ದುಲೀಪ್ ಟ್ರೋಫಿ ಫೈನಲ್: ಭಾರತ ರೆಡ್ಗೆ ಇನ್ನಿಂಗ್ಸ್ ಮುನ್ನಡೆ
ಇಂಡಿಯಾ ರೆಡ್ ಹಾಗೂ ಇಂಡಿಯಾ ಗ್ರೀನ್ ನಡುವಿನ ದುಲಿಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಇಂಡಿಯಾ ರೆಡ್ ತಂಡ ಮೇಲುಗೈ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಸೆ.07]: ಬಂಗಾಳದ ಆರಂಭಿಕ ಬ್ಯಾಟ್ಸ್ಮನ್ ಅಭಿಮನ್ಯು ಈಶ್ವರನ್ನ ಅಮೋಘ 153 ರನ್ಗಳ ನೆರವಿನಿಂದ ದುಲೀಪ್ ಟ್ರೋಫಿ ಫೈನಲ್ನಲ್ಲಿ ಭಾರತ ರೆಡ್ ತಂಡ, ಭಾರತ ಗ್ರೀನ್ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ್ದು, ಪ್ರಶಸ್ತಿಯತ್ತ ಹೆಜ್ಜೆ ಹಾಕಿದೆ.
ದುಲೀಪ್ ಟ್ರೋಫಿ: ರೆಡ್-ಗ್ರೀನ್ ಫೈನಲ್
ಪಂದ್ಯದ 3ನೇ ದಿನವಾದ ಶುಕ್ರವಾರ 2 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದ್ದ ಭಾರತ ರೆಡ್, ಮೂರನೇ ದಿನದಂತ್ಯಕ್ಕೆ 6 ವಿಕೆಟ್ಗೆ 345 ರನ್ ಕಲೆಹಾಕಿ, 114 ರನ್ಗಳ ಮುನ್ನಡೆ ಪಡೆದಿತ್ತು. ಇದೀಗ ನಾಲ್ಕನೇ ದಿನದ ಮೊದಲ ಸೆಷನ್ ವೇಳೆಗೆ 388 ರನ್’ಗಳಿಸಿ ಆಲೌಟ್ ಆಯಿತು. ಈ ಮೂಲಕ ಇಂಡಿಯಾ ರೆಡ್ ತಂಡ 157 ರನ್’ಗಳ ಮುನ್ನಡೆ ಪಡೆದಿದೆ. ಅಂಕಿತ್ ರಜಪೂತ್ ಹಾಗೂ ಧರ್ಮೇಂದರ್ ಸಿಂಗ್ ಜಡೇಜಾ ತಲಾ 3 ವಿಕೆಟ್ ಪಡೆದರೆ, ತನ್ವೀರ್ ಉಲ್ ಹಕ್ 2 ಹಾಗೂ ಧೃವ ಶೋರೆ ಮತ್ತು ಮಯಾಂಕ್ ಮಾರ್ಕಂಡೆ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್ನಲ್ಲಿ ಮಯಾಂಕ್ ಮಾರ್ಕಂಡೆ ಅಜೇಯ 76 ರನ್’ಗಳ ನೆರವಿನಿಂದ ಭಾರತ ಗ್ರೀನ್ 231 ರನ್ಗಳಿಗೆ ಆಲೌಟ್ ಆಗಿತ್ತು. ಜಯದೇವ್ ಉನಾದ್ಕತ್ 4 ವಿಕೆಟ್ ಪಡೆದು ಮಿಂಚಿದ್ದರು.
ಸ್ಕೋರ್:
ಭಾರತ ಗ್ರೀನ್ 231/10
ಭಾರತ ರೆಡ್ 388/10