ಉಡುಪಿ ಜಿಲ್ಲೆಯಲ್ಲಿ ಸೋಮವಾರ ಒಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ 14 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1077ಕ್ಕೇರಿದೆ.
Karnataka Districts Jun 23, 2020, 7:41 AM IST
ಚಿಕ್ಕಪೇಟೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಾಕ್ಡೌನ್ ಮಾಡಲು ನಿರ್ಧರಿಸಲಾಗಿದೆ. ಆದರೆ ಇದರ ಕುರಿತಂತೆ ವಿರೋಧಗಳು ವ್ಯಕ್ತವಾಗಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
state Jun 22, 2020, 7:16 PM IST
ಸದ್ಯದ ಪರಿಸ್ಥಿತಿ ನೋಡಿದರೆ ಬೆಂಗಳೂರಿಗೆ ಮಹಾಗಂಡಾಂತರ ಕಾದಿದೆ. ಕೋವಿಡ್ 19 ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದ್ದು, ಮುನ್ನಚ್ಚರಿಕಾ ಕ್ರಮವನ್ನು ವಹಿಸುವ ಅಗತ್ಯವಿದೆ. ಒಂದು ಲೆಕ್ಕಾಚಾರದ ಪ್ರಕಾರ ಆಗಸ್ಟ್ನಲ್ಲಿ ಒಂದೂವರೆ ಲಕ್ಷ ಜನರಿಗೆ ಕೊರೊನಾ ಪಾಸಿಟೀವ್ ಬರಬಹುದು. ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಕ್ವಾರಂಟೈನ್ ನಿಯಮವನ್ನು ಸಡಿಲಿಸಿದ್ದೇ ಸಡಿಲಿಸಿದ್ದು. ಸೋಂಕಿತರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಹಾಗಾದರೆ ಆಗಸ್ಟ್ ವೇಳೆಗೆ ಯಾಕೆ ಹೆಚ್ಚಾಗಲಿದೆ? ಇಲ್ಲಿದೆ ನೋಡಿ..!
state Jun 22, 2020, 7:09 PM IST
ಸದ್ಯದ ಪರಿಸ್ಥಿತಿ ನೋಡಿದರೆ ಬೆಂಗಳೂರಿಗೆ ಮಹಾಗಂಡಾಂತರ ಕಾದಿದೆ. ಕೋವಿಡ್ 19 ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದ್ದು, ಮುನ್ನಚ್ಚರಿಕಾ ಕ್ರಮವನ್ನು ವಹಿಸುವ ಅಗತ್ಯವಿದೆ. ಇದೀಗ ಹೆಚ್ಚು ಜನ ಸೇರುವ ಜಾಗಗಳೇ ಡೇಂಜರ್ ಆಗಿದ್ದು, ಜನಸಾಂದ್ರತೆ ಇರುವ ಜಾಗಗಳನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕೆಆರ್ ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ, ಗಾಂಧಿ ಬಜಾರ್, ಜಯನಗರ ಕಾಂಪ್ಲೆಕ್ಸ್ಗಳಲ್ಲಿ ಹೆಚ್ಚು ಜನ ಸಾಂದ್ರತೆ ಇದ್ದು ಶಿಫ್ಟ್ ಮಾಡುವ ಯೋಚನೆ ಎದುರಿಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
state Jun 22, 2020, 6:57 PM IST
ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಇನ್ನು ಎಸ್ಎಸ್ಎಲ್ಸಿ ಪರೀಕ್ಷೆ. ಮತ್ತೆ ಶಾಲೆ ಶಾಲೆ ಪುನಾರಂಭ ಮತ್ತು ಮತ್ತೆ ಲಾಕ್ಡೌನ್ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ನಿಲುವು ಏನಿದೆ ಎನ್ನುವುದನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾಹಿತಿ ಹಂಚಿಕೊಂಡಿದ್ದಾರೆ.
state Jun 22, 2020, 5:54 PM IST
ಗಡಿಭಾಗದಲ್ಲಿ ಪದೇ ಪದೇ ತಂಟೆ ತೆಗೆದು ಇಡೀ ದೇಶದ ನೆಮ್ಮದಿ ಹಾಳು ಮಾಡುವ ಚೀನಾ ಗೆ ಪಾಠ ಕಲಿಸಲೇಬೇಕು. ಸೈನಿಕರು ಗಡಿಯಲ್ಲಿ ಹೋರಾಡಿದರೆ ನಾವು ಚೀನಾ ವಸ್ತು ಬೈಕಾಟ್ ಮಾಡಿ ಆರ್ಥಿಕ ಹೊಡೆತಕ್ಕೆ ನಾಂದಿ ಹಾಡುತ್ತೇವೆ. ಇನ್ಮುಂದೆ ನಮಗೆ ಬೇಕಾದ ಕಚ್ಚಾ ವಸ್ತುಗಳನ್ನ ಕೊರಿಯಾ, ತೈವಾನ್, ಹಾಂಕಾಗ್ ನಿಂದ ಪಡೆಯುತ್ತೇವೆ ಎಂದು ಬಳ್ಳಾರಿ ಜೀನ್ಸ್ ಉದ್ಯಮಿಗಳೂ #BoycottChina ಅಭಿಯಾನ ಶುರು ಮಾಡಿದ್ದಾರೆ.
