ಪ್ರಸಕ್ತ ಋತುಮಾನದಲ್ಲಿ ಭೀಕರ ಬರಗಾಲ ನಾಡನ್ನು ಆವರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕೃಷಿಗಾಗಿ ಹಿಂಗಾರು ಹಂಗಾಮಿಗೆ ನೀರು ಹರಿಸಿಲ್ಲ. ಕೆಬಿಜೆಎನ್ಎಲ್ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತೆ ವಹಿಸಿದ್ದರ ಪರಿಣಾಮ ಮಾ.26ರಂದು ಆಲಮಟ್ಟಿ ಜಲಾಶಯದಲ್ಲಿ ಇನ್ನೂ 40.78 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷವೂ ಈ ದಿನದಂದು ಜಲಾಶಯದಲ್ಲಿ ಬಹುತೇಕ ಇಷ್ಟೇ ಪ್ರಮಾಣದಲ್ಲಿ 41 ಟಿಎಂಸಿ ಅಡಿ ನೀರು ಸಂಗ್ರಹವಿತ್ತು.
Karnataka Districts Mar 28, 2024, 1:22 PM IST
ಈ ಬಾರಿ ಬರಗಾಲ ಬಿದ್ದಿದ್ದರಿಂದ ಜಲಮೂಲಗಳು ಬರಿದಾಗಿ ಜನ, ಜಾನುವಾರುಗಳು ನೀರಿಗಾಗಿ ಹಾಹಾಕಾರ ಅನುಭವಿಸುವಂತಾಗಿದೆ. ಇದರ ಮಧ್ಯೆ ಮತ್ಸೋದ್ಯಮಕ್ಕೂ ನೀರಿನ ಕೊರತೆ ಉಂಟಾಗಿ ಈ ಉದ್ಯಮ ಕೂಡ ಮಕಾಡೆ ಮಲಗಿಕೊಂಡಿದೆ. ಹೀಗಾಗಿ ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ.
Karnataka Districts Mar 16, 2024, 9:00 PM IST
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು ಜಿಪಂ ವ್ಯಾಪ್ತಿಯಲ್ಲಿ ಒಟ್ಟು 32 ಕೆರೆಗಳಿದ್ದು, ಭೀಕರ ಬರಗಾಲದ ಪರಿಣಾಮ ಅವರು ಬರಿದಾಗಿವೆ. ಮುಂಗಾರು, ಹಿಂಗಾರು ಸಮರ್ಪಕವಾಗಿ ಸುರಿಯದ ಕಾರಣ ನೀರಿಲ್ಲದೇ ಬಣಗುಡುತ್ತಿವೆ. ಕೆಲವು ಕಡೆ ಕೆರೆಯ ಒಡಲು ಬತ್ತಿ ಬಾಯ್ದೆರೆದಿದೆ.
Karnataka Districts Mar 15, 2024, 9:30 PM IST
ನೀರಿನ ಅಗತ್ಯತೆಯನ್ನು ಪಕ್ಕದ ಹೊಲದ ಬೋರ್ವೆಲ್ನಿಂದ ಪೂರೈಸಲಾಗುತ್ತಿದೆ. ನೀರಿನ ಸವಲತ್ತಿಲ್ಲದೆ ಮಕ್ಕಳು ತೊಂದರೆ ಪಡುತ್ತಿದ್ದಾರೆ. ಜೊತೆಗೇ ಆಟದ ಮೈದಾನವೂ ಇಲ್ಲಿಲ್ಲ. ಶಾಲೆಗೆ ಅವಶ್ಯಕವಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಪಟ್ಟಿ ಮಾಡಿಕೊಟ್ಟರೂ ಪರಿಹಾರದೊರೆತಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
Education Dec 20, 2023, 10:00 PM IST
ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ನಗರದ ಪೊಲೀಸ್ ಬಡಾವಣೆಯಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು ಮೃಗಾಲಯ ಹಾಗೂ ರಮ್ಮನಹಳ್ಳಿ ಪಟ್ಟಣ ಪಂಚಾಯತ್ ಸಂಯುಕ್ತವಾಗಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
Karnataka Districts Oct 2, 2023, 7:19 AM IST
ಗ್ರಾಮಗಳಲ್ಲಿನ ಜಲಮೂಲಗಳ ಸಮಗ್ರ ಮಾಹಿತಿಯನ್ನು ಜನರಿಗೆ ನೀಡಿ ಜಲಮೂಲಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರಿನ ಮಾಹಿತಿ ಕೇಂದ್ರ (ವಾಟರ್ ನಾಲೆಡ್ಜ್ ಸೆಂಟರ್) ಸ್ಥಾಪಿಸಲಾಗುವುದು ಎಂದು ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
state Aug 6, 2023, 6:52 AM IST
ಈ ವರ್ಷ ಸಕಾಲಕ್ಕೆ ಮಳೆಯಾಗದೇ ಇರುವ ಕಾರಣಕ್ಕೆ ಮುಧೋಳ ನಗರದಲ್ಲಿ ನೀರಿನ ಸಮಸ್ಯೆ ಉಲ್ಭಣವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಜನರು ಎಚ್ಚರಿಕೆಯಿಂದ ನೀರನ್ನು ಬಳಕೆ ಮಾಡುವುದು ಅನಿವಾರ್ಯವಾಗಿದೆ.
