Asianet Suvarna News Asianet Suvarna News

ಪಂತ್‌ಗೆ ಖಡಕ್‌ ಎಚ್ಚ​ರಿಕೆ ಕೊಟ್ಟ ರವಿ ಶಾಸ್ತ್ರಿ!

ಪದೇ ಪದೇ ಕೆಟ್ಟ ಹೊಡೆತ ಬಾರಿಸಿ ಕೈಸುಟ್ಟುಕೊಳ್ಳುತ್ತಿರುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮೇಲೆ ಕೋಚ್ ರವಿ ಶಾಸ್ತ್ರಿ ಸಿಡಿಮಿಡಿಗೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

Team India Cricket head Coach Ravi Shastri Has A Strict Warning For Rishabh Pant
Author
Dharamshala, First Published Sep 16, 2019, 3:54 PM IST

ಧರ್ಮ​ಶಾ​ಲಾ[ಸೆ.16]: ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಬೇಜ​ವಾ​ಬ್ದಾರಿತನದ ಬ್ಯಾಟಿಂಗ್ ಮುಂದು​ವ​ರಿ​ಸಿ​ದರೆ ಅವ​ರಿಗೆ ಕಠಿಣ ಶಿಕ್ಷೆ ನೀಡ​ಲಾ​ಗು​ತ್ತದೆ ಎಂದು ಪ್ರಧಾನ ಕೋಚ್‌ ರವಿಶಾಸ್ತ್ರಿ ಎಚ್ಚ​ರಿಕೆ ನೀಡಿ​ದ್ದಾರೆ. 

2007 to 2019: ಇಲ್ಲಿದೆ ಟೀಂ ಇಂಡಿಯಾ ಕೋಚ್ ಸ್ಯಾಲರಿ ಸ್ಲಿಪ್!

ಇತ್ತೀ​ಚಿನ ವೆಸ್ಟ್‌ಇಂಡೀಸ್‌ ಪ್ರವಾಸದಲ್ಲಿ ಅನ​ವ​ಶ್ಯ​ಕ​ವಾಗಿ ದುಬಾರಿ ಹೊಡೆತಗಳಿಗೆ ಯತ್ನಿಸಿ ಕೈಸು​ಟ್ಟು​ಕೊಂಡ ರಿಷಭ್‌ ತಂಡದ ನಂಬಿಕೆ ಕಳೆ​ದು​ಕೊಂಡಿ​ದ್ದಾರೆ ಎಂದು ಶಾಸ್ತ್ರಿ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದರು. ‘ಪದೇ ಪದೇ ಅನ​ವ​ಶ್ಯಕ​ವಾಗಿ ವಿಕೆಟ್‌ ಚೆಲ್ಲಿ ತಂಡ​ವನ್ನು ಸಂಕ​ಷ್ಟಕ್ಕೆ ಸಿಲು​ಕಿ​ಸಿ​ದರೆ, ಪ್ರತಿ​ಭಾ​ನ್ವಿ​ತನೋ ಅಲ್ಲವೋ ಆತ​ನನ್ನು ಕಠಿ​ಣ ಶಿಕ್ಷೆಗೆ ಗುರಿ ಪಡಿ​ಸ​ಲಾ​ಗು​ತ್ತದೆ’ ಎಂದು ಶಾಸ್ತ್ರಿ ಹೇಳಿ​ದ್ದಾರೆ.

ಕೊಹ್ಲಿ-ರೋಹಿತ್ ನಡುವೆ ಭಿನ್ನಾಭಿಪ್ರಾಯವಿರಬಹುದು, ಆದ್ರೆ...?

‘ಪಂತ್‌ ಆದಷ್ಟು ಬೇಗ ಎಚ್ಚೆ​ತ್ತು​ಕೊ​ಳ್ಳ​ಬೇಕು. ಅವರು ಐಪಿ​ಎಲ್‌ನಲ್ಲಿ ಆಡಿದ ಅನು​ಭವ ಹೊಂದಿ​ದ್ದಾರೆ. ತಮ್ಮ​ಲ್ಲಿ​ರುವ ಪ್ರತಿಭೆ ಎಂತದ್ದು ಎನ್ನು​ವು​ದನ್ನು ತೋರಿಸುವ ಸಮಯ ಬಂದಿದೆ’ ಎಂದು ಶಾಸ್ತ್ರಿ ಹೇಳಿ​ದ್ದಾ​ರೆ. ಪಂತ್ ಕಳೆದ 10 ಪಂದ್ಯಗಳಲ್ಲಿ ಒಮ್ಮೆಯೂ ಅರ್ಧಶತಕ ಸಿಡಿಸಿಲ್ಲ. 
 

Follow Us:
Download App:
  • android
  • ios