state Jun 22, 2020, 5:39 PM IST
ಮತ್ತೊಮ್ಮೆ ಲಾಕ್ಡೌನ್ ಮಾಡಲ್ಲ. ಯಾರಿಗೂ ಭಯಬೇಡ. ಕೊರೊನಾ ವೈರಸ್ ನಮ್ಮ ಜೊತೆಯೇ ಇರುತ್ತದೆ ಎಂದು ಡಿಸಿಎಂ ಅಶ್ವತ್ ನಾರಾಯಣ್ ತೆರೆ ಎಳೆದಿದ್ದಾರೆ.
state Jun 22, 2020, 3:39 PM IST
ಕೊರೋನಾ ಲಾಕ್ಡೌನ್ ಕಾರಣದಿಂದ ವಿದೇಶದಲ್ಲಿ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರನ್ನು ಕರೆತರುವ ಕಾರ್ಯ ಮುಂದುವರಿದಿದ್ದು, ಭಾನುವಾರ ಮಂಗಳೂರಿಗೆ ಎರಡು ವಿಮಾನಗಳು ಆಗಮಿಸಿವೆ.
NRI Jun 22, 2020, 3:06 PM IST
ಕೊರೋನಾ ವೈರಸ್ ಹಾಗೂ ಲಾಕ್ಡೌನ್ ಕಾರಣ ಶ್ರೀಲಂಕಾದ ಮಾಜಿ ಕ್ರಿಕೆಟಿಗರು, ಮಾಜಿ ಕ್ರೀಡಾ ಸಚಿವರು ಸೇರಿದಂತೆ ಹಲವು ಮಾಜಿಗಳು ಕೆಲಸವಿಲ್ಲದೆ ಮನೆಯಲ್ಲಿದ್ದಾರೆ. ಈ ವೇಳೆ ತಾವು ಸುದ್ದಿಯಲ್ಲಿರುವ ಸ್ಫೋಟಕ ಹೇಳಿಕೆ ನೀಡಿ ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಲಂಕಾ ಮಾಜಿ ಕ್ರೀಡಾ ಮಂತ್ರಿ ಬೆನ್ನಲ್ಲೇ ಇದೀಗ ಮಾಜಿ ನಾಯಕ ಅರವಿಂದ್ ಡಿಸಿಲ್ವಾ ಮತ್ತೆ 2011ರ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಎಂದಿದ್ದಾರೆ.
Cricket Jun 22, 2020, 3:06 PM IST
ಕರ್ನಾಟಕದಲ್ಲಿ ಹೊರ ರಾಜ್ಯದಿಂದ ಬಂದವರಿಂದ ಕೊರೋನಾ ಪಾಸಿಟಿವ್ ಕೇಸ್ಗಳು ತೀವ್ರಗತಿಯಲ್ಲಿ ಏರುತ್ತಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗಾಗಿ ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಿದೆ.