Karnataka Districts Jun 18, 2023, 3:32 PM IST
ಬೇಸಿಗೆಯಲ್ಲೂ ನೀರಿನ ಹರಿವು, ವನ್ಯ ಜೀವಿಗಳ ದಾಹ ನೀಗಿಸುತ್ತಿದೆ ಜೀವಜಲ, ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಜಲಮೂಲಗಳು ಈ ವರ್ಷ ಬರಿದಾಗಿಲ್ಲ
Karnataka Districts May 24, 2023, 8:29 PM IST
ನಮಾಮಿ ಗಂಗೆ ಯೋಜನೆಗೆ ಲಭಿಸಿರುವ ಯಶಸ್ಸು ಇಂದು ದೇಶದ ಇತರ ನದಿಗಳ ಪುನರುಜ್ಜೀವನಕ್ಕೆ ಮಾದರಿಯಾಗಿದೆ. ಗಂಗಾನದಿಯಲ್ಲಿ ಈಗ ಡಾಲ್ಫಿನ್ಗಳು, ಮೊಸಳೆಗಳು, ನೀರುನಾಯಿಗಳು ಮತ್ತು ಇತರ ಜಲಚರ ಪ್ರಭೇದಗಳು ಕೂಡ ಕಾಣಸಿಗುತ್ತಿವೆ. ಗಂಗಾ ಜಲಾನಯನ ಪ್ರದೇಶದಲ್ಲಿ 30,000 ಹೆಕ್ಟೇರ್ ಅರಣ್ಯೀಕರಣ, ಜಲ ಪುನಶ್ಚೇತನ, ಜೌಗು ಪ್ರದೇಶ ಸಂರಕ್ಷಣೆ, ಸಾಂಪ್ರದಾಯಿಕ ಜಲಮೂಲಗಳ ಪುನಶ್ಚೇತನ ಕೂಡ ಸಾಧ್ಯವಾಗಿದೆ.
India Jan 5, 2023, 6:23 AM IST
* ಅಧಿಕಾರಕ್ಕೆ ಬಂದರೆ ನಗರದ ಕೆರೆಗಳ ಒತ್ತುವರಿ ತೆರವು
* ಬೆಂಗಳೂರಿನ ಐಟಿ ಕ್ರಾಂತಿಗೆ ಮುನ್ನುಡಿ ಬರೆದವರು ದೇವೇಗೌಡರು
* ಬೆಂಗಳೂರಿಗೆ ಅನೇಕ ಕಾರ್ಯಕ್ರಮ ಕೊಟ್ಟ ದೊಡ್ಡಗೌಡರು
Karnataka Districts May 13, 2022, 4:42 AM IST
ಜಲಮೂಲಗಳನ್ನು ಜತನದಿಂದ ಕಾಯ್ದುಕೊಳ್ಳುವುದು ಮುಖ್ಯ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.
