Asianet Suvarna News Asianet Suvarna News

ಹುತಾತ್ಮ ಯೋಧರಿಗೆ ನಮಿಸಿದ ಕುಂಬ್ಳೆ

Indian cricket team salutes the bravehearts says coach Anil Kumble

ಕಾನ್ಪು​ರ(ಸೆ.20): ​ಜಮ್ಮು ಕಾಶ್ಮೀ​ರದ ಉರಿ ಸೆಕ್ಟ​ರ್‌​ನಲ್ಲಿ ನಡೆದ ಉಗ್ರರ ದಾಳಿ​ಯಲ್ಲಿ ಮಡಿದ 17 ಭಾರ​ತೀಯ ಯೋಧ​ರ ಬಗ್ಗೆ ಟೀಂ ಇಂಡಿಯಾ ಮುಖ್ಯ ತರ​ಬೇ​ತು​ದಾರ ಅನಿಲ್‌ ಕುಂಬ್ಳೆ ಸಂತಾಪ ವ್ಯಕ್ತ​ಪ​ಡಿ​ಸಿ​ದ್ದಾರೆ.

ಗಡಿ ನಿಯಂತ್ರಣ ರೇಖೆಯ (ಎ​ಲ್‌​ಒ​ಸಿ) ಬಳಿ​ಯಿ​ರುವ ಉರಿಯಲ್ಲಿನ ಬ್ರಿಗೇಡ್‌ ಕೇಂದ್ರ ಕಚೇ​ರಿಯ ಮೇಲೆ ಸೋಮ​ವಾರ ನಾಲ್ವರು ಉಗ್ರರು ಭಾರೀ ಶಸ್ತ್ರಾ​ಸ್ತ್ರ​ಗ​ಳೊಂದಿಗೆ ದಾಳಿ ನಡೆ​ಸಿದ್ದರು. ಈ ವೇಳೆ ನಡೆದ ಗುಂಡಿನ ಚಕ​ಮ​ಕಿ​ಯಲ್ಲಿ ಭಾರ​ತೀಯ ಯೋಧರು ವೀರ​ಮ​ರಣ ಅಪ್ಪಿ​ದ್ದರು.

ಈ ಬಗ್ಗೆ ಮಾಧ್ಯ​ಮ​ಗ​ಳಿ​ಗೆ ಪ್ರತಿ​ಕ್ರಿ​ಯಿ​ಸಿ​ರುವ ಕುಂಬ್ಳೆ, ‘‘ಯೋಧರ ಕುಟುಂಬ​ಗ​ಳಿಗೆ ಅವರ ಅಗ​ಲಿ​ಕೆಯ ನೋವು ಭರಿ​ಸುವ ಶಕ್ತಿ ಬರಲಿ. ಯೋಧರ ತ್ಯಾಗ, ಬಲಿ​ದಾ​ನಕ್ಕೆ ಟೀಂ ಇಂಡಿಯಾ ನಮಿ​ಸು​ತ್ತ​ದೆ’’ ಎಂದು ತಿಳಿ​ಸಿ​ದರು.

Follow Us:
Download App:
  • android
  • ios