state Jun 22, 2020, 2:33 PM IST
ಕೊರೊನಾ ವಿಚಾರದಲ್ಲಿ ಸಿಲಿಕಾನ್ ಸಿಟಿ ಜನರಿಗೆ ಶಾಕ್ ಮೇಲೆ ಶಾಕ್..! ಬೆಂಗಳೂರಿನಲ್ಲಿ ಕೋರೊನಾ ಆರ್ಭಟ ಹೆಚ್ಚಾಗುತ್ತಿದೆ. 7 ಏರಿಯಾಗಳು ಮತ್ತೆ ಸೀಲ್ ಡೌನ್ ಆಗುವ ಸಾಧ್ಯತೆಗಳಿವೆ. ಚಿಕ್ಕಪೇಟೆ, ಕೆ. ಆರ್ ಮಾರ್ಕೆಟ್, ವಿವಿಪುರಂ, ಕಲಾಸಿಪಾಳ್ಯ, ಸಿದ್ಧಾಪುರ, ಚಾಮರಾಜಪೇಟೆ ಸೀಲ್ಡೌನ್ ಆಗುವ ಸಾಧ್ಯತೆ ಇದೆ. ಪಾದರಾಯನಪುರ ಎಂದಿನಂತೆ ಸೀಲ್ಡೌನ್ ಆಗಿದೆ. ಸ್ವಯಂ ನಿರ್ಧಾರದಿಂದ ಚಿಕ್ಕಪೇಟೆ ಸಹ ಸೀಲ್ಡೌನ್ ಆಗಿದೆ. ಇಂದಿನ ಸಿಎಂ ಸಭೆಯಲ್ಲಿ ಸೀಲ್ಡೌನ್ ಬಗ್ಗೆ ನಿರ್ಧಾರವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
state Jun 22, 2020, 12:37 PM IST
ಉದ್ಯಾನನಗರಿಯಲ್ಲಿ ಕೊರೊನಾ ಕೇಸ್ ದಿನ ದಿನಕ್ಕೂ ಕೈ ಮೀರಿ ಹೋಗುತ್ತಿದೆ. ನಗರಕ್ಕೆ SARI ಹಾಗೂ ILI ಸೋಂಕು ಕೇಸ್ಗಳು ಕಂಟಕಪ್ರಾಯವಾಗಿವೆ. ವಿಷಮಶೀತ ಜ್ವರದ ಸಮಸ್ಯೆ ನಗರದಲ್ಲಿ ಹೆಚ್ಚಾಗುತ್ತಿದೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 194 ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರು ಕೊರೊನಾ ಕೂಪವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
state Jun 22, 2020, 12:21 PM IST
ರಾಜ್ಯದಲ್ಲಿ ದಿನೇ ದಿನೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಹಲವು ಕಲೆ ಸ್ವಯುಂ ಲಾಕ್ಡೌನ್ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರಿನ ಚಿಕ್ಕಪೇಟೆ ಬಳಿಕ ಇದೀಗ ಶಿಡ್ಲಘಟ್ಟದಲ್ಲೂ ಕೂಡ ಸೆಲ್ಫ್ ಲಾಕ್ಡೌನ್ ಆಗುತ್ತಿದೆ. ಸಂಜೆ ನಾಲ್ಕು ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ಇರುತ್ತದೆ. ಬಳಿಕ ಸ್ವಯಂ ಪ್ರೇರಿತವಾಗಿ ಲಾಕ್ಡೌನ್ ಮಾಡಲಾಗುತ್ತಿದೆ.
Karnataka Districts Jun 22, 2020, 12:14 PM IST
ಸಿಲಿಕಾನ್ ಸಿಟಿಯಲ್ಲಿ ಕ್ಷಣ ಕ್ಷಣಕ್ಕೂ ಕೊರೊನಾ ಹೆಮ್ಮಾರಿ ಉಲ್ಭಣಿಸುತ್ತಲೇ ಇದೆ. ಮಹಾಮಾರಿ ಕಾಟಕ್ಕೆ ಕರುನಾಡು ಅಕ್ಷರಶಃ ನಡುಗಿದೆ. ಅನ್ಲಾಕ್ನಿಂದ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. 20 ದಿನಗಳಲ್ಲಿ ಗ್ರೀನ್ಝೋನ್ಗಳೆಲ್ಲಾ ರೆಡ್ಜೋನ್ ಆಗಿ ಪರಿವರ್ತನೆ ಆಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಕೊರೋನಾ ಅಟ್ಟಹಾಸಕ್ಕೆ ಚಿಕ್ಕಪೇಟೆ ಲಾಕ್ಡೌನ್ ಹಂತ ತಲುಪಿದೆ. ಚಿಕ್ಕಪೇಟೆ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಲಾಕ್ಡೌನ್ಗೆ ಮುಂದಾಗಿದ್ದಾರೆ. ಒಂದು ವಾರವಿಡೀ ಲಾಕ್ಡೌನ್ ಆಗಲಿದೆ.
state Jun 22, 2020, 12:06 PM IST
ಕನಕಪುರದಲ್ಲಿ ಸಾರಿಗೆ ವ್ಯವಸ್ಥೆ ಎಂದಿನಂತೆ ಮುಂದುವರೆಯಲಿದೆ. ಇನ್ನು ಮದ್ಯದಂಗಡಿ ವೇಳಾಪಟ್ಟಿ ನಿಗದಿ ಬಗ್ಗೆ ಅಬಕಾರಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಜುಲೈ 01ರವರೆಗೆ ಕನಕಪುರ ಸ್ವಯಂ ಪ್ರೇರಿತವಾಗಿ ಬಂದ್ ಆಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Karnataka Districts Jun 22, 2020, 11:53 AM IST