೆ. ಶನಿ​ವಾ​ರ​ವಷ್ಟೇ ತಮ್ಮ ಪ್ರತಿ​ಭ​ಟ​ನೆಗೆ ಅವ​ಕಾಶ ಕೋರಿ ಪೊಲೀ​ಸ​ರಿಗೆ ಮನವಿ ಸಲ್ಲಿ​ಸಿದ್ದು ಬಿಜೆಪಿ ನಾಯಕಿ ಬಬಿತಾ ಫೋಗಟ್‌ ಎಂದು ಅಚ್ಚ​ರಿಯ ಹೇಳಿಕೆ ನೀಡಿದ್ದ ಕುಸ್ತಿ​ಪಟು ಸಾಕ್ಷಿ ಮಲಿಕ್‌, ತಾವು ಹೇಳಿದ್ದು ವ್ಯಂಗ್ಯ​ವಾಗಿ ಎಂದು ತಿಳಿಸಿ ಬಬಿತಾ ವಿರುದ್ಧ ಗಂಭೀರ ಆರೋಪ ಮಾಡಿ​ದ್ದಾರೆ. 

ನಮ್ಮ ಹೋರಾ​ಟ​ವನ್ನು ಬಬಿತಾ ದುರ್ಬಲಗೊಳಿ​ಸಲು ಪ್ರಯ​ತ್ನಿ​ಸಿ​ದರು ಎಂದು ಸಾಕ್ಷಿ ಭಾನು​ವಾರ ಟ್ವೀಟ್‌ ಮೂಲಕ ಆರೋ​ಪಿ​ಸಿದ್ದು, ಹೋರಾ​ಟ​ವನ್ನು ಅವರು ಸ್ವಾರ್ಥಕ್ಕೆ ಬಳ​ಸಿ​ದರು ಎಂದಿ​ದ್ದಾರೆ. ‘ತೀ​ರ್ಥ್‌ ರಾಣಾ ಹಾಗೂ ಬಬಿತಾ ನಮ್ಮ ಪ್ರತಿ​ಭ​ಟ​ನೆ​ಯನ್ನು ಸ್ವಾರ್ಥಕ್ಕೆ ಬಳ​ಸಲು ಯತ್ನಿ​ಸಿ​ದರು. ನಾವು ಸಂಕ​ಷ್ಟ​ದ​ಲ್ಲಿ​ದ್ದಾಗ ಅವರು ಸರ್ಕಾ​ರದ ಪರ ನಿಂತ​ರು. ನಾವು ಬಹಳ ಸಂಕ​ಷ್ಟ​ದ​ಲ್ಲಿ​ದ್ದೇವೆ’ ಎಂದಿದ್ದಾ​ರೆ. ಈ ಮೊದಲು ಕುಸ್ತಿ​ಪ​ಟು​ಗಳು ಪ್ರತಿ​ಭ​ಟನೆ ಆರಂಭಿ​ಸಿ​ದ್ದಾಗ, ವಿನೇಶ್‌ ಫೋಗಾಟ್‌ ತಮ್ಮ ಸೋದರ ಸಂಬಂಧಿ ಬಬಿ​ತಾಗೆ ‘ನಮ್ಮ ಹೋರಾಟ ದುರ್ಬ​ಲ​ಗೊ​ಳಿ​ಸಲು ಪ್ರಯ​ತ್ನಿ​ಸ​ಬೇಡಿ’ ಎಂದು ಮನವಿ ಮಾಡಿ​ದ್ದ​ರು.

ಸಾಕ್ಷಿಗೆ ಬಬಿತಾ ತಿರು​ಗೇಟು

ಕುಸ್ತಿ​ಪ​ಟು​ಗಳ ಎಲ್ಲಾ ಆರೋ​ಪ​ಗ​ಳನ್ನು ಬಬಿತಾ ಫೋಗಟ್‌ ಅಲ್ಲ​ಗ​ಳೆ​ದಿದ್ದು, ಅವರು ಕಾಂಗ್ರೆ​ಸ್‌ನ ಕೈಗೊಂಬೆ​ಗಳು ಎಂದು ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿ​ರುವ ಬಬಿತಾ, ‘ನನ್ನ ಸಹೋ​ದರಿ ಸಾಕ್ಷಿ ಹಾಗೂ ಅವರ ಪತಿ ಸತ್ಯ​ವರ್ತ್‌ ವಿಡಿಯೋ ನೋಡಿ ಬೇಸ​ರ​ವಾ​ಯಿತು. ಪ್ರತಿ​ಭ​ಟ​ನೆಗೆ ಅವ​ಕಾಶ ಕೋರಿ ನಾನು ಪೊಲೀ​ಸ​ರಿಗೆ ಸಲ್ಲಿ​ಸಿದ್ದೆ ಎಂಬ ಪತ್ರ​ದಲ್ಲಿ ನನ್ನ ಹೆಸರು, ಸಹಿ ಇಲ್ಲ. ಅದು ನನ್ನ​ದೆ​ನ್ನಲು ಯಾವ ಸಾಕ್ಷ್ಯವೂ ಇಲ್ಲ. ಆರಂಭ​ದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿ​ಯಾ​ಗಲು ಅವರಿಗೆ ತಿಳಿ​ಸಿದ್ದೆ. ಅವ​ರಿಂದ ಸಮ​ಸ್ಯೆಗೆ ಪರಿ​ಹಾರ ಸಿಗು​ತ್ತಿತ್ತು. ಆದರೆ ಕುಸ್ತಿ​ಪ​ಟು​ಗಳು ಕಾಂಗ್ರೆಸ್‌ ನಾಯ​ಕ​ರಾದ ಪ್ರಿಯಾಂಕ ಗಾಂಧಿ, ದೀಪೇಂದ​ರ್‌ ಹೂಡಾ ಮತ್ತು ಅತ್ಯಾ​ಚಾರ ಆರೋ​ಪ​ವಿ​ರುವ ಕೆಲ​ವ​ರನ್ನು ಭೇಟಿ​ಯಾ​ದರು’ ಎಂದು ಟೀಕಿ​ಸಿ​ದ್ದಾರೆ.

Wrestlers Protest: ಪೋಕ್ಸೋ ರದ್ದು ಶಿಫಾ​ರ​ಸಿ​ಗೆ ರೆಸ್ಲ​ರ್ಸ್‌ ಸಿಟ್ಟು!

ಅಲ್ಲದೇ ನೂತನ ಸಂಸತ್‌ಗೆ ಮುತ್ತಿ​ಗೆ ಯತ್ನ ಹಾಗೂ ಗಂಗಾ ನದಿಗೆ ಪದಕ ಎಸೆ​ಯಲು ಮುಂದಾ​ಗಿ​ದ್ದರ ಬಗ್ಗೆಯೂ ಬಬಿತಾ ಕಿಡಿ​ಕಾ​ರಿದ್ದಾರೆ. ‘ಇದ​ರಿಂದ ದೇಶಕ್ಕೆ ಅವ​ಮಾನ ಮಾಡಿ​ದ್ದೀರಿ. ಈ ಘಟ​ನೆ​ಗ​ಳಿಂದಲೇ ನಿಮ್ಮ ಉದ್ದೇ​ಶ​ವೇನು ಎಂಬುದು ಗೊತ್ತಾ​ಗಿ​ದೆ. ನೀವು ಕಾಂಗ್ರೆಸ್‌ ಕೈಗೊಂಬೆ​ಗಳು ಎಂಬುದು ಜನ​ರಿಗೆ ಅರ್ಥ​ವಾ​ಗಿದೆ. ನಿಮ್ಮ ನೈಜ ಉದ್ದೇ​ಶ​ವೇನು ಎಂದು ಈಗಾ​ದರೂ ಹೇಳಿ​ಬಿ​ಡಿ’ ಎಂದು ಬಬಿತಾ ಕುಟು​ಕಿ​ದ್ದಾರೆ.

ಸಂಸತ್‌ಗೆ ಮುತ್ತಿಗೆ ನಿರ್ಧಾರ ನಮ್ಮದಲ್ಲ

ನೂತನ ಸಂಸತ್‌ ಭವ​ನಕ್ಕೆ ಮುತ್ತಿಗೆ ಹಾಕುವ ನಿರ್ಧಾ​ರ ನಮ್ಮ​ದಾ​ಗಿ​ರ​ಲಿಲ್ಲ. ‘ಮ​ಹಿಳಾ ಪಂಚಾ​ಯ​ತ್‌’ ನಡೆ​ಸಲು ಉದ್ದೇ​ಶಿ​ಸಿದ್ದು ನಾವಲ್ಲ ಎಂದು ಸತ್ಯ​ವರ್ತ್‌ ಸ್ಪಷ್ಟ​ಪ​ಡಿ​ಸಿ​ದ್ದಾರೆ. ‘ಮ​ಹಿಳಾ ಸಮ್ಮಾನ್‌ ಮಹಾ​ಪಂಚಾ​ಯ​ತ್‌ ನಡೆ​ಸಲು ಖಾಪ್‌ ಪಂಚಾ​ಯತ್‌(ಕೆಲ ಹಳ್ಳಿ​ಗಳು ಸೇರಿ ರಚಿ​ಸಿ​ಕೊಂಡಿ​ರುವ ಗುಂಪು​) ಸದ​ಸ್ಯರು ನಿರ್ಧ​ರಿ​ಸಿ​ದ್ದರು. ನಾವು ಅವ​ರ ನಿರ್ಧಾ​ರ​ದಂತೆ ನಡೆ​ದಿ​ದ್ದೇವೆ. ಆದರೆ ಇದು ಸಂಘ​ರ್ಷಕ್ಕೆ ಕಾರ​ಣ​ವಾ​ಯಿತು. ಅದು ನಮ್ಮನ್ನು ಸಂಪೂ​ರ್ಣ​ವಾಗಿ ಕುಗ್ಗಿ​ಸಿ​ತು’ ಎಂದು ಬೇಸರ ವ್ಯಕ್ತ​ಪ​ಡಿ​ಸಿ​ದರು.

Follow Us:
Download App:
  • android
  • ios