IPL: ಎಚ್ಚರ ವಹಿಸಿಸಲು ಅಂಪೈರ್'ಗೆ ಸೂಚನೆ
2 ವಾರಗಳ ಹಿಂದೆ ರಾಜಸ್ಥಾನ-ಸನ್'ರೈಸರ್ಸ್ ಪಂದ್ಯದಲ್ಲಿ ಓವರ್ ಒಂದು 7 ಎಸೆತಗಳಿಗೆ ಸಾಕ್ಷಿಯಾಗಿತ್ತು. ಸನ್'ರೈಸರ್ಸ್-ಚೆನ್ನೈ ಪಂದ್ಯದಲ್ಲಿ ಬೌಲರ್ ನೋಬಾಲ್ ಎಸೆದಿದ್ದರೂ ಅದನ್ನು ಗಮನಿಸುವಲ್ಲಿ ಅಂಪೈರ್'ಗಳು ವಿಫಲರಾಗಿದ್ದರು. ಸಾಮಾಜಿಕ ತಾಣಗಳಲ್ಲಿ ಅಂಪೈರ್'ಗಳ ಎಡವಟ್ಟಿನ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು.
ನವದೆಹಲಿ(ಏ.25): ಪದೇ ಪದೇ ಎಡವಟ್ಟು ಮಾಡುತ್ತಿರುವ ಅಂಪೈರ್'ಗಳಿಗೆ ಹೆಚ್ಚು ಜಾಗರೂಕರಾಗಿರುವಂತೆ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
‘ಶುಕ್ಲಾ, ಮ್ಯಾಚ್ ರೆಫ್ರಿಗಳ ಜತೆ ಮಾತನಾಡಿದ್ದು ಅಂಪೈರ್'ಗಳಿಗೆ ಎಚ್ಚರ ವಹಿಸುವಂತೆ ತಿಳಿಸಲು ಹೇಳಿದ್ದಾರೆ’ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.
2 ವಾರಗಳ ಹಿಂದೆ ರಾಜಸ್ಥಾನ-ಸನ್'ರೈಸರ್ಸ್ ಪಂದ್ಯದಲ್ಲಿ ಓವರ್ ಒಂದು 7 ಎಸೆತಗಳಿಗೆ ಸಾಕ್ಷಿಯಾಗಿತ್ತು. ಸನ್'ರೈಸರ್ಸ್-ಚೆನ್ನೈ ಪಂದ್ಯದಲ್ಲಿ ಬೌಲರ್ ನೋಬಾಲ್ ಎಸೆದಿದ್ದರೂ ಅದನ್ನು ಗಮನಿಸುವಲ್ಲಿ ಅಂಪೈರ್'ಗಳು ವಿಫಲರಾಗಿದ್ದರು. ಸಾಮಾಜಿಕ ತಾಣಗಳಲ್ಲಿ ಅಂಪೈರ್'ಗಳ ಎಡವಟ್ಟಿನ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು.