ಗೌತಮ್ ಗಂಭೀರ್‌ ಓರ್ವ ಮೂರ್ಖ ಎಂದಿರುವ ಶಾಹಿದ್ ಆಫ್ರಿದಿ ಇದೀಗ ಸುದ್ದಿಯಲ್ಲಿದ್ದಾರೆ. ಈಗಾಗಲೇ ಹಲವು ಬಾರಿ ಟ್ವಿಟರ್ ಮೂಲಕ ಜಗಳವಾಡಿದ್ದ ಅಫ್ರಿದಿ ಇದೀಗ ಹೇಳಿಕೆ ನೀಡೋ ಮೂಲಕ ಇವರ ಜಗಳ ಮತ್ತೊಂದು ತಿರುವು ಪಡೆದುಕೊಳ್ಳೋ ಸೂಚನೆ ನೀಡಿದ್ದಾರೆ.


ಇಸ್ಲಾಮಾಬಾದ್(ಮೇ.25): ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಆಫ್ರಿದಿ ನಡುವಿನ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ಈ ಇಬ್ಬರೂ ದಿಗ್ಗಜರು ನಿವೃತ್ತಿ ಹೇಳಿದರೂ ಜಗಳ ಮಾತ್ರ ಇನ್ನೂ ಮುಗಿದಿಲ್ಲ. ಇತ್ತೀಚೆಗೆ ಟ್ವಿಟರ್‌ನಲ್ಲಿ ಬಡಿದಾಡಿಕೊಂಡಿದ್ದ ಶಾಹಿದ್ ಆಫ್ರಿದಿ ಇದೀಗ ಗಂಭೀರ್ ವಿರುದ್ಧ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.

Add Asianetnews Kannada as a Preferred SourcegooglePreferred

ಇದನ್ನೂ ಓದಿ: ಕೊಹ್ಲಿ ಹಾಗೂ ಧೋನಿಗೆ ನಟಿ ಉರ್ವಶಿ ರೌಟೆಲಾ ಟ್ವೀಟ್

ಪಾಕಿಸ್ತಾನ ವಿರುದ್ದದ ವಿಶ್ವಕಪ್ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕು ಅನ್ನೋ ಗಂಭೀರ್ ಹೇಳಿಕೆಗೆ ಶಾಹಿದ್ ಆಫ್ರಿದಿ ರೊಚ್ಚಿಗೆದ್ದಿದ್ದಾರೆ. ಗಂಭೀರ್ ಒರ್ವ ಮೂರ್ಖ. ಏನು ಮಾತನಾಡಬೇಕು ಅನ್ನೋದೇ ತಿಳಿದಿಲ್ಲ. ಶಿಕ್ಷಣ ಪಡೆದರೂ ತಲೆಯಲ್ಲಿ ಏನೂ ಇಲ್ಲ ಎಂದು ಅಫ್ರಿದಿ ಹೇಳಿದ್ದಾರೆ.

Scroll to load tweet…

ಇದನ್ನೂ ಓದಿ: ಭರ್ಜರಿಯಾಗಿ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ಗಂಭೀರ್

2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಜೂನ್ 16 ರಂದು ಮುಖಾಮುಖಿಯಾಗಲಿದೆ. ಆದರೆ ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ವಿರುದ್ದದ ಎಲ್ಲಾ ವ್ಯವಹಾರ ನಿರ್ಬಂಧಿಸಲು ಒತ್ತಡ ಕೇಳಿಬಂದಿತ್ತು. ಇದೇ ವೇಳೆ ಗಂಭೀರ್, ಪಾಕಿಸ್ತಾನ ಜೊತೆಗಿನ ವಿಶ್ವಕಪ್ ಪಂದ್ಯವನ್ನೂ ಬಹಿಷ್ಕರಿಸಬೇಕು ಎಂದಿದ್ದರು.