Karnataka Districts Sep 23, 2019, 12:41 PM IST
ಸಾಂಸ್ಕೃತಿಕವಾಗಿ ನಗರಗಳು ಬೆಳೆಯುತ್ತಿದ್ದುದೇ ಜಲಮೂಲಗಳ ಸಮೀಪ.ಆದರೆ ಬೆಂಗಳೂರಿನ ದೌರ್ಭಾಗ್ಯ. ಹತ್ತಿರದಲ್ಲಿ ಬೃಹತ್ ನದಿಗಳೂ ಇಲ್ಲ. ಇರುವ ಸಣ್ಣ ಪುಟ್ಟ ನದಿಗಳನ್ನೂ ಕೊಂದಿದ್ದೇವೆ. ಅಂತರ್ಜಲವನ್ನೂ ಕುಡಿದು ಖಾಲಿ ಮಾಡಿದ್ದೇವೆ. ಬಿದ್ದ ಮಳೆ ನೀರು ಇಂಗದಂತೆ ನಗರವನ್ನು ಕಾಂಕ್ರೀಟ್ ಕಾಡಾಗಿಸಿದ್ದೇವೆ. ಈಗ ಇದಕ್ಕಿರುವ ಏಕೈಕ ಪರಿಹಾರವೆಂದರೆ ನಗರದ ಬೆಳವಣಿಗೆಗೆ ತಡೆಯೊಡ್ಡುವುದು.
NEWS Jun 30, 2019, 10:04 AM IST
ನೀರಿನ ಸಮಸ್ಯೆ ನಾಡು ಮಾತ್ರವಲ್ಲದೆ ರಕ್ಷಿತಾರಣ್ಯದಲ್ಲೂ ತಲೆದೋರಿದೆ. ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಜಲಮೂಲಗಳೆಲ್ಲ ಬತ್ತಿಹೋಗಿದ್ದು ಹುಲಿ, ಆನೆ, ಚಿರತೆ, ಕಾಡುಕೋಣ, ಜಿಂಕೆ ಮತ್ತಿತರ ಕಾಡು ಪ್ರಾಣಿಗಳ ಬಾಯಾರಿದೆ. ಜೀವಜಲಕ್ಕಾಗಿ ಅಕ್ಷರಶಃ ಪರದಾಡುತ್ತಿವೆ. ಅಲ್ಲಲ್ಲಿ ಅಳವಡಿಸಿದ ನೀರಿನ ತೊಟ್ಟಿಗಳೇ ಈಗ ಪ್ರಾಣಿಗಳ ಪ್ರಾಣ ಉಳಿಸಬೇಕಾಗಿದೆ.
NEWS May 21, 2019, 9:18 AM IST
ಈ ಬಾರಿಯ ಬೇಸಿಗೆ ಗಣಿನಾಡು ಬಳ್ಳಾರಿಯನ್ನು ಬೇಯಿಸುತ್ತಿದೆ. ಬೆಂಕಿಯುಂಡೆಯಂತಹ ಬಿಸಿಲ ತಾಪಕ್ಕೆ ಜಿಲ್ಲೆಯ ಜಲಮೂಲಗಳು ಬತ್ತಿವೆ. ಕುಡಿಯುವ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುವ ಜನತೆ ಟ್ಯಾಂಕರ್ ನೀರಿಗಾಗಿ ಬಡಿದಾಡುವಂತಾಗಿದೆ. ಇನ್ನು ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದ ಹರಗಿನಡೋಣಿ ಗ್ರಾಮಸ್ಥರು ನೀರಿನ ಅಭಾವದಿಂದ ಪೇಪರ್ ಪ್ಲೇಟ್ನಲ್ಲಿ ಊಟ ಮಾಡಿ, ವಾರಕ್ಕೊಮ್ಮೆ ಸ್ನಾನ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಗ್ರಾಮಸ್ಥರು ನೀರಿಗಾಗಿ ಮತದಾನ ಬಹಿಷ್ಕರಿಸಿದ್ರು ಇವರ ಸಂಕಷ್ಟ ಮಾತ್ರ ಪರಿಹಾರವಾಗಿಲ್ಲ
NEWS Apr 30, 2019, 4:48 PM IST