Asianet Suvarna News Asianet Suvarna News

ವಿಶ್ವಕಪ್‌ ತಂಡದಲ್ಲಿ ಧೋನಿ; ವಿರಾಟ್ ಹೇಳಿದ್ದಿಷ್ಟು...

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಉಪಸ್ಥಿತಿಯನ್ನು ಕೊಹ್ಲಿ ವಿವರಿಸಿದ್ದು ಹೀಗೆ...

Fortunate to have a mind like that Virat Kohli lauds MS Dhoni
Author
New Delhi, First Published Apr 20, 2019, 2:04 PM IST

ಕೋಲ್ಕತಾ[ಏ.20]: ಐಸಿಸಿ ಏಕದಿನ ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಎಂ.ಎಸ್‌.ಧೋನಿ ಇರುವುದು ನಮ್ಮ ಅದೃಷ್ಟ ಎಂದು ನಾಯಕ ವಿರಾಟ್‌ ಕೊಹ್ಲಿ ಅಭಿಪ್ರಾಯಿಸಿದ್ದಾರೆ. 

ಕೊನೆಯವರೆಗೂ KKR ಹೋರಾಟ- ಗೆಲುವಿನ ನಿಟ್ಟುಸಿರುಬಿಟ್ಟ RCB!

ಧೋನಿಯ ಅನುಭವ ತಂಡಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದಿರುವ ಕೊಹ್ಲಿ, ‘ಆಟದ ಎಲ್ಲಾ ಆಯಾಮಗಳನ್ನು ತಿಳಿದುಕೊಂಡಿರುವ ಕೆಲವೇ ಕೆಲವು ಆಟಗಾರರ ಪೈಕಿ ಧೋನಿ ಒಬ್ಬರು. ಮೊದಲ ಎಸೆತದಿಂದ 300ನೇ ಎಸೆತದ ವರೆಗೂ ಪಂದ್ಯ ಹೇಗೆ ಸಾಗಬೇಕು ಎನ್ನುವುದು ಧೋನಿಗೆ ತಿಳಿದಿದೆ. ಸ್ಟಂಪ್ಸ್ ಹಿಂದೆ ಧೋನಿಯಂತಹ ಚತುರ ಆಟಗಾರನಿರುವುದು ನಮ್ಮ ಅದೃಷ್ಟ. ಅವರ ಉಪಸ್ಥಿತಿ ಬೌಲರ್‌ಗಳ ಕೆಲಸವನ್ನು ಸುಲಭಗೊಳಿಸಲಿದೆ’ ಎಂದಿದ್ದಾರೆ.

2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಶ್ರೀಲಂಕಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ 28 ವರ್ಷಗಳ ಬಳಿಕ ಎರಡನೇ ಬಾರಿಗೆ ಭಾರತ ವಿಶ್ವಕಪ್’ಗೆ ಮುತ್ತಿಕ್ಕಿತ್ತು. ಇನ್ನು 2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್’ನಲ್ಲಿ ಮುಗ್ಗರಿಸಿತ್ತು. 

ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಧೋನಿ ಕಣಕ್ಕೆ

ಬೆನ್ನು ನೋವಿನ ಕಾರಣ ಸನ್‌ರೈಸ​ರ್ಸ್ ಹೈದರಾಬಾದ್‌ ವಿರುದ್ಧ ಬುಧವಾರ ನಡೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂ.ಎಸ್‌.ಧೋನಿ, ಆರ್‌ಸಿಬಿ ವಿರುದ್ಧ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಡಲಿದ್ದಾರೆ. ತಂಡದ ಉಪನಾಯಕ ಸುರೇಶ್‌ ರೈನಾ, ಧೋನಿ ಕಣಕ್ಕಿಳಿಯುವ ಬಗ್ಗೆ ಖಚಿತಪಡಿಸಿದ್ದಾರೆ.
 

Follow Us:
Download App:
  • android
  